• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 12, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

3 ದಿನಗಳ ಬೆಂಗಳೂರು ಟೆಕ್ ಸಮ್ಮಿಟ್ ಗೆ ತೆರೆ : ಆವಿಷ್ಕಾರ.. ಡಿಜಿಟಲ್..‌ ನವೋದ್ಯಮಕ್ಕೆ ರಾಜ್ಯದಲ್ಲಿ ಹೆಚ್ಚಿದ ಆಧ್ಯತೆ!

ಕರ್ಣ by ಕರ್ಣ
November 19, 2021
in ಕರ್ನಾಟಕ, ದೇಶ
0
3 ದಿನಗಳ ಬೆಂಗಳೂರು ಟೆಕ್ ಸಮ್ಮಿಟ್ ಗೆ ತೆರೆ : ಆವಿಷ್ಕಾರ.. ಡಿಜಿಟಲ್..‌ ನವೋದ್ಯಮಕ್ಕೆ ರಾಜ್ಯದಲ್ಲಿ ಹೆಚ್ಚಿದ ಆಧ್ಯತೆ!
Share on WhatsAppShare on FacebookShare on Telegram

ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಬೆಂಗಳೂರು ಟೆಕ್‌ ಸಮ್ಮಿಟ್‌ ಇಂದಿಗೆ ಮುಕ್ತಾಯಗೊಂಡಿದೆ. ತಾಂತ್ರಿಕವಾಗಿ ಮತ್ತು ಅವಿಷ್ಕಾರದ ನೆಲೆಗಟ್ಟಿನಲ್ಲಿ ಕರ್ನಾಟಕವನ್ನು ಅಭಿವೃದ್ಧಿ ಪಡಿಸುವ ಧ್ಯೇಯದೊಂದಿಗೆ ಪ್ರತಿ ವರ್ಷ ನಡೆಯುವ ಬೆಂಗಳೂರು ತಂತ್ರಜ್ಞಾನ ಶೃಂಗ ಈ ಬಾರಿಯೂ ಬಹಳ ಅದ್ದೂರಿಯಾಗಿ, ರಚನಾತ್ಮಕವಾಗಿ ನಡಿದಿದೆ.

ADVERTISEMENT

ನವೆಂಬರ್‌ 17ರಂದು ಆದಿಯಾಗಿ ಇಂದು ಕೊನೆಗೊಂಡ ಬೆಂಗಳೂರು ಟೆಕ್‌ ಸಮ್ಮಿಟ್ ತನ್ನ 24ನೇ ಆವೃತ್ತಿಯ ಮತ್ತೊಂದು ಅಧ್ಯಾಯವನ್ನು ಮುಗಿಸಿದೆ. ದೇಶದ ಐಟಿ ಬಿಟಿ  ರಾಜಧಾನಿಯಾಗಿರುವ ಬೆಂಗಳೂರು ಪ್ರತಿ ಬಾರಿ ಜಗತ್ತಿನ ಹಲವು ಐಟಿ ಬಿಟಿ ತಾಂತ್ರಿಕ ಕಂಪೆನಿಗಳು ಭಾಗವಹಿಸಿದ್ದವು. ನಗರದ ಖಾಸಗಿ ಹೋಟೆಲ್ ನಲ್ಲಿ ಕಳೆದ ಮೂರು ದಿನಗಳಿಂದ ನಡೆದ ಈ ಶೃಂಗದಲ್ಲಿ ಒಟ್ಟು 75 ಪೂರ್ವ ನಿರ್ಧರಿತ ಕಾರ್ಯಾಗಾರ ಹಾಗೂ 18 ಆಧ್ಯತೆ ಮೇರೆಗೆ ಕಾರ್ಯಾಗಾರ ನಡೆಸಲಾಗಿದೆ. ಇದರ ಜೊತೆಗೆ ಶೃಂಗದಲ್ಲಿ 350 ಪ್ರಮುಖರಿಂದ ಭಾಷಣ ನಡೆದಿದೆ. ಒಟ್ಟು 48 ದೇಶ ಈ ಬಾರಿಯ ಸಮ್ಮಿಟ್ ನಲ್ಲಿ ಭಾಗಿಯಾಗಿದೆ. ಮೂರು ದಿನಗಳ ಕಾರ್ಯಾಗಾರದಲ್ಲಿ 211 ಸ್ಟಾರ್ಟ್ ಅಪ್ಸ್ ಪಾಲ್ಗೊಂಡಿದೆ. ಅಲ್ಲದೆ ಕೇವಲ ಬೆಂಗಳೂರಿಗೆ ಮಾತ್ರ ಒತ್ತು ಕೊಡದೆ ಈ ಬಿಟಿಎಸ್‌ ಅಂಗವಾಗಿ ರಾಜ್ಯ ಹುಬ್ಬಳ್ಳಿ, ಮಂಗಳೂರು ಹಾಗೂ ಮೈಸೂರಿನಲ್ಲೂ ಕಾರ್ಯಾಗಾರ ಏರ್ಪಡಿಸಲಾಗಿದ್ದು ರಚನಾತ್ಮಕವಾಗಿ ನಡೆದಿದೆ. 

ಈ ಬಾರಿಯ ಟೆಕ್ ಸಮ್ಮಿಟ್ ನಿಂದಾಗಿ ಉದ್ಯೋಗಗಳು ಸೃಷ್ಟಿಯಾಗುವ ಭರವಸೆಯನ್ನು ಐಟಿ ಬಿಟಿ ಸಚಿವ ಅಶ್ವಥ್‌ ನಾರಾಯಣ್‌ ನೀಡಿದ್ದಾರೆ. ಈ ಶೃಂಗದಿಂದ ಬೆಂಗಳೂರಿನಲ್ಲಿಮಾತ್ರ 4 ಲಕ್ಷ ಉದ್ಯೋಗಗಳು ಬೇಗನೆ ತೆರೆದುಕೊಳ್ಳಲಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಭಾಗದಲ್ಲಿನ ಕಾಲೇಜುಗಳಲ್ಲಿ ಈ ಬಗ್ಗೆ ಅರಿವು ಮೂಡಿಸಲಾಗುತ್ತೆ. ಡಿಜಿಟಲ್ & ಇಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಹೆಚ್ಚೆಚ್ಚು ಬಂಡವಾಳ ಹೂಡುವ ಉದ್ದೇಶವಿದೆ. ಮುಂದಿನದ್ದು ಡಿಜಿಟಲ್ ಯುಗ, ಈಗಲೇ ನಾವು ಅದರ ಬಗ್ಗೆ ಯೋಚಿಸಿ ಕಾರ್ಯಕ್ರಮ ರೂಪಿಸಬೇಕು. ಆವಿಷ್ಕಾರ ಮತ್ತು ಸ್ಟಾರ್ಟಪ್ಸ್ ಕ್ಷೇತ್ರಕ್ಕೂ ಹೆಚ್ಚಿನ ಆಧ್ಯತೆ ನೀಡಲಾಗಿದೆ. ಇಡೀ ದೇಶಕ್ಕೆ ಬೆಂಗಳೂರು ಸ್ಟಾರ್ಟ್ ಅಪ್ ರಾಜಧಾನಿ ಕೂಡ. ಹೀಗಾಗಿ ಮುಂದಿನ ದಿನಗಳಲ್ಲಿ ನವೋದ್ಯಮಕ್ಕೆ ಹೆಚ್ಚಿನ ಆಧ್ಯತೆ ಕೊಟ್ಟು ಬಂಡವಾಳ ಹೂಡಲಾಗುವುದು ಎಂದು ಸಚಿವ ಅಶ್ವಥ್‌ ನಾರಾಯಣ್ ಅಭಿಪ್ರಾಯಪಟ್ಟರು.

ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆ ಈ ಬಾರಿ BTS ನಲ್ಲಿ ಒಪ್ಪಂದವಿಲ್ಲ.!!

ಇನ್ನು ಪ್ರತಿ ಬಾರಿಯ ಶೃಂಗದಲ್ಲಿ ಕರ್ನಾಟಕ ಹಲವು ಅಂತರಾರಷ್ಟ್ರೀಯ ಒಪ್ಪಂದಗಳಿಗೆ ಸಹಿ ಹಾಕುತ್ತಿತ್ತು. ಆದರೆ ಈ ಬಾರಿ ಯಾವುದೇ ಒಪ್ಪಂದ ಮಾಡಿಲ್ಲ. ಇದಕ್ಕೆ ಕಾರಣ, ಎಂಎಲ್‌ಸಿ ಚುನಾವಣೆ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ನೀತಿ ಸಂಹಿತೆ. ಹೀಗಾಗಿ ಚುನಾವಣೆ ಮುಗಿದ ಬೆನ್ನಲ್ಲೇ ಮತ್ತೊಂದು ಸಭೆ ನಡೆಸಿ ಹಲವು ಒಪ್ಪಂದಗಳಿಗೆ ಕರ್ನಾಟಕ ಸಾಕ್ಷಿಯಾಗಲಿದೆ. ಇನ್ನು ಈ ಬಾರಿಯ ಬಿಟಿಎಸ್‌ನಿಂದಾಗಿ ಐದು ಪ್ರಮುಖ ಕಂಪೆನಿಗಳು ಕರ್ನಾಕದ ಡಿಜಿಟಲ್‌ ಹಾಗೂ ಮಾಹಿತಿ ತಂತ್ರಜ್ಞಾನದ ಕ್ಷೇತ್ರದಲ್ಲಿ ಐದು ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿದೆ. ಇದು ಮುಂದಿನ ದಿನಗಳಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಸುವ ಭರಸವೆ ಹುಟ್ಟಿಸಿದೆ.

ಅಂದಹಾಗೆ, ಈ ಬಾರಿಯ ಬಿಎಟಿಎಸ್‌ನಲ್ಲಿ ಒಟ್ಟು 14 ಸಾವಿರ ಬ್ಯುಸಿನೆಸ್  ಮೀಟಿಂಗ್‌ಗಳು ನಡಿದಿದೆ. ಮುಂದಿನ ವರ್ಷ ಬೆಂಗಳೂರು ಟೆಕ್‌ ಸಮ್ಮಿಟ್‌ ನ 25ನೇ ಆವೃತ್ತಿಯಾಗಿರುವುದರಿಂದ ಹಿಂದೆಂದೂ ನಡೆಯದ ರೀತಿಯಲ್ಲಿ ಬಿಟಿಎಸ್‌ ಅನ್ನು ನಡೆಸಲು ಸರ್ಕಾರ ತೀರ್ಮಾನಿಸಿದೆ. ಮುಂದಿನ ಆವೃತ್ತಿಯ ಬಿಟಿಎಸ್‌ ನವೆಂಬರ್ 16, 17, 18ರಂದು ನಡೆಸಲು ಐಟಿ ಬಿಟಿ ಸಚಿವಾಲಯ ನಿರ್ಧರಿಸಿದೆ. ಒಟ್ಟಾರೆ ಬೆಂಗಳೂರು ತಂತ್ರಜ್ಞಾನ ಶೃಂಗ ಸಭೆ ಈ ಬಾರಿಯೂ ಬಹಳ ಅರ್ಥಪೂರ್ಣವಾಗಿ, ಮುಂದಿನ ದಿನಗಳನ್ನು ಉಜ್ವಲವಾಗಿಸುವ ಭರಸವೆಯನ್ನು ಮೂಡಿಸಿದೆ.

Tags: BJPCongress PartyCovid 19ಆವಿಷ್ಕಾರಟೆಕ್ ಸಮ್ಮಿಟ್ಡಿಜಿಟಲ್ನವೋದ್ಯಮಬಿಜೆಪಿ
Previous Post

“ಮಾರ್ಕ್ ಮೈ ವರ್ಡ್ಸ್” : ಕೃಷಿ ಕಾನೂನುಗಳ ಕುರಿತು ರಾಹುಲ್ ಗಾಂಧಿ ಭವಿಷ್ಯ ನಿಜವಾಗಿದೆ – ವಿಡಿಯೋ ವೈರಲ್‌

Next Post

ನಾನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವವರೆಗೂ ವಿಧಾನಸಭೆ ಪ್ರವೇಶಿಸುವುದಿಲ್ಲ : ಚಂದ್ರಬಾಬು ನಾಯ್ಡು

Related Posts

ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ
ಕರ್ನಾಟಕ

ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

by ಪ್ರತಿಧ್ವನಿ
April 11, 2026
0

ಕುಂದಾಪುರ: ವಂಡ್ಸೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಂದಿನ ಶೈಕ್ಷಣಿಕ ವರ್ಷದಿಂದ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಶಿಕ್ಷಕರ ಜೊತೆಗೂಡಿ ಎಐ (Artificial Intelligence)...

Read moreDetails
ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

April 10, 2026
ವಿದ್ಯಾರ್ಥಿಗಳ ದುಡುಕಿನ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ

ಇನ್ನು ಪಿಯುಸಿ ಅಂಕಪಟ್ಟಿ ಮುಂದಿನ ವರ್ಷದಿಂದ  ಹೀಗಿರಲಿದೆ ! ಮಧು ಬಂಗಾರಪ್ಪ ಮಹತ್ವದ ಹೇಳಿಕೆ

April 10, 2026
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
Next Post
ನಾನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವವರೆಗೂ ವಿಧಾನಸಭೆ ಪ್ರವೇಶಿಸುವುದಿಲ್ಲ : ಚಂದ್ರಬಾಬು ನಾಯ್ಡು

ನಾನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವವರೆಗೂ ವಿಧಾನಸಭೆ ಪ್ರವೇಶಿಸುವುದಿಲ್ಲ : ಚಂದ್ರಬಾಬು ನಾಯ್ಡು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada