ಕಳೆದ ಒಂದು ತಿಂಗಳ ಹಿಂದೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿ ಮತ್ತು ಬಾಂಬ್ ಬ್ಲಾಸ್ಟ್ ನ ಮಾಸ್ಟರ್ ಮೈಂಡ್ ಇಬ್ಬರನ್ನು ರಾಷ್ಟ್ರೀಯ ತನಿಕಾ ದಳದ ಅಧಿಕಾರಿಗಳು ಪಶ್ಚಿಮ ಬಂಗಾಳದಲ್ಲಿ ಬಂಧಿಸಿದ್ದಾರೆ. ಸತತ ಒಂದು ತಿಂಗಳು 10 ದಿನಗಳ ಕಾರ್ಯಾಚರಣೆಯ ಬಳಿಕ ಕೊನೆಗೂ ಈ ಶಂಕಿತ ಉಗ್ರರು ಸೆರೆ ಸಿಕ್ಕಿದ್ದಾರೆ .
![](https://pratidhvani.com/wp-content/uploads/2024/04/IMG_6916.jpeg)
ಕಳೆದ ಮಾರ್ಚ್ 1ನೇ ತಾರೀಕು ಮಧ್ಯಾಹ್ನ 1 ಗಂಟೆ 9 ನಿಮಿಷದ ಸುಮಾರಿಗೆ, ಬೆಂಗಳೂರಿನ ಬ್ರೂಕ್ ಫೀಲ್ಡ್ ಸಮೀಪದ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಗೊಂಡಿದ್ದು , ಈ ಪ್ರಕರಣದಲ್ಲಿ ಶಂಕಿತ ಆರೋಪಿಯ ಬೆನ್ನು ಬಿದ್ದ ರಾಷ್ಟ್ರೀಯ ತನಿಕಾ ದಳ , ಸತತ ಒಂದು ತಿಂಗಳು 10 ದಿನಗಳ ಕಾಲ ತನಿಖೆಯನ್ನು ಮುಂದುವರಿಸಿ , ಅಂತಿಮವಾಗಿ ಪಶ್ಚಿಮ ಬಂಗಾಳದಲ್ಲಿ ಈಗ ಇಬ್ಬರೂ ಸಂಕಿತ ಉಗ್ರರನ್ನು ವಶಕ್ಕೆ ಪಡೆದಿದೆ.
![](https://pratidhvani.com/wp-content/uploads/2024/04/IMG_6915.jpeg)
ಮುಸಾವೀರ್ ಮತ್ತು ಮುತಿನ್ ತಾಹ ಎಂಬ ಇಬ್ಬರು ಶಂಕಿತ ಉಗ್ರರನ್ನ ಎನ್.ಐ.ಎ ಪಶ್ಚಿಮ ಬಂಗಾಳದಲ್ಲಿ ವರ್ಷಕ್ಕೆ ಪಡೆದಿದೆ. ಸ್ಪೋಟಕ್ಕೆ ಕಾರಣವಾಗಿದ್ದು ಮುಸಾವಿರ್ ಆದ್ರು ಇಡೀ ಕೃತ್ಯದ ಮಾಸ್ಟರ್ ಮೈಂಡ್ ಈ ಮುತಿನ್ ತಾಹ ಎಂಬುದು ರಾಷ್ಟ್ರೀಯ ತನಿಕಾ ದಳದ ತನಿಖೆಯ ವೇಳೆ ತಿಳಿದುಬಂದಿದೆ .
![](https://pratidhvani.com/wp-content/uploads/2024/04/IMG_6914.jpeg)
ಇದು ಪ್ರಿಪ್ಲ್ಯಾಂಡ್ ಕೃತ್ಯವಾಗಿದ್ದರಿಂದ ಆರೋಪಿಗಳು ತಾವು ಸಿಕ್ಕಿಹಾಕಿಕೊಳ್ಳದ ಹಾಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದರಿಂದ ಪ್ರಕರಣವನ್ನು ಭೇದಿಸಿ ಈ ಇಬ್ಬರು ಸಂಗೀತ ಉಗ್ರರನ್ನ ಬಂಧಿಸುವಲ್ಲಿ ಎನ್ಐಎ ಇಷ್ಟು ಸಮಯ ತೆಗೆದುಕೊಳ್ಳಬೇಕಾಯಿತು ಅಂತಿಮವಾಗಿ ಈ ಇಬ್ಬರ ಬಂಧನ ವಾಗಿರೋದು ತನಿಖೆಗೆ ಉತ್ತಮ ಮುನ್ನಡೆ ಸಿಕ್ಕಿದೆ.