• Home
  • About Us
  • ಕರ್ನಾಟಕ
Wednesday, December 3, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಬಿಜೆಪಿಯ ಪ್ರತಿಮಾ ನಾಟಕ : ಒಬ್ಬನೇ ಒಬ್ಬ ನೇತಾಜಿಯ ಅನುಯಾಯಿ RSS ಸೇರಿಲ್ಲ!

ಕೆ.ಪಿ ಸುರೇಶ್‌ ಕಂಜರ್ಪಣೆ by ಕೆ.ಪಿ ಸುರೇಶ್‌ ಕಂಜರ್ಪಣೆ
January 24, 2022
in ದೇಶ
0
ಬಿಜೆಪಿಯ ಪ್ರತಿಮಾ ನಾಟಕ : ಒಬ್ಬನೇ ಒಬ್ಬ ನೇತಾಜಿಯ ಅನುಯಾಯಿ RSS ಸೇರಿಲ್ಲ!
Share on WhatsAppShare on FacebookShare on Telegram

ಪಟೇಲರ ಬಳಿಕ ಈಗ ಚೌಕಿದಾರನ ನೇತೃತ್ವದ ಭಾಜಪ ಸುಭಾಸ್ ಚಂದ್ರ ಬೋಸ್ ಅವರ ಕುರಿತು ಚರಿತ್ರೆಯ ಫೋಟೋ ಶಾಪ್ ಆರಂಭಿಸಿದೆ. ಅವರ ಪ್ರತಿಮೆ ಸ್ಥಾಪಿಸಿ ಅವರ ವಿಚಾರ, ರಾಜಕಾರಣಗಳ ಬಗ್ಗೆ ಚರ್ಚೆಯೇ ಇಲ್ಲದಂತೆ ಆಟ ಕಟ್ಟುತ್ತಿದೆ. ಇಂದಿಗೂ ಆರೆಸ್ಸೆಸ್ ಅಥವಾ ಭಾಜಪ ಸ್ವಾತಂತ್ರ್ಯ ಸಮರದ ನೇತಾರರನ್ನು ನೆಹರೂ , ಗಾಂಧಿ ವಿರುದ್ಧ ಎತ್ತಿಕಟ್ಟಲು ಗಾಸಿಪ್ ಚರಿತ್ರೆ ಹರಡುತ್ತಾ ಪ್ರತಿಮಾ ರಾಜಕಾರಣದಲ್ಲೇ ಮುಳುಗಿದೆ. ಇತ್ತೀಚೆಗೆ ಭಗತ್ ಸಿಂಗ್ ಅವರನ್ನು ಕೈ ಬಿಟ್ಟಿದೆ. ಯಾಕೆಂದರೆ ಭಗತ್ ಸಿಂಗ್ ಕಮ್ಯುನಿಸ್ಟ್ ಅಂತ ದೇಶಕ್ಕೆ ಗೊತ್ತಾಗಿದೆ. ಇರಲಿ.

ADVERTISEMENT

ನೇತಾಜಿ ಅವರ ಬಗ್ಗೆ ಕೆಲವು ವಿವರಗಳನ್ನು ಗಮನಿಸೋಣ…

೧. ಗಾಂಧಿಜಿಯ ಅಹಿಂಸಾತ್ಮಕ ಚಳವಳಿ ಸಾಲದು ಎಂಬ ಕಾರಣಕ್ಕೆ ನೇತಾಜಿ ಸೈನ್ಯ ಸಹಿತ ಯುದ್ಧ ಸಾರುವ ನಿರ್ಧಾರ ಮಾಡಿದರು. ಆದರೆ ಅವರಿಗೆ ನೆಹರೂ, ಗಾಂಧಿ ಮತ್ತಿತರ ನಾಯಕರ ಬಗ್ಗೆ ಇದ್ದ ಗೌರವ ಅಪಾರ. ಗಾಂಧಿಯನ್ನು ರಾಷ್ಟ್ರಪಿತ ಎಂದು ಮೊದಲು ಕರೆದಿದ್ದು ಈ ನೇತಾಜಿ.

೨.ಐ.ಎನ್.ಎ.ಯ ನಾಲ್ಕು ತುಕಡಿಗಳಿಗೆ ಗಾಂಧಿ, ನೆಹರೂ ಮತ್ತು ಆಜಾದ್ ಹೆಸರು ಇಟ್ಟು ತಮ್ಮಗೌರವ ಸೂಚಿಸಿದ್ದರು.

೩. ಜನಗಣಮನ ಹಾಡನ್ನು ರಾಷ್ಟ್ರಗೀತೆ ಎಂದು ಮೊದಲು ಘೋಷಿಸಿದ್ದು ನೇತಾಜಿ. ಈ ಹಾಡಿನ ಬಗ್ಗೆ ಇಲ್ಲ ಸಲ್ಲದ ಕಟ್ಟುಕತೆಗಳ ಮೂಲಕ ಅಪಪ್ರಚಾರ ಮಾಡಿದ್ದು ಆರೆಸ್ಸೆಸ್. ಒಂದು ಕತೆ, ಒಂದು ವ್ಯಥೆ ಎಂಬ ರಾಷ್ಟ್ರೋತ್ಥಾನದ ಕೃತಿ ಈ ಬಗ್ಗೆ ಇದೆ.

೪. ರಾಜಕೀಯ, ಸೈದ್ಧಾಂತಿಕ ನಿಲುಮೆಯ ದೃಷ್ಟಿಯಿಂದ ನೇತಾಜಿ ಮರಣದ ತರುವಾಯ ಬಹುತೇಕ ಐ.ಎನ್. ಎ. ಯೋಧ ನಾಯಕರು ಕಾಂಗ್ರೆಸ್ ಸೇರಿದ್ದರು. ಒಬ್ಬನೇ ಒಬ್ಬ ನೇತಾಜಿ ಅನುಯಾಯಿ ಆರೆಸ್ಸೆಸಿನ ಕಂಗಾರೂ ಮರಿಯಾಗಿದ್ದ ಜನಸಂಘ / ಭಾಜಪವನ್ನು ಸೇರಲಿಲ್ಲ.

೫. ನೇತಾಜಿ ಸ್ಥಾಪಿಸಿದ್ದ ಫಾರ್ವರ್ಡ್ ಬ್ಲಾಕ್ ಎಂಬ ಪಕ್ಷ ಬಂಗಾಲದಲ್ಲಿ ಎಡ ಪಕ್ಷಗಳ ಮೈತ್ರಿ ಕೂಟದಲ್ಲಿ ಇಂದಿಗೂ ಇದೆ.

೬. ನೇತಾಜಿ ಅವರ ಐ.ಎನ್ ಎ. ಯ ಮಹಿಳಾ ತುಕಡಿಯ ಮುಖ್ಯಸ್ಥೆಯಾಗಿದ್ದ ಲಕ್ಷ್ಮಿ ಸೆಹಗಲ್ ತರುವಾಯ ಎಡ ಪಕ್ಷಗಳ ಬೆಂಬಲದೊಂದಿಗೆ ಭಾರತದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ಗದಾಗ ಇದೇ ಮೋದಿ ಸಹಿತ ವಾಜಪೇಯಿ ನಾಯಕತ್ವದ ಭಾಜಪ ಅವರನ್ನು ಸೋಲಿಸಿ ಕಲಾಂ ಅವರನ್ನು ಆರಿಸಿತ್ತು. ನೇತಾಜಿ ಗೆ ಭಾಜಪ ಕೊಟ್ಟ ಗೌರವ ನೋಡಿ

೭. ವೈಯಕ್ತಿಕ ನೆಲೆಯಲ್ಲಿ, ನೆಹರೂ ಕಾಂಗ್ರೆಸ್ ಒಳಗಿನ ಸಮಾಜವಾದಿಗಳ ನೇತೃತ್ವ ವಹಿಸಬೇಕು ಎಂದು ಬೋಸ್ ಆಗ್ರಹಿಸಿದ್ದರು. ಕಮಲಾ ನೆಹರೂ ತೀವ್ರ ಅನಾರೋಗ್ಯಕ್ಕೊಳಗಾಗಿ ಚಿಕಿತ್ಸೆಗೆ ಸ್ವಿಜರ್ ಲ್ಯಾಂಡ್ ಗೆ ಹೋಗಬೇಕಾದಾಗ ನೆಹರೂ ಜೈಲಿನಲ್ಲಿದ್ದರು. ಆಗ ತಮ್ಮನಂತೆ ಆಕೆಯನ್ನು ಸ್ವಿಜರ್ಲಾಂಡಿಗೆ ಕರೆದೊಯ್ದು ನೆಹರೂ ಬರುವ ವರಗೆ ಆಕೆಯನ್ನು ನೋಡಿಕೊಂಡಿದ್ದು ಬೋಸ್.

೮. ಬ್ರಿಟಿಶರು ಐ.ಎನ್ ಎ. ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿ ವಿಚಾರಣೆ ಆರಂಭವಾದಾಗ ( ಪ್ರಸಿದ್ಧ ಕೆಂಪುಕೋಟೆ ವಿಚಾರಣೆ) ಮತ್ತೆ ವಕೀಲರ ಕೋಟು ಧರಿಸಿ ನೆಹರೂ ಈ ಸ್ವಾತಂತ್ರ್ಯ ಯೋಧರ ಪರವಾಗಿ ವಾದಿಸಿದ್ದಷ್ಟೇ ಅಲ್ಲ, ಅಷ್ಟೂ ವಕೀಲರ ನೇತೃತ್ವ ವಹಿಸಿದ್ದರು. (ಈ ಸಮಯದಲ್ಲಿ ಗೋಲ್ವಾಲ್ಕರ್ ಈ ಬ್ರಿಟಿಶ್ ವಿರುದ್ಧ ಹೋರಾಡಿ ಸಮಯ ವೇಸ್ಟ್ ಮಾಡಬೇಡಿ, ಮುಸ್ಲಿಮರು, ಕಮ್ಯುನಿಸ್ಟರು ಮತ್ತು ಕಾಂಗ್ರೆಸ್ ವಿರುದ್ಧ ನಮ್ಮ ಹೋರಾಟ ಕೇಂದ್ರೀಕರಿಸಬೇಕು ಎಂದಿದ್ದರು!)

೯. ಹಿಂದೂ ಮಹಾಸಭಾದ ಮುಖ ಭಂಗ ಮಾಡಲು ಸ್ವತಃ ಬೋಸ್ ಚುನಾವಣೆಯಲ್ಲಿ ಮುಸ್ಲಿಂ ಲೀಗ್ ಜೊತೆ ಮೈತ್ರಿ ಮಾಡಿಕೊಂಡಿದ್ದರು.

ಸುಭಾಸ್ ಬೋಸ್ ಅವರ ಬರಹ, ಭಾಷಣ, ರಾಜಕೀಯ ಜೀವನ, ಅವರ ಪರಂಪರೆ, ಅನಯುಯಾಯಿಗಳು – ಹೀಗೆ ಯಾವ ವಿವರ ನೋಡಿದರೂ ಭಾಜಪಕ್ಕಾಗಲೀ, ಆರೆಸ್ಸೆಸ್ಸಿಗಾಗಲೀ ಎಳ್ಳಿನ ಸಾದೃಷ್ಯವೂ ಇಲ್ಲ; ಅಷ್ಟೇಕೆ, ಆರೆಸ್ಸೆಸ್ಸನ ನಿಲುವನ್ನುಇಡೀ ಬೋಸ್ ಪರಂಪರೆ ನಖಶಿಖಾಂತ ವಿರೋಧಿಸಿತ್ತು.


ಈಗ ಈ ನಕಲಿ ದೇಶಭಕ್ತರು ಪ್ರತಿಮೆ ಸ್ಥಾಪಿಸಿ ಬೋಸ್ ಅವರನ್ನು ಗಾಂಧಿ, ನೆಹರೂ ವಿರುದ್ಧ ಎತ್ತಿಕಟ್ಟಿ ಬೋಸ್ ತಮ್ಮವರು ಎಂಬಂತೆ ಬಿಂಬಿಸಲು ಹೊರಟಿದ್ದಾರೆ. ಪ್ರತಿಮಾ ನಾಟಕದ ಬದಲು ಅವರ ರಾಜಕೀಯ, ವಿಚಾರಗಳಬಗ್ಗೆ ಚರ್ಚಿಸಲು ಈ ಚೌಕಿದಾರ ಆಕಸ್ಮಾತ್ ತಯಾರಾದರೆ ಈ ಪ್ರತಿಮಾ ನಾಟಕವೂ ಬರಕಾಸ್ತಾಗುತ್ತದೆ!

Tags: BJPCongress PartyNethaji subhash chandra boseನರೇಂದ್ರ ಮೋದಿಬಿಜೆಪಿ
Previous Post

ರಾಜಕಾರಣದಲ್ಲಿ ಗೌಪ್ಯತೆಯನ್ನು ಕಾಪಾಡೋದು ನನ್ನ ಧರ್ಮ : DK SHIVAKUMAR

Next Post

ಆ ಕಾಲದ ಕಥೆ ಈ ಕಾಲದ ಸಿನಿಮಾ: ಸದ್ಯದಲ್ಲೇ ಸೆಟ್ಟೇರಲಿದೆ ಅಂದೊಂದಿತ್ತು ಕಾಲ

Related Posts

Top Story

KJ George: ಇಂಧನ ಇಲಾಖೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಭೆ ನಡೆಸಿದ ಕೆಜೆ ಜಾರ್ಜ್‌..!!

by ಪ್ರತಿಧ್ವನಿ
December 3, 2025
0

ಇಂಧನ ಇಲಾಖೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಬೆಸ್ಕಾಂ ಕಾರ್ಪೊರೇಟ್ ಕಚೇರಿಯಲ್ಲಿ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರೊಂದಿಗೆ  ಸಭೆ...

Read moreDetails
ಕುಡುಕರಿಗೊಬ್ಬ, ಬ್ಯಾಚುಲರ್‌ಗೆ ಮತ್ತೊಬ್ಬ: ಹಿಂದೂ ದೇವತೆಗಳ ಬಗ್ಗೆ ರೇವಂತ್ ರೆಡ್ಡಿ ವಿವಾದಾತ್ಮಕ ಹೇಳಿಕೆ

ಕುಡುಕರಿಗೊಬ್ಬ, ಬ್ಯಾಚುಲರ್‌ಗೆ ಮತ್ತೊಬ್ಬ: ಹಿಂದೂ ದೇವತೆಗಳ ಬಗ್ಗೆ ರೇವಂತ್ ರೆಡ್ಡಿ ವಿವಾದಾತ್ಮಕ ಹೇಳಿಕೆ

December 3, 2025
ಭಾರತಕ್ಕೆ ರಷ್ಯಾಧ್ಯಕ್ಷ: ದೆಹಲಿಯಲ್ಲಿ ಹೈ ಅಲರ್ಟ್

ಭಾರತಕ್ಕೆ ರಷ್ಯಾಧ್ಯಕ್ಷ: ದೆಹಲಿಯಲ್ಲಿ ಹೈ ಅಲರ್ಟ್

December 2, 2025
ಕರ್ನಾಟಕದ ಬಗ್ಗೆ ಕೇಂದ್ರ ಸರ್ಕಾರದ್ದು ಮಲತಾಯಿ ಧೋರಣೆ: ಡಿಸಿಎಂ ಡಿಕೆಶಿ ಬೇಸರ

ಕರ್ನಾಟಕದ ಬಗ್ಗೆ ಕೇಂದ್ರ ಸರ್ಕಾರದ್ದು ಮಲತಾಯಿ ಧೋರಣೆ: ಡಿಸಿಎಂ ಡಿಕೆಶಿ ಬೇಸರ

December 1, 2025
ವಿದೇಶಿ ವಿನಿಮಯ ಷೇರುಗಳ ಏರಿಳಿತಕ್ಕೆ ಕಾರಣ ಕೊಟ್ಟ RBI

ವಿದೇಶಿ ವಿನಿಮಯ ಷೇರುಗಳ ಏರಿಳಿತಕ್ಕೆ ಕಾರಣ ಕೊಟ್ಟ RBI

December 1, 2025
Next Post
ಆ ಕಾಲದ ಕಥೆ ಈ ಕಾಲದ ಸಿನಿಮಾ: ಸದ್ಯದಲ್ಲೇ ಸೆಟ್ಟೇರಲಿದೆ ಅಂದೊಂದಿತ್ತು ಕಾಲ

ಆ ಕಾಲದ ಕಥೆ ಈ ಕಾಲದ ಸಿನಿಮಾ: ಸದ್ಯದಲ್ಲೇ ಸೆಟ್ಟೇರಲಿದೆ ಅಂದೊಂದಿತ್ತು ಕಾಲ

Please login to join discussion

Recent News

Top Story

KJ George: ಇಂಧನ ಇಲಾಖೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಭೆ ನಡೆಸಿದ ಕೆಜೆ ಜಾರ್ಜ್‌..!!

by ಪ್ರತಿಧ್ವನಿ
December 3, 2025
Top Story

ಅದ್ದೂರಿಯಾಗಿ ನಡೆಯಲಿದೆ “JAM JUNXION” ಬೆಂಗಳೂರಿನ ಬಿಗೆಸ್ಟ್ ಮ್ಯೂಸಿಕಲ್ ನೈಟ್..!!

by ಪ್ರತಿಧ್ವನಿ
December 3, 2025
Raj Bhavan: ಕರ್ನಾಟಕದ ರಾಜ ಭವನದ ಹೆಸರು ದಿಢೀರ್‌ ಬದಲಾವಣೆ..!!
Top Story

Raj Bhavan: ಕರ್ನಾಟಕದ ರಾಜ ಭವನದ ಹೆಸರು ದಿಢೀರ್‌ ಬದಲಾವಣೆ..!!

by ಪ್ರತಿಧ್ವನಿ
December 3, 2025
ವೇದಿಕೆಯಲ್ಲೇ ಕೆ.ಸಿ ವೇಣುಗೋಪಾಲ್ ಜೊತೆ ಗುಸು ಗುಸು- ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?
Top Story

ವೇದಿಕೆಯಲ್ಲೇ ಕೆ.ಸಿ ವೇಣುಗೋಪಾಲ್ ಜೊತೆ ಗುಸು ಗುಸು- ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

by ಪ್ರತಿಧ್ವನಿ
December 3, 2025
ರೋಹಿತ್- ಕೊಹ್ಲಿ ಅಬ್ಬರಕ್ಕೆ ಬಾಡಿದ ಗಂಭೀರ್ ಮುಖ: ಡ್ರೆಸ್ಸಿಂಗ್ ಕೋಣೆ ಒಳಗಿನ ವಿಡಿಯೋ ಲೀಕ್..!
Top Story

ರೋಹಿತ್- ಕೊಹ್ಲಿ ಅಬ್ಬರಕ್ಕೆ ಬಾಡಿದ ಗಂಭೀರ್ ಮುಖ: ಡ್ರೆಸ್ಸಿಂಗ್ ಕೋಣೆ ಒಳಗಿನ ವಿಡಿಯೋ ಲೀಕ್..!

by ಪ್ರತಿಧ್ವನಿ
December 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

KJ George: ಇಂಧನ ಇಲಾಖೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಭೆ ನಡೆಸಿದ ಕೆಜೆ ಜಾರ್ಜ್‌..!!

December 3, 2025

ಅದ್ದೂರಿಯಾಗಿ ನಡೆಯಲಿದೆ “JAM JUNXION” ಬೆಂಗಳೂರಿನ ಬಿಗೆಸ್ಟ್ ಮ್ಯೂಸಿಕಲ್ ನೈಟ್..!!

December 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada