• Home
  • About Us
  • ಕರ್ನಾಟಕ
Saturday, January 17, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಎರಡು ವರ್ಷದ ಬಳಿಕ ಮೈದಾನಕ್ಕಿಳಿದ ವಿದ್ಯಾರ್ಥಿಗಳು: ಮಕ್ಕಳಲ್ಲಿ ಮರುಕಳಿಸಿದ ಉತ್ಸಾಹ, ಕ್ರೀಡಾಸ್ಪೂರ್ತಿ..!

Any Mind by Any Mind
September 21, 2021
in ಕರ್ನಾಟಕ, ಕ್ರೀಡೆ
0
ಎರಡು ವರ್ಷದ ಬಳಿಕ ಮೈದಾನಕ್ಕಿಳಿದ ವಿದ್ಯಾರ್ಥಿಗಳು: ಮಕ್ಕಳಲ್ಲಿ  ಮರುಕಳಿಸಿದ ಉತ್ಸಾಹ, ಕ್ರೀಡಾಸ್ಪೂರ್ತಿ..!
Share on WhatsAppShare on FacebookShare on Telegram

ಒಂದೆಡೆ ಕೋವಿಡ್ ಭೀತಿ, ಇತ್ತ ಆನ್ ಲೈನ್ ಕ್ಲಾಸ್, ಮನೆಯಲ್ಲಿ ಆಟವಾಡದಂತೆ ನಿರ್ಭಂಧ, ಮತ್ತೊಂದೆಡೆ ಮೂರನೇ ಅಲೆ ಭಯ… ಇದರಿಂದ ಬೇಸತ್ತು ಮೈಜಿಡ್ಡುಗಂಟಿದಾಗಿತ್ತು ವಿದ್ಯಾರ್ಥಿಗಳಲ್ಲಿ. ಶಿಕ್ಷಕರನ್ನು ಕಾಡಿ ಬೇಡಿದ ನಂತರ ಕೊನೆಗೂ ಸಿಕ್ತು ಆಟಕ್ಕೆ ಜೈ ಎಂಬ ವರದಾನ.

ADVERTISEMENT

ಉತ್ತರ ಕರ್ನಾಟಕ ಹಲವು ಭಾಗಗಳಲ್ಲಿ ಈಗ ಶಿಕ್ಷಕರು ಕೋವಿಡ್ ರೂಲ್ಸ್ ಪಾಲಿಸುತ್ತ ಆಟವಾಡಲು ಅನುವು ನೀಡಿದ್ದಾರೆ. ಬ್ಯಾಡಮಿಂಟನ್, ಬಾಸಕ್ಎಟ್ ಬಾಲ್ ಹೀಗೆ ಹಲವು ಆಟಗಳನ್ನು ಗ್ಲೌಸ್ ಹಾಕಿಕೊಂಡು ಆಡಬಹುದು ಹಾಗೂ ನಂತರ ಸಾನಿಟೈಸರ್ ಕೈ ತೊಳೆದುಕೊಳ್ಳಬೇಕು…ಹೀಗೆ ಹಲವು ರೂಲ್ಸ್ ಪ್ರಕಾರ ಮಕ್ಕಳು ಈಗ ಆಟದಲ್ಲಿ ಸಂಭ್ರಮಿಸುತ್ತಿದ್ದಾರೆ ಹಲವು ಶಾಲೆಗಳಲ್ಲಿ. ಹಾಂ ಅಂದಹಾಗೆ ಈ ಆಟಗಳು ಪಾಸಿಟಿವಿಟಿ ಕಡಿಮೆ ಇರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾತ್ರ. ಹಲವರ ಆಕ್ಷೇಪ ಬರಬಹುದು ಎಂದು ಕೋವಿಡ್ ರೂಲ್ಸ್ ಪ್ರಕಾರ ಶಿಕ್ಷಕರು ಕೇರ್ ತೆಗೆದುಕೊಂಡು (ಅಂದರೆ ರಿಸ್ಕ್ ಅನ್ನಬಹುದು) ವಿದ್ಯಾರ್ಥಿಗಳಲ್ಲಿ ಮಂದಹಾಸ ಮೂಡಿಸಿದ್ದಾರೆ.  

ಕೋವಿಡ್‌ ಭೀತಿಯಿಂದ‌ ಎರಡು ವರ್ಷಗಳ ಬಳಿಕ ಶಾಲಾ ಮೈದಾಕ್ಕಿಳಿದ ಮಕ್ಕಳು  ಮನಸೋ ಇಚ್ಛೆ ಕುಣಿದು ಕುಪ್ಪಳಿಸುತ್ತಿದ್ದಾರೆ.  ಕ್ರೀಡಾಂಗಣದಲ್ಲಿ ನಗು ನಗುತಲೆ ಕೊಕ್ಕೋ, ವಾಲಿಬಾಲ್‌ ಕ್ರೀಡೆಗೆ ಕಂಬಗಳನ್ನು ನೆಡುತ್ತಿದ್ದಾರೆ ಹಾಗೂ ಕಬಡ್ಡಿ, ಶೆಟಲ್‌, ಬ್ಯಾಡ್ಮಿಂಟನ್‌ ಆಟಕ್ಕೆ ಗೆರೆ ಎಳೆಯುತ್ತಿದ್ದಾರೆ. ಇದರಿಂದಾಗಿ ಶಾಲಾ ಆವರಣಕ್ಕೆ ಹೊಸಕಳೆ ಬಂದಂತಾಗಿದೆ ಹಾಗೂ ಎಷ್ಟೋ ದಿನಗಳ ನಂತರ ಶಿಕ್ಷಕರ ಮುಖದಲ್ಲಿ ಮಂದಹಾಸ ಮೂಡಿದೆ.

ಆಟವಾಡಿ ಬಹಳ ದಿನಗಳಾಗಿವೆ ಮತ್ತೇ ಕೊಕ್ಕೋ, ಕಬಡ್ಡಿ, ರನ್ನಿಂಗ್‌ ಪ್ರ್ಯಾಕ್ಟಿಸ್‌ ಮಾಡಬೇಕು

ಪವಿತ್ರಾ, ವರ್ಷಿಣಿ, 9ನೇ ತರಗತಿ ಮಕ್ಕಳು

ಕೊರೊನಾ ಹಿನ್ನೆಲೆಯಲ್ಲಿ ಶಾಲೆಗಳ ಭೌತಿಕ ತರಗತಿಗಳನ್ನು ಬಂದ್‌ ಮಾಡಿ ಎರಡು ವರ್ಷ ಆನ್‌ಲೈನ್‌ ಶಿಕ್ಷಣ ನಡೆಸಲಾಗುತ್ತಿತ್ತು. ಇದೀಗ 3ನೇ ಅಲೆ ಮುಂಜಾಗ್ರತೆಯೊಂದಿಗೆ ಹಲವು ಗ್ರಾಮೀಣ ಭಾಗಗಳಲ್ಲಿ ಪ್ರೌಢಶಾಲೆ, ಪಿಯು ಕಾಲೇಜುಗಳು ಆರಂಭವಾಗಿರುವ ಕಾರಣ  ಮಕ್ಕಳು ಖುಷಿಯಿಂದ ತಮ್ಮ ಸ್ನೇಹಿತರೊಂದಿಗೆ ವಿಚಾರ ವಿನಿಮಯದಲ್ಲಿ ತೊಡಗುತ್ತಿದ್ದಾರೆ. ಪಾಠ ಹಾಗೂ ಆಟೋಟಗಳಲ್ಲಿ ಭಾಗಿಯಾಗಿಯಾಗುತ್ತಿದ್ದಾರೆ. ಮಕ್ಕಳಲ್ಲಿ ಮತೇ ಅದೇ ಉತ್ಸಾಹ, ಕ್ರೀಡಾಸ್ಪೂರ್ತಿ ಮರಕಳಿಸುತ್ತಿದೆ ಎಂದು ಗದಗ್ ನ ರೋಣ ತಾಲೂಕಿನ ಕೆಲವು ಶಿಕ್ಷಕರ ಅಭಿಪ್ರಾಯ.

          ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಶಿಕ್ಷಣ ತಲೆನೋವಾಗಿ ಪರಿಣಮಿಸಿತ್ತು. ಯಾವುದೇ ದೈಹಿಕ ಚಟುವಟಿಕೆಗಳು ಇಲ್ಲದೆ ಬಹುತೇಕ ಮಕ್ಕಳು ಖಿನ್ನತೆಗೆ ಒಳಗಾಗಿದ್ದರು. ಮೊಬೈಲ್‌ ಮೂಲಕ ಮಕ್ಕಳ ಭಾವನೆಗಳನ್ನು ಅರ್ಥೈಸಿಕೊಳ್ಳುವುದು ಕಷ್ಟವಾಗಿತ್ತು. ಇದರಿಂದ ಮಕ್ಕಳ ಆರೋಗ್ಯ ಮತ್ತು ಮನಸ್ಸಿನ ಮೇಲೆ ಪರಿಣಾಮ ಬೀರಿತ್ತು.  ಆದರೆ ಈಗ ಕೋವಿಡ್‌ ಮಾರ್ಗಸೂಚಿ ಅನ್ವಯ ಶಾಲೆಗಳು ಆರಂಭವಾಗಿರುವ ಕಾರಣ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ಸಮವಸ್ತ್ರ ಧರಿಸಿ ಮೈದಾನಕ್ಕೆ ಇಳಿಯುವ ಮುಗ್ದ ಮಕ್ಕಳನ್ನು ನೋಡುವುದೇ ನಮ್ಮ ಭಾಗ್ಯವಾಗಿದೆ

ಕೆ. ಪಿ. ರಾಥೋಡ್‌, ಮುಖ್ಯ ಶಿಕ್ಷಕ

ದೀರ್ಘಾವಧಿ ಬಳಿಕ ಬಂದ ಮಕ್ಕಳಿಗೆ, ಸಿಬ್ಬಂದಿಗಳಿಗೆ ಶಾಲೆಯ ಆಟದ ಮೈದಾನ ಹೊಸ ರೂಪದ ಅನುಭವ ನೀಡುತ್ತಿದೆ. ಪೂಜೆ ಮಾಡಿ ಕ್ರೀಡಾಂಗಣ ಸ್ವಚ್ಚಗೊಳಿಸಿರುವ ಮಕ್ಕಳು ಖುಷಿಯಲ್ಲಿದ್ದಾರೆ. ರಜೆ ಸಾಕಾಗಿದೆ ಆದಷ್ಟು ಬೇಗ ತಮಗಿಷ್ಟದ ಆಟವಾಡಬೇಕು ಅಂತಿದ್ದಾರೆ. ಅವರ ಮೊಗದಲ್ಲಿ ಹೊಸ ಹುರುಪಿನ ಮಂದಹಾಸ ಕಾಣುತ್ತಿದೆ.

Previous Post

ಕಲಬುರಗಿ ಪಾಲಿಕೆ; JDS ಜತೆ ಮೈತ್ರಿ ಮಾತುಕತೆಗೆ ಸಿದ್ದರಾಮಯ್ಯನೇ ಬರಲೀ ಎಂದು HDK ಪಟ್ಟು ಹಿಡಿದಿದ್ಯಾಕೆ?

Next Post

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು; ಮತ್ತೆ ಒಂದಾಗಲಿದೆಯಾ ಶಿವಸೇನೆ, ಬಿಜೆಪಿ?

Related Posts

25 ಲಕ್ಷ ರೂ.ಲಂಚ: ಅಬಕಾರಿ ಡಿಸಿಯೇ ಟ್ರ್ಯಾಪ್
ಇದೀಗ

25 ಲಕ್ಷ ರೂ.ಲಂಚ: ಅಬಕಾರಿ ಡಿಸಿಯೇ ಟ್ರ್ಯಾಪ್

by ಪ್ರತಿಧ್ವನಿ
January 17, 2026
0

ಬೆಂಗಳೂರು: ಅಬಕಾರಿ ಲೈಸೆನ್ಸ್ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಬಕಾರಿ ಡಿಸಿ, ಸೂಪರಿಂಟೆಂಡೆಂಟ್, ಡ್ರೈವರ್ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಲಕ್ಷ್ಮಿ ನಾರಾಯಣ್ ಎಂಬುವರು ತಮ್ಮ ಮಗನಿಗಾಗಿ ಬಾರ್...

Read moreDetails
BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

January 17, 2026
BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?

BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?

January 17, 2026
ಕಲ್ಟ್ ಸಿನಿಮಾದ ಫ್ಲೆಕ್ಸ್ ವಿಚಾರಕ್ಕೆ ಪೌರಾಯುಕ್ತೆಗೆ ನಿಂದನೆ: ಕ್ಷಮೆ ಕೇಳಿದ ನಟ ಝೈದ್ ಖಾನ್

ಕಲ್ಟ್ ಸಿನಿಮಾದ ಫ್ಲೆಕ್ಸ್ ವಿಚಾರಕ್ಕೆ ಪೌರಾಯುಕ್ತೆಗೆ ನಿಂದನೆ: ಕ್ಷಮೆ ಕೇಳಿದ ನಟ ಝೈದ್ ಖಾನ್

January 17, 2026
Mangaluru: ʼವಾಟ್ಸಾಪ್ ಯೂನಿವರ್ಸಿಟಿʼ ಸುಳ್ಳು ಸುದ್ದಿಗೆ ಹಿರಿಯರೇ ಬಲಿ: ಮಂಗಳೂರಿನಲ್ಲಿ ಆಗಿದ್ದೇನು..?

Mangaluru: ʼವಾಟ್ಸಾಪ್ ಯೂನಿವರ್ಸಿಟಿʼ ಸುಳ್ಳು ಸುದ್ದಿಗೆ ಹಿರಿಯರೇ ಬಲಿ: ಮಂಗಳೂರಿನಲ್ಲಿ ಆಗಿದ್ದೇನು..?

January 17, 2026
Next Post
ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು; ಮತ್ತೆ ಒಂದಾಗಲಿದೆಯಾ ಶಿವಸೇನೆ, ಬಿಜೆಪಿ?

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು; ಮತ್ತೆ ಒಂದಾಗಲಿದೆಯಾ ಶಿವಸೇನೆ, ಬಿಜೆಪಿ?

Please login to join discussion

Recent News

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ
Top Story

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

by ಪ್ರತಿಧ್ವನಿ
January 17, 2026
Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
Top Story

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

by ಪ್ರತಿಧ್ವನಿ
January 17, 2026
BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?
Top Story

BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?

by ಪ್ರತಿಧ್ವನಿ
January 17, 2026
ಕಲ್ಟ್ ಸಿನಿಮಾದ ಫ್ಲೆಕ್ಸ್ ವಿಚಾರಕ್ಕೆ ಪೌರಾಯುಕ್ತೆಗೆ ನಿಂದನೆ: ಕ್ಷಮೆ ಕೇಳಿದ ನಟ ಝೈದ್ ಖಾನ್
Top Story

ಕಲ್ಟ್ ಸಿನಿಮಾದ ಫ್ಲೆಕ್ಸ್ ವಿಚಾರಕ್ಕೆ ಪೌರಾಯುಕ್ತೆಗೆ ನಿಂದನೆ: ಕ್ಷಮೆ ಕೇಳಿದ ನಟ ಝೈದ್ ಖಾನ್

by ಪ್ರತಿಧ್ವನಿ
January 17, 2026
Mangaluru: ʼವಾಟ್ಸಾಪ್ ಯೂನಿವರ್ಸಿಟಿʼ ಸುಳ್ಳು ಸುದ್ದಿಗೆ ಹಿರಿಯರೇ ಬಲಿ: ಮಂಗಳೂರಿನಲ್ಲಿ ಆಗಿದ್ದೇನು..?
Top Story

Mangaluru: ʼವಾಟ್ಸಾಪ್ ಯೂನಿವರ್ಸಿಟಿʼ ಸುಳ್ಳು ಸುದ್ದಿಗೆ ಹಿರಿಯರೇ ಬಲಿ: ಮಂಗಳೂರಿನಲ್ಲಿ ಆಗಿದ್ದೇನು..?

by ಪ್ರತಿಧ್ವನಿ
January 17, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

25 ಲಕ್ಷ ರೂ.ಲಂಚ: ಅಬಕಾರಿ ಡಿಸಿಯೇ ಟ್ರ್ಯಾಪ್

25 ಲಕ್ಷ ರೂ.ಲಂಚ: ಅಬಕಾರಿ ಡಿಸಿಯೇ ಟ್ರ್ಯಾಪ್

January 17, 2026
BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

January 17, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada