• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, July 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮತ್ತೆ ಜಿಗಿತ ದಾಖಲಿಸಿದ ಅರೇಬಿಕಾ ಪಾರ್ಚ್‌ಮೆಂಟ್‌ ಕಾಫಿ; ಚೀಲಕ್ಕೆ ರೂ.23,500 ಸರ್ವಕಾಲಿಕ ದಾಖಲೆ ಬೆಲೆ

ಪ್ರತಿಧ್ವನಿ by ಪ್ರತಿಧ್ವನಿ
December 9, 2024
in Top Story, ಇತರೆ / Others, ಕರ್ನಾಟಕ
0
Share on WhatsAppShare on FacebookShare on Telegram

ಬೆಂಗಳೂರು ; ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ಕಾಫಿ ಬೆಲೆಗಳು ಶುಕ್ರವಾರ ತೀವ್ರವಾಗಿ ಹೆಚ್ಚಳ ದಾಖಲಿಸಿ ಹೊಸ ಎತ್ತರಕ್ಕೆ ಏರಿ ಸರ್ವಕಾಲಿಕ ದಾಖಲೆ ನಿರ್ಮಿಸಿದವು. ಮಾರುಕಟ್ಟೆಗೆ ಸರಬರಾಜಿನಲ್ಲಿ ಕೊರತೆ ಉಂಟಾದ ಕಾರಣಕ್ಕೆ ಕಳೆದ ಗುರುವಾರ ಮತ್ತು ಶುಕ್ರವಾರ ಅರೇಬಿಕಾ ಪಾರ್ಚ್‌ ಮೆಂಟ್‌ ಕಾಫಿ ದರಗಳು ಜಿಗಿತ ದಾಖಲಿಸಿದವು.ಕೇವಲ ಎರಡು ದಿನದಲ್ಲೇ ಚೀಲಕ್ಕೆ 1200 ರೂಪಾಯಿಗಳಷ್ಟು ಏರಿಕೆ ದಾಖಲಾಗಿದೆ.

ADVERTISEMENT

ಆದರೆ ದೇಶೀ ಮಾರುಕಟ್ಟೆಯಲ್ಲಿ ಮಾತ್ರ ಅಂತರ್ರಾಷ್ಟ್ರೀಯ ಮಾರುಕಟ್ಟೆಯ ಏರಿಕೆಯ ಅನುಪಾತದಲ್ಲಿ ಏರಿಕೆ ಆಗಿಲ್ಲ.ಕೊಡಗಿನಲ್ಲಿ ಬಹುತೇಕ ಕಾಫಿ ಖರೀದಿದಾರರು ಅರೇಬಿಕಾ ಪಾರ್ಚ್‌ಮೆಂಟ್‌ 50 ಕೆಜಿ ಚೀಲಕ್ಕೆ 21 ಸಾವಿರದಿಂದ 22 ಸಾವಿರ ರೂಪಾಯಿಗಳವರೆಗೆ ಮಾತ್ರ ಖರೀದಿಸುತಿದ್ದಾರೆ. ಮೂಡಿಗೆರೆಯ ಮುದ್ರೆಮನೆ ಕಾಫಿ ಕ್ಯೂರಿಂಗ್‌ ವರ್ಕ್ಸ್‌ ನಲ್ಲಿ ಭಾನುವಾರ ಖರೀದಿ ದರ 23,500 ರೂಪಾಯಿ ಇತ್ತು. ಈ ದರ ಸರ್ವಕಾಲಿಕ ದಾಖಲೆ ಆಗಿದೆ. 1990 ರ ದಶಕದಲ್ಲಿ ಕಾಫಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಅವಕಾಶ ನೀಡಿದ ನಂತರ ಇಷ್ಟು ದರ ಏರಿಕೆ ಆಗಿರುವುದು ಇದೇ ಮೊದಲಾಗಿದೆ. ನಾವು ಇಂದು ಈ ದರಕ್ಕೆ ಖರೀದಿಸುತಿದ್ದೇವೆ ಎಂದು ಮುದ್ರೆಮನೆ ಕಾಫಿಯ ವ್ಯವಸ್ಥಾಪಕ ಉಮೇಶ್‌ ತಿಳಿಸಿದರು.

ವಿವಿಧ ಪಟ್ಟಣಗಳಲ್ಲಿ ಭಾನುವಾರ ಕಾಫಿ ಖರೀದಿ ದರದಲ್ಲಿ ಭಾರೀ ವ್ಯತ್ಯಾಸ ಗೋಚರವಾಯಿತು. ಕುಶಾಲನಗರದ ಎಸ್‌ ಎಲ್‌ ಎನ್‌ ಕಾಫಿ ಕ್ಯೂರಿಂಗ್‌ ವರ್ಕ್ಸ್‌ ನಲ್ಲಿ ಭಾನುವಾರ ಅರೇಬಿಕಾ ಫಾರ್ಚ್‌ ಮೆಂಟ್‌ ದರ 5೦ ಕೆ ಜಿ ಚೀಲಕ್ಕೆ 21,200 ಇದ್ದರೆ ಸೋಮವಾರಪೇಟೆಯ ಬ್ಲಾನ್‌ ಕಾಫಿ ಯಲ್ಲಿ ದರ 22 ಸಾವಿರ ಇತ್ತು. ಅರೇಬಿಕಾ ಪಾರ್ಚ್‌ ಮೆಂಟ್‌ ಕಾಫಿ ಮಾತ್ರ ಅನಿರೀಕ್ಷಿತ ಜಿಗಿತ ದಾಖಲಿಸಿದ್ದು ಅರೇಬಿಕಾ ಚೆರ್ರಿ ಕಾಫಿ, ರೊಬಸ್ಟಾ ಪಾರ್ಚ್‌ಮೆಂಟ್‌ ಮತ್ತು ರೊಬಸ್ಟಾ ಚೆರಿ ದರ ದಲ್ಲಿ ಏರಿಕೆ ಆಗಿಲ್ಲದಿರುವುದು ಅಚ್ಚರಿ ಮೂಡಿಸಿದೆ.

ವಾಸ್ತವವಾಗಿ ರೊಬಸ್ಟಾ ಪಾರ್ಚ್‌ಮೆಂಟ್‌ ಕಾಫಿ ದರ 15 ದಿನದ ಹಿಂದೆ 20 ಸಾವಿರಕ್ಕೆ ತಲುಪಿದ್ದು ನಂತರ ಈಗ ಕುಸಿತ ದಾಖಲಿಸಿದೆ. ಭಾನುವಾರ ರೊಬಸ್ಟಾ ಪಾರ್ಚ್‌ ಮೆಂಟ್‌ ಖರೀದಿ ದರ 19 ಸಾವಿರದಿಂದ 19,500 ರ ವರೆಗೂ ಇತ್ತು. ಚಿಕ್ಕಮಗಳೂರಿನಲ್ಲಿ ಈ ದರ 20 ಸಾವಿರ ರೂಪಾಯಿ ಇತ್ತು.ವಿಶ್ವದ ಅತಿದೊಡ್ಡ ಅರೇಬಿಕಾ ಕಾಫಿ ಉತ್ಪಾದಕರಾದ ಬ್ರೆಜಿಲ್‌ ನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಕಾಫಿ ಉತ್ಪಾದನೆಗೆ ಬಲವಾದ ಪೆಟ್ಟುಬಿದ್ದಿದ್ದು ಅಂತರ್ರಾಷ್ಟ್ರೀಯ ಮಾರುಕಟ್ಟೆಗೆ ಕಾಫಿ ಸರಬರಾಜು ಕಡಿಮೆ ಆಗಿದ್ದರಿಂದ ಕಾಫಿ ದರ ಕಳೆದ ವರ್ಷದಿಂದ ಏರಿಕೆ ದಾಖಲಿಸುತ್ತಿದೆ. ವಿಶ್ವದ ಎರಡನೇ ಅತೀ ದೊಡ್ಡ ಕಾಫಿ ಉತ್ಪಾದಕ ವಿಯಟ್ನಾಂ ನಲ್ಲಿಯೂ ಹವಾಮಾನ ವೈಪರೀತ್ಯದಿಂದಾಗಿ ಉತ್ಪಾದನೆ ಗಣನೀಯವಾಗಿ ಕುಸಿದಿದೆ.

ಕಾಫಿಯ ದರ ಗೂಳಿ ಓಟದಂತೆ ಏರಿಕೆ ದಾಖಲಿಸುತ್ತಿರುವ ಹಿನ್ನೆಲೆಯಲ್ಲಿ ಕಾಫಿ ವರ್ತಕರು ಖರೀದಿಗೆ ಮುಂದಾಗುತ್ತಿಲ್ಲ. ಏಕೆಂದರೆ ಕಳೆದ ಮೂರು ದಶಕಗಳಲ್ಲಿ ಕಾಫಿ ವಹಿವಾಟಿನಲ್ಲಿ ತೊಡಗಿರುವ ನೂರಾರು ವರ್ತಕರು ದರ ಕುಸಿದಾಗ ಲಕ್ಷಗಟ್ಟಲೆ ಹಣ ಕಳೆದುಕೊಂಡು ದಿವಾಳಿ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ವರ್ತಕರು ಪ್ರತಿನಿತ್ಯ ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಹೆಚ್ಚಳವಾಗಿರುವ ದರ ಮೊಬೈಲ್‌ ಬಂದರೂ ಈ ದುಬಾರಿ ದರದಲ್ಲಿ ಖರೀದಿಗೆ ಹಿಂದೇಟು ಹಾಕುತಿದ್ದಾರೆ.

ಈ ದರವು ಸ್ಥಿರವಾಗಿಲ್ಲ ಎಂಬುದೇ ವರ್ತಕರ ಆತಂಕಕ್ಕೆ ಕಾರಣ ಆಗಿದೆ.ಜಾಗತಿಕ ಮಾರುಕಟ್ಟೆಯಲ್ಲಿ ಕಾಫಿ ದರ ಏರಿಕೆ ಆಗಿದ್ದರೂ ಕಾಫಿ ಬೆಳೆಗಾರರ ಪರಿಸ್ಥಿತಿ ಏನೂ ಹೇಳಿಕೊಳ್ಳುವಷ್ಟು ಉತ್ತಮವಾಗಿಲ್ಲ. ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ಈ ವರ್ಷದ ಕಾಫಿ ಫಸಲಿನ ಮೇಲೆ ಗಣನೀಯ ಹೊಡೆತ ಬಿದ್ದಿದೆ. ಹಣ್ಣಾದ ಕಾಫಿ ಉದುರಿದ್ದು ನೆಲದಲ್ಲಿ ಬಿದ್ದಿದ್ದು ಕೊಳೆಯುತ್ತಿದೆ. ಮತ್ತೊಂದೆಡೆ ಕಾಫಿ ಕೊಯ್ಲಿಗೆ ಕಾರ್ಮಿಕರ ಕೊರತೆಯೂ ಇದೆ. ಕಾರ್ಮಿಕರ ಕೂಲಿ ದರವೂ ದುಪ್ಪಟ್ಟಾಗಿದೆ , ಅಷ್ಟು ಕೊಟ್ಟರೂ ಜನ ಸಿಗುತ್ತಿಲ್ಲ ಎಂದು ಗ್ರಾಮೀಣ ಭಾಗದ ಕಾಫಿ ಬೆಳೆಗಾರರ ಅಳಲಾಗಿದೆ. ವರದಿ :ಕೋವರ್‌ ಕೊಲ್ಲಿ ಇಂದ್ರೇಶ್‌

Tags: 1200 rupees50 kg bagall-time recordArabica Parchment CoffeeBangaloreCoffee Coffee pricesinternational marketKodaguprice Rs 23500per bag.SLN Coffee Curing
Previous Post

ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ;ಅರವಿಂದ್‌ ಕೇಜ್ರಿವಾಲ್‌

Next Post

ಮಹಾ ಕುಂಭ ಮೇಳಕ್ಕೆ ರೈಲ್ವೇಯಿಂದ 13 ಸಾವಿರ ರೈಲುಗಳ ನಿಯೋಜನೆ

Related Posts

ನೀಟ್ ಹೋರಾಟದ ಯಶಸ್ಸಿನ ಬಳಿಕ ಕಾಕ್ರೋಚ್ ಜನತಾ ಪಾರ್ಟಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾ?
Top Story

ನೀಟ್ ಹೋರಾಟದ ಯಶಸ್ಸಿನ ಬಳಿಕ ಕಾಕ್ರೋಚ್ ಜನತಾ ಪಾರ್ಟಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾ?

by ಪ್ರತಿಧ್ವನಿ
July 25, 2026
0

ನವದೆಹಲಿ: ನೀಟ್-ಯುಜಿ (NEET-UG) ಪರೀಕ್ಷಾ ಅಕ್ರಮದ ವಿರುದ್ಧ 35 ದಿನಗಳ ಕಾಲ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಯಶಸ್ವಿಯಾಗಿ ಅಂತ್ಯಗೊಂಡಿದೆ. ಕೇಂದ್ರ ಶಿಕ್ಷಣ ಸಚಿವ...

Read moreDetails
ಧರ್ಮೇಂದ್ರ ಪ್ರಧಾನ್‌ ಖಾತೆಯ ಹೊಣೆ ರಾಜ್ಯದ ಪ್ರಭಾವಿ ನಾಯಕನ ಹೆಗಲಿಗೆ : ಬಿಜೆಪಿ ಕಟ್ಟಾಳು, ಆರ್‌ಎಸ್‌ಎಸ್‌ ಹಿನ್ನೆಲೆಯೇ ಇವರ ಮೂಲ. ..!

ಧರ್ಮೇಂದ್ರ ಪ್ರಧಾನ್‌ ಖಾತೆಯ ಹೊಣೆ ರಾಜ್ಯದ ಪ್ರಭಾವಿ ನಾಯಕನ ಹೆಗಲಿಗೆ : ಬಿಜೆಪಿ ಕಟ್ಟಾಳು, ಆರ್‌ಎಸ್‌ಎಸ್‌ ಹಿನ್ನೆಲೆಯೇ ಇವರ ಮೂಲ. ..!

July 25, 2026
ಪ್ರಧಾನ್ ರಾಜೀನಾಮೆಗೆ ಜೆ.ಪಿ. ನಡ್ಡಾ ಮೊದಲ ಪ್ರತಿಕ್ರಿಯೆ ಏನು ?

ಪ್ರಧಾನ್ ರಾಜೀನಾಮೆಗೆ ಜೆ.ಪಿ. ನಡ್ಡಾ ಮೊದಲ ಪ್ರತಿಕ್ರಿಯೆ ಏನು ?

July 25, 2026
ಪ್ರಧಾನ್ ರಾಜೀನಾಮೆಗೆ ಭಿನ್ನ ಪ್ರತಿಕ್ರಿಯೆ: ಕಿರಣ್ ಬೇಡಿ ಮತ್ತು ಖರ್ಗೆ ಹೇಳಿದ್ದೇನು ?

ಪ್ರಧಾನ್ ರಾಜೀನಾಮೆಗೆ ಭಿನ್ನ ಪ್ರತಿಕ್ರಿಯೆ: ಕಿರಣ್ ಬೇಡಿ ಮತ್ತು ಖರ್ಗೆ ಹೇಳಿದ್ದೇನು ?

July 25, 2026
ಶಿಕ್ಷಣ ಸಚಿವರ ರಾಜೀನಾಮೆ ಬಳಿಕ ಪ್ರಧಾನಿ ಮೊದಲ ಪೋಸ್ಟ್: ಮೋದಿ ಹೇಳಿದ್ದೇನು?

ಶಿಕ್ಷಣ ಸಚಿವರ ರಾಜೀನಾಮೆ ಬಳಿಕ ಪ್ರಧಾನಿ ಮೊದಲ ಪೋಸ್ಟ್: ಮೋದಿ ಹೇಳಿದ್ದೇನು?

July 25, 2026
Next Post

ಮಹಾ ಕುಂಭ ಮೇಳಕ್ಕೆ ರೈಲ್ವೇಯಿಂದ 13 ಸಾವಿರ ರೈಲುಗಳ ನಿಯೋಜನೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada