ಮುಂಬರುವ ಲೋಕಸಭಾ ಚುನಾವಣೆಗೆ ಟಿಕೆಟ್ ಫೈಟ್ ನಡೆಯುತ್ತಿದ್ದು, ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಶಾಸಕ ಮುನಿರತ್ನ, ನನಗೆ ಗೊತ್ತಿರುವಂತೆ ಸತೀಶ್ ಜಾರಕಿಹೊಳಿಗೆ ಬೆಳಗಾವಿಯಲ್ಲಿ ವೀಕ್ ಆಗಿದ್ದು ಹಿನ್ನಡೆ ಆಗುವ ಸಾಧ್ಯತೆ ಇದೆ. ಲಕ್ಷ್ಮೀ ಹೆಬ್ಬಾಳ್ಕರ್ ಮಗನಿಗೆ ಟಿಕೆಟ್ ಸಿಗಲಿದೆ ಎಂದು ಭವಿಷ್ಯ ನಿಡುದಿದ್ದಾರೆ.
ಇಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಮಾಡಿ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಅವರು ಇಷ್ಟು ದಿನ ನಮ್ಮ ಬೆಳಗಾವಿ ನಮಗೆ ಭದ್ರಕೋಟೆ ಅಂದುಕೊಂಡಿದ್ದರು ಆದರೆ ಬೆಳಗಾವಿ ಜಿಲ್ಲೆಯಲ್ಲಿ ಸತೀಶ್ ಜಾರಕಿಹೊಳಿ ವೀಕ್ ಆಗುತ್ತಿದ್ದಾರೆ. 20 ಜನರ ಜತೆ ಹೋಗಲು ಬಸ್ ರೆಡಿ ಮಾಡಿದ್ದರಲ್ಲೇ ಗೊತ್ತಾಗ್ತಿದೆ. ಹಿಂದೆ ರಮೇಶ್ ಜಾರಕಿಹೊಳಿ ಇದ್ದಾಗ ನೀನಾ ನಾನಾ ಅಂತಾ ಇತ್ತು. ಈಗ ಅದು ರಿವರ್ಸ್ ಆಗಿ ನಾನಾ ನೀನಾ ಅಂತಾ ಆಗಿದೆ. ಈಗ ಸಚಿವ ಸತೀಶ್ ಜಾರಕಿಹೊಳಿ ಚಿಕ್ಕವರಾಗಿ ಕಾಣುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದಲ್ಲದೇ, ಅದೆಲ್ಲೋ ಒಂದು ಕಡೆ ಕೈ ತಪ್ಪಿ, ಸತೀಶ್ ಜಾರಕಿಹೊಳಿ ಕುಟುಂಬಕ್ಕೆ ಟಿಕೆಟ್ ಸಿಗೋದು ಅನುಮಾನ. ಅದು ನನ್ನ ಅನಿಸಿಕೆ. ನಾನು ನೋಡ್ತಿರೋ ತರ, ಲಕ್ಷ್ಮಿ ಹೆಬಾಳ್ಕರ್ ಮಗನಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ. ಇದನ್ನು ನಾನು ಹೇಳ್ತಿಲ್ಲ ಜನರೇ ಹೇಳ್ತಿದ್ದಾರೆ ಎಂದು ಹೇಳಿದ್ದಾರೆ.
ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಅವರಿಗೆ ಇದ್ದ ವರ್ಚಸ್ಸು ಕಡಿಮೆ ಆಗ್ತಿದೆ. ಮುಂದಿನ ದಿನಗಳಲ್ಲಿ ಅಲ್ಲಿ ಮೂಲೆ ಗುಂಪು ಆಗ್ತಾರೆ ಎಂದು ಮುನಿರತ್ನ ಭವಿಷ್ಯ ನುಡಿದಿದ್ದಾರೆ.