ಕರಾವಳಿಯ ಹುಡುಗಿ.. ರಾಮನಗರದ ಹುಡುಗ. ಮದುವೆ ಆಗಿ ಕೇವಲ 8 ತಿಂಗಳಾಗಿತ್ತು. ಪ್ರೀತಿಸಿ ಮದುವೆ ಆದ ಜೋಡಿ ಇಂದು ದುರಂತ ಅಂತ್ಯ ಕಂಡಿದೆ. ಭಟ್ಕಳ ಮೂಲದ ಗಿರಿಜಾ ಹಾಗೂ ರಾಮನಗರ ಮೂಲದ ನವೀನ್ ಪ್ರೀತಿಸಿ ಮದುವೆಯಾಗಿದ್ದ ಜೋಡಿ, ಮಗು ವಿಚಾರವಾಗಿ ಗಲಾಟೆ ಮಾಡಿ ಹೆಂಡತಿಯನ್ನು ಕೊಂದು ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.
![](https://pratidhvani.com/wp-content/uploads/2024/04/1000110137.jpg)
2019ರಲ್ಲಿ ಬೆಂಗಳೂರಿನ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಗಿರಿಜಾ ಹಾಗು ನವೀನ್ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದರು. ಪ್ರೀತಿ ಬಳಿಕ ಮನೆಯವರನ್ನ ಒಪ್ಪಿಸಿ ಮದುವೆಯಾಗಿದ್ರು. 8 ತಿಂಗಳ ಹಿಂದೆ ಲಕ್ಷಾಂತರ ರೂಪಾಯಿ ಸಾಲ ಮಾಡಿ ಅದ್ಧೂರಿಯಾಗಿ ಮದುವೆ ಕೂಡ ಮಾಡಿದ್ರು. ಆ ಬಳಿಕ ಹೆಚ್ಎಎಲ್ ಠಾಣಾ ವ್ಯಾಪ್ತಿಯ ಅನ್ನಸಂದ್ರಪಾಳ್ಯದಲ್ಲಿ ವಾಸವಿದ್ರು.
![](https://pratidhvani.com/wp-content/uploads/2024/04/1000110131-449x1024.jpg)
ಕೆಲಸ ಅರಸಿಕೊಂಡು ಭಟ್ಕಳದಿಂದ ಬೆಂಗಳೂರಿಗೆ ಬಂದಿದ್ದ ಗಿರಿಜಾ, ತನ್ನ ಅಕ್ಕನ ಮನೆಯಲ್ಲಿ ಉಳಿದುಕೊಂಡಿದ್ದಳು. ಆ ವೇಳೆ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು. ಮನೆಯವರ ವಿರೋಧದ ನಡುವೆಯೂ ಕುಟುಂಬಸ್ಥರನ್ನು ಒಪ್ಪಿಸಿ ಮದುವೆ ಆಗಿದ್ರು. ಮದುವೆ ಆದ ಬಳಿಕ ಒಂದೇ ತಿಂಗಳಿಗೆ ಗರ್ಭಪಾತ ಆಗಿತ್ತು. ಹೆಣ್ಣಿಗೆ ಗರ್ಭಪಾತ ಆದರೆ ಹೆರಿಗೆ ಆದಷ್ಟೇ ನೋವು ಆಗುತ್ತದೆ. ದೇಹ ಜರ್ಜರಿತವಾಗುತ್ತದೆ. ಆದರೂ ಒಂದೇ ತಿಂಗಳಲ್ಲಿ ಮತ್ತೆ ಮಗು ಬೇಕು ಎಂದು ಕಿತಾಪತಿ ತೆಗೆದಿದ್ದ ನವೀನ್, ಕುಡಿದು ಬಂದು ಹೊಡೆಯುವುದು, ಜಗಳ ಆಡುವುದು ಮಾಡ್ತಿದ್ನಂತೆ.
![](https://pratidhvani.com/wp-content/uploads/2024/04/1000110139-449x1024.jpg)
ಕುಟುಂಬಸ್ಥರು ಒಪ್ಪಿಗೆ ಕೊಡದಿದ್ದಾಗ ಮದುವೆ ಆದರೆ ಈತನನ್ನೇ ಮದ್ವೆ ಆಗೋದು ಎಂದು ಪಟ್ಟು ಹಿಡಿದು ಮದುವೆ ಆಗಿದ್ದ ಗಿರಿಜಾ, ಸದ್ಯಕ್ಕೆ ಮಗು ಬೇಡ, ಸ್ವಲ್ಪ ದಿನ ವಿಶ್ರಾಂತಿ ಬೇಕು ಅಂದಿದ್ದಳಂತೆ. ಆದರೆ ಅಷ್ಟರಲ್ಲಿ ಬೇರೊಂದು ಯುವತಿ ಜೊತೆಗೆ ಅಕ್ರಮ ಸಂಬಂಧಕ್ಕೆ ಬಿದ್ದಿದ್ದ ನವೀನ, ಹೆಂಡತಿ ಜೊತೆಗೆ ಗಲಾಟೆ ತೆಗೆದು, ಏಪ್ರಿಲ್ 12 ರಂದು ರಾತ್ರಿ ಮಲಗಿದ್ದಾಗ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ HAL ಠಾಣೆಗೆ ಬಂದು ತಾನೇ ಶರಣಾಗಿದ್ದಾನೆ.
![](https://pratidhvani.com/wp-content/uploads/2024/04/1000110133-1024x449.jpg)
ಸಾಕಷ್ಟು ಬಾರಿ ರಾಜಿ ಪಂಚಾಯ್ತಿ ಮಾಡಿದ್ದೆವು, ಆ ಕ್ಷಣಕ್ಕೆ ಹೂಂ ಎಂದುಕೊಳ್ತಿದ್ದ ನವೀನ್ ಮತ್ತು ಆತನ ಕುಟುಂಬಸ್ಥರು, ಮತ್ತದೇ ಚಾಳಿ ಮುಂದುವರಿಸ್ತಿದ್ರು. ಅರ್ಧರಾತ್ರಿಯಲ್ಲಿ ಕುಡಿದು ಬಂದು ಗಲಾಟೆ ಮಾಡಿ ಹಿಂಸೆ ಕೊಡ್ತಿದ್ನಂತೆ. ಅದೇನೇ ಆಗಲಿ ಕರಾವಳಿಯಿಂದ ಬಂದ ಹುಡುಗಿ ಪ್ರೀತಿಸಿ ಮದುವೆ ಆದ ಬಳಿಕ ಬೇರೊಂದು ಯುವತಿ ಜೊತೆಗೆ ಕಾಮೋನ್ಮತ್ತನಾಗಿ ಕೊಂದು ಮುಗಿಸಿದ್ದು ದುರಂತವೇ ಸರಿ. ಗರ್ಭಪಾತ ಆದಾಗ ಮತ್ತೆ ಗರ್ಭ ಧರಿಸಲು ಒಂದರಿಂದ 2 ವರ್ಷ ಅವಶ್ಯಕತೆ ಇದೆ ಎನ್ನುತ್ತಾರೆ ವೈದ್ಯರು. ಆದರೂ ಪ್ರೀತಿ ಅನ್ನೋ ಪದಕ್ಕೆ ತಿಲಾಂಜಲಿ ಇಟ್ಟಿದ್ದಾನೆ ಮೂರ್ಖ.
![](https://pratidhvani.com/wp-content/uploads/2024/04/1000110141-449x1024.jpg)
ಕೃಷ್ಣಮಣಿ