ಟಿಪ್ಪು ನಿಜ ಕನಸುಗಳು ಕೃತಿ ಹಾಗೂ ನಾಟಕದ ವಿಚಾರವಾಗಿ ತಮ್ಮ ವಾಗ್ದಾಳಿಯನ್ನ ಮುಂದುವರೆಸಿರುವ ಬಿಜೆಪಿ ನಾಯಕ ಹೆಚ್.ವಿಶ್ವನಾಥ್ ಸಂಸದ ಪ್ರತಾಪ್ ಸಿಂಹ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ತಾಪ್ ಸಿಂಹ ನಾನು ಚೆನ್ನಾಗಿಯೇ ಇದ್ದೀನಪ್ಪ, ನಿನಗೆ ಏನಾಗಿದೆ? ನಿನಗೆ ರೋಗಗಳು ಬಂದಿವೆ.ಧರ್ಮ, ಜಾತಿ, ಹಿಂದುತ್ವದ ರೋಗಗಳು, ಜನರ ತಲೆ ಕೆಡಿಸುವ ರೋಗ ಎಲ್ಲವೂ ನಿನಗೇ ಬಂದಿದೆಯಲ್ಲಪ್ಪ ಎಂದು ಹರಿಹಾಯ್ದಿದ್ದಾರೆ.
ಬಿಜೆಪಿಯ ತತ್ವ ಸಿದ್ದಾಂತಗಳು ಚೆನ್ನಾಗಿವೆ ಆದರೆ ಬಿಜೆಪಿಯನ್ನು ಮುನ್ನಡೆಸುತ್ತಿರುವವರು ಸರಿಯಿಲ್ಲ ಎಲ್ಲ ಪಕ್ಷಗಳ ಸಿದ್ದಾಂತಗಳೂ ಚೆನ್ನಾಗಿವೆ.ಬಿಜೆಪಿಯನ್ನು ಮುನ್ನಡೆಸುತ್ತಿರುವರ ನಡವಳಿಕೆ ಸರಿಯಿಲ್ಲ, ಮನಸ್ಥಿತಿ ಚೆನ್ನಾಗಿಲ್ಲ ನಾನೊಬ್ಬ ಸಿದ್ದಾಂತಿ ಹಾಗಾಗಿ ಈ ಮಾತು ಹೇಳುತ್ತಿದ್ದೇನೆ ಎಂದು ಸ್ವಪಕ್ಷದ ವಿರುದ್ದ ತಮ್ಮ ಟೀಕಾಪ್ರಹಾರವನ್ನ ಮುಂದುವರೆಸಿದ್ದಾರೆ.
ನನಗೆ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್, ಪರಮೇಶ್ವರ್ ಸೇರಿದಂತೆ ಕಾಂಗ್ರೆಸ್ ನ ಬಹುತೇಕ ನಾಯಕರು ಆಪ್ತರಾಗಿದ್ದಾರೆ. ರಾಜಕೀಯ ಬೇರೆ ವೈಯಕ್ತಿಕ ಸಂಬಂಧ ಬೇರೆ ಎಂದು ಕಾಂಗ್ರೆಸ್ ಬಗೆಗಿನ ಮೃಧು ಧೋರಣೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
ಸಿದ್ದರಾಮಯ್ಯ ಕೋಲಾರ, ವರುಣ ಎಲ್ಲಿಂದ ನಿಂತರೂ ಗೆಲ್ತಾರೆ. ಅದರಲ್ಲಿ ಯಾವುದೇ ಅನುಮಾನ ಬೇಡ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿದ್ದಾರೆ.
ಮೈಸೂರು ನಗರದಲ್ಲಿರುವ ರಂಗಾಯಣ ಒಂದು ಸಾಂಸ್ಕೃತಿಕ ತಾಣ.ರಂಗಾಯಣ ಧರ್ಮರಹಿತವಾಗಿರಬೇಕು.ಕಾರ್ಯಪ್ಪ ಹೆಸರು ಕೊಡಗಿಗೇ ಅವಮಾನ.ಆತ ಅಡ್ನಾಡಿ ಕಾರ್ಯಪ್ಪ.ಎಂ ಎಲ್ ಸಿ ಆಗಬೇಕೆಂದು ಅರ್ ಎಸ್ ಎಸ್ ನವರ ಜೊತೆ ಅಡ್ಡಂಡ ಕಾರ್ಯಪ್ಪ ಸೇರಿದ್ದಾನೆ.ವಾಮಮಾರ್ಗದ ಮೂಲಕ ಎಂ ಎಲ್ ಸಿ ಆಗಲು ಅಡ್ಡಂಡ ಕಾರ್ಯಪ್ಪ ಈ ರೀತಿ ಮಾಡ್ತಿದ್ದಾನೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಅಡ್ಡಂಡ ಕಾರ್ಯಪ್ಪ ಜೊತೆ ಎಸ್ ಎಲ್ ಭೈರಪ್ಪ ಸೇರಿರೋದು ವೇದನೆಯ ಸಂಗತಿ ಎತ್ತರದ ವ್ಯಕ್ತಿ ಅವರು, ಅವರಿಗೆ ಅರ್ಜೆಂಟ್ ಜ್ಞಾನಪೀಠ ಪ್ರಶಸ್ತಿ ಬೇಕು ಕೊಟ್ಟುಬಿಡಿ ಅಂತ ವ್ಯಂಗ್ಯ ವಾಡಿದ್ದಾರೆ.
ಸರ್ಕಾರ ಆಡಳಿತ ಕುಸಿದಿದೆ.ಯಾವುದೇ ಇಲಾಖೆಗಳಲ್ಲೂ ಒಂದು ರಿವ್ಯೂ ಮೀಟಿಂಗ್ ಆಗುತ್ತಿಲ್ಲ.ಮುಖ್ಯಮಂತ್ರಿ ಮೂಗಿನ ಅಡಿಯಲ್ಲಿ ಇಷ್ಟೊಂದು ದೊಡ್ಡ ಭ್ರಷ್ಟಾಚಾರ ಆಗುತ್ತಿದೆ.ಮುಖ್ಯಮಂತ್ರಿ ಬಳಿಯಲ್ಲಿ ಯಾವ ಖಾತೆಗಳು ಇರುತ್ತವೋ ಆ ಇಲಾಖೆ ಸತ್ತಂತೇಯೇ. ಮುಖ್ಯಮಂತ್ರಿ ಬಳಿ ಹಲವು ಪ್ರಮುಖ ಖಾತೆಗಳಿವೆ.ಹಣಕಾಸು ಇಲಾಖೆಗೆ ಫುಲ್ ಫ್ಲೆಡ್ಜ್ ಮಂತ್ರಿ ಇರಬೇಕು.ಸರ್ಕಾರದ 38 ಇಲಾಖೆಗಳೂ ಭ್ರಷ್ಟಾಚಾರ ಮುಕ್ತವಾಗಿಲ್ಲ.ಸಾವಿಲ್ಲದ ಮನೆಯಲ್ಲಿ ಸಾಸಿವೆ ತೆಗೆದುಕೊಂಡು ಬಾ ಎಂದು ಬುದ್ದ ಹೇಳಿದಂತಾಗಿದೆ ಭ್ರಷ್ಟಾಚಾರಅಧಿಕಾರಿಗಳ ಬಾಯಲ್ಲೂ ಸುಳ್ಳನ್ನು ಹೇಳಿಸುತ್ತಿದ್ದಾರೆ ಎಂದು ತಮ್ಮದೇ ಸರ್ಕಾರದ ವಿರುದ್ದ ಆರೋಪಿಸಿದ್ದಾರೆ.