• Home
  • About Us
  • ಕರ್ನಾಟಕ
Monday, October 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

HDKಯನ್ನು ಸೋಲಿಸಲು ಒಂದಾದ್ರಾ ಮಾಜಿ ಶಾಸಕ ಬಾಲಕೃಷ್ಣಾ ಮತ್ತು ಸಿ.ಪಿ ಯೋಗೀಶ್ವರ್?

ನಚಿಕೇತು by ನಚಿಕೇತು
November 28, 2021
in ಕರ್ನಾಟಕ, ರಾಜಕೀಯ
0
HDKಯನ್ನು ಸೋಲಿಸಲು ಒಂದಾದ್ರಾ ಮಾಜಿ ಶಾಸಕ ಬಾಲಕೃಷ್ಣಾ ಮತ್ತು ಸಿ.ಪಿ ಯೋಗೀಶ್ವರ್?
Share on WhatsAppShare on FacebookShare on Telegram

ಒಂದೆಡೆ ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಠಕ್ಕರ್ ಕೊಡೋಕೆ ಜೆಡಿಎಸ್ ತಂತ್ರ ಹೆಣೆಯುತ್ತಿದೆ. ಇನ್ನೊಂದೆಡೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯನ್ನೇ ಇಕ್ಕಟ್ಟಿಗೆ ಸಿಲುಕಿಸಲು ವಿರೋಧಿಗಳು ಒಂದಾಗುತ್ತಿದ್ದಾರೆ. ಅದು ಕೇವಲ ಪರಿಷತ್ ಚುನಾವಣೆಗಂತೂ ಅಲ್ಲ, ಬದಲಾಗಿ ಮುಂದಿನ ವಿಧಾನಸಭಾ ಚುನಾಣೆಯಲ್ಲಿ ದಳಪತಿಯನ್ನ ಹಣಿಯಲು ಭಾರೀ ತಂತ್ರಗಾರಿಕೆ ಹೂಡಿದ್ದಾರೆ.

ADVERTISEMENT

ಶತ್ರುವಿನ ಶತ್ರು ಮಿತ್ರ ಅನ್ನೋದು ಗಾದೆ ಮಾತು. ಆದರೆ, ಚನ್ನಪಟ್ಟಣದಲ್ಲಿ ಶತ್ರುವನ್ನೇ ಸೋಲಿಸಲು ಶತ್ರುಗಳಿಬ್ಬರು ಒಂದಾಗುತ್ತಿದ್ದಾರೆ. ಹೌದು, ರಾಜಕೀಯದಲ್ಲಿ ಬದ್ಧವೈರಿಗಳು ಎನಿಸಿಕೊಂಡ ಮಾಜಿ ಸಚಿವ ಸಿ.ಪಿ ಯೋಗೇಶ್ವರ ಮತ್ತು ಮಾಜಿ ಶಾಸಕ ಹೆಚ್.ಸಿ ಬಾಲಕೃಷ್ಣ ಕೈ ಜೋಡಿಸಿದ್ದಾರೆ ಎನ್ನಲಾಗಿದೆ.

ಹೇಗಾದರೂ ಮಾಡಿ ತಮ್ಮ ರಾಜಕೀಯ ವೈರಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಚುನಾವಣಾ ಚಕ್ರವ್ಯೂಹದಲ್ಲಿ ಸಿಕ್ಕಿಹಾಕಬೇಕು. ಸೋಲಿನ ರುಚಿ ತೋರಿಸಬೇಕು ಎಂದು ಚನ್ನಪಟ್ಟಣದಲ್ಲಿ ಕಾಂಗ್ರೆಸ್ ನಾಯಕ ಹೆಚ್.ಸಿ ಬಾಲಕೃಷ್ಣ ಬಿಜೆಪಿಯ ಸೈನಿಕ ಸಿ.ಪಿ ಯೋಗೇಶ್ವರ್ಗೆ ಗಾಳ ಹಾಕಿದ್ದಾರಂತೆ. ಈ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಡಿಕೆ ಮಣಿಸಿ ಕೈ ಬಲ ವೃದ್ಧಿಗೆ ಬಾಲಣ್ಣ ಭಾರೀ ತಂತ್ರಗಾರಿಕೆ ಮಾಡಿದ್ದಾರೆ ಎನ್ನಲಾಗಿದೆ.

ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಮಣಿಸಲು ಬಾಲಕೃಷ್ಣ ಪ್ಲಾನ್ ರೂಪಿಸಿದ್ದಾರೆ ಎಂದು ತಿಳಿದುಬಂದಿದೆ. ಮಾಜಿ ಸಚಿವ ಯೋಗೇಶ್ವರ್ ಜತೆ ಈ ಸಂಬಂಧ ಪ್ಲಾನ್ ಮಾಡಿದ್ದಾರೆ. ಇದರ ಸಲುವಾಗಿಯೇ ಖಾಸಗಿ ಕಾರ್ಯಕ್ರಮಕ್ಕೆ ಕರೆಸಿ ಸಿ.ಪಿ ಯೋಗೇಶ್ವರ್ಗೆ ಬಾಲಣ್ಣ ಗಾಳ ಹಾಕಿದ್ದಾರಂತೆ. ಈ ಕುರಿತು ಇಬ್ಬರ ನಡುವೆ ಸುದೀರ್ಘ ಮಾತುಕತೆಯೂ ನಡೆದಿದೆ ಎನ್ನಲಾಗಿದೆ. ಈ ಮಾತುಕತೆಯಲ್ಲಿ ಯೋಗೇಶ್ವರ್ಗೆ ಬಾಲಕೃಷ್ಣ ಓಪನ್ ಆಫರ್ ನೀಡಿದ್ದಾರೆ ಎನ್ನಲಾಗಿದೆ.

ಖಾಸಗಿ ಕಾರ್ಯಕ್ರಮದಲ್ಲಿ ಇಬ್ಬರ ನಡುವೆ ಕೆಲ ಹೊತ್ತು ನಾತುಕತೆ ನಡೆದಿದೆ. ಈ ವೇಳೆ ಹೇಗಾದರೂ ಕುಮಾರಸ್ವಾಮಿ ಅವರಿಗೆ ಠಕ್ಕರ್ ಕೊಡೋಕೆ ಇಬ್ಬರೂ ಕೈ ಜೋಡಿಸಿದ್ದಾರೆ. ಈ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಚನ್ನಪಟ್ಟಣ ಚುನಾವಣಾ ಕಣದಲ್ಲಿ ಮಕಾಡೆ ಮಲಗಿಸೋಕೆ ಬದ್ಧವೈರಿಗಳು ಸಿದ್ಧರಾಗಿದ್ದಾರೆ.

ನೀವು ಕಾಂಗ್ರೆಸ್ಗೆ ಬಂದರೆ ಹೆಚ್ಚು ಅನುಕೂಲ. ಚನ್ನಪಟ್ಟಣದಲ್ಲಿ ಗೆಲ್ಲಬಹುದು, ಉತ್ತಮ ಭವಿಷ್ಯವೂ ಇದೆ. ಕಾಂಗ್ರೆಸ್ ನಾಯಕರ ಒಪ್ಪಿಸೋ ಹೊಣೆ ನಂದು. ನೀವು ಒಪ್ಪಿಗೆ ನೀಡಿದ್ರೆ, ನಾನು ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರನ್ನು ಒಪ್ಪಿಸುತ್ತೇನೆ. ಒಂದು ವೇಳೆ ನೀವು ಕಾಂಗ್ರೆಸ್ನಿಂದ ಮುಂದಿನ ಚುನಾವಣೆಯಲ್ಲಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಕಣಕ್ಕಿಳಿದರೆ ಗೆಲುವು ನಿಮ್ಮದೇ ಎಂದು ಯೋಗೀಶ್ವರ್ ಬಳಿ ಬಾಲಕೃಷ್ಣಾ ಮನವಿಯೊಂದು ಇಟ್ಟಿದ್ದಾರಂತೆ.

ಇದಕ್ಕೆ ಸದ್ಯಕ್ಕೆ ಇಂತಹ ಯಾವುದೇ ಆಲೋಚನೆ ಇಲ್ಲ. ಇದರ ಬಗ್ಗೆ ಈಗ ಮಾತಾಡೋದು ಬೇಡ. ನನ್ನದು ಮತ್ತು ನಿಮ್ಮ ಉದ್ದೇಶ ಒಂದೇ. ಚುನಾವಣೆ ಸಮೀಪಿಸುತ್ತಿದ್ದಂತೆಯೇ ಈ ಕುರಿತು ಏನಾದರೂ ಪ್ಲಾನ್ ಮಾಡೋಣ ಎಂದು ಬಾಲಕೃಷ್ಣಾ ಅವರಿಗೆ ಯೋಗೀಶ್ವರ್ ಹೇಳಿದ್ದಾರಂತೆ.

ಚುನಾವಣೆಗೆ ಇನ್ನು ಒಂದೂವರೆ ವರ್ಷ ಬಾಕಿ ಇದ್ದಂತೆ ವೈರಿಗಳು ಒಂದಾಗಿ ಹೆಚ್ಡಿಕೆ ಸೋಲಿಸಲು ಮಸಲತ್ತು ಮಾಡಿದ್ದಾರೆ ಎನ್ನಲಾಗಿದೆ. ಒಳಗೊಳಗೆ ದಳಪತಿಗೆ ಹೊಡೆತ ಕೊಡೋಕೆ ಸೈನಿಕ ಮತ್ತು ಬಾಲಣ್ಣ ಒಂದಾಗ್ತಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಮುಂದಿನ ಚುನಾವಣೆಗೆ ಈಗಿಂದಲೇ ಶಸ್ತ್ರಾಭ್ಯಾಸದಲ್ಲಿ ತೊಡಗಿದ್ದಾರೆ. ತಮ್ಮ ಕಾರ್ಯಕರ್ತರಿಗೆ ಕಾರ್ಯಗಾರ ಮಾಡಿ ಅಲ್ಲಿ ಅಭ್ಯರ್ಥಿಗಳನ್ನ ಸಿದ್ಧಗೊಳಿಸ್ತಿದ್ದಾರೆ. ಹೀಗಾಗಿ ಇವರಿಬ್ಬರು ಬಿಡುವ ಬಾಣದಿಂದ ಬಚಾವ್ ಆಗಲು ಕುಮಾರಸ್ವಾಮಿ ಅದ್ಯಾವ ಗುರಾಣಿಯ ಮೊರೆ ಹೋಗುತ್ತಾರೋ ಕಾದು ನೋಡಬೇಕು.

Tags: BJPCongress PartyCovid 19HD Kumaraswamyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಾಲಕೃಷ್ಣಾಬಿ ಎಸ್ ಯಡಿಯೂರಪ್ಪಬಿಜೆಪಿಸಿ.ಪಿ ಯೋಗೀಶ್ವರ್
Previous Post

ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಂ ಗೌಡಗೆ ಹೆಡೆಮುರಿ ಕಟ್ಟಲು ಮುಂದಾದ ಗೌಡರ ಫ್ಯಾಮಿಲೀ!

Next Post

ಶಾರ್ಜಿಲ್ ಇಮಾಮ್‌ಗೆ ಜಾಮೀನು ಮಂಜೂರು ಮಾಡಿದ ಅಲಹಾಬಾದ್ ಹೈಕೋರ್ಟ್: ಇನ್ನೂ ಇತ್ಯರ್ಥವಾಗದ UAPA ಪ್ರಕರಣ!

Related Posts

Top Story

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

by ಪ್ರತಿಧ್ವನಿ
October 13, 2025
0

ನಾವು ಆಗಾಗ್ಗೆ ಊಟಕ್ಕೆ ಸೇರುತ್ತೇವೆ. ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪ್ರಶ್ನಿಸಿದರು. ಅವರು ಇಂದು ಹುಬ್ಬಳ್ಳಿಗೆ ತೆರಳುವ ಮುನ್ನ ಕಿತ್ತೂರು...

Read moreDetails
ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

October 13, 2025

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

October 12, 2025

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

October 12, 2025

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

October 12, 2025
Next Post
ಶಾರ್ಜಿಲ್ ಇಮಾಮ್‌ಗೆ ಜಾಮೀನು ಮಂಜೂರು ಮಾಡಿದ ಅಲಹಾಬಾದ್ ಹೈಕೋರ್ಟ್: ಇನ್ನೂ ಇತ್ಯರ್ಥವಾಗದ UAPA ಪ್ರಕರಣ!

ಶಾರ್ಜಿಲ್ ಇಮಾಮ್‌ಗೆ ಜಾಮೀನು ಮಂಜೂರು ಮಾಡಿದ ಅಲಹಾಬಾದ್ ಹೈಕೋರ್ಟ್: ಇನ್ನೂ ಇತ್ಯರ್ಥವಾಗದ UAPA ಪ್ರಕರಣ!

Please login to join discussion

Recent News

Top Story

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

by ಪ್ರತಿಧ್ವನಿ
October 13, 2025
Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
Top Story

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

by ಪ್ರತಿಧ್ವನಿ
October 12, 2025
Top Story

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

by ಪ್ರತಿಧ್ವನಿ
October 12, 2025
Top Story

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

by ಪ್ರತಿಧ್ವನಿ
October 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

October 13, 2025
ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

October 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada