• Home
  • About Us
  • ಕರ್ನಾಟಕ
Thursday, June 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಬಬಲಾದಿ ಸದಾಶಿವ ಮುತ್ಯಾ ದೇವರಿಗೆ ಮದ್ಯವೇ ನೈವೇದ್ಯ, ಭಕ್ತರಿಗೆ ಸಾರಾಯಿಯೇ ತೀರ್ಥ!

ರಾಕೇಶ್ ಬಿಜಾಪುರ್ by ರಾಕೇಶ್ ಬಿಜಾಪುರ್
January 2, 2022
in ಕರ್ನಾಟಕ
0
ಬಬಲಾದಿ ಸದಾಶಿವ ಮುತ್ಯಾ ದೇವರಿಗೆ ಮದ್ಯವೇ ನೈವೇದ್ಯ, ಭಕ್ತರಿಗೆ ಸಾರಾಯಿಯೇ ತೀರ್ಥ!
Share on WhatsAppShare on FacebookShare on Telegram
ADVERTISEMENT

ಸಾಮಾನ್ಯವಾಗಿ ದೇವಸ್ಥಾನಗಲ್ಲಿ ದೇವರಿಗೆ ನೈವೇದ್ಯ, ಪ್ರಸಾದ ರೂಪದಲ್ಲಿ ವಿವಿಧ ಆಹಾರಗಳನ್ನು ನೀಡಲಾಗುತ್ತದೆ. ದೇಶದ ವಿವಿಧ ಭಾಗದ ದೇವಸ್ಥಾನಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಭಕ್ತರಿಗೆ ಪ್ರಸಾದ ನೀಡಲಾಗುತ್ತದೆ. ಭಕ್ತರು ಸಹ ವಿವಿಧ ಬಗೆಯ ಖಾದ್ಯಗಳನ್ನ ದೇವರಿಗೆ ನೈವೇದ್ಯವಾಗಿ ಬಳಸುತ್ತಾರೆ. ಆದರೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಗ್ರಾಮದ ಸದಾಶಿವ ಮುತ್ಯಾ ಮಠ ಬಹಳ ವಿಶಿಷ್ಟ ಆಚರಣೆಯ ಮೂಲಕ ಎಲ್ಲರ ಗಮನ ಸೆಳೆಯತ್ತದೆ. ಇಲ್ಲಿ ದೇವರಿಗೆ ನೈವೇದ್ಯವಾಗಿ ಹಾಗೂ ಭಕ್ತರಿಗೆ ಪ್ರಸಾದದ ರೂಪದಲ್ಲಿ ಮದ್ಯವನ್ನೇ ನೀಡಲಾಗುತ್ತದೆ. ಮಹಿಳೆಯರು ಹಿರಿಯರು ಕಿರಿಯರು ಎಂದು ಬೇದ ಭಾವವಿಲ್ಲದೆ ಎಲ್ಲರೂ ಮದ್ಯವನ್ನು ತೀರ್ಥ ರೂಪದಲ್ಲಿ ಸ್ವೀಕರಿಸುತ್ತಾರೆ. ಈ ಆಚರಣೆ ವಿಚಿತ್ರ ಎನಿಸಿದರು ನಂಬಲೇಬೇಕಾದ ಸಂಗತಿಯಾಗಿದೆ. ಅಷ್ಟೇ ಅಲ್ಲ, ಈ ಬಬಲಾದಿ ಸದಾಶಿವ ಮುತ್ಯಾ ಜಾತ್ರೆಯ ವೇಳೆ ಖುದ್ದು ಅಬಕಾರಿ ಇಲಾಖೆಯೇ ತಾತ್ಕಾಲಿಕ ಟೆಂಟ್ ಹಾಕಿ ವಿವಿಧ ಬ್ರಾಂಡಿನ ಮದ್ಯ ಮಾರಾಟ ಮಾಡುತ್ತದೆ. ಈ ಮೂಲಕ ಸರ್ಕಾರಕ್ಕೆ ಲಕ್ಷ ಲಕ್ಷ ಆದಾಯ ತರುತ್ತದೆ.

ಕಾಲ ಜ್ಞಾನದ ಹೇಳಿಕೆ ಹಾಗೂ ವಿಶಿಷ್ಟ ಆಚರಣೆಯಿಂದ ಅಪಾರ ಭಕ್ತರಿನ್ನು ಹೊಂದಿರುವ ಮಠಕ್ಕೆ ಪ್ರತಿ ದಿನವೂ ರಾಜ್ಯದ ವಿವಿಧ ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಅದರಲ್ಲೂ ಶಿವರಾತ್ರಿ ಸಮಯದಲ್ಲಿ ಐದು ದಿನಗಳ ಕಾಲ ನಡೆಯುವ ಜಾತ್ರೆಯ ವೇಳೆ ಮದ್ಯದ ಹೊಳೆಯ ಹರಿಯುತ್ತದೆ. ಲಕ್ಷಾಂತರ ಜನರು ದೇಶದ ವಿವಿಧ ಭಾಗಗಳಿಂದ ಜಾತ್ರೆಗೆ ಆಗಮಿಸುವವರ ತಮ್ಮ ತಮ್ಮ ಶಕ್ತಿಗೆ ಅನುಗುಣವಾಗಿ ವಿವಿಧ ಬ್ರ್ಯಾಂಡ್ ನ ಮದ್ಯವನ್ನು ತರುತ್ತಾರೆ‌. ಪ್ರತಿ ವರ್ಷ ಬಬಲಾದಿ ಗ್ರಾಮದಲ್ಲಿ ಸಿದ್ದಿ ಪುರುಷ, ಕಾಲಜ್ಞಾನಿ ಸದಾಶಿವ ಮುತ್ಯಾನವರ ಜಾತ್ರೆಯನ್ನ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತದೆ. 

ಜಾತ್ರೆಗೆ ಬರುವ ಸಾವಿರಾರು ಭಕ್ತರು ತೆಂಗಿನಕಾಯಿ, ಹೂವಿನ ಜೊತೆಗೆ ಸಾರಾಯಿ ಬಾಟಲಿಗಳನ್ನ ಜೊತೆಗೆ ತಂದಿರ್ತಾರೆ. ಸರತಿ ಸಾಲಿನಲ್ಲಿ ನಿಂತು ತಮ್ಮ ಕೈಯಲ್ಲಿನ ಸಾರಾಯಿ ಬಾಟಲಿಗಳಿಂದ ಒಂದಿಷ್ಟು ಮಧ್ಯವನ್ನ ಸದಾಶಿವ ಮುತ್ಯಾ, ಹಾಗೂ ಶಕ್ತಿ ದೇವತೆ ಚಂದ್ರವ್ವ ತಾಯಿ ಗದ್ದುಗೆಯ ಎದುರಿಗಿಟ್ಟಿರುವ ಹಿತ್ತಾಳೆ ಪಾತ್ರೆಗೆ ಸುರಿಯುತ್ತಾರೆ. ಅಲ್ಲದೆ ಸಾರಾಯಿಯನ್ನೆ ಪ್ರಸಾದದ ರೂಪದಲ್ಲಿ ಸೇವಿಸುತ್ತಾರೆ. ಈ ಮೂಲಕ ತಮ್ಮ ಭಕ್ತಿಯನ್ನ ಸಲ್ಲಿಸುತ್ತಾರೆ.

ಇನ್ನು ಇಲ್ಲಿ ಬರುವ ಭಕ್ತರು ಹೀಗೆ ಸಾರಾಯಿಯನ್ನ ಪವಾಡ ಪುರುಷ, ಕಾಲಜ್ಞಾನಿ ಸದಾಶಿವ ಅಜ್ಜನವರಿಗೆ ನೈವೇಧ್ಯವಾಗಿ ಅರ್ಪಿಸೋದರ ಹಿಂದೆ ವಿಶಿಷ್ಠ ಹಿನ್ನಲೆ ಅಡಗಿದೆ. ಅದೇನಂದ್ರೆ ನೂರಾರು ವರ್ಷಗಳ ಹಿಂದೆ ಆಧ್ಯಾತ್ಮ ಸಾಧನಾಗಿದ್ದ ಸದಾಶಿವ ಮುತ್ಯಾ ಬಬಲಾದಿ ಗ್ರಾಮಕ್ಕೆ ಕಾಲಿಟ್ಟಾಗ ಗ್ರಾಮಸ್ಥರು ಮುತ್ಯಾನ ವಾಸಕ್ಕೆ ಅಡ್ಡಿ ಪಡೆಸಿದ್ದರು. ಈ ವೇಳೆ ಸದಾಶಿವ ಮುತ್ಯನವರು ತಮ್ಮ ಬಳಿಯ ಅಗಾದ ಶಕ್ತಿಯಿಂದ ಗ್ರಾಮದ ಪಕ್ಕದಲ್ಲಿ ಹರಿಯುತ್ತಿದ್ದ ಕೃಷ್ಣಾ ನದಿಯ ನೀರನ್ನೆಲ್ಲ ಸಾರಾಯಿಯನ್ನಾಗಿ ಪರಿವರ್ತಿಸಿ ಪವಾಡ ಸೃಷ್ಠಿಸಿದ್ದಂತೆ. ಮುತ್ಯಾನ ಪವಾಡ ಕಂಡಿದ್ದ ಗ್ರಾಮಸ್ಥರು ಅಂದಿನಿಂದ ಸದಾಶಿವ ಮುತ್ಯಾನನ್ನ ಪೂಜಿಸಲು ಆರಂಭಿಸಿದ್ದರಂತೆ. ಹೀಗಾಗಿ ಜಾತ್ರೆಯಲ್ಲಿ ಭಕ್ತರು ಸಾರಾಯಿಯನ್ನೆ ಮುತ್ಯಾನ ಗದ್ದುಗೆಗೆ ಅರ್ಪಿಸುತ್ತಾರೆ.

ಪ್ರತಿವರ್ಷ ಇಲ್ಲಿ ನಡೆಯುವ ಲಕ್ಷಾಂತರ ರುಪಾಯಿ ಮೌಲ್ಯದ ಸಾರಾಯಿ ಮಾರಾಟವಾಗುತ್ತದೆ. ಜಾತ್ರೆಯ ಸಮಯದಲ್ಲಂತೂ ಪ್ರತಿದಿನಕ್ಕಿಂತಲೂ ನೂರು ಪಟ್ಟು ಅಧಿಕ ಮದ್ಯ ಮಾರಾಟವಾಗುತ್ತದೆ‌. ಈ ಹಿಂದೆ ಇದೇ ಜಾತ್ರೆಯಲ್ಲಿ ಅಕ್ರಮವಾಗಿ ಕಳ್ಳ ಭಟ್ಟಿ ಮಾರಾಟವಾಗ್ತಿತ್ತು. ಇದಕ್ಕೆ ಕಡಿವಾಣ ಹಾಕಲು ದೃಷ್ಠಿಯಿಂದ ಅಬಕಾರಿ ಇಲಾಖೆಯೇ  ಸಾರಾಯಿ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದೆ. ಜೊತೆಗೆ ಖುದ್ದು ಇಲಾಖೆಯ ಅಧಿಕಾರಿಗಳು ಇಲ್ಲಿ ಟೆಂಟ್ ಹಾಕಿ ಜಾತ್ರೆಯ ಐದು ದಿನಗಳ ಕಾಲ ಮದ್ಯಮಾರಾಟ ಮಾಡುತ್ತಾರೆ. ಪ್ರತಿ ವರ್ಷ ಜಾತ್ರೆಯ ದಿನದಲ್ಲಿ ಪ್ರತಿದಿನ 12 ರಿಂದ 15 ಲಕ್ಷ ರೂಪಾಯಿ ವಹಿವಾಟು ನಡೆಯುತ್ತದೆ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಲಕ್ಷ ಲಕ್ಷ ಆದಾಯ ಬರುತ್ತದೆ. ಈ ಮೂಲಕ ಮಠದ ಆಚರಣೆ ಸರ್ಕಾರಕ್ಕೆ ಒಂದು ರೀತಿಯಲ್ಲಿ ಆದಾಯದ ಮೂಲವಾಗಿದೆ.

ಬಬಲಾದಿ ಸದಾಶಿವ ಮುತ್ಯಾ ದೇವರಿಗೆ ಮದ್ಯವೇ ನೈವೇದ್ಯ, ಭಕ್ತರಿಗೆ ಸಾರಾಯಿಯೇ ತೀರ್ಥ!
Tags: BJPCongress PartyCovid 19ಕೋವಿಡ್-19ದೇವರಿಗೆ ನೈವೇದ್ಯನರೇಂದ್ರ ಮೋದಿಪ್ರಸಾದ ರೂಪಬಬಲಾದಿಬಿಜೆಪಿಮದ್ಯವೇ ನೈವೇದ್ಯವಿಜಯಪುರಸದಾಶಿವ ಮುತ್ಯಾಸಾರಾಯಿಯೇ ತೀರ್ಥ
Previous Post

ಉಡುಪಿ : ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶ ನಿರಾಕರಣೆ

Next Post

ಜನವರಿ 3ರಿಂದ ಮಕ್ಕಳಿಗೆ, 10ರಿಂದ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ : ಮಕ್ಕಳ ಲಸಿಕೆ ಪಡೆದುಕೊಳ್ಳುವುದು ಹೇಗೆ?

Related Posts

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್
Top Story

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

by Chetan
June 18, 2025
0

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್ಖರ್ಗೆ ಭಾಗಿ - ಏವಿಯೇಷನ್ ನಲ್ಲಿ ಕರ್ನಾಟಕವೇ ಮುಂಚೂಣಿಯಲ್ಲಿದೆ ಎಂದ ಪ್ರಿಯಾಂಕ್ https://youtu.be/hWOHlkSh63g ParisAirShow ನಲ್ಲಿ ಭಾರತ ಮತ್ತು ವಿಶೇಷವಾಗಿ...

Read moreDetails

ಸರ್ಕಾರಕ್ಕೆ ಹೇಳಿ ಮೊದ್ಲು ಗುಂಡಿ ಮುಚ್ಚೋಕೆ

June 18, 2025
ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

June 18, 2025
ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

June 18, 2025
ವಿಶ್ವ ಯೋಗ ದಿನದಂದು ‘ಯೋಗ ಸಂಗಮ’ ಕಾರ್ಯಕ್ರಮ – ರಾಜ್ಯಾದ್ಯಂತ 5 ಲಕ್ಷ ಜನರಿಂದ ಯೋಗಭ್ಯಾಸ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ವಿಶ್ವ ಯೋಗ ದಿನದಂದು ‘ಯೋಗ ಸಂಗಮ’ ಕಾರ್ಯಕ್ರಮ – ರಾಜ್ಯಾದ್ಯಂತ 5 ಲಕ್ಷ ಜನರಿಂದ ಯೋಗಭ್ಯಾಸ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

June 17, 2025
Next Post
ಜನವರಿ 3ರಿಂದ ಮಕ್ಕಳಿಗೆ, 10ರಿಂದ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ : ಮಕ್ಕಳ ಲಸಿಕೆ ಪಡೆದುಕೊಳ್ಳುವುದು ಹೇಗೆ?

ಜನವರಿ 3ರಿಂದ ಮಕ್ಕಳಿಗೆ, 10ರಿಂದ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ : ಮಕ್ಕಳ ಲಸಿಕೆ ಪಡೆದುಕೊಳ್ಳುವುದು ಹೇಗೆ?

Please login to join discussion

Recent News

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .
Top Story

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

by ಪ್ರತಿಧ್ವನಿ
June 18, 2025
ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್
Top Story

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

by Chetan
June 18, 2025
Top Story

ಸರ್ಕಾರಕ್ಕೆ ಹೇಳಿ ಮೊದ್ಲು ಗುಂಡಿ ಮುಚ್ಚೋಕೆ

by ಪ್ರತಿಧ್ವನಿ
June 18, 2025
ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ
Top Story

ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

by ಪ್ರತಿಧ್ವನಿ
June 18, 2025
ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ
Top Story

ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

by ಪ್ರತಿಧ್ವನಿ
June 18, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

June 18, 2025
ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

June 18, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada