• Home
  • About Us
  • ಕರ್ನಾಟಕ
Tuesday, November 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಜೀವನದ ಶೈಲಿ

ಇದು ನವಿರಾದ ಪ್ರೇಮ ಕಥೆಯೋ ಅಥವಾ ಘನಘೋರ ದುರಂತವೋ…?! ಬಿಬೇಕ್ ಪಂಗೇನಿ & ಸೃಜನ ಪ್ರೇಮ ಕೃತಿ ಅಂತ್ಯ !

Chetan by Chetan
January 3, 2025
in ಜೀವನದ ಶೈಲಿ, ದೇಶ
0
ಇದು ನವಿರಾದ ಪ್ರೇಮ ಕಥೆಯೋ ಅಥವಾ ಘನಘೋರ ದುರಂತವೋ…?! ಬಿಬೇಕ್ ಪಂಗೇನಿ & ಸೃಜನ ಪ್ರೇಮ ಕೃತಿ ಅಂತ್ಯ !
Share on WhatsAppShare on FacebookShare on Telegram

ADVERTISEMENT

ನಿಮಗೆಲ್ಲಾ ಬಿಬೇಕ್ ಪಂಗೇನಿ ಬಗ್ಗೆ ತಿಳಿದಿರಬಹುದು. ನೇಪಾಳ ಮೂಲದ ಖ್ಯಾತ ಇನ್ಫ್ಲೂಯೆನ್ಸರ್. ಈ ಅಪರೂಪದ ದಂಪತಿಯ ಬಾಳಲ್ಲಿ ವಿಧಿ ಘನಘೋರ ಆಟವಾಡಿತ್ತು. ಬೈಬೆಕ್ ಅವರು ಬಹಳ ಕಾಲದಿಂದ ಮೆದುಳಿನ ಕ್ಯಾನ್ಸರ್ ನಿಂದ ಬಳಲಿ ಈಗ ಉಸಿರು ಚೆಲ್ಲಿದ್ದಾರೆ.ಈ ಕಷ್ಟ ಕಾಲಾದಲ್ಲಿ ಅವರ ಪತ್ನಿ ಸೃಜನ ಸುಬೇದಿ ಅವರು ತಮ್ಮ ಪತಿಯೊಂದಿಗೆ ನಿಂತ ರೀತಿ, ಅವರನ್ನು ನಾಲ್ಕನೇ ಹಂತದ ಮೆದುಳಿನ ಕ್ಯಾನ್ಸರ್‌ನಿಂದ ಹಾರೈಕೆ ಮಾಡುತ್ತಿದ್ದ ರೀತಿಗೆ ಇಡೀ ಇಂಟರ್ನೆಟ್ ಸಮೂಹವೇ ತಲೆಬಾಗಿತ್ತು. ಪತಿ ಪತ್ನಿ ಸಂಬಂಧಕ್ಕೆ ಹೊಸ ಭಾಷ್ಯ ಬರೆದ ಜೋಡಿ ಅಂದ್ರೆ ತಪ್ಪಾಗೋದಿಲ್ಲ.

Prathap Simha: ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಂಸದ ಪ್ರತಾಪ್‌ ಸಿಂಹ ವಾಗ್ದಾಳಿ..! #siddaramaiah #road

ಆದ್ರೆ ಮೊನ್ನೆಯಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಕ್ಕ ವಿಡಿಯೋವೊಂದು ನೆಟ್ಟಿಗರನ್ನು ದುಃಖಕ್ಕೆ ತಳ್ಳಿದೆ. ಈ ವಿಡಿಯೋದಲ್ಲಿ ಬಿಳಿ ಸೀರೆಯನ್ನು ಧರಿಸಿರುವ ಸೃಜನಾ ಅವರು ಬಿಬೇಕ್ ಅವರ ಫೋಟೋದ ಮುಂದೆ ಕುಳಿತು ಪತಿಯ ಅಂತಿಮ ವಿಧಿವಿಧಾನವನ್ನು ನೆರವೇರಿಸಿದ್ದಾರೆ. ಆ ಮೂಲಕ ತಮ್ಮ ಪತಿಯ ಸಾವಿನ ಸುದ್ದಿಯನ್ನು ಪರೋಕ್ಷವಾಗಿ ಅನುಯಾಯಿಗಳಿಹೆ ತಿಳಿಸಿದ್ದಾರೆ.

ಡಿಸೆಂಬರ್ 19, 2024 ರಂದು ಬಿಬೇಕ್ ಪಂಗೇನಿ ಮೆದುಳಿನ ಕ್ಯಾನ್ಸರ್ 4ನೇ ಹಂತದಿಂದ ಬಳಲುತ್ತಿರುವುದು ತಿಳಿದು ಬಂದಿರುತ್ತೆ.
ಕ್ಯಾನ್ಸರ್‌ನೊಂದಿಗೆ ಬಿಬೇಕ್‌ ಅವರ ಯುದ್ಧ ಬಹಳ ಘೋರವಾಗಿತ್ತು. ಆದ್ರೆ ಸೃಜನಾಳರ ಪ್ರೀತಿ ಆ ಯುದ್ಧವನ್ನು ಮೃದುವಾಗಿಸಿತ್ತು. ಪ್ರತಿನಿತ್ಯ ಸಾವಿನ ಜೊತೆ ಸೆಣೆಸುತ್ತಿದ್ದ ಪತಿಯ ಸೇವೆಯನ್ನು ಮಾಡಿದ ಸೃಜನ, ಒಂದು ಕ್ಷಣಕ್ಕೂ ಬೇಸರ ಮಾಡಿಕೊಳ್ಳದೆ ಪತಿಯನ್ನ ಸಾಲಿದ ರೀತಿಗೆ ಮತ್ತೊಂದು ಹೋಲಿಕೆ..ಉದಾಹರಣೆ ಇಲ್ಲವೇ ಇಲ್ಲ ಬಿಡಿ.

ಬಿಬೇಕ್ ಪಂಗೇನಿ ಅವರು ಜಾರ್ಜಿಯಾ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರ ಮತ್ತು ಖಗೋಳಶಾಸ್ತ್ರದಲ್ಲಿ ಪಿಎಚ್‌ಡಿ ವಿದ್ವಾಂಸರಾಗಿದ್ದರು . ಆದ್ರೆ ಕ್ಯಾನ್ಸರ್ ಪತ್ತೆಯಾದ ನಂತರ ಅವರ ಆರೋಗ್ಯ ಶೀಘ್ರವಾಗಿ ಹದಗೆಟ್ಟಿತು. ಆ ನಂತರ ಕ್ಯಾನ್ಸರ್ ವಿರುದ್ಧ ದಂಪತಿಗಳ ಕೆಚ್ಚೆದೆಯ ಪ್ರಯತ್ನಗಳು ಯಾವುದೇ ಫಲ ನೀಡಲಿಲ್ಲ. ಆದ್ರೆ ಬಿಬೇಕ್ ಅವರ ಪರಿಸ್ಥಿತಿ ದಿನೇ ದಿನೇ ಹದಗೆಡುವುದು, ಹಾಸಿಗೆ ಹಿಡಿದಿರುವುದನ್ನು ಪೋಸ್ಟ್ ಗಳ ಮೂಲಕ ತಮ್ಮ ಅನುಯಾಯಿಗಳಿಗೆ ಮಾಹಿತಿ ಹಂಚಿಕೊಳ್ಳುತ್ತಿದ್ದರು.ಈ ವೇಳೆ ಅವರೊಟ್ಟಿಗೆ ಪತ್ನಿ ಸ್ಪಂದಿಸಿದ ರೀತಿ, ಜೊತೆಯಾಗಿ ಜೀವನ ಸಾಗಿಸಿದ ರೀತಿ, ಪತಿಯನ್ನು ಬಿಟ್ಟುಕೊಡದೆ ಗಟ್ಟಿಯಾಗಿ ಜೊತೆ ನಿಂತ ರೀತಿ ಅವಿಸ್ಮರಣೀಯ.

ಆದ್ರು ಆ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಬಿಬೇಕ್ ಪಂಗೇನಿ ಕ್ಯಾನ್ಸರ್ ರೋಗಕ್ಕೆ ಬಲಿಯಾದರು. ಇದ್ರಿಂದ ಸೃಜನ ಅವರಿಗೆ ತಮ್ಮ ಜೀವನಡಾ ಮೇಲೆ ವೈರಾಗ್ಯ ಮೂಡಿದೆ. ಯಾಕೆಂದರೆ ಅವರು ಹಂಚಿಕೊಂಡ ಪ್ರೀತಿ ಕೇವಲ ಪ್ರಣಯ ಸಂಬಂಧವಾಗಿರಲಿಲ್ಲ, ಆದರೆ ಅಚಲವಾದ ಬೆಂಬಲ ಮತ್ತು ಬದ್ಧತೆಯ ಮೇಲೆ ನಿರ್ಮಿಸಲ್ಪಟ್ಟ ಸಂಬಂಧವಾಗಿತ್ತು. ಬಿಬೇಕ್‌ ಸಾವಿನೊಂದಿಗೆ ಸೃಜನಾಗೂ ಜೀವನ ಸಾಕೆನಿಸಿದೆ.

ಹೀಗಾಗಿ ಸೃಜನಾ ಪತಿಯ ಸಾವಿನ ನಂತರ,ಹಳದಿ ಹೂವಿನ ಹಾರದಿಂದ ಅಲಂಕರಿಸಲ್ಪಟ್ಟ ಬಿಬೇಕ್ ಅವರ ಫೋಟೋದ ಮುಂದೆ ಕುಳಿತು , ಸೀರೆಯ ಪಲ್ಲು ತಲೆಯ ಮೇಲೆ ಸುತ್ತಿಕೊಂಡು, ಧಾರ್ಮಿಕ ಕ್ರಿಯೆಯಲ್ಲಿ ತೊಡಗಿರುವಂತೆ ಕುಳಿತಿರುವುದನ್ನು ಇತ್ತೀಚಿನ ವೀಡಿಯೊದಲ್ಲಿ ಕಾಣಬಹುದು. ಅವರ ಕಣ್ಣೀರಿನ ಹನಿಗಳು ಎದೆಯ ಭಾರವನ್ನು ಸೂಚಿಸುತ್ತವೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಅವರ ಅನುಯಾಯಿಗಳಿಗೆ ಕೂಡ ತಮ್ಮ ಭಾವನೆಗಳನ್ನು ತಡೆಯಲಾಗಲಿಲ್ಲ. ಸೃಜನ ಅವರ ದುಃಖವನ್ನು ಫಾಲ್ವರ್ಸ್ ಕೂಡ ತಮ್ಮ ದುಃಖವೆಂದು ಪರಿಗಣಿಸಿದ್ದಾರೆ.

ಅವಳ ನೋವನ್ನು ವಿವರಿಸಲು ನನ್ನ ಬಳಿ ಪದಗಳಿಲ್ಲ. ಅಲ್ಲಾ ಅವಳನ್ನು ಆಶೀರ್ವದಿಸಲಿ ಎಂದು ಕೆಲವರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ, ಇನ್ನೊಬ್ಬರು “ಮುಂದಿನ ಜನಮ್ ಮೇ ಆಪ್ ದೋನೋ ಸಾಥ್ ರಹೋಗೆ ಹುಮೇಶಾ” ಎಂದು ಸರಳವಾಗಿ ಪ್ರತಿಕ್ರಿಯಿಸಿದ್ದಾರೆ. ಸೃಜನ ಮತ್ತು ಬಿಬೇಕ್ ಅವರ ಕಥೆ ಎಷ್ಟು ಆಳವಾಗಿ ಅನೇಕರ ಹೃದಯವನ್ನು ಮುಟ್ಟಿದೆ ಎಂಬುದಕ್ಕೆ ಈ ಹೃದಯಸ್ಪರ್ಶಿ ಸಂದೇಶಗಳೇ ಸಾಕ್ಷಿ.

Anantkumar Hegde :ಜಾಡಿಸಿ ಒದ್ದರೆ ಬುದ್ಧಿ ಬರುತ್ತೆ #pratidhvani

ಬಿಬೆಕ್ ಅವರಿಗೆ ಕ್ಯಾನ್ಸರ್ ಪತ್ತೆಯಾದ ರೀತಿಯೇ ಆಘಾತಕಾರಿಯಾಗಿದೆ. ಆರಂಭದಲ್ಲಿ ತಲೆನೋವಿನಂತಹ ಸಣ್ಣ ಆರೋಗ್ಯ ಸಮಸ್ಯೆ ಎಂದು ಅದನ್ನು
ನಿರ್ಲಕ್ಷಿದ್ದರು . ಆದ್ರೆ ವಿಧಿಯಾಟ, ಶೀಘ್ರದಲ್ಲೇ ವಿನಾಶಕಾರಿ ಹಂತ ನಾಲ್ಕನೇ ಮೆದುಳಿನ ಕ್ಯಾನ್ಸರ್ ರೋಗ ವಕ್ಕರಿಸಿತ್ತು. ಆದ್ರೆ ಎಡೆ ಗುಂದದ ಪತ್ನಿ ಸೃಜನ ಅವರು ಎರಡು ಪ್ರಮುಖ ಶಸ್ತ್ರಚಿಕಿತ್ಸೆಗಳು ಮತ್ತು ನಿರಂತರ ಚಿಕಿತ್ಸೆಗೆ ಪತಿಯ ಬೆನ್ನಿಗೆ ನಿಂತರು. ಆದ್ರೆ ವೈದ್ಯರು
ಬಿಬೆಕ್ ಕೇವಲ ಆರು ತಿಂಗಳು ಮಾತ್ರ ಬದುಕುತ್ತಾರೆ ಎಂದು ಭವಿಷ್ಯ ನುಡಿದಿದ್ದರೂ ಸಹ, ಸೃಜನಾ ಅವರು ಬಿಬೇಕ್‌ನ ಆರೈಕೆಯಲ್ಲಿ ಎಂದಿಗೂ ಹಿಂಜರಿಯಲಿಲ್ಲ. ಎಲ್ಲವೂ ಸರಿಯಿದ್ದು ಸಹಬಾಳ್ವೆಯಿಲ್ಲದೆ ದೂರಾಗುವ, ಸಣ್ಣ ಪುಟ್ಟ ವಿಚಾರಗಳಿಗೆ ವಿಚ್ಛೇದನ ಪಡೆಯುವ ಈ ಕಾಲದಲ್ಲಿ ಇಂಥ ಆದರ್ಶ ದಂಪತಿಯ ಬದುಕಿನ ಕಥೆ ಈ ರೀತಿ ಅಂತ್ಯವಾಗಿದ್ದು ನಿಜಕ್ಕೂ ವಿಧಿಗೆ ಶಪಿಸಬೇಕು ಎನಿಸುವ ನಿದರ್ಶನವಾಗಿದೆ.

Tags: bibek pangenibibek pangeni cancerbibek pangeni cancer fightbibek pangeni deathbibek pangeni familybibek pangeni kon haibibek pangeni latest newsbibek pangeni newsbibek pangeni storybibek pangeni wifenepali influencer bibek pangeni deathnepali influencer bibek pangeni no morenepali influencer bibek pangeni videossrjana subedi husband bibek pangeniwho is bibek pangeni
Previous Post

ಚೀನಾದಲ್ಲಿ ಮತ್ತೆ ಶುರುವಾಯ್ತಾ ಕೊರೊನಾ ವೈರಸ್‌ ಅಬ್ಬರ..?

Next Post

ಪಡಿತರ ವಿತರಣೆಗೆ ಹಣ ವಸೂಲಿ: ಶಾಸಕ ಪ್ರಭು ಚವ್ಹಾಣ ಗರಂ.

Related Posts

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
0

ಡಾ.ರಾಜ್ ಪರದೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಅದೇ ಮೌಲ್ಯಗಳನ್ನು ಪಾಲಿಸಿದರು: ಸಿ.ಎಂ ಸಿದ್ದರಾಮಯ್ಯ ಅಪಾರ ಮೆಚ್ಚುಗೆ ಸಿನಿಮಾ ತಾರೆಯರು ಪರದೆ ಮೇಲೆ ಕಾಣುವಷ್ಟೇ ಮೌಲ್ಯಯುತವಾಗಿ ನಿಜ...

Read moreDetails

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

November 3, 2025

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

November 3, 2025

Rahul Gandhi: ಚುನಾವಣೆ ಪ್ರಚಾರದ ಬಳಿಕ ನೀರಿಗೆ ಧುಮುಕಿ ಮೀನು ಹಿಡಿದ ರಾಹುಲ್‌..

November 3, 2025
Next Post

ಪಡಿತರ ವಿತರಣೆಗೆ ಹಣ ವಸೂಲಿ: ಶಾಸಕ ಪ್ರಭು ಚವ್ಹಾಣ ಗರಂ.

Recent News

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
Top Story

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

by ಪ್ರತಿಧ್ವನಿ
November 3, 2025
Top Story

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

by ಪ್ರತಿಧ್ವನಿ
November 3, 2025
Top Story

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
November 3, 2025
Top Story

CM Siddaramaiah: ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು..!!

by ಪ್ರತಿಧ್ವನಿ
November 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

November 3, 2025

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada