ರಾಜ್ಯ ಸರ್ಕಾರ ( State government ) ಅಂಗನವಾಡಿ ಕಾರ್ಯಕರ್ತೆಯರು ಬಳೆ ( bangles ) ತೋಡುವುದನ್ನು ನಿಷೇಧಿಸಿದೆ ಎಂಬ ಸುದ್ದಿ ಕಳೆದ ಎರಡು ದಿನಗಳಿಂದ ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ ಜೊತೆಗೆ ರಾಜ್ಯ ಸರ್ಕಾರವನ್ನ ಹಿಂದೂ ವಿರೋಧಿ ಸರ್ಕಾರ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ( Social media ) ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಈ ವಿಚಾರದ ಕುರಿತು ಸರಿಯಾದ ಮಾಹಿತಿಯನ್ನ ನೀಡಬೇಕಾದ ಮುಖ್ಯ ವಾಹಿನಿಯ ಸುದ್ದಿ ಸಂಸ್ಥೆಗಳು ಇದೇ ಸುಳ್ಳು ಸುದ್ದಿಯನ್ನ ( fake news ) ದೊಡ್ಡಮಟ್ಟದಲ್ಲಿ ಹಬ್ಬಲು ಪ್ರಾರಂಭ ಮಾಡಿವೆ. ಕನ್ನಡದ ಹೆಸರಾಂತ ನ್ಯೂಸ್ ಚಾನೆಲ್ ಗಳು (news channels ) ಕೂಡ ಈ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದು ಜನರ ದಾರಿ ತಪ್ಪಿಸುವಲ್ಲಿ ಯಶಸ್ವಿಯಾಗುತ್ತಿದೆ.

ಇನ್ನು ರಾಜ್ಯ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರು ಬಳೆ ತೊಡುವುದನ್ನು ನಿಷೇಧಿಸಿದೆ ಎಂಬ ಸುದ್ದಿ ಹಬ್ಬದ ಜನಸಾಮಾನ್ಯರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ( congress government ) ಛೀಮಾರಿ ಹಾಕಿದ್ದಾರೆ. ಸಾರ್ವಜನಿಕ ವಲಯದಲ್ಲಿ ಭಾರಿ ದೊಡ್ಡ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಇದೀಗ ರಾಜ್ಯ ಸರ್ಕಾರ ಈ ವಿಚಾರದ ಕುರಿತು ಸ್ಪಷ್ಟನೆ ನೀಡಿದೆ
ಅದರಲ್ಲೂ ಸ್ವತಹ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರೇ ಈ ಕುರಿತು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದು, ತಮ್ಮ ಟ್ವಿಟ್ ನಲ್ಲಿ “ಬಿಸಿಯೂಟದ ಕಾರ್ಯಕರ್ತೆಯರ ಬಳೆ ತೊಡುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಮಾರ್ಗ ಸೂಚಿಯನ್ನು ಪ್ರಕಟಿಸಿದೆ ಎನ್ನುವ ಸುಳ್ಳು ಸುದ್ದಿಯನ್ನು ವ್ಯಾಪಕವಾಗಿ ಹರಡಲಾಗುತ್ತಿದೆ. ವಾಸ್ತವದಲ್ಲಿ ಕೇಂದ್ರ ಸರ್ಕಾರ ಪೋಷಣ್ ಯೋಜನೆಗೆ ಸಂಬಂಧಿಸಿ ದಂತೆ ಮಾರ್ಗಸೂಚಿ ಹೊರಡಿಸಿ ಬಿಸಿಯುಟದ ಕಾರ್ಯಕರ್ತರು ಬಳೆ ತೋಡುವುದನ್ನು ನಿಷೇಧಿಸಿದೆ” ಎಂದು ಸ್ಪಷ್ಟಪಡಿಸಿದ್ದಾರೆ

ಈ ಕುರಿತು ನಮ್ಮ ಪ್ರತಿಧ್ವನಿ ತಂಡ ಫ್ಯಾಕ್ಟ್ ಚೆಕ್ ಮಾಡಿದ್ದು, ಪಿಎಂ ಪೋಷಣ್ ಗೈಡ್ಲೈನ್ಸ್ನ 141 ಪುಟಗಳಲ್ಲಿ 54ನೇ ಪುಟದಲ್ಲಿ ಐದನೇ ಮಾರ್ಗಸೂಚಿಯಲ್ಲಿ ನೈಲ್ ಪಾಲಿಶ್ ಅಥವಾ ಕೃತಕ ಉಗರುಗಳು ಧರಿಸುವಂತಿಲ್ಲ ಕೈಗಡಿಯಾರ ಉಂಗುರ ಆಭರಣ ಬಳೆಗಳನ್ನು ಅಡುಗೆಯ ಸಮಯದಲ್ಲಿ ಬಳಸುವಂತಿಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇದು ಅಧಿಕೃತವಾಗಿ ಕೇಂದ್ರ ಸರ್ಕಾರವೇ ಅಂಗನವಾಡಿ ಕಾರ್ಯಕರ್ತೆಯರು ಅಡುಗೆಯ ಸಮಯದಲ್ಲಿ ಬಳೆಗಳನ್ನು ತೊಡುವಂತಿಲ್ಲ ಎಂಬುದನ್ನ ಸ್ಪಷ್ಟಪಡಿಸುತ್ತಿದೆ ಆದರೆ ಇದನ್ನೇ ದುರ್ಬಳಕೆ ಮಾಡಿಕೊಂಡಿರುವ ಹಲವರು ರಾಜ್ಯ ಸರ್ಕಾರ ವಿರುದ್ಧ ಸುಳ್ಳು ಸುದ್ದಿಯನ್ನ ಹಬ್ಬಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ