ಏರ್ ಗನ್ ನಲ್ಲಿ ಶೂಟ್ ಮಾಡಿಕೊಂಡು 7 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಲ್ಲಿ ನಡೆದಿದೆ. 7 ವರ್ಷದ ಬಾಲಕ ವಿಷ್ಣು ಮೃತ ದುರ್ದೈವಿ. ಆಟವಾಡುವಾಗ ಅಚಾನಕ್ಕಾಗಿ ಏರ್ ಗನ್ ನಿಂದ ಫೈರ್ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಏರ್ ಗನ್ ಬಾಲ್ಸ್ ಬಿದ್ದು ಸಾವನ್ನಪ್ಪಿದ್ದಾನೆ ಬಾಲಕ. ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಏರ್ ಗನ್ ಬಾಲ್ಸ್ ಹೃದಯಕ್ಕೆ ಹೊಕ್ಕಿದ ಪರಿಣಾಮ ಸಾವನ್ನಪ್ಪಿದ್ದಾನೆ.
![](https://pratidhvani.com/wp-content/uploads/2024/04/alcoholic-tries-to-steal-for-a-drink-71940829-1024x768.jpg)
ತೋಟದಲ್ಲಿ ಮಂಗಗಳನ್ನ ಓಡಿಸಲು ಬಳಸುವ ಏರ್ ಗನ್ನಿಂದ ಬಾಲಕ ಫೈರ್ ಮಾಡಿದ್ದಾನೆ. ಪೋಷಕರು ಮನೆಯಲ್ಲಿ ಇದ್ದಾಗಲೇ ಈ ದುರ್ಘಟನೆ ನಡೆದಿದೆ. ಮನೆಯ ಮುಂದೆ ಏರ್ ಗನ್ ಜೊತೆ ಆಟವಾಡುವಾಗ ಅಚಾನಕ್ ಆಗಿ ತನ್ನೆಡೆಗೆ ಫೈರ್ ಮಾಡಿಕೊಂಡಿದ್ದಾನೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೋಷಕರು ನಿರ್ಲಕ್ಷ್ಯ ಮಾಡಿ, ಮಗುವಿನ ಕೈಗೆ ಏರ್ಗನ್ ಕೊಟ್ಟು ಪಶ್ಚಾತ್ತಾಪ ಪಡುವಂತಾಗಿದೆ.