
ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರ ದಾಳಿ ಬಗ್ಗೆ ರಾಜ್ಯ ಗೃಹ ಸಚಿವ ಪರಮೇಶ್ವರ್ ಮಾತನಾಡಿ ಕಾಶ್ಮೀರ ಕಣಿವೆಯಲ್ಲಿ ಟೆರರಿಸ್ಟ್ ಅಟ್ಯಾಕ್ ಆಗಿದೆ. ಅದನ್ನ ನಾನು ಖಂಡಿಸುತ್ತೇನೆ. 28 ಜನ ಪ್ರಾಣ ಕಳೆದು ಕೊಂಡಿದ್ದಾರೆ, ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥನೆ ಮಾಡ್ತೇನೆ. ಕರ್ನಾಟಕದ ಇಬ್ಬರ ಹತ್ಯೆಯಾಗಿದ್ದಾರೆ, ಒಬ್ಬರು ಆಂಧ್ರ ಮೂಲದ ಬೆಂಗಳೂರು ನಿವಾಸಿಯ ಹತ್ಯೆಯಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ.

ನಮ್ಮ ದೇಶದಲ್ಲಿ ಅತ್ಯಂತ ಬಲಿಷ್ಠ ಮಿಲಿಟರಿ ಇಂಟೆಲಿಜೆನ್ಸ್ ಇದೆ. ಬಹಳ ಸಂಧರ್ಭದಲ್ಲಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಆದರೆ ಹೇಗೆ ಟೆರರಿಸ್ಟ್ ಒಳಗೆ ಬಂದ್ರು..? ಎಂದು ಪ್ರಶ್ನಿಸಿರುವ ಪರಮೇಶ್ವರ್, ಇದನ್ನ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸ ಬೇಕು. ಹಿಂದೂಗಳನ್ನ ಗುರಿಮಾಡಿ ಕೊಂದಿದ್ದಾರೆಂದು ಮಾಹಿತಿ ಬರ್ತಿದೆ. ಇದು ನಿಜಕ್ಕೂ ಆತಂಕಕಾರಿ. ಹಾಗಾಗಿ ಕೇಂದ್ರ ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿ, ಮುಲಾಜಿಲ್ಲದೇ ಕೇಂದ್ರ ಸರ್ಕಾರ ಕ್ರಮ ತೆಗೆದು ಕೊಳ್ಳಬೇಕು. ನಾವೇ ಮಾಡಿದ್ದು ಎಂದಿರೋ ಸಂಘಟನೆಯನ್ನ ಹುಡುಕಿ ಕ್ರಮ ತೆಗೆದುಕೊಳ್ಳಬೇಕು. ಸೆಕ್ಯುರಿಟಿ ಲ್ಯಾಪ್ಸ್ ಆಗಿದೆ ಎಂದಿದ್ದಾರೆ.

ಮಿಲಿಟರಿ ಇಂಟೆಲಿಜೆನ್ಸ್ ಮಾಹಿತಿ ಒದಗಿಸುವಲ್ಲಿ ಲ್ಯಾಪ್ಸ್ ಆಗಿದೆ. ಬಟ್ಟೆ ತೆಗೆದು ಹೀನವಾಗಿ ಕೃತ್ಯ ಮಾಡಿದ್ದಾರೆ. ಈಗಾಗಲೇ ಸಂತೋಷ್ ಲಾಡ್ ನೇತೃತ್ವದ ಟೀಮ್ ಹೋಗಿದೆ. ಸಿಎಂ ಸಿದ್ದರಾಮಯ್ಯನವರು ಕಳುಹಿಸಿದ್ದಾರೆ. ಕನ್ನಡಿಗರನ್ನ ರಕ್ಷಣೆ ಮಾಡುವ ಕೆಲಸ ನಮ್ಮ ಸರ್ಕಾರ ಮಾಡುತ್ತದೆ. ಕಾಂಗ್ರೆಸ್ ಮೊಸರಲ್ಲಿ ಕಲ್ಲು ಹುಡುಕಬಾರದು ಎಂದು ಸಚಿವ ಸೊಮಣ್ಣ ಹೇಳಿಕೆ ವಿಚಾರವಾಗಿ ಮಾತನಾಡಿ ಕಾಂಗ್ರೆಸ್, ಬಿಜೆಪಿ ಮತ್ತೊಂದು ಪಕ್ಷದ ಪ್ರಶ್ನೆಯಲ್ಲ. ಇದು ನಮ್ಮ ಸಮಾಜದ ಪ್ರಶ್ನೆ. ಪಕ್ಷದ ಹೆಸರನ್ನ ಬಳಕೆ ಮಾಡಬಾರದು. ಪಕ್ಷ ಬಿಟ್ಟು ನಾನು ಮಾತಾಡಿದ್ದೇನೆ ಎಂದಿದ್ದಾರೆ ಪರಮೇಶ್ವರ್.

ಕಾಶ್ಮೀರದಲ್ಲಿ ಸೇನಾ ಭದ್ರತೆ ವಾಪಸ್ ಪಡೆದಿದ್ದಕ್ಕೆ ದಾಳಿ ಆಯ್ತಾ ಎಂಬ ಆರೋಪದ ಬಗ್ಗೆ ಮಾತನಾಡಿ, ಇದರ ಬಗ್ಗೆ ನಿರ್ದಿಷ್ಟ ಮಾಹಿತಿಗಳು ನಮಗಿಲ್ಲ. ಭದ್ರತೆ ವಾಪಸ್ ಪಡೆದಿದ್ರು ಅನ್ನೋದು ಗೊತ್ತಿಲ್ಲ. ಇದರಲ್ಲಿ ನಾವು ರಾಜಕಾರಣ ಮಾಡಬಾರದು. ನಾನು ಬಿಜೆಪಿ ಫೇಲ್ಯೂರ್ ಅಂತ ಹೇಳೋಕೆ ಆಗಲ್ವಾ..? ನಾನು ಬಿಜೆಪಿ ಅಂತ ಎಲ್ಲಿ ಹೇಳಿದೆ..? ನಾನು ಹೇಳಿದ್ದು ಕೇಂದ್ರ ಸರ್ಕಾರ ಅಂತ. ನಾವು ಏನು ಬೇಕಾದ್ರೂ ಸ್ಪೆಕ್ಯೂಲೇಟ್ ಮಾಡಬಹುದ..? ಸೆಕ್ಯುರಿಟಿ ಕಡಿಮೆ ಇತ್ತು ಅಂತ ಇರಬಹುದು, ಶಾಂತಿ ಇತ್ತು ಅಂತ ಸ್ವಲ್ಪ ಕರೆಸಿರಬಹುದು. ಮುಂದೆ ಏನೆಲ್ಲಾ ವರದಿ ಬರುತ್ತವೆ ನೊಡೋಣ ಎಂದಿದ್ದಾರೆ ಗೃಹ ಸಚಿವ ಪರಮೇಶ್ವರ್.