ಭಾರತೀಯ ಮೂಲದ ನಾಸಾ (NASA) ಗಗನ ಯಾತ್ರಿ ಸುನಿತಾ ವಿಲಿಯಮ್ಸ್ (Sunitha williams) ಮತ್ತು ಬುಚ್ ವಿಲ್ನೋರ್ (buch wilmore) ಸ್ಪೇಸ್ನಲ್ಲಿ ಸಿಲುಕಿದ್ದು, ಅವರನ್ನು ಸುರಕ್ಷಿತವಾಗಿ ಭೂಮಿಗೆ ಕರೆತರುವ ಸರ್ವ ಪ್ರಯತ್ನಗಳು ನಡೆಯುತ್ತಿದ್ದು, ವಿಶ್ವದಾದ್ಯಂತ ಈ ಬಗ್ಗೆ ಕುತೂಹಲ ಮತ್ತು ಆತಂಕ ಹೆಚ್ಚಾಗಿದೆ. ಜೂನ್ 5ರಂದು ಸ್ಪೇಸ್ಗೆ (Space) ತೆರಳಿದ್ದ ಈ ಇಬ್ಬರು ಗಗನಯಾನಿಗಳು ಜೂನ್ 14ರಂದು ವಾಪಸ್ಸಾಗಬೇಕಿತ್ತು. ಆದ್ರೆ ತಾಂತ್ರಿಕ ಕಾರಣಗಳಿಂದಾಗಿ ಗಗನಯಾತ್ರಿಗಳು ಇಂಟರ್ನ್ಯಾಷಿನಲ್ ಸ್ಪೇಸ್ ಸ್ಟೇಷನ್ನಲ್ಲೇ (ISS) ಸಿಲುಕಿಕೊಂಡಿದ್ದಾರೆ.
![](https://pratidhvani.com/wp-content/uploads/2024/07/IMG_8521.jpeg)
ಸದ್ಯ ಈ ಘಟನೆಯ ಬೆನ್ನಲ್ಲೇ ಭಾರತೀಯ ಮೂಲದ ಮೊದಲ ಗಗನಯಾನಿ ಎನಿಸಿಕೊಂಡಿದ್ದ ಕಲ್ಪನಾ ಚಾವ್ಹಾರನ್ನ (kalpana chawla) ಭಾರತೀಯರು ನೆನಪಿಸಿಕೊಂಡಿದ್ದಾರೆ. ಇದೇ ರೀತಿ ಜನವರಿ 27, 2003 ರಲ್ಲಿ ಮಿಷನ್ STS-107 ನಿಮಿತ್ತ ಕೊಲಂಬಿಯಾ ಬಾಹ್ಯಾಕಾಶ ನೌಕೆಯಲ್ಲಿ ಸ್ಪೇಸ್ಗೆ ತೆರಳಿದ್ದ 7 ಗಗನಯಾನಿಗಳ ಪೈಕಿ ಕಲ್ಪನಾ ಚಾವ್ಹಾ ಕೂಡ ಒಬ್ಬರಾಗಿದ್ದರು.
15 ದಿನಗಳ ಕಾಲ ಬಾಹ್ಯಾಕಾಶದಲ್ಲಿದ್ದು ಸಾಕಷ್ಟು ಅಧ್ಯಯನ ನಡೆಸಿ, ನಂತರ ಫೆಬ್ರವರಿ 1ರಂದು ಕೊಲಂಬಿಯಾ ಬಾಹ್ಯಾಕಾಶ ನೌಕೆ(columbia space craft) ಭೂಮಿಯತ್ತ ಮರಳಲು ಆರಂಭಿಸಿತ್ತು. ಅಲ್ಲಿವರೆಗೂ ಯಾವುದೇ ತೊಂದರೆಗಳು ಕಂಡುಬಂದಿರಲಿಲ್ಲ. ಯಾವ ಸಣ್ಣ ತಾಂತ್ರಿಕ ದೋಷದ ಸುಳಿವೂ ಇರಲಿಲ್ಲ. ಆದ್ರೆ ಧಿಡೀರ್ ಎಂಬಂತೆ ಇಡೀ ವಿಶ್ವವೇ ಬೆಚ್ಚಿ ಬೀಳುವ ಘಟನೆ ಅಂದು ನಡೆದುಹೋಗಿತ್ತು.
![](https://pratidhvani.com/wp-content/uploads/2024/07/IMG_8520.jpeg)
ಅಂತರ ರಾಷ್ಟ್ರೀಯ ಸ್ಪೇಸ್ ಸ್ಟೇಷನ್ನಿಂದ ಹೊರಟಿದ್ದ ಕೊಲಂಬಿಯಾ ಬಾಹ್ಯಾಕಾಶ ನೌಕೆ ಭೂಮಿಯ ವಾತಾವರಣವನ್ನು ಪ್ರವೇಶಿಸುತ್ತಿದಂತೆ, ತನ್ನ ನಿಯಂತ್ರಣ ಕಳೆದುಕೊಂಡಿತ್ತು. ಇದ್ದಕ್ಕಿದ್ದ ಹಾಗೆ ರೆಡಾರ್ (Radar) ಸಂಪರ್ಕವೂ ಕಡಿತವಾಗಿತ್ತು. ಎಷ್ಟೇ ಪ್ರಯತ್ನ ಪಟ್ಟರೂ ಮತ್ತೆ ಸಂಪರ್ಕ ಸಾಧಿಸಲು ಸಾಧ್ಯವಾಗಲೇಯಿಲ್ಲ.
ಇದರ ಪರಿಣಾಮ, ಭೂಮಿಯ ವಾತಾವರಣ ಪ್ರವೇಶವಾಗುತ್ತಿದ್ದಂತೆ ಕ್ಷಣ ಮಾತ್ರದಲ್ಲೇ ನೌಕೆ ಸಂಪೂರ್ಣವಾಗಿ ಛಿದ್ರಗೊಂಡಿತ್ತು. ಆಗಸದಲ್ಲಿ ಬೆಂಕಿಯ ಉಂಡೆಗಳು ದಿಕ್ಕಾಪಾಲಾಗಿ ಹಾರಾಡಿದ್ದವು. ಈ ದುರಂತ ಕಲ್ಪನಾ ಚಾವ್ಹಾ ಸೇರಿದಂತೆ ಒಟ್ಟು 7 ಗಗನಯಾತ್ರಿಗಳ ಜೀವ ಕಸಿದಿತ್ತು. ಈ ಗಟನೆಯನ್ನು ಕಂಡು ಇಡೀ ವಿಶ್ವ ಬೆಚ್ಚಿಬಿದ್ದಿತ್ತು ಮತ್ತು ಮರುಕ ಪಟ್ಟಿತ್ತು. ಇಂದಿಗೂ ಬಾಹ್ಯಾಕಾಶ ಕ್ಷೇತ್ರದ ಅಧ್ಯಯನದಲ್ಲಿ ಇವರ ಪಾತ್ರ ಬಹಳ ದೊಡ್ಡದು.
ಭಾರತದ ಸಣ್ಣ ಹಳ್ಳಿಯೊಂದರಿಂದ ಜೀನ ಆರಂಭಿಸಿ ಬಾಹ್ಯಾಕಾಶದ ಆಚೆಗಿನವರೆಗೂ ಕಲ್ಪನಾ ಚಾವ್ಹಾ ಸಾಧನೆ ಮಾಡಿದ್ದರು. ಈ ಸಾದನೆ ಎಂದೆಂದಿಗೂ ಅವಿಸ್ಮರಣೀಯ ! ಇದೀಗ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ನೋರ್ ಸುರಕ್ಷಿತವಾಗಿ ವಾಪಾಸ್ಸಾಗಲಿ ಎಂದು ಪ್ರಾರ್ಥನೆಗಳು ಮೊಳಗುತ್ತಿದ್ದು, ಈ ಮಧ್ಯೆ ಕೊಲಂಬಿಯಾ ದುರಂತದ ಕಹಿ ನೆನಪುಗಳು ಭಾರತೀಯನ್ನ ಮತ್ತೊಮ್ಮೆ ಕಾಡಿದೆ.