Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಭದ್ರಾವತಿ ಉಕ್ಕು ಕಾರ್ಖಾನೆ ಮುಚ್ಚಿ ಆಸ್ತಿ ಹೊಡೆಯುವ ಹುನ್ನಾರ: ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

ಪ್ರತಿಧ್ವನಿ

ಪ್ರತಿಧ್ವನಿ

January 21, 2023
Share on FacebookShare on Twitter

ಶಿವಮೊಗ್ಗ: ಭದ್ರಾವತಿ ಉಕ್ಕಿನ ಕಾರ್ಖಾನೆಯ ಆಸ್ತಿ ಮೇಲೆ ರಾಜಕಾರಣಿಗಳ ಕಣ್ಣಿದೆ ಹಾಗಾಗಿ ಮುಚ್ಚುತ್ತಿದ್ದಾರೆ ಎಂದು ಕಾರ್ಖಾನೆ ಗುತ್ತಿಗೆ ನೌಕರರು ಆತಂಕ ವ್ಯಕ್ತಪಡಿಸಿದರು.

ಹೆಚ್ಚು ಓದಿದ ಸ್ಟೋರಿಗಳು

ಕೋಲಾರದಲ್ಲಿ ನಿಲ್ಲಬೇಕೋ ಓಡಿ ಹೋಗಬೇಕೋ ನನಗೆ ಬಿಟಿದ್ದು, ಯಡುಯೂರಪ್ಪ ಯಾರು ಹೇಳೋಕೆ : Siddaramaiah | yediyurappa

Nalin Kumar Kateel..ಒಬ್ಬ ವಿದೂಷಕ : Siddaramaiah

Rameshjarkiholi Video ಬಿಡುಗಡೆ ಮಾಡಿದ್ದು D K Shivakumar ಅಂತೆ ..ನನಗೆ ಏನು ಗೊತ್ತಿಲ್ಲ : Siddaramaiah

ಕಾರ್ಖಾನೆ‌ ಮುಚ್ಚಲು ಬಿಡದಂತೆ ನಿರಂತರ ಹೋರಾಟ‌ ಆರಂಭಿಸಿರುವ ಗುತ್ತಿಗೆ ಕಾರ್ಮಿಕರ ಸಂಘದ ಹೋರಾಟಗಾರರು ಬಿಎಸ್ ಯಡಿಯೂರಪ್ಪ, ಸಂಸದ ಬಿವೈ ರಾಘವೇಂದ್ರ ಹಾಗೂ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.

ಗುತ್ತಿಗೆ ಕಾರ್ಮಿಕರ ಸಂಘದ ರಾಕೇಶ್ ಮಾತನಾಡಿ, ಭದ್ರಾವತಿಯ ಈ ಪುರಾತನ ಕಾರ್ಖಾನೆಗೆ 1918ರಲ್ಲಿ ಅಡಿಪಾಯ ಹಾಕಲಾಯ್ತು. 1923ರಲ್ಲಿ ಉತ್ಪಾದನೆ ಆರಂಭವಾಯ್ತು.ಭದ್ರಾವತಿಯ ಜನರ ಒಳಿತಿಗಾಗಿ, ನಿರುದ್ಯೋಗ ಸಮಸ್ಯೆ ನಿವಾರಣೆ ಉದ್ದೇಶದಿಂದ ಅಂದು ದಿವಾನರಾಗಿದ್ದ ವಿಶ್ವೇಶ್ವರಯ್ಯನವರು ಒಡೆಯರ್ ಜೊತೆ ಈ ಕಾರ್ಖಾನೆ ಸ್ಥಾಪಿಸಿದರು. ಈಗ ನಾವು ನೂರು ವರ್ಷದ ಸಂಭ್ರಮದಲ್ಲಿದ್ದೇವೆ. ಆದರೆ ನಷ್ಟದ ನೆಪವೊಡ್ಡಿ ಕಾರ್ಖಾನೆ ಮುಗಿಸಲು ಹುನ್ನಾರ ನಡೆಸಿದ್ದಾರೆ. ಕಾರ್ಖಾನೆ ಆರಂಭವಾದ ಸಂದರ್ಭದಲ್ಲಿ ಈ ಸರ್ಕಲ್ ನಲ್ಲಿ ನಿಂತ್ರೆ 45 ನಿಮಿಷ ರಸ್ತೆ ಕ್ರಾಸ್ ಮಾಡಲು ಆಗುತ್ತಿರಲಿಲ್ಲ. ಅಷ್ಟುಉದ್ಯೋಗಿಗಳು ಓಡಾಡುತ್ತಿದ್ದರು. ಇಂತಹ ವೈಭೋಗದಲ್ಲಿದ್ದ ಭದ್ರಾವತಿಯನ್ನು, ಕೇಂದ್ರ ಸುಪರ್ದಿಗೆ ತೆಗೆದುಕೊಂಡು ನಾಶ ಮಾಡುತ್ತಿದೆ. ದೇವೇಗೌಡರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಉಕ್ಕು ಪ್ರಾಧಿಕಾರಕ್ಕೆ ಇದನ್ನ ಪುನಶ್ಚೇತನಕ್ಕಾಗಿ ನೀಡಲಾಗಿತ್ತು. ಆದರೆ ಈತನಕ ಯಾವುದೇ ಬಂಡವಾಳ ಹಾಕಲಿಲ್ಲ. ಉತ್ತರ ಭಾರತದವರು ದಕ್ಷಿಣ ಭಾರತದವರಿಗೆ ಮಲತಾಯಿ ಧೋರಣೆ ಮಾಡಿಕೊಂಡು ಬಂದಿದ್ದಾರೆ. ಒಂದು ರೂಪಾಯಿ ಬಂಡವಾಳ ಹಾಕದೆ ಈ ಕಾರ್ಖಾನೆ ನಷ್ಟ ಅನುಭವಿಸಿದೆ ಎಂದು ಹೇಳುವುದು ಕಾರ್ಖಾನೆಯನ್ನು ವ್ಯವಸ್ಥಿತವಾಗಿ ಮುಚ್ಚುವ ಹುನ್ನಾರ. ಕಾರ್ಖಾನೆ ಮುಚ್ಚುವುದರ ಹಿಂದೆ ಇದಕ್ಕೆ ಸಂಬಂಧಿಸಿದ ಆಸ್ತಿಯ ಮೇಲೆ ರಾಜಕಾರಣಗಳ ಕಣ್ಣಿದೆ. ಆದರೆ ಒಂದಂತೂ ನಿಜ ಈ ಕಾರ್ಖಾನೆ ಮುಚ್ಚುವ ಹಂತಕ್ಕೆ ತೆಗೆದುಕೊಂಡು ಹೋದರೆ ಉಗ್ರ ಹೋರಾಟ ಮಾಡುತ್ತೇವೆ. ಭದ್ರಾವತಿಯ ಯಾವುದೇ ಚುನಾವಣೆ ಇರಬಹುದು ಸ್ಥಳೀಯ ಚುನಾವಣೆ ಆಗಿರಬಹುದು, ಲೋಕಸಭಾ ಚುನಾವಣೆ ಆಗಿರಬಹುದು ಮುಂಬರುವ ವಿಧಾನಸಭಾ ಚುನಾವಣೆಯೂ ಆಗಿರಬಹುದು ಎಲ್ಲಾ ಚುನಾವಣೆಗಳನ್ನ ನಾವು ಬಹಿಷ್ಕರಿಸುತ್ತೇವೆ. ಈ ಕಾರ್ಖಾನೆಯನ್ನು ಮುಚ್ಚಿ ಸುತ್ತಲ ಜಮೀನು ವಶಪಡಿಸಿಕೊಳ್ಳಲು, ಹುನ್ನಾರ ನಡೆದಿದೆ.‌ ಇದು ಲಾಭದಲ್ಲಿದ್ದರೂ, ಇನ್ನಷ್ಟು ಬಂಡವಾಳ ಹಾಕಿದರೆ ಇನ್ನಷ್ಟು ಲಾಭದ ಹಾದಿಯಲ್ಲಿ ಹೋಗುತ್ತೆ. ಆದರೆ ಅಂತ ಇಚ್ಛಾಶಕ್ತಿ ಆಳುವ ವರ್ಗಕ್ಕೆ ಇಲ್ಲ. ನಮ್ಮ ಗುತ್ತಿಗೆದಾರರ ಸಂಘದಿಂದ ಈ ಕಾರ್ಖಾನೆಯನ್ನು ಲಾಭದ ಮಾರ್ಗದಲ್ಲಿ ತೆಗೆದುಕೊಂಡು ಹೋಗುವ ಜವಾಬ್ದಾರಿ ಇದೆ. ರಾಜಕಾರಣಿಗಳಿಗೆ ಈ ಕಾರ್ಖಾನೆಯ ನೆಲದ ಮೇಲೆ ಕಣ್ಣು ಇದೆ. ಕಾರ್ಖಾನೆ ಮೇಲೆ ಬಂಡವಾಳ ಹಾಕಿ ನಷ್ಟದಲ್ಲಿದ್ದರೆ ಬೇಕಾದರೆ ಮುಚ್ಚಲಿ ಆದರೆ ಒಂದೇ ರೂಪಾಯಿ ಬಂಡವಾಳ ಹಾಕದೆ ಲಾಭದಲ್ಲಿರುವ ಕಾರ್ಖಾನೆ ಹೇಗೆ ಮುಚ್ಚುತ್ತಾರೆ..? ಈಗಲೂ ಪುನಶ್ಚೇನಗೊಳಿಸಿ ಲಾಭ ತೆಗೆಯಬಹುದು. ಇಲ್ಲವಾದರೆ ಭದ್ರಾವತಿ ಸ್ಮಶಾನ ಆಗುತ್ತೆ‌. ನಮ್ಮ ಹೆಣವನ್ನೇ ಇಲ್ಲಿ ಹೂಳೋದು.‌ ಇವೆಲ್ಲದಕ್ಕೂ ರಾಜಕಾರಣಿಗಳೇ ಕಾರಣರಾಗುತ್ತಾರೆ ಎಂಪಿಎಂ ಕಾರ್ಖಾನೆ ಮುಚ್ಚಿದಾಗ್ಲೂ ಕೂಡ ಯಾರು ಸರಿಯಾಗಿ ಹೋರಾಟ ಮಾಡ್ಲಿಲ್ಲ. ಆದರೆ ಅದು ಇಲ್ಲಿ ಮರುಕಳಿಸಬಾರದು. ಆದರೆ ರಾಜಕಾರಣಿಗಳು ಹಿತಾಸಕ್ತಿ ತೋರಿಸಬೇಕು ಈ ಕಾರ್ಖಾನೆ ಪುನಃ ಚೆನ್ನಾಗಿ ನಡೆಯಬೇಕು. ಆದರೆ ರಾಜಕಾರಣಿಗಳು ಆಸಕ್ತಿ ತೋರಿಸಬೇಕು ಚುನಾವಣೆ ಬಂದಾಗ ಮಾತ್ರ ಕಾರ್ಖಾನೆಗಳು ನೆನಪಾಗುತ್ತವೆ ಎಂದರು. ಸದ್ಯ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಮಾತ್ರ ಕ್ರಮಕ್ಕೆ ಮುಂದಾಗಿದೆ. ಆದರೆ ಇಲ್ಲಿನ ಸಂಸದ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಕಾರ್ಖಾನೆಯನ್ನು ಪಡೆಯಲು ಕ್ರಮವಹಿಸಬೇಕು ಎಂದು ರಾಕೇಶ್ ಆಕ್ರೋಶ ವ್ಯಕ್ತಪಡಿಸಿದರು.

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

| CM BOMMAI ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾನಿಲಯದ ಭೂಮಿ ಪೂಜೆ | ಸಿಎಂ ಬೊಮ್ಮಾಯಿ |
ರಾಜಕೀಯ

| CM BOMMAI ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾನಿಲಯದ ಭೂಮಿ ಪೂಜೆ | ಸಿಎಂ ಬೊಮ್ಮಾಯಿ |

by ಪ್ರತಿಧ್ವನಿ
January 28, 2023
V. Somanna|ನನಗೆ ಒಂದೇ ಒಂದು ಆಸೆ ಬೊಮ್ಮಾಯಿ ಅವರೇ ಮುಂದೇನು ಸಿಎಂ ಆಗಿರಬೇಕು
ರಾಜಕೀಯ

V. Somanna|ನನಗೆ ಒಂದೇ ಒಂದು ಆಸೆ ಬೊಮ್ಮಾಯಿ ಅವರೇ ಮುಂದೇನು ಸಿಎಂ ಆಗಿರಬೇಕು

by ಪ್ರತಿಧ್ವನಿ
January 30, 2023
Madhu Bangarappa: : ದಮ್ಮು ತಾಕತ್ತು ಅನ್ನೋದು ಬಿಜೆಪಿ ಅವರ ಭಾಷಣದಲ್ಲಿ ಮಾತ್ರ | Pratidhvani
ರಾಜಕೀಯ

Madhu Bangarappa: : ದಮ್ಮು ತಾಕತ್ತು ಅನ್ನೋದು ಬಿಜೆಪಿ ಅವರ ಭಾಷಣದಲ್ಲಿ ಮಾತ್ರ | Pratidhvani

by ಪ್ರತಿಧ್ವನಿ
January 24, 2023
ರಾಜಕೀಯ

ಕಾಂಗ್ರೆಸ್ ನವರಿಗೆ ಸೋಲಿನ ಭೀತಿ ಶುರುವಾಗಿದೆ

by ಪ್ರತಿಧ್ವನಿ
January 28, 2023
RameshJarkiholi |ಡಿಕೆ ಶಿವಕುಮಾರ್ ನನ್ನತ್ರ ಇನ್ನೂ 20 ವಿಡಿಯೋಗಳು ಇದಾವೆ
ರಾಜಕೀಯ

RameshJarkiholi |ಡಿಕೆ ಶಿವಕುಮಾರ್ ನನ್ನತ್ರ ಇನ್ನೂ 20 ವಿಡಿಯೋಗಳು ಇದಾವೆ

by ಪ್ರತಿಧ್ವನಿ
January 30, 2023
Next Post
| APPU | ಬಳ್ಳಾರಿಯಲ್ಲಿ 25 ಅಡಿ ಅಪ್ಪುವಿನ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಅಭಿಮಾನಿಗಳು | ballari |

| APPU | ಬಳ್ಳಾರಿಯಲ್ಲಿ 25 ಅಡಿ ಅಪ್ಪುವಿನ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಅಭಿಮಾನಿಗಳು | ballari |

ರಾಘವೇಂದ್ರ ರಾಜ್ ಕುಮಾರ್ ಅಭಿನಯದ ‘ಆಧುನಿಕ ಶ್ರವಣಕುಮಾರ’ ಟೀಸರ್ ರಿಲೀಸ್

ರಾಘವೇಂದ್ರ ರಾಜ್ ಕುಮಾರ್ ಅಭಿನಯದ 'ಆಧುನಿಕ ಶ್ರವಣಕುಮಾರ' ಟೀಸರ್ ರಿಲೀಸ್

ತೇಜಸ್ವಿ ಸೂರ್ಯನ ಬಾಲ ಕುಚೇಷ್ಟೆಗಳು

ತೇಜಸ್ವಿ ಸೂರ್ಯನ ಬಾಲ ಕುಚೇಷ್ಟೆಗಳು

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist