
ಮನೆಯವರೆಗೆ ಆಂಬುಲೆನ್ಸ್ ಬಾರದೆ ಬಾಣಂತಿ ಮತ್ತು ಶಿಶುವನ್ನು 1.5 ಕಿ.ಮೀ ಹೆಗಲ ಮೇಲೆ ಹೊತ್ತು ಕಾಲ್ನಡಿಗೆ ಮೂಲಕ ಆಸ್ಪತ್ರೆಗೆ ಸಾಗಿದ ಘಟನೆ ಗುರುವಾರ ನಡೆದಿದೆ.

ಹೇಳೋರಿಲ್ಲ ಕೇಳೋರಿಲ್ಲದಂತಾಗಿದೆ ಕಣ್ಣು ಕಾಣದಂತೆ ವರ್ತಿಸುತ್ತಿರುವ ಸಂಬಂಧಪಟ್ಟ ಅಧಿಕಾರಿಗಳು?
ಗರ್ಭಿಣಿ ಶಿಲ್ಪಾ ನಾಯಿಕ ಅವರಿಗೆ ಗುರುವಾರ ಬೆಳಿಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಕರೆದೊಯ್ಯಲು ಕುಟುಂಬಸ್ಥರು ಆಂಬುಲೆನ್ಸ್ಗೆ ಕರೆ ಮಾಡಿದ್ದರು.ಆದರೆ, ರಸ್ತೆ ಹಾಳಾದ ಕಾರಣ ಮನೆಯವರೆಗೆ ಆಂಬುಲೆನ್ಸ್ ಬರುವುದಿಲ್ಲ ಎಂದು ಚಾಲಕ ಹೇಳಿದರು.

ಈ ಮಧ್ಯೆ, ಶಿಲ್ಪಾ ಮನೆಯಲ್ಲೇ ಶಿಶುವಿಗೆ ಜನ್ಮ ನೀಡಿದರು. ಹೆರಿಗೆ ನಂತರ ಬಾಣಂತಿ ಮತ್ತು ಶಿಶುವನ್ನು ಹೆಗಲ ಮೇಲೆ ಹೊತ್ತು, ಕಾಲ್ನಡಿಗೆ ಮೂಲಕ ಕುಟುಂಬದವರು ಸಾಗಿದರು. ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿ-ಮಗು ಇಬ್ಬರೂ ಈಗ ಆರೋಗ್ಯದಿಂದ ಇದ್ದಾರೆ.ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ರಸ್ತೆ ಸುಧಾರಣೆಗೆ ಅನುದಾನ ಮಂಜೂರಾದರೂ, ಕಾಮಗಾರಿ ಕೈಗೊಳ್ಳದೆ ಇರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಈ ರಸ್ತೆ ಕಾಮಗಾರಿ ಮಾರ್ಚ್ನಲ್ಲೇ ಕೈಗೊಳ್ಳಬೇಕಿತ್ತು. ಅನಿವಾರ್ಯ ಕಾರಣದಿಂದ ವಿಳಂಬವಾಗಿದೆ’ ಎಂದು ಪಿಡಿಒ ಸಿದ್ದಪ್ಪ ತುಂಗಳ ಪ್ರತಿಕ್ರಿಯಿಸಿದ್ದಾರೆ.

ಅಥಣಿ ತಾಲ್ಲೂಕಿನ ಅಡಹಳ್ಳಟ್ಟಿಯ ನಾಯಿಕ ವಸತಿ ತೋಟದಲ್ಲಿ ಈ ವಿಷಯ ಕೇಳಿದರೆ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮ ಪಂಚಾಯಿತಿ ತಾಲೂಕ್ ಆಡಳಿತ ಜಿಲ್ಲಾ ಆಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ರಾಜ್ಯಪಾಲರು ರಾಷ್ಟ್ರಪತಿಗಳು ಪ್ರಧಾನ ಮಂತ್ರಿಗಳು ಮುಖ್ಯಮಂತ್ರಿಗಳು ಈ ಸಮಸ್ಯೆಯನ್ನ ಈ ಸಮಸ್ಯೆ ಬಗೆಹರಿಸುತ್ತಾರ ಅಥವಾ ಯಥಾ ಸ್ಥಿತಿ ಮುಂದುವರಿಯುತ್ತಾ.











