• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, June 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮಂಗಳ ಗ್ರಹದಲ್ಲಿ ಹರಿಯುತ್ತಿತ್ತಾ ಗಂಗೆಯಷ್ಟೇ ಬೃಹತ್ ನದಿಗಳು? ವಿಜ್ಞಾನಿಗಳ ಹೊಸ ಸಂಶೋಧನೆ ಚಕಿತಗೊಳಿಸಿದೆ!

ಪ್ರತಿಧ್ವನಿ by ಪ್ರತಿಧ್ವನಿ
June 20, 2026
in Top Story
0
ಎಚ್ಚರ! ನೀವು ಬಳಸುವ ಔಷಧವೂ ಪಟ್ಟಿಯಲ್ಲಿದೆಯೇ? 16 ಔಷಧಗಳಿಗೆ ಕೇಂದ್ರ ಸರ್ಕಾರ ಬ್ಯಾನ್!
Share on WhatsAppShare on FacebookShare on Telegram

ವಿಜ್ಞಾನ ಲೋಕವನ್ನು ಅಚ್ಚರಿಗೊಳಿಸುವಂತಹ ಮಹತ್ವದ ಸಂಶೋಧನೆಯೊಂದು ಬೆಳಕಿಗೆ ಬಂದಿದೆ. ಕೆಂಪು ಗ್ರಹ ಎಂದು ಕರೆಯಲ್ಪಡುವ ಮಂಗಳ ಗ್ರಹದಲ್ಲಿ ಒಂದು ಕಾಲದಲ್ಲಿ ಭೂಮಿಯ ಗಂಗಾ ಹಾಗೂ ಅಮೆಜಾನ್ ನದಿಗಳಿಗೆ ಸರಿಸಾಟಿಯಾದ ಬೃಹತ್ ನದಿ ವ್ಯವಸ್ಥೆಗಳು ಹರಿಯುತ್ತಿದ್ದವು ಎಂಬುದನ್ನು ವಿಜ್ಞಾನಿಗಳು ಮೊದಲ ಬಾರಿಗೆ ನಕ್ಷೆ (ಮ್ಯಾಪಿಂಗ್) ಮೂಲಕ ದೃಢಪಡಿಸಿದ್ದಾರೆ.

ADVERTISEMENT

ಅಮೆರಿಕದ ಯುನಿವರ್ಸಿಟಿ ಆಫ್ ಟೆಕ್ಸಾಸ್ ಸಂಶೋಧಕರು ನಡೆಸಿದ ಈ ಅಧ್ಯಯನದ ವರದಿ ಪ್ರತಿಷ್ಠಿತ ‘ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್’ (PNAS) ಜರ್ನಲ್‌ನಲ್ಲಿ ಪ್ರಕಟವಾಗಿದೆ. ಸಂಶೋಧನೆಯಲ್ಲಿ ಮಂಗಳ ಗ್ರಹದಲ್ಲಿ ಒಟ್ಟು 16 ಬೃಹತ್ ನದಿ ಪಾತ್ರಗಳು ಪತ್ತೆಯಾಗಿದ್ದು, ಅವುಗಳು ಪರಸ್ಪರ ಸಂಪರ್ಕ ಹೊಂದಿದ್ದ ಜಲಮಾರ್ಗಗಳ ಭಾಗವಾಗಿದ್ದವು ಎಂದು ತಿಳಿಸಲಾಗಿದೆ.

HD Kumaraswamy : ನಮ್ಮ ಮೈತ್ರಿಯ ವಿಚಾರದಲ್ಲಿ ನಿಮಗೆ ಹೇಳಬೇಕೆಂದ್ರೆ..! #bjp #jds #byvijayendra

ಕೋಟ್ಯಂತರ ವರ್ಷಗಳ ಹಿಂದೆ ಮಂಗಳ ಗ್ರಹವು ಇಂದಿನಂತೆ ನಿರ್ಜೀವವಾಗಿರದೆ, ಹೆಚ್ಚು ಬೆಚ್ಚಗಿನ ಹಾಗೂ ಆರ್ದ್ರ ವಾತಾವರಣ ಹೊಂದಿತ್ತು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಆ ಕಾಲದಲ್ಲಿ ಸುರಿದ ಭಾರಿ ಮಳೆಯಿಂದ ಕಣಿವೆಗಳು ನಿರ್ಮಾಣವಾಗಿ, ನದಿಗಳ ಮೂಲಕ ನೀರು ಸರೋವರಗಳು ಹಾಗೂ ಸಾಗರಗಳಿಗೆ ಹರಿಯುತ್ತಿತ್ತು ಎನ್ನಲಾಗಿದೆ.ಭೂಮಿಯ ಮೇಲಿನ ನದಿ ಪಾತ್ರಗಳು ಜೀವವೈವಿಧ್ಯಕ್ಕೆ ಆಶ್ರಯವಾಗಿರುವಂತೆ, ಮಂಗಳದಲ್ಲಿಯೂ ಇಂತಹ ಪರಿಸ್ಥಿತಿ ಇದ್ದಿದ್ದರೆ ಅಲ್ಲಿ ಸೂಕ್ಷ್ಮಜೀವಿಗಳು ಬದುಕಿರುವ ಸಾಧ್ಯತೆ ಇದೆ ಎಂದು ಸಂಶೋಧಕರು ಅಂದಾಜಿಸಿದ್ದಾರೆ.

Bidadi Farmers Protest : ಪ್ರತಿಭಟನೆಯಲ್ಲಿ ಹೋರಾಟಗಾರ ಅಸ್ವಸ್ಥ.!  #pratidhvani

ಈ ಅಧ್ಯಯನಕ್ಕಾಗಿ ವಿಜ್ಞಾನಿಗಳು ನಾಸಾದ ಮಾರ್ಸ್ ಆರ್ಬಿಟರ್ ಲೇಸರ್ ಆಲ್ಟಿಮೀಟರ್ (MOLA) ಮತ್ತು ಮಾರ್ಸ್ ರೆಕನೈಸನ್ಸ್ ಆರ್ಬಿಟರ್‌ನ ಕಾಂಟೆಕ್ಸ್ಟ್ ಕ್ಯಾಮೆರಾ (CTX) ಒದಗಿಸಿದ ಮಾಹಿತಿಯನ್ನು ಬಳಸಿಕೊಂಡಿದ್ದಾರೆ.ಸಂಶೋಧನೆಯಲ್ಲಿ ಗುರುತಿಸಲಾದ 19 ಪ್ರಮುಖ ಜಲಮಾರ್ಗಗಳ ಪೈಕಿ 16 ನದಿ ಪಾತ್ರಗಳು ತಲಾ ಒಂದು ಲಕ್ಷ ಚದರ ಕಿಲೋಮೀಟರ್‌ಗಿಂತಲೂ ಹೆಚ್ಚಿನ ವಿಸ್ತೀರ್ಣ ಹೊಂದಿವೆ ಎಂಬುದು ವಿಶೇಷ.

 

ಮಣ್ಣಿನ ಸವೆತವೂ ಭಾರೀ ಪ್ರಮಾಣದಲ್ಲಿ ನಡೆದಿದೆ,

ಈ ನದಿಗಳು ಮಂಗಳದ ಕೇವಲ 5 ಪ್ರತಿಶತ ಪ್ರದೇಶದಲ್ಲಿದ್ದರೂ, ಗ್ರಹದ ಒಟ್ಟು ನದಿ ಸವೆತದ 42 ಪ್ರತಿಶತಕ್ಕೆ ಕಾರಣವಾಗಿವೆ. ಸುಮಾರು 28 ಸಾವಿರ ಕ್ಯೂಬಿಕ್ ಕಿಲೋಮೀಟರ್ ಮಣ್ಣು ಈ ಜಲಮಾರ್ಗಗಳ ಮೂಲಕ ಸಾಗಿರಬಹುದು ಎಂದು ಅಂದಾಜಿಸಲಾಗಿದೆ. ಈ ಹೂಳಿನಲ್ಲಿ ಜೀವಕ್ಕೆ ಅಗತ್ಯವಾದ ಪೋಷಕಾಂಶಗಳು ಇರಬಹುದೆಂಬ ನಿರೀಕ್ಷೆಯೂ ಮೂಡಿದೆ.

KPCC ಅಧ್ಯಕ್ಷರಾಗಿ ನೇಮಕಗೊಂಡಿರುವ , ಪರಿಷತ್ ಚುನಾವಣೆಯಲ್ಲಿ ಜಯಗಳಿಸಿರುವ BK ಹರಿಪ್ರಸಾದ್ ಅವರಿಗೆ ಅಭಿನಂದನೆಗಳು

ಸುಮಾರು 450 ಕೋಟಿ ವರ್ಷಗಳ ಹಿಂದೆ ರೂಪುಗೊಂಡ ಮಂಗಳ ಗ್ರಹದಲ್ಲಿ 200 ಕೋಟಿ ವರ್ಷಗಳ ಹಿಂದಿನವರೆಗೂ ನೀರು ಇತ್ತು ಎಂದು ವಿಜ್ಞಾನಿಗಳು ನಂಬಿದ್ದಾರೆ. ಬಳಿಕ ಕಾಂತೀಯ ಕ್ಷೇತ್ರ ಹಾಗೂ ವಾತಾವರಣದ ನಷ್ಟದಿಂದ ನೀರು ಸಂಪೂರ್ಣವಾಗಿ ಆವಿಯಾಗಿ ಗ್ರಹ ಬರಿದಾಗಿದೆ.ಈಗ ಪತ್ತೆಯಾಗಿರುವ 16 ಬೃಹತ್ ನದಿ ಪಾತ್ರಗಳು ಮುಂದಿನ ದಿನಗಳಲ್ಲಿ ಮಂಗಳ ಗ್ರಹಕ್ಕೆ ತೆರಳಲಿರುವ ರೋವರ್‌ಗಳು ಹಾಗೂ ಪ್ರಾಚೀನ ಜೀವದ ಕುರುಹುಗಳನ್ನು ಹುಡುಕುವ ಸಂಶೋಧನಾ ಮಿಷನ್‌ಗಳಿಗೆ ಪ್ರಮುಖ ಗುರಿಯಾಗಲಿವೆ.

Tags: #Astronomy#KannadaNews#LifeOnMars#Mars#MarsDiscovery#MarsMission#MarsRiver#RedPlanet#ScienceNews#ScienceUpdate#SpaceExploration#SpaceResearchNASAResearchTechnology
Previous Post

ಇಸ್ರೇಲ್ ವಿರುದ್ಧ ಇರಾನ್‌ ಆಕ್ರೋಶ; ಜಾಗತಿಕ ತೈಲ ಮಾರುಕಟ್ಟೆಗೆ ಆಘಾತದ ಭೀತಿ

Related Posts

ಎಚ್ಚರ! ನೀವು ಬಳಸುವ ಔಷಧವೂ ಪಟ್ಟಿಯಲ್ಲಿದೆಯೇ? 16 ಔಷಧಗಳಿಗೆ ಕೇಂದ್ರ ಸರ್ಕಾರ ಬ್ಯಾನ್!
Top Story

ಇಸ್ರೇಲ್ ವಿರುದ್ಧ ಇರಾನ್‌ ಆಕ್ರೋಶ; ಜಾಗತಿಕ ತೈಲ ಮಾರುಕಟ್ಟೆಗೆ ಆಘಾತದ ಭೀತಿ

by ಪ್ರತಿಧ್ವನಿ
June 20, 2026
0

ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಸ್ರೇಲ್ ನಡೆಸಿದ ದಾಳಿಗೆ ಪ್ರತಿಕ್ರಿಯೆಯಾಗಿ ಇರಾನ್ ಹರ್ಮುಜ್ ಜಲಸಂಧಿಯನ್ನು ಮತ್ತೊಮ್ಮೆ ಬಂದ್ ಮಾಡಿರುವುದಾಗಿ ವರದಿಯಾಗಿದೆ. ಇಸ್ರೇಲ್‌ನ ಕ್ರಮವು ಕದನ ವಿರಾಮ...

Read moreDetails
ಎಚ್ಚರ! ನೀವು ಬಳಸುವ ಔಷಧವೂ ಪಟ್ಟಿಯಲ್ಲಿದೆಯೇ? 16 ಔಷಧಗಳಿಗೆ ಕೇಂದ್ರ ಸರ್ಕಾರ ಬ್ಯಾನ್!

ಎಚ್ಚರ! ನೀವು ಬಳಸುವ ಔಷಧವೂ ಪಟ್ಟಿಯಲ್ಲಿದೆಯೇ? 16 ಔಷಧಗಳಿಗೆ ಕೇಂದ್ರ ಸರ್ಕಾರ ಬ್ಯಾನ್!

June 20, 2026
BREAKING NEWS : ನಟ ವಿನೋದ್‌ ಪ್ರಭಾಕರ್‌ ಆರೋಗ್ಯವಾಗಿದ್ದಾರೆ ಅಭಿಮಾನಿಗಳಲ್ಲಿ ಆತಂಕ ಬೇಡ..!

BREAKING NEWS : ನಟ ವಿನೋದ್‌ ಪ್ರಭಾಕರ್‌ ಆರೋಗ್ಯವಾಗಿದ್ದಾರೆ ಅಭಿಮಾನಿಗಳಲ್ಲಿ ಆತಂಕ ಬೇಡ..!

June 20, 2026
ʼಇದು ನಮ್ಮ ಐದಾರು ಜನರ ನಡುವಿನ ಗುಟ್ಟುʼ: ಸುಳಿವು ಬಿಟ್ಟುಕೊಟ್ಟ ಡಿ.ಕೆ ಶಿವಕುಮಾರ್

ಸಾರ್ವಜನಿಕರ ಕುಂದುಕೊರತೆ ನಿವಾರಣೆಗೆ ಪ್ರಜಾಸೇವೆ ಇಲಾಖೆ: ಸಿಎಂ ಡಿ.ಕೆ ಶಿವಕುಮಾರ್

June 20, 2026
ಬಿಡದಿ ಟೌನ್‌ಶಿಪ್ ಯೋಜನೆಯ ಪಿತಾಮಹ ಕುಮಾರಸ್ವಾಮಿ: ಸಿಎಂ ಡಿ.ಕೆ ಶಿವಕುಮಾರ್

ಬಿಡದಿ ಟೌನ್‌ಶಿಪ್ ಯೋಜನೆಯ ಪಿತಾಮಹ ಕುಮಾರಸ್ವಾಮಿ: ಸಿಎಂ ಡಿ.ಕೆ ಶಿವಕುಮಾರ್

June 20, 2026
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada