ಹರಿಯಾಣ ರಾಜ್ಯದ ಗುರುಗ್ರಾಮ ಹಾಗೂ ನೂಹ್ ಜಿಲ್ಲೆಯಲ್ಲಿ ನಡೆದ ಕೋಮು ಗಲಭೆಗಳಿಗೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಗೋರಕ್ಷಕ ಬಿಟ್ಟು ಬಜರಂಗಿ ಅವರಿಗೆ ನ್ಯಾಯಾಲಯ ಬುಧವಾರ (ಆಗಸ್ಟ್ 30) ಜಾಮೀನು ನೀಡಿದೆ.
ಬಿಟ್ಟು ಬಜರಂಗಿಯವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಪ್ರಥಮ ದರ್ಜೆ ನ್ಯಾಯಾಧೀಶರಾದ ಸಂದೀಪ್ ಕುಮಾರ್ ಅವರು ಬುಧವಾರ ಜಾಮೀನು ಮಂಜೂರು ಮಾಡಿದರು ಎಂದು ಪೊಲೀಸರು ತಿಳಿಸಿದ್ದಾರೆ.
ನೂಹ್ನ ಸದರ್ ಪೊಲೀಸ್ ಠಾಣೆಯಲ್ಲಿ ಬಿಟ್ಟು ಬಜರಂಗಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಎಎಸ್ಪಿ ಉಷಾ ಕುಂಡು ದೂರು ನೀಡಿದ್ದರು. ಬಿಟ್ಟು ಬಜರಂಗಿ ಅವರನ್ನು ಆಗಸ್ಟ್ 15ರಂದು ಫರಿದಾಬಾದ್ನಲ್ಲಿ ಪೊಲೀಸರು ಬಂಧಿಸಿದ್ದರು.
ನ್ಯಾಯಾಲಯವು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿತ್ತು. ಬಳಿಕ ಅವರನ್ನು ಫರಿದಾಬಾದ್ ಜಿಲ್ಲೆಯ ನೀಮ್ಮಾ ಜೈಲಿಗೆ ಕಳುಹಿಸಲಾಗಿತ್ತು.