ಒಂದೆಡೆ ಕೋವಿಡ್ ಭೀತಿ, ಇತ್ತ ಆನ್ ಲೈನ್ ಕ್ಲಾಸ್, ಮನೆಯಲ್ಲಿ ಆಟವಾಡದಂತೆ ನಿರ್ಭಂಧ, ಮತ್ತೊಂದೆಡೆ ಮೂರನೇ ಅಲೆ ಭಯ… ಇದರಿಂದ ಬೇಸತ್ತು ಮೈಜಿಡ್ಡುಗಂಟಿದಾಗಿತ್ತು ವಿದ್ಯಾರ್ಥಿಗಳಲ್ಲಿ. ಶಿಕ್ಷಕರನ್ನು ಕಾಡಿ ಬೇಡಿದ ನಂತರ ಕೊನೆಗೂ ಸಿಕ್ತು ಆಟಕ್ಕೆ ಜೈ ಎಂಬ ವರದಾನ.
ಉತ್ತರ ಕರ್ನಾಟಕ ಹಲವು ಭಾಗಗಳಲ್ಲಿ ಈಗ ಶಿಕ್ಷಕರು ಕೋವಿಡ್ ರೂಲ್ಸ್ ಪಾಲಿಸುತ್ತ ಆಟವಾಡಲು ಅನುವು ನೀಡಿದ್ದಾರೆ. ಬ್ಯಾಡಮಿಂಟನ್, ಬಾಸಕ್ಎಟ್ ಬಾಲ್ ಹೀಗೆ ಹಲವು ಆಟಗಳನ್ನು ಗ್ಲೌಸ್ ಹಾಕಿಕೊಂಡು ಆಡಬಹುದು ಹಾಗೂ ನಂತರ ಸಾನಿಟೈಸರ್ ಕೈ ತೊಳೆದುಕೊಳ್ಳಬೇಕು…ಹೀಗೆ ಹಲವು ರೂಲ್ಸ್ ಪ್ರಕಾರ ಮಕ್ಕಳು ಈಗ ಆಟದಲ್ಲಿ ಸಂಭ್ರಮಿಸುತ್ತಿದ್ದಾರೆ ಹಲವು ಶಾಲೆಗಳಲ್ಲಿ. ಹಾಂ ಅಂದಹಾಗೆ ಈ ಆಟಗಳು ಪಾಸಿಟಿವಿಟಿ ಕಡಿಮೆ ಇರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾತ್ರ. ಹಲವರ ಆಕ್ಷೇಪ ಬರಬಹುದು ಎಂದು ಕೋವಿಡ್ ರೂಲ್ಸ್ ಪ್ರಕಾರ ಶಿಕ್ಷಕರು ಕೇರ್ ತೆಗೆದುಕೊಂಡು (ಅಂದರೆ ರಿಸ್ಕ್ ಅನ್ನಬಹುದು) ವಿದ್ಯಾರ್ಥಿಗಳಲ್ಲಿ ಮಂದಹಾಸ ಮೂಡಿಸಿದ್ದಾರೆ.
ಕೋವಿಡ್ ಭೀತಿಯಿಂದ ಎರಡು ವರ್ಷಗಳ ಬಳಿಕ ಶಾಲಾ ಮೈದಾಕ್ಕಿಳಿದ ಮಕ್ಕಳು ಮನಸೋ ಇಚ್ಛೆ ಕುಣಿದು ಕುಪ್ಪಳಿಸುತ್ತಿದ್ದಾರೆ. ಕ್ರೀಡಾಂಗಣದಲ್ಲಿ ನಗು ನಗುತಲೆ ಕೊಕ್ಕೋ, ವಾಲಿಬಾಲ್ ಕ್ರೀಡೆಗೆ ಕಂಬಗಳನ್ನು ನೆಡುತ್ತಿದ್ದಾರೆ ಹಾಗೂ ಕಬಡ್ಡಿ, ಶೆಟಲ್, ಬ್ಯಾಡ್ಮಿಂಟನ್ ಆಟಕ್ಕೆ ಗೆರೆ ಎಳೆಯುತ್ತಿದ್ದಾರೆ. ಇದರಿಂದಾಗಿ ಶಾಲಾ ಆವರಣಕ್ಕೆ ಹೊಸಕಳೆ ಬಂದಂತಾಗಿದೆ ಹಾಗೂ ಎಷ್ಟೋ ದಿನಗಳ ನಂತರ ಶಿಕ್ಷಕರ ಮುಖದಲ್ಲಿ ಮಂದಹಾಸ ಮೂಡಿದೆ.
ಆಟವಾಡಿ ಬಹಳ ದಿನಗಳಾಗಿವೆ ಮತ್ತೇ ಕೊಕ್ಕೋ, ಕಬಡ್ಡಿ, ರನ್ನಿಂಗ್ ಪ್ರ್ಯಾಕ್ಟಿಸ್ ಮಾಡಬೇಕು
ಪವಿತ್ರಾ, ವರ್ಷಿಣಿ, 9ನೇ ತರಗತಿ ಮಕ್ಕಳು
ಕೊರೊನಾ ಹಿನ್ನೆಲೆಯಲ್ಲಿ ಶಾಲೆಗಳ ಭೌತಿಕ ತರಗತಿಗಳನ್ನು ಬಂದ್ ಮಾಡಿ ಎರಡು ವರ್ಷ ಆನ್ಲೈನ್ ಶಿಕ್ಷಣ ನಡೆಸಲಾಗುತ್ತಿತ್ತು. ಇದೀಗ 3ನೇ ಅಲೆ ಮುಂಜಾಗ್ರತೆಯೊಂದಿಗೆ ಹಲವು ಗ್ರಾಮೀಣ ಭಾಗಗಳಲ್ಲಿ ಪ್ರೌಢಶಾಲೆ, ಪಿಯು ಕಾಲೇಜುಗಳು ಆರಂಭವಾಗಿರುವ ಕಾರಣ ಮಕ್ಕಳು ಖುಷಿಯಿಂದ ತಮ್ಮ ಸ್ನೇಹಿತರೊಂದಿಗೆ ವಿಚಾರ ವಿನಿಮಯದಲ್ಲಿ ತೊಡಗುತ್ತಿದ್ದಾರೆ. ಪಾಠ ಹಾಗೂ ಆಟೋಟಗಳಲ್ಲಿ ಭಾಗಿಯಾಗಿಯಾಗುತ್ತಿದ್ದಾರೆ. ಮಕ್ಕಳಲ್ಲಿ ಮತೇ ಅದೇ ಉತ್ಸಾಹ, ಕ್ರೀಡಾಸ್ಪೂರ್ತಿ ಮರಕಳಿಸುತ್ತಿದೆ ಎಂದು ಗದಗ್ ನ ರೋಣ ತಾಲೂಕಿನ ಕೆಲವು ಶಿಕ್ಷಕರ ಅಭಿಪ್ರಾಯ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣ ತಲೆನೋವಾಗಿ ಪರಿಣಮಿಸಿತ್ತು. ಯಾವುದೇ ದೈಹಿಕ ಚಟುವಟಿಕೆಗಳು ಇಲ್ಲದೆ ಬಹುತೇಕ ಮಕ್ಕಳು ಖಿನ್ನತೆಗೆ ಒಳಗಾಗಿದ್ದರು. ಮೊಬೈಲ್ ಮೂಲಕ ಮಕ್ಕಳ ಭಾವನೆಗಳನ್ನು ಅರ್ಥೈಸಿಕೊಳ್ಳುವುದು ಕಷ್ಟವಾಗಿತ್ತು. ಇದರಿಂದ ಮಕ್ಕಳ ಆರೋಗ್ಯ ಮತ್ತು ಮನಸ್ಸಿನ ಮೇಲೆ ಪರಿಣಾಮ ಬೀರಿತ್ತು. ಆದರೆ ಈಗ ಕೋವಿಡ್ ಮಾರ್ಗಸೂಚಿ ಅನ್ವಯ ಶಾಲೆಗಳು ಆರಂಭವಾಗಿರುವ ಕಾರಣ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ಸಮವಸ್ತ್ರ ಧರಿಸಿ ಮೈದಾನಕ್ಕೆ ಇಳಿಯುವ ಮುಗ್ದ ಮಕ್ಕಳನ್ನು ನೋಡುವುದೇ ನಮ್ಮ ಭಾಗ್ಯವಾಗಿದೆ
ಕೆ. ಪಿ. ರಾಥೋಡ್, ಮುಖ್ಯ ಶಿಕ್ಷಕ
ದೀರ್ಘಾವಧಿ ಬಳಿಕ ಬಂದ ಮಕ್ಕಳಿಗೆ, ಸಿಬ್ಬಂದಿಗಳಿಗೆ ಶಾಲೆಯ ಆಟದ ಮೈದಾನ ಹೊಸ ರೂಪದ ಅನುಭವ ನೀಡುತ್ತಿದೆ. ಪೂಜೆ ಮಾಡಿ ಕ್ರೀಡಾಂಗಣ ಸ್ವಚ್ಚಗೊಳಿಸಿರುವ ಮಕ್ಕಳು ಖುಷಿಯಲ್ಲಿದ್ದಾರೆ. ರಜೆ ಸಾಕಾಗಿದೆ ಆದಷ್ಟು ಬೇಗ ತಮಗಿಷ್ಟದ ಆಟವಾಡಬೇಕು ಅಂತಿದ್ದಾರೆ. ಅವರ ಮೊಗದಲ್ಲಿ ಹೊಸ ಹುರುಪಿನ ಮಂದಹಾಸ ಕಾಣುತ್ತಿದೆ.