ಅದ್ಯಾಕೋ ಏನೋ ಚಾಮರಾಜಪೇಟೆ ಮೈದಾನದ ವಿವಾದ ಬಗೆಹರಿಯೋ ಲಕ್ಷಣ ಕಾಣ್ತಿಲ್ಲ. ಒಂದ್ಕಡೆ ಆಸ್ತಿ ನಮ್ಮದು ಅಂತಿದ್ದ ವಕ್ಫ್ ಬೊರ್ಡ್ ದಾಖಲೆ ಸಲ್ಲಿಸೋಕೆ ವಿಳಂಬಮಾಡ್ತಿದೆ. ಮತ್ತೊಂದ್ಕಡೆ ಬಕ್ರೀದ್ ಆಚರಣೆ ದಿನ ಹತ್ರ ಬರ್ತಿದೆ. ಇದೆಲ್ಲಾದ್ರ ನಡುವೆ ಬಕ್ರೀದ್ ಗೆ ಕುರಿಗಳ ಮಾರಾಟ ತಾಣವಾಗಿರೋ ಮೈದಾನವನ್ನ ಇನ್ಮುಂದೆ ಕ್ಲೀನ್ ಮಾಡೋದಿಲ್ಲ ಅಂತ ಪಾಲಿಕೆ ಕಡ್ಡಿ ತುಂಡು ಮಾಡಿದಂತೆ ಹೇಳಿದೆ.
ಮತ್ತೆ ವಿವಾದಕ್ಕೆ ನಾಂದಿ ಹಾಡುತ್ತಾ ಚಾಮರಾಜಪೇಟೆ ಗ್ರೌಂಡ್.!?
ಬಕ್ರೀದ್ ಹಬ್ಬ ಹತ್ರ ಬರ್ತಿದೆ. ಹೀಗಾಗಿ ವಿವಾದಿತ ಚಾಮರಾಜಪೇಟೆ ಮೈದಾನದ ವಿವಾದವೂ ಮತ್ತೆ ಮುನ್ನೆಲೆಗೆ ಬಂದಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಚಾಮರಾಜಪೇಟೆಯ ಮೈದಾನದಲ್ಲಿ ಭರ್ಜರಿ ಕುರಿಗಳ ವ್ಯಾಪಾರ ನಡೆಯುತ್ತಿದೆ. ಇಡೀ ಮೈದಾನದ ತುಂಬೆಲ್ಲಾ ಮಾರಾಟ ಮಾಡಲಾಗ್ತಿದ್ದು, ಬಿಬಿಎಂಪಿ ಕಣ್ಮುಚ್ಚಿ ಕುಳಿತಿದೆ. ವರ್ಷಕ್ಕೆ ಎರಡು ದಿನ ಹೊರ್ತು ಪಡಿಸಿ ಉಳಿದಂತೆ ಆಟದ ಮೈದಾನವಾಗಿರುತ್ತೆ ಅಂತ ಪದೇ ಪದೇ ಹೇಳ್ತಾ ಇದ್ದ ಬಿಬಿಎಂಪಿ ಸುಮ್ಮನಿರೋದು ವಿರೋಧಕ್ಕೆ ಕಾರಣವಾಗಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರೋ ಬಿಬಿಎಂಪಿ, ವಿವಾದಿತ ಮೈದಾನ ಕೋರ್ಟ್ ಮೆಟ್ಟಿಲೇರಿದ್ದು, ಪಾಲಿಕೆ ಇಂಥ ವಿಚಾರದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಪ್ರತಿ ವರ್ಷ ಪ್ರಾರ್ಥನೆ ವೇಳೆ ಮೈದಾನ ಕ್ಲೀನ್ ಮಾಡ್ತಿದ್ದ ಪಾಲಿಕೆ ಈ ಬಾರಿ ಸುಮ್ಮನಿರೋಕೆ ನಿರ್ಧಾರ ಮಾಡಿದ್ದು, ಮೂರು ಕಂಡೀಷನ್ ಆಧಾರದ ಮೇಲೆ ಹಬ್ಬ ಆಚರಿಸುವಂತೆ ಹೇಳಿದೆ.
ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಬಕ್ರೀದ್ ಕುರಿ ಮಾರಾಟಕ್ಕೆ ವಿರೋಧ.!!
ಹಾಗಿದ್ರೆ ಬಿಬಿಎಂಪಿ ಹಾಕಿರೋ ಕಂಡೀಷನ್ ನೋಡೋದಾದ್ರೆ, ಈ ಬಾರಿ ಬಕ್ರೀದ್ ಹಬ್ಬ ಸೇರಿದಂತೆ ಇನ್ಮುಂದೆ ಮೈದಾನದ ಕ್ಲೀನ್ ಮಾಡದಿರೋಕೆ ತೀರ್ಮಾನ ಮಾಡಿದೆ. ಕುರಿ, ಮೇಕೆ ಮಾರಾಟದಿಂದ ಉತ್ಪತ್ತಿಯಾಗಿರೋ ತ್ಯಾಜ್ಯವನ್ನು ಬಿಬಿಎಂಪಿ ಕ್ಲೀನ್ ಮಾಡೋದಿಲ್ಲ ಅಂತ ಖಡಕ್ ಆಗಿ ಹೇಳಿದೆ. ಹಾಗೆನೇ ಪ್ರಾರ್ಥನೆ ವೇಳೆ ಟ್ರಾಫಿಕ್ ಸಮಸ್ಯೆ ಆಗದಂತೆ ಪ್ರಾರ್ಥನೆ ಮಾಡಬೇಕು. ರಸ್ತೆ ಕ್ಲೋಸ್ ಮಾಡಿಕೊಂಡು ಟ್ರಾಫಿಕ್ ಸಿಗ್ನಲ್ ನಲ್ಲಿ ಚಾಪೆ ಹಾಕಿಕೊಂಡು ಸಾಮೂಹಿಕ ಪ್ರಾರ್ಥನೆ ಮಾಡದಂತೆಯೂ ಕಂಡೀಷನ್ ಹಾಕಿದೆ.
ವಿವಾದಿತ ಮೈದಾನ ಸ್ವಚ್ಚ ಮಾಡದಿರೋಕೆ ಬಿಬಿಎಂಪಿ ತೀರ್ಮಾನ.!!
ಈಗಾಗಲೇ ಕುರಿ ಮಾರಾಟದಿಂದ ಮೈದಾನದಲ್ಲಿ ಕಸದ ರಾಶಿ ಉತ್ಪತ್ತಿಯಾಗ್ತಿದೆ. ಪ್ರತಿ ವರ್ಷ ಸಾಮೂಹಿಕ ಪ್ರಾರ್ಥನೆಗೆ ಸಿದ್ಧತೆ ಮಾಡಿಕೊಡ್ತಿದ್ದ ಪಾಲಿಕೆ ಈ ಬಾರಿ ಸುಮ್ಮನಿರೋಕೆ ತೀರ್ಮಾನಿಸಿದೆ. ಇದರ ಜತೆಗೆ ಕೆಲ ಕಂಡೀಷನ್ ಆಧಾರದ ಮೇಲೆ ಪ್ರಾರ್ಥನೆಗೆ ಅವಕಾಶ ನೀಡಲಿದ್ದು, ಅಂತಿಮವಾಗಿ ಯಾವ ಹಂತಕ್ಕೆ ಹೋಗುತ್ತೆ ಈ ವಿವಾದ ಅನ್ನೋದು ಕಾದು ನೋಡಬೇಕಿದೆ.