ಬಿಗ್ಬಾಸ್(Bigg Boss) ಕನ್ನಡ(Kannada) 10ನೇ ಸೀಸನ್ ಸ್ಪರ್ಧಿ ಡ್ರೋಣ್ ಪ್ರತಾಪ್(Drone Prathap) ಆತ್ಮಹತ್ಯೆಗೆ ಯತ್ನ ಮಾಡಿದ್ದಾರೆ ಅನ್ನೋ ಗುಮಾನಿ ಹರಿದಾಡುತ್ತಿದೆ. ಕುಂಬಳಗೋಡು ಠಾಣಾ ವ್ಯಾಪ್ತಿಯ ರಾಮೋಹಳ್ಳಿಯಲ್ಲಿರುವ ಸಂಜೀವಿನಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗ್ತಿದೆ. ಆದರೆ ಫುಡ್ ಪಾಯ್ಸನ್ ಎಂದು ಮಾಹಿತಿ ಕೊಟ್ಟಿರುವ ಆಸ್ಪತ್ರೆ ವೈದ್ಯರು ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ. ಆದರೂ ವೈದ್ಯರು ನೀಡಿರುವ ಚಿಕಿತ್ಸೆಯ ವಿವರ ನೋಡಿದಾಗ ಆತ್ಮಹತ್ಯೆ ಯತ್ನ ಮಾಡಿದ್ರಾ..? ಅನ್ನೋ ಅನುಮಾನ ದಟ್ಟವಾಗ್ತಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ವೈದ್ಯರ ಪ್ರಕಾರ ಡ್ರೋಣ್ ಪ್ರತಾಪ್ರನ್ನ ರಾತ್ರಿ 1.30ರ ವೇಳೆಗೆ ಕರೆತರಾಗಿತ್ತು. ಎರಡ್ಮೂರು ದಿನದಿಂದ ಪ್ರತಾಪ್ ಊಟ ಸರಿಯಾಗಿ ಮಾಡಿರಲಿಲ್ಲ. ನೀರನ್ನೂ ಕುಡಿದಿರಲಿಲ್ಲ. ಇದಕ್ಕಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಆಗಿದೆ. ತುಂಬಾ ಸುಸ್ತಾಗಿದ್ರು. ಟ್ರೀಟ್ಮೆಂಟ್ ಕೊಟ್ಟು ಡಿಸ್ಚಾರ್ಜ್ ಮಾಡಲಾಗಿದೆ. ವದಂತಿ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ಬಿಗ್ಬಾಸ್ ಸ್ಪರ್ಧಿ ಡ್ರೋಣ್ ಪ್ರತಾಪ್ ಆತ್ಮಹತ್ಯೆಗೆ ಯತ್ನಿಸಿದ್ದು, ಫುಡ್ ಪಾಯ್ಸನ್ ಎಂದು ಸುಳ್ಳು ಹೇಳುತ್ತಿದ್ದಾರೆ ಅನ್ನೋದಕ್ಕೆ ಹತ್ತಾರು ಕಾರಣಗಳು ಸಿಗುತ್ತಿವೆ.
![](https://pratidhvani.com/wp-content/uploads/2024/01/Screenshot-2024-01-04-at-19-08-27-drone-prathap-Google-Search.png)
ಗ್ರಾಸ್ಟ್ರಿಕ್ ಆದ್ರೆ ಐಸಿಯು ಚಿಕಿತ್ಸೆ ಅಗತ್ಯ ಇದೆಯಾ..?
ವೈದ್ಯರು ಹಾಗೂ ಬಿಗ್ಬಾಸ್ ನಡೆಸುತ್ತಿರುವ ಖಾಸಗಿ ವಾಹಿನಿ ಸತ್ಯವನ್ನು ಮುಚ್ಚಿಡುತ್ತಿದೆ ಅನ್ನೋ ಬಗ್ಗೆ ಅನುಮಾನಗಳು ಕಾಡುತ್ತಿವೆ. ಅನುಮಾನಕ್ಕೆ ಕಾರಣ ಏನು ಅನ್ನೋದನ್ನು ನೋಡೋದಾದರೆ, ಗ್ಯಾಸ್ಟ್ರಿಕ್ ಸಮಸ್ಯೆಗೆ ಯಾರಾದರೂ ಐಸಿಯುವಿನಲ್ಲಿ ಅಡ್ಮಿಟ್ ಮಾಡಿ ಚಿಕಿತ್ಸೆ ನೀಡುತ್ತಾರಾ..? ಅಂದರೆ ವೈದ್ಯರು ಸಾಮಾನ್ಯವಾಗಿ ನೋ ಎನ್ನುತ್ತಾರೆ. ಗ್ಯಾಸ್ಟ್ರಿಕ್ ಸಮಸ್ಯೆ ಆದಾಗ ಪೊಲೀಸರಿಗೆ ವೈದ್ಯರು ಮಾಹಿತಿ ನೀಡುವ ಅಗತ್ಯವಿದೆಯಾ..? ಎಂದರೆ ಕಾನೂನು ಪ್ರಕಾರ ಅಗತ್ಯವಿಲ್ಲ. ಯಾರಾದರು ವಿಷ ಸೇವಿಸಿ ಅಥವಾ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ಬಂದಾಗ ಮಾತ್ರವೇ ಪೊಲೀಸರಿಗೆ ಮಾಹಿತಿ ನೀಡಬೇಕು. ಅದನ್ನು ಬಿಟ್ಟು ಗ್ರಾಸ್ಟ್ರಿಕ್ ಹಾಗು ವಿಷಾಹಾರ ಸೇವೆನೆ ಕೇಸ್ನಲ್ಲೂ ಪೊಲೀಸರಿಗೆ ಮಾಹಿತಿ ನೀಡುವ ಅಗತ್ಯವಿಲ್ಲ. ಆದರೆ ಪ್ರತಾಪ್ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಪೊಲೀಸ್ರಿಗೂ ಸಹ ಮಾಹಿತಿ ನೀಡಿದ್ದಾರೆ. ಡ್ರೋಣ್ ಪ್ರತಾಪ್ ಬಗ್ಗೆ ಪೊಲೀಸ್ರು ಭೇಟಿ ನೀಡಿ ಮಾಹಿತಿ ಸಂಗ್ರಹ ಮಾಡಿಕೊಂಡು ಹೋಗಿದ್ದಾರೆ ಕುಂಬಳಗೋಡು ಠಾಣೆ ಇನ್ಸ್ಪೆಕ್ಟರ್. ಇನ್ನು ಆತ್ಮಹತ್ಯೆಗೆ ನಿಖರ ಕಾರಣ ಎಲ್ಲರಿಗೂ ಗೊತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
![](https://pratidhvani.com/wp-content/uploads/2024/01/2_2-jpg.webp)
ಪ್ರತಾಪ್ ಆತ್ಮಹತ್ಯೆ ಯತ್ನಕ್ಕೆ ಕಾರಣ ಇದೇನಾ..?
ಪ್ರತಾಪ್ ಹೊರ ಪ್ರಪಂಚಲದಲ್ಲಿ ಸಾಕಷ್ಟು ವಿವಾದವನ್ನು ಮಾಡಿಕೊಂಡು ಸಮಾಜದಿಂದ ದೂರವಾಗಿದ್ದ ಯುವಕ. ಚಿಕ್ಕ ವಯಸ್ಸಿನಲ್ಲೇ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ಪ್ರತಾಪ್, ಆ ಬಳಿಕ ತನ್ನೆಲ್ಲಾ ವಿವಾದಗಳಿಂದ ಮುಕ್ತವಾಗುವ ಕೆಲಸಕ್ಕೆ ಕೈ ಹಾಕಿದ್ದ. ಡ್ರೋಣ್ನಿಂದಲೇ ಅವಮಾನಿತನಾಗಿದ್ದ ಪ್ರತಾಪ್, ಅದೇ ಡ್ರೋನ್ನಿಂದಲೇ ಉತ್ತಮ ಕೆಲಸ ಮಾಡಿಕೊಂಡು ರೈತರ ಜೊತೆಗೆ ಕೈ ಜೋಡಿಸಿದ್ದ. ಆದರೆ ಬಿಗ್ಬಾಸ್ ಸೀಸನ್ 10ರ ಸ್ಪರ್ಧಿಯನ್ನಾಗಿ ಮಾಡಿಕೊಂಡಿದ್ದ ಖಾಸಗಿ ವಾಹಿನಿ ಪ್ರತಾಪ್ನನ್ನು ಭಾವನಾತ್ಮಕವಾಗಿ ತೋರಿಸುತ್ತ, ಉತ್ತಮ ರೇಟಿಂಗ್ ಪಡೆದುಕೊಂಡಿತ್ತು. ರಾಜ್ಯಾದ್ಯಂತ ಡ್ರೋನ್ ಪ್ರತಾಪ್ ಬಗ್ಗೆ ಚರ್ಚೆ, ಮಾಧ್ಯಮಗಳಲ್ಲೂ ಡ್ರೋಣ್ ಪ್ರತಾಪ್ ಬಗ್ಗೆಯೇ ಮಾತುಗಳು ನಡೆದಿದ್ದವು. ಈ ಹಿಂದೆ ಆಗಿರುವ ಎಲ್ಲಾ ತಪ್ಪುಗಳಿಗೂ ಕ್ಷಮೆಯಾಚಿಸಿದ್ದ ಡ್ರೋನ್, ರಾಜ್ಯದ ಜನರ ಅಚ್ಚುಮೆಚ್ಚು ಕೂಡ ಆಗಿದ್ದ. ಜೊತೆಗೆ ಬಿಗ್ಬಾಸ್ ಟೀಂ ಕೂಡ ಪ್ರತಾಪ್ ಪೋಷಕರನ್ನು ಬಿಗ್ಬಾಸ್ ಮನೆಗೆ ಕರೆತರುವ ಮೂಲಕ ಪ್ರತಾಪ್ ಹಾಗು ಹೆತ್ತವರ ನಡುವೆ ಉಂಟಾಗಿದ್ದ ಬಿಕ್ಕಟ್ಟು ಶಮನ ಮಾಡಿದ್ದರು. ಬಿಗ್ಬಾಸ್ ಮನೆ ಮೇಲೆ ಡ್ರೋಣ್ ಹಾರಿಸಿ, ಸೋತು ಹೋಗಿದ್ದ ಮುಗ್ದ ಜೀವಕ್ಕೆ ಚೈತನ್ಯ ನೀಡಿದ್ದರು. ಆದರೆ 2024ರ ಹೊಸ ವರ್ಷದ ದಿನ ನಡೆದ ಘಟನೆ ಆತ್ಮಹತ್ಯೆಗೆ ಯತ್ನಿಸುವಂತೆ ಮಾಡಿದೆ ಅನ್ನೋ ಚರ್ಚೆ ಶುರುವಾಗಿದೆ.
![](https://pratidhvani.com/wp-content/uploads/2024/01/WhatsApp-Image-2024-01-04-at-6.59.02-PM-jpeg.webp)
ಮನೆಗೆ ಹೋಗಬೇಡ.. ದೇಶ ಬಿಟ್ಟು ಹೋಗೆಂದ ಜ್ಯೋತಿಷಿ..
ಖಾಸಗಿ ವಾಹಿನಿಯಲ್ಲಿ ಜನವರಿ 14ರಿಂದ ಜ್ಯೋತಿಷ್ಯ ಕಾರ್ಯಕ್ರಮ ಆರಂಭ ಆಗಲಿದ್ದು, ಆ ಕಾರ್ಯಕ್ರಮದ ಪ್ರಮೋಷನ್ಗಾಗಿ ಬಿಗ್ಬಾಸ್ ಮನೆಗೆ ಕಳುಹಿಸಲಾಗಿತ್ತು. ಈ ವೇಳೆ ಬಿಗ್ಬಾಸ್ ಸ್ಪರ್ಧಿಗಳ ಬಗ್ಗೆ ಪುಂಕಾನುಪುಂಕವಾಗಿ ಹೇಳಿದ್ದ ಜ್ಯೋತಿಷಿ, ಬಿಗ್ಬಾಸ್ ಮುಗಿದ ಮೇಲೆ ಮನೆಗೆ ಹೋಗಬೇಡ. ಹೆತ್ತವರಿಂದ ದೂರ ಇದ್ದರೆ ಸಾಧನೆ ಮಾಡಬಹುದು. ‘ದೂರ ಇದ್ದಷ್ಟೂ ಧೂಪದ ಘಮಲು.. ಹತ್ತಿರ ಹೋಗಿ ಹೇಸಿಗೆ ಘಮಲು’ ಎಂದು ಹೇಳಿದಾಗಲೇ ಪ್ರತಾಪ್ ಮನಸ್ಸು ಚೂರು ಚೂರಾಗಿತ್ತು. ಆ ಬಳಿಕ ಮನೆಯಲ್ಲಿ ಅತಿಯಾಗಿ ಹಚ್ಚಿಕೊಂಡಿದ್ದ ಸ್ಪರ್ಧಿ ಸಂಗೀತಾ ಅವರಿಂದಲೂ ದೂರ ಉಳಿದುಕೊಂಡಿದ್ದ. ಈ ಬಗ್ಗೆ ಸಂಗೀತಾ ಸಾಕಷ್ಟು ಬಾರಿ ಕೇಳಿದಾಗಲೂ ಹೇಳಲಿಲ್ಲ ಅನ್ನೋ ಕಾರಣಕ್ಕೆ ಎಲ್ಲಾ ಆಟದಿಂದಲೂ ಪ್ರತಾಪ್ನನ್ನು ದೂರ ಇಟ್ಟಿದ್ದರು. ಸಂಗೀತಾ ನೇರವಾಗಿಯೇ ನೀನು ಪ್ಯಾನಿಕ್ ಆಗ್ತೀಯಾ. ನಿನ್ನ ಕೈಲಿ ಗೇಮ್ ಆಡೋದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದು, ಪ್ರತಾಪ್ಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿತ್ತು. ಮಧ್ಯರಾತ್ರಿ 1.30ಕ್ಕೆ ಆಸ್ಪತ್ರೆಗೆ ಕರೆತರಲಾಗಿತ್ತು. 3 ಗಂಟೆಗೆ ದಾಖಲು ಮಾಡಿಕೊಳ್ಳಲಾಗಿದೆ. ICU ಟ್ರೀಟ್ಮೆಂಟ್ ಕೊಡಲಾಗಿದೆ. ಪೊಲೀಸರಿಗೆ ಸುದ್ದಿ ಮುಟ್ಟಿಸಲಾಗಿದೆ. ಆದರೂ ವೈದ್ಯರು ಮಾತ್ರ ಗ್ಯಾಸ್ಟ್ರಿಕ್ ಎನ್ನುತ್ತಿದ್ದಾರೆ. ಪ್ರತಾಪ್ ಬದುಕು ಕೇವಲ ರೇಟಿಂಗ್ಗೆ ಮಾತ್ರ ಸೀಮಿತವಾಗಿ ಬದುಕು ಹಾಳು ಮಾಡದಿದ್ದರೆ ಅಷ್ಟೇ ಸಾಕು.
ಕೃಷ್ಣಮಣಿ