ಬೀದರ್: ಕಾರಂಜಾ ಸಂತ್ರಸ್ತರ 28 ಗ್ರಾಮಗಳ ಸಂತ್ರಸ್ತರು ಪ್ರಮುಖರು ಮತ್ತು ಮಹಿಳೆಯರು ಸೇರಿದಂತೆ ನೂರಾರು ಜನ ಕೇಂದ್ರ ಸಚಿವ ಭಗವಂತ ಖೂಬಾ ಅವರ ನಿವಾಸಕ್ಕೆ ಭೇಟಿ ನೀಡಿ ಸಂತ್ರಸ್ತರ ನ್ಯಾಯಯುತವಾದ ಬೇಡಿಕೆ ಬಗ್ಗೆ ಮನವರಿಕೆ ಮಾಡಿದರು.
ಬಹುದಿನಗಳ ಕಾರಂಜಾ ಸಂತ್ರ ಸ್ಥರ ನ್ಯಾಯಯುತ ವಾದ ಬೇಡಿಕೆ ಈಡೇರಿಸುವುದರ ಬಗ್ಗೆ ಸಕಾರಾತ್ಮಕ ವಾಗಿ ಸ್ಪಂದಿಸುವದಾಗಿ ಸಂತ್ರಸ್ತರಿಗೆ ಭಗವಂತ ಖೂಬಾ ಅವರು ಭರವಸೆ ನೀಡಿದರು.
ಸುಮಾರು ಎಂಟು ತಿಂಗಳಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುತ್ತಿರುವ ಕಾರಂಜಾ ಸಂತ್ರಸ್ತರಿಗೆ ಮಾನವೀ ಯತೆ ಮಾನದಂಡದ ಆಧಾರದ ಮೇಲೆ ವೈಜ್ಞಾನಿಕ ರೀತಿಯ ಪರಿಹಾರ ನೀಡಬೇಕೆಂದು ಕಾರಂಜಾ ಮುಳು ಗಡೆ ಸಂತ್ರಸ್ತರ ಹಿತರಕ್ಷಣ ಸಮಿತಿ ವತಿಯಿಂದ ಅಹೋರಾತ್ರಿ ಧರಣಿ ನಡೆಸಿಕೊಂಡು ಬರಲಾಗುತ್ತಿದೆ.
ಅಷ್ಟೇ ಅಲ್ಲದೆ ಎಲ್ಲಾ ಪಕ್ಷಗಳ ಸಂಘ ಸಂಸ್ಥೆ ಮತ್ತು ಸಂಘಟನೆಗಳಿಂದ ಮಾನವ ಸರಪಳಿ ಹೋರಾಟ ಮತ್ತು ಭಾರಿ ಪ್ರಮಾಣದ ವಾಹನ ಗಳ ಜಾಥಾ ನಡೆಸಿ ನ್ಯಾಯಯುತ ವಾದ ಬೇಡಿಕೆ ಈಡೇರಿಸಲು ಸರ್ಕಾ ರಕ್ಕೆ ಒತ್ತಾಯಿಸಲಾಗಿದೆ.
ಧೀರ್ಘ ಕಾಲದ ಹೋರಾಟದ ಸಂದರ್ಭದಲ್ಲಿ ಜಿಲ್ಲೆಯ ಸಂಸದರು ಮತ್ತು ಕೇಂದ್ರ ಸಚಿವ ಭಗವಂತ್ ಖೂಬಾ ಅವರು ಸತ್ಯಾಗ್ರಹ ಸ್ಥಳಕ್ಕೆ ಗಮನದಲ್ಲಿ ಭೇಟಿ ನೀಡಿಲ್ಲ.
ಇದನ್ನು ಟ್ಟುಕೊಂಡು ಸಂತ್ರಸ್ತರ ನೂರಾರು ಜನರ ನಿಯೋಗ ಕೇಂದ್ರ ಸಚಿವರಿಗೆ ಭೇಟಿಯಾಗಿ ರಾಜಕೀಯ ಇಚ್ಛಾಶಕ್ತಿ ವ್ಯಕ್ತಪಡಿಸಿ ಕಾರಂಜಾ ಸಂತ್ರಸ್ಥರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಬದ್ಧತೆಯನ್ನು ಪ್ರದರ್ಶಿಸಲು ಮನ ವರಿಕೆ ಮಾಡಲಾಯಿತು . ಇದೇ ಸಂದರ್ಭದಲ್ಲಿ ಸಚಿವರಿಗೆ ಲಿಖಿತ ಮನವಿ ನೀಡಿ ಕಾಲಮಿತಿ ಯೊಳಗೆ ಕಾರಂಜಾ ಸಂತ್ರಸ್ತರ ಬೇಡಿಕೆ ಈಡೇರಿಸಲು ಸಂತ್ರಸ್ತರ ಹಿತರಕ್ಷಣ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಪಾಟೀಲ್ ಸೇರಿ ದಂತೆ ಪ್ರಮುಖ ಮುಖಂಡರು ಅವರಲ್ಲಿ ಮನವರಿಕೆ ಮಾಡಿದರು .
ರಾಜಕುಮಾರ್ ಕೋಸಂ , ಚಂದ್ರಕಾಂತ್ ಹಾಲಹಳ್ಳಿ , ಬಸವ ರಾಜ್ ಹಿಂದಾ , ರವೀಂದ್ರ ಪಾಟೀಲ್ , ಸಾಗರ್ ಖೇಣಿ , ಕಲ್ಯಾಣ ರಾವ್ ಚನಶೆಟ್ಟಿ , ಬಸವರಾಜ್ ಬಂಬಳಗಿ , ವೀರಯ್ಯಾ ಸ್ವಾಮಿ , ವೈಜ ನಾಥ್ ಭತಮುರಗಿ , ಮಾದಪ್ಪ ಸಂಗೋಳಗಿ ಮುಂತಾದವರು ಉಪ ಸ್ಥಿತರಿದ್ದರು .