Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಆಜಾನ್ ಕೂಗಿದ ಸ್ಥಳವನ್ನ ಗೋಮೂತ್ರದಿಂದ ಶುದ್ಧಿಗೊಳಿಸಿದ ಭಜರಂಗದಳ : Bajrang Dal v/s SDPI

ಪ್ರತಿಧ್ವನಿ

ಪ್ರತಿಧ್ವನಿ

March 20, 2023
Share on FacebookShare on Twitter

ಹೆಚ್ಚು ಓದಿದ ಸ್ಟೋರಿಗಳು

Chetan Ahimsa : ಕುಸ್ತಿಪಟುಗಳ ಬಗ್ಗೆ ಏಕಿಷ್ಟು ಮೌನ?

Anil Kumble stands in support of wrestlers : ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ಅನಿಲ್‌ ಕುಂಬ್ಳೆ..!

Minister HC Mahadevappa : ನಮ್ಮ ʼಗ್ಯಾರೆಂಟಿʼಯನ್ನು ನೋಡಿ ಜನ ಕಾಂಗ್ರೆಸ್ ಗೆ ಬಹುಮತ ನೀಡಿದ್ದಾರೆ ; ಸಚಿವ .ಹೆಚ್.ಸಿ.ಮಹದೇವಪ್ಪ

ಶಿವಮೊಗ್ಗ: ಮಾ.20: ಆಜಾನ್ ಕುರಿತಾದ ಮಾಜಿ ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿಕೆ ದಿನೇ ದಿನೇ ತಾರಕಕ್ಕೇರುತ್ತಿದೆ. ಮಾರ್ಚ್ 17ರಂದು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದ ಮುಸ್ಲಿಂ ಸಂಘಟನೆ ಈಗ ಕೆಂಗಣ್ಣಿಗೆ ಗುರಿಯಾಗಿದೆ ಕಾರಣ ಅಂದು ಮೌಸಿನ್ ಎಂಬ ವ್ಯಕ್ತಿ ಜಿಲ್ಲಾಧಿಕಾರಿ ಕಚೇರಿ ಮೇಲೆ ಆಜಾನ್ ಕೂಗಿ ಚರ್ಚೆಗೆ ಗ್ರಾಸವಾಗಿದ್ದ. ಆತನ ಮೇಲೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆಧಾರದ ಮೇಲೆ ಸಾಮಾನ್ಯ ಪ್ರಕರಣ ದಾಖಲಿಸಿ ಸ್ಟೇಷನ್ ಬೇಲ್ ನೀಡಿತ್ತು. ಈ ಬೆಳವಣಿಗೆಗಳ ಬೆನ್ನಲ್ಲೇ ಭಜರಂಗದಳ ಶಿವಮೊಗ್ಗ ಘಟಕ, ಮುಖಂಡ ರಾಜೇಶ್ ಗೌಡ ನೇತೃತ್ವದಲ್ಲಿ ಜಿಲ್ಲಾಧಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು. ಜೊತೆಗೆ ಬಾಟಲಿಯಲ್ಲಿ ತಂದ ಗೋಮೂತ್ರದಿಂದ ಆಜಾನ್ ಕೂಗಿದ ಸ್ಥಳವನ್ನ ಶುಚಿಗೊಳಿಸಿದೆ.‌ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜೇಶ್ ಗೌಡ, ಸಾಂವಿಧಾನಿಕ ಸ್ಥಳ ಜಿಲ್ಲಾಧಕಾರಿ ಕಚೇರಿ ಅಪವಿತ್ರ ಮಾಡಿಬಿಟ್ಟರು. ಹಿಂದೂ ಸಂಪ್ರದಾಯದಂತೆ ಗೋಮೂತ್ರದಿಂದ ಶುದ್ದಿ ಮಾಡಿದ್ದೇವೆ ಎಂದರು.

ಎಲ್ಲಾ ಸಾರ್ವಜನಿಕರಲ್ಲಿ ಹಾಗೂ ರಾಜ್ಯ ಸರ್ಕಾರಕ್ಕೆ ಶಿವಮೊಗ್ಗ ಜಿಲ್ಲಾಡಳಿತಕ್ಕೆ ತಿಳಿಸುವುದೇನೆಂದರೆ,‌ ಮಾರ್ಚ್ 17ರಂದು ಮುಸ್ಲಿಂ ಸಂಘಟನೆ‌ , SDPI ಜೊತೆ ಪ್ರತಿಭಟನೆ ಈಶ್ವರಪ್ಪ ಹೇಳಿಕೆ ವಿರುದ್ಧ ಪ್ರತಿಭಟನೆ ನಡೆಸಿದರು. ಮುಸ್ಲಿಂ ಸಮುದಾಯದ ನಾಯಕರು ಮತಾಂಧತೆ ಮೆರೆದಿದ್ದಾರೆ. ಯಾಕೆಂದರೆ ಸಂವಿಧಾನದ ಅವಿಭಾಜ್ಯ ಅಂಗ ಜಿಲ್ಲಾಧಿಕಾರಿ ಕಚೇರಿ. ದೇಶಕ್ಕೆ ಸಂಸತ್ತು ಹೇಗೋ ಹಾಗೆ ಜಿಲ್ಲೆಗೆ ಜಿಲ್ಲಾಧಿಕಾರಿ ಕಚೇರಿ. ಈ ಪವಿತ್ರ ಸ್ಥಳದಲ್ಲಿ ಪ್ರತಿಭಟನೆಗೆ ಪ್ರತಿಯೊಬ್ಬರಿಗೂ ಹಕ್ಕಿದೆ. ಆದರೆ ಮತಾಂಧತೆ ಮೆರೆಯುವಂತಹ ಹಕ್ಕು ಯಾರಿಗೂ ಇಲ್ಲ. ಅವರು ಎಲ್ಲಿ ಬೇಕೋ ಅಲ್ಲಿ ಕೂಗಿ ಹೋಗಲಿ, ಅವರ ಪ್ರಾರ್ಥನೆ ಎಲ್ಲಿ ಮಾಡಬೇಕು ಅಲ್ಲಿ ಮಾಡಲಿ, ರೋಡಲ್ಲಿ ಮಾಡ್ತಾರಾ ಮಾಡಲಿ, ಆದರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೂಕ್ತ ಅಲ್ಲ. ಇದನ್ನು ವಿಎಚ್ ಪಿ ಹಾಗೂ ಭಜರಂಗದಳ ತೀವ್ರವಾಗಿ ಖಂಡಿಸುತ್ತದೆ‌. ನಮ್ಮ ಸಂಘಟನೆಯಲ್ಲಿ ರಾಜ್ಯ ರಾಷ್ಟ್ರ ವ್ಯಾಪಿ ಗುರುತಿಸಿಕೊಂಡಿದೆ. ಪಿಎಫ್ ಐ ಸಂಘಟನೆಯ ಒಂದು ಅಂಗ ಈ ಎಸ್ ಡಿ ಪಿ ಎಫ್. ಪಿಎಫ್ ಐ ಬ್ಯಾನ್ ಆಗಿತ್ತು ಅದರ ಕೆಲಸಗಳು ಎಸ್ ಡಿ‌ಪಿ ಐ ಮೂಲಕ ನಡೆಯುತ್ತದೆ. ಇಂತಹ ಮತಾಂಧರನ್ನ ಸರ್ಕಾರ ನಿಯಂತ್ರಿಸಬೇಕು. ಹಿಂದೂ ಸಮಾಜ ಸುಮ್ಮನಾಗಿದೆ ಎಂದು ತಿಳಿಯಬಾರದು . ಇವರ ಹುಚ್ಚಾಟಗಳನ್ನ ನಾವು ಸಹಿಸೋದಿಲ್ಲ. ಹಾಗಾಗಿ ಜಿಲ್ಲಾಧಿಕಾರಿ ಕಚೇರಿಯನ್ನು ಪವಿತ್ರ ಗೋಮುತ್ರದಿಂದ ಶುದ್ಧೀಕರಿಸಿದ್ದೇವೆ.

ಜಾಗ ಪವಿತ್ರವಾಗಿದೆ, ಗೋಮೂತ್ರ ಹಾಕಬೇಕಾದರೆ ಪೊಲೀಸರು ಅಡ್ಡಿ ಮಾಡಿದರು, ಆದರೂ ನಾವು ಒಪ್ಪುವುದಿಲ್ಲ. ಗೋಮೂತ್ರ ಪವಿತ್ರವಾದದ್ದು ಹಾಗಾಗಿ ಇಲ್ಲಿ ಶುದ್ದಿ ಮಾಡುವ ಶಕ್ತಿ ಗೋಮುತ್ರಕ್ಕೆ ಇದೆ. ಕೆಎಸ್ ಈಶ್ವರಪ್ಪ ಹೇಳಿರುವುದು ಸತ್ಯ, ಅಜಾನ್ ನಿಯಂತ್ರಣ ಅನಿವಾರ್ಯ. ಈಶ್ವರಪ್ಪ ವಿರುದ್ಧ ಪ್ರತಿಭಟನೆ ಮಾಡುವುದಾದರೆ ಮಾಡಿ, ಆದರೆ ಈ ತರಹ ಉದ್ದಟನ ಮೆರೆಯುವುದನ್ನು ನಾವು ಸಹಿಸುವುದಿಲ್ಲ. ಯಾವುದಕ್ಕೂ ಇಂತಹ ಘಟನೆಗಳಿಗೆ ಆಸ್ಪದ ನೀಡುವುದಿಲ್ಲ ಎಂದು ಭಜರಂಗದಳ ಮುಖಂಡ ರಾಜೇಶ್ ಗೌಡ ಎಚ್ಚರಿಕೆ ನೀಡಿದರು.

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

Minister HC Mahadevappa : ನಮ್ಮ ʼಗ್ಯಾರೆಂಟಿʼಯನ್ನು ನೋಡಿ ಜನ ಕಾಂಗ್ರೆಸ್ ಗೆ ಬಹುಮತ ನೀಡಿದ್ದಾರೆ ; ಸಚಿವ .ಹೆಚ್.ಸಿ.ಮಹದೇವಪ್ಪ
Top Story

Minister HC Mahadevappa : ನಮ್ಮ ʼಗ್ಯಾರೆಂಟಿʼಯನ್ನು ನೋಡಿ ಜನ ಕಾಂಗ್ರೆಸ್ ಗೆ ಬಹುಮತ ನೀಡಿದ್ದಾರೆ ; ಸಚಿವ .ಹೆಚ್.ಸಿ.ಮಹದೇವಪ್ಪ

by ಪ್ರತಿಧ್ವನಿ
May 30, 2023
ಜನರು ಸೋಲಿಸಿದ್ದು ಯಾಕೆ..? ನಾವು ಮಾಡಿದ ಅಪರಾಧ ಆದರೂ ಏನು..?
ಅಂಕಣ

ಜನರು ಸೋಲಿಸಿದ್ದು ಯಾಕೆ..? ನಾವು ಮಾಡಿದ ಅಪರಾಧ ಆದರೂ ಏನು..?

by ಕೃಷ್ಣ ಮಣಿ
May 25, 2023
ಟೇಕಾಫ್​​ಗೆ ಸಿದ್ಧವಾಗಿದ್ದ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದು ಅವಘಡ
ಕರ್ನಾಟಕ

ಟೇಕಾಫ್​​ಗೆ ಸಿದ್ಧವಾಗಿದ್ದ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದು ಅವಘಡ

by Prathidhvani
May 25, 2023
MLA Darshan Puttannaiah warning | ಸರ್ಕಾರಿ ಆಸ್ಪತ್ರೆಗೆ ಬಡವರು ಹೆಚ್ಚಾಗಿ ಬರುತ್ತಾರೆ;  ವೈದ್ಯರು ಹೆಚ್ಚುವರಿ ಹಣ ವಸೂಲಿ ಮಾಡುವಂತಿಲ್ಲ ; ಶಾಸಕ ದರ್ಶನ್ ಪುಟ್ಟಣ್ಣಯ್ಯ ವಾರ್ನಿಂಗ್‌
Top Story

MLA Darshan Puttannaiah warning | ಸರ್ಕಾರಿ ಆಸ್ಪತ್ರೆಗೆ ಬಡವರು ಹೆಚ್ಚಾಗಿ ಬರುತ್ತಾರೆ; ವೈದ್ಯರು ಹೆಚ್ಚುವರಿ ಹಣ ವಸೂಲಿ ಮಾಡುವಂತಿಲ್ಲ ; ಶಾಸಕ ದರ್ಶನ್ ಪುಟ್ಟಣ್ಣಯ್ಯ ವಾರ್ನಿಂಗ್‌

by ಪ್ರತಿಧ್ವನಿ
May 27, 2023
H.D Kumaraswamy | ಕಾಂಗ್ರೆಸ್‌ನವರಿಗೆ ಈಗ ರಾಷ್ಟ್ರಪತಿಗಳ ಮೇಲೆ ಪ್ರೀತಿ ಬಂದಿದೆ ; ಮಾಜಿ ಸಿಎಂ HDK
Top Story

H.D Kumaraswamy | ಕಾಂಗ್ರೆಸ್‌ನವರಿಗೆ ಈಗ ರಾಷ್ಟ್ರಪತಿಗಳ ಮೇಲೆ ಪ್ರೀತಿ ಬಂದಿದೆ ; ಮಾಜಿ ಸಿಎಂ HDK

by ಪ್ರತಿಧ್ವನಿ
May 26, 2023
Next Post
ನಾಳೆ ಹೆಬ್ಬಾಳದಲ್ಲಿ ಪಂಚರತ್ನ ರಥಯಾತ್ರೆ ನಡೆಸಲಿರುವ ಹೆಚ್.ಡಿ.ಕುಮಾರಸ್ವಾಮಿ : Pancharatna Rath Yatra

ನಾಳೆ ಹೆಬ್ಬಾಳದಲ್ಲಿ ಪಂಚರತ್ನ ರಥಯಾತ್ರೆ ನಡೆಸಲಿರುವ ಹೆಚ್.ಡಿ.ಕುಮಾರಸ್ವಾಮಿ : Pancharatna Rath Yatra

ಹಿಂದೂ-ಮುಸ್ಲಿಂ ಏಕತೆಗಾಗಿ ಹಾಗು ಬ್ರಾಹ್ಮಣ್ಯದ ವಿರುದ್ಧ ಹೋರಾಡಿದ ಭಾರತದ ಸ್ವತಂತ್ರ ಚಿಂತಕರು ಹಾಗು ದಾರ್ಶನಿಕರು : Hindu-Muslim Unity And Against Brahminism

ಹಿಂದೂ-ಮುಸ್ಲಿಂ ಏಕತೆಗಾಗಿ ಹಾಗು ಬ್ರಾಹ್ಮಣ್ಯದ ವಿರುದ್ಧ ಹೋರಾಡಿದ ಭಾರತದ ಸ್ವತಂತ್ರ ಚಿಂತಕರು ಹಾಗು ದಾರ್ಶನಿಕರು : Hindu-Muslim Unity And Against Brahminism

ಕಾಂಗ್ರೆಸ್​ ಸೇರಿದ ಅರಸೀಕೆರೆ ಶಾಸಕ ಶಿವಲಿಂಗೇಗೌಡರಿಗೆ ಮುಳ್ಳಾಗುತ್ತಾ ಆಡಿಯೋ..!? : Araseikere MLA Shivlinge Gowda

ಕಾಂಗ್ರೆಸ್​ ಸೇರಿದ ಅರಸೀಕೆರೆ ಶಾಸಕ ಶಿವಲಿಂಗೇಗೌಡರಿಗೆ ಮುಳ್ಳಾಗುತ್ತಾ ಆಡಿಯೋ..!? : Araseikere MLA Shivlinge Gowda

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist