• Home
  • About Us
  • ಕರ್ನಾಟಕ
Saturday, January 17, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಸಂಕ್ರಾಂತಿಯ ಬಳಿಕ ಸಂಪುಟ ಪುನರ್ ರಚನೆ: ಆರಗ ಖಾತೆಗೆ, ಈಶ್ವರಪ್ಪ ಸ್ಥಾನಕ್ಕೆ ಕೋಕ್?

Shivakumar by Shivakumar
January 2, 2022
in Top Story, ರಾಜಕೀಯ
0
ಸಂಕ್ರಾಂತಿಯ ಬಳಿಕ ಸಂಪುಟ ಪುನರ್ ರಚನೆ: ಆರಗ ಖಾತೆಗೆ, ಈಶ್ವರಪ್ಪ ಸ್ಥಾನಕ್ಕೆ ಕೋಕ್?
Share on WhatsAppShare on FacebookShare on Telegram

ಸಂಕ್ರಾಂತಿ ಸಮೀಪಿಸುತ್ತಿದೆ. ಬದಲಾವಣೆಯ ಗಾಳಿ ಬೀಸತೊಡಗಿದೆ. ಈ ಮನ್ವಂತರದ ಪರ್ವಕ್ಕೆ ರಾಜ್ಯ ರಾಜಕಾರಣ ಕೂಡ ಹೊರತಾಗಿಲ್ಲ!

ADVERTISEMENT

ಹೌದು, ರಾಜ್ಯದ ಬಿಜೆಪಿ ಸರ್ಕಾರದ ನಾಯಕತ್ವ ಬದಲಾವಣೆಯ ಚರ್ಚೆಯನ್ನು ಇತ್ತೀಚಿನ ಹುಬ್ಬಳ್ಳಿ ಕಾರ್ಯಕಾರಿಣಿ ಕೆಲಮಟ್ಟಿಗೆ ಬದಿಗೆ ಸರಿಸಲು ಯಶಸ್ವಿಯಾಗಿದ್ದರೂ, ಪಕ್ಷದೊಳಗಿನ ಅಸಮಾಧಾನ ಮತ್ತು ಅಧಿಕಾರದ ಪೈಪೋಟಿಯನ್ನು ತಹಬದಿಗೆ ತರಲು ವಿಫಲವಾಗಿದೆ. ಕಾರ್ಯಕಾರಿಣಿಯ ವೇದಿಕೆಯ ಮಗ್ಗುಲಲ್ಲೇ ಸಚಿವ ಸ್ಥಾನ ಆಕಾಂಕ್ಷಿಗಳು ಮತ್ತು ಹಿರಿಯ ನಾಯಕರೇ ಸಂಪುಟ ಪುನರ್ ರಚನೆಯ ಬಗ್ಗೆ ಬಹಿರಂಗ ಹೇಳಿಕೆ ನೀಡುವ ಮೂಲಕ ಈ ಅಂಶವನ್ನು ಸಾಕ್ಷೀಕರಿಸಿದ್ದಾರೆ.

ಸಂಪುಟದಲ್ಲಿರುವ ಹಿರಿಯರು, ಅದರಲ್ಲೂ ಈಗಾಗಲೇ ಮೂರು ನಾಲ್ಕು ಬಾರಿ ಸಚಿವರಾಗಿ ಆಯಕಟ್ಟಿನ ಸ್ಥಾನಮಾನಗಳನ್ನು ಅನುಭವಿಸಿರುವವರು ಚುನಾವಣೆ ಹೊಸ್ತಿಲಲ್ಲಿ ಅಧಿಕಾರ ತ್ಯಜಿಸಿ ಪಕ್ಷ ಸಂಘಟನೆಗೆ ಹೋಗಬೇಕು ಮತ್ತು ಅದೇ ಹೊತ್ತಿಗೆ ಪಕ್ಷದ ಹೊಸ ಮುಖಗಳಿಗೆ, ಅರ್ಹರಿಗೆ ಸಚಿವ ಸಂಪುಟದಲ್ಲಿ ಅವಕಾಶ ಮಾಡಿಕೊಡಲು ಅನುವು ಮಾಡಿಕೊಡಬೇಕು ಎಂದು ಸ್ವತಃ ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಕಾರ್ಯಕಾರಿಣಿಯ ಮಗ್ಗುಲಲ್ಲೇ ಬಹಿರಂಗ ಹೇಳಿಕೆ ನೀಡಿದ್ದರು. ಅದಾದ ಬೆನ್ನಲ್ಲೇ ಹಿರಿಯ ಸಚಿವ ಮತ್ತು ಹಲವು ಬಾರಿ ಸಚಿವರಾಗಿ ಆಯಕಟ್ಟಿನ ಖಾತೆಗಳನ್ನು ಪಡೆದಿರುವ ಕೆ ಎಸ್ ಈಶ್ವರಪ್ಪ ಪ್ರತಿಕ್ರಿಯೆ ನೀಡಿ, ಪಕ್ಷ ಹೇಳಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಘಟನೆಯ ಕೆಲಸ ಮಾಡಲು ತಾವು ಸದಾ ಮುಂದಿರುವುದಾಗಿ ಹೇಳಿದ್ದರು.

ಹೀಗೆ ಪಕ್ಷದ ಹಿರಿಯ ನಾಯಕರ ನಡುವೆ ಹಿರಿಯರು ಸಚಿವ ಸಂಪುಟದಿಂದ ಹೊರನಡೆಯುವುದು ಮತ್ತು ಹೊಸಬರಿಗೆ ಅವಕಾಶ ಕೊಡುವುದರ ಬಗ್ಗೆ ಬಹಿರಂಗ ಹೇಳಿಕೆ-ಪ್ರತಿಹೇಳಿಕೆಗಳು ಬಿರುಸಾಗಿರುವ ಹೊತ್ತಿನಲ್ಲೇ ಬಿಜೆಪಿಯ ರೆಬಲ್ ಸ್ಟಾರ್ ಎಂದೇ ಜನಪ್ರಿಯರಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಒಂದು ಹೇಳಿಕೆ ನೀಡಿ, ಸಚಿವ ಸಂಪುಟ ಪುನರ್ ರಚನೆಯ ಕುರಿತ ಚರ್ಚೆಗಳನ್ನು ಇನ್ನಷ್ಟು ಸ್ಪಷ್ಟಗೊಳಿಸಿದರು.

“ ಸಂಕ್ರಾಂತಿಯ ಬಳಿಕ ಪಕ್ಷ ಮತ್ತು ಸರ್ಕಾರದಲ್ಲಿ ಬದಲಾವಣೆಯಾಗಲಿದೆ. ಸಚಿವ ಸಂಪುಟದಲ್ಲಿ ಮಾತ್ರವಲ್ಲದೆ, ಪಕ್ಷದ ಸಂಘಟನೆಯಲ್ಲೂ ಬದಲಾವಣೆಯಾಗಲಿದೆ. ಆ ಮೂಲಕ ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಬಲಪಡಿಸುವುದು ಮೋದಿಯವರ ಯೋಜನೆ. ರಾಜ್ಯದ ಎಲ್ಲಾ ಬೆಳವಣಿಗೆಗಳನ್ನೂ ಪ್ರಧಾನಮಂತ್ರಿಗಳ ಗುಪ್ತಚರ ಇಲಾಖೆ ಗಮನಿಸುತ್ತಿದೆ. ಹಾಗಾಗಿ ಆ ಎಲ್ಲಾ ಮಾಹಿತಿಯ ಹಿನ್ನೆಲೆಯಲ್ಲೇ ಸಂಕ್ರಾಂತಿಯ ಬಳಿಕ ಮೋದಿ ದೊಡ್ಡ ನಿರ್ಧಾರ ಕೈಗೊಳ್ಳಲಿದ್ದಾರೆ. ಬಿಜೆಪಿಯಲ್ಲಿ ಮತ್ತು ಸರ್ಕಾರದಲ್ಲಿ ಮೋದಿ ತರುವ ಬದಲಾವಣೆಯನ್ನು ಕಾದುನೋಡಿ ಎಂದು ಯತ್ನಾಳ್ ಹೇಳಿದ್ದಾರೆ.

ಅಷ್ಟೇ ಅಲ್ಲ; ಗೃಹ ಸಚಿವರ ಬಗ್ಗೆಯೂ ಪ್ರಸ್ತಾಪಿಸಿರುವ ಯತ್ನಾಳ್, “ಗಟ್ಸ್ ಇರೋದು ಗೃಹ ಸಚಿವರಾಗಬೇಕು. ನಮ್ಮಂಥವರ ಕೈಯಲ್ಲಿ ಗೃಹ ಖಾತೆ ಕೊಟ್ರೆ, ಬರೋಬ್ಬರಿ ಮಾಡಿ ತೋರಿಸ್ತೀವಿ. ದೇಶ ವಿರೋಧಿ ಚಟುವಟಿಕೆ ಮಾಡೋರಿಗೆ ಸರಿಯಾಗಿ ಬುದ್ಧಿಕಲಿಸ್ತೀವಿ. ಆದರೆ, ಈಗಿನ ಗೃಹ ಸಚಿವರು ಪ್ರಾಮಾಣಿಕರು, ಒಳ್ಳೆಯವರೇನೋ ಸರಿ. ಆದರೆ, ಗಡುಸು ಇಲ್ಲ. ಅವರೇನಿದ್ದರೂ ಅರಣ್ಯ, ಕಂದಾಯ, ಗ್ರಾಮೀಣಾಭಿವೃದ್ಧಿಯಂತಹ ಖಾತೆಗೇ ಸರಿ” ಎಂದಿದ್ದಾರೆ.

ಎಂ ಪಿ ರೇಣುಕಾಚಾರ್ಯ ಹೇಳಿಕೆಯ ಬೆನ್ನಲ್ಲೇ ಮಲೆನಾಡಿನ ಇಬ್ಬರು ಸಚಿವರ ಪೈಕಿ ಒಬ್ಬರಿಗೆ ಕೋಕ್ ಸಿಗಬಹುದು. ಅದರಲ್ಲೂ ಹಲವು ಬಾರಿ ಸಚಿವರಾಗಿ ಅಧಿಕಾರ ಅನುಭವಿಸಿರುವ ನಾಯಕರನ್ನೇ ಸಂಪುಟದಿಂದ ಹೊರ ಕಳಿಸಿ, ಪಕ್ಷ ಸಂಘಟನೆಗೆ ಹಚ್ಚಬಹುದು ಎಂಬ ಚರ್ಚೆಗಳು ಆರಂಭವಾಗಿದ್ದವು. ಇದೀಗ ಯತ್ನಾಳ್ ಹೇಳಿಕೆ, ಮಲೆನಾಡಿನ ಇಬ್ಬರು ಸಚಿವರ ಪೈಕಿ ಒಬ್ಬರು ಸಂಪುಟದಿಂದ ಹೊರಹೋಗುವುದು ಮಾತ್ರವಲ್ಲ; ಮತ್ತೊಬ್ಬರ ಖಾತೆ ಬದಲಾವಣೆಯೂ ಆಗಬಹುದು ಎಂಬ ಸೂಚನೆಯನ್ನು ನೀಡಿದೆ.

ಅಂದರೆ, ಮಲೆನಾಡು ಭಾಗದಿಂದ ಸಚಿವರಾಗಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಸಂಪುಟದಿಂದ ಹೊರಹೋಗುತ್ತಾರೆ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಖಾತೆ ಬದಲಾವಣೆಯಾಗಲಿದೆ ಎಂಬುದು ಎಂ ಪಿ ರೇಣುಕಾಚಾರ್ಯ ಮತ್ತು ಯತ್ನಾಳ್ ಹೇಳಿಕೆಗಳ ಸೂಚ್ಯ ಸಾರಾಂಶ.

ಇಬ್ಬರೂ ಬಿಜೆಪಿಗಿಂತ ಆರ್ ಎಸ್ ಎಸ್ ಗೆ ಹೆಚ್ಚು ನಿಷ್ಠರು ಮತ್ತು ಸಂಘದ ಆಣತಿಯನ್ನು ಚಾಚೂ ತಪ್ಪದೆ ಪಾಲಿಸುವವರು. ಹಾಗಿದ್ದರೂ ಈ ಇಬ್ಬರ ಪಾಲಿಗೆ ಮುಳುವಾಗಿದ್ದು ಯಾವುದು? ಯಾವ ಕಾರಣಕ್ಕೆ ಇವರನ್ನು ಸ್ಥಾನಪಲ್ಲಟಗೊಳಿಸಲಾಗುತ್ತಿದೆ? ಯಾವ ಕಾರಣಕ್ಕೆ ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆಯೇ? ಎಂಬುದು ಕುತೂಹಲಕಾರಿ. ಅದರಲ್ಲೂ ಮುಖ್ಯವಾಗಿ ಮೂರು ಬಾರಿ ಗೆದ್ದರೂ ಸಚಿವ ಸ್ಥಾನ ವಂಚಿತರಾಗಿ ಸಾಮಾನ್ಯ ಶಾಸಕರಾಗಿಯೇ ಇದ್ದ ಆರಗ ಜ್ಞಾನೇಂದ್ರ ಅವರನ್ನು ಬೊಮ್ಮಾಯಿ ಸಂಪುಟದಲ್ಲಿ ಏಕಾಏಕಿ ಗೃಹ ಸಚಿವಕ್ಕೆ ಏರಿಸಿದ್ದೇ ಆರ್ ಎಸ್ ಎಸ್. ಸಂಘದ ಆದೇಶದಂತೆಯೇ ಅವರಿಗೆ ದಿಢೀರನೇ ಗೃಹ ಖಾತೆ ನೀಡಲಾಗಿತ್ತು. ಹಾಗಿದ್ದರೂ ಆರು ತಿಂಗಳಲ್ಲೇ ಸಂಘ ಆರಗ ವಿಷಯದಲ್ಲಿ ಭ್ರಮನಿರಸನಗೊಂಡಿತೆ? ಎಂಬುದು ಪ್ರಶ್ನೆ.

ಒಟ್ಟಾರೆ, ಸಂಕ್ರಾಂತಿಗೆ ಬದಲಾವಣೆ ನಿಶ್ಚಿತ ಎಂಬ ಮಾತು ಕೇಳಿಬರುತ್ತಿದ್ದು, ಮುಖ್ಯವಾಗಿ ಗೃಹ ಮತ್ತು ಗ್ರಾಮೀಣಾಭಿವೃದ್ಧಿಯಂತಹ ಆಯಕಟ್ಟಿನ ಖಾತೆಗಳನ್ನು ಹೊಂದಿರುವ ಆರ್ ಎಸ್ ಎಸ್ ಆಪ್ತ ಸಚಿವರಿಬ್ಬರ ಅಧಿಕಾರಕ್ಕೆ ಕುತ್ತು ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ, ಈ ಇಬ್ಬರೂ ನಾಯಕರ ವಿಷಯದಲ್ಲಿ ಆರ್ ಎಸ್ ಎಸ್ ಲೆಕ್ಕಾಚಾರಗಳು ತಪ್ಪಿದ್ದೆಲ್ಲಿ ಎಂಬುದು ಮಾತ್ರ ನಿಗೂಢವಾಗಿಯೇ ಉಳಿಯಲಿರುವ ಪ್ರಶ್ನೆ!
Tags: ಆರಗ ಜ್ಞಾನೇಂದ್ರಆರ್ ಎಸ್ ಎಸ್ಎಂ ಪಿ ರೇಣುಕಾಚಾರ್ಯಕೆ ಎಸ್ ಈಶ್ವರಪ್ಪಬಸನಗೌಡ ಪಾಟೀಲ್ ಯತ್ನಾಳ್ಬಸವರಾಜ ಬೊಮ್ಮಾಯಿಬಿಜೆಪಿಶಿವಮೊಗ್ಗಸಂಪುಟ ಪುನರ್ ರಚನೆ
Previous Post

ವ್ಯವಸ್ಥೆಯ ಕ್ರೌರ್ಯದೊಂದಿಗೆ ಅನಾವರಣಗೊಂಡ ವರ್ಷ ಕೊನೆಯಾಗಿದ್ದು ಮಾತ್ರ ಹಿಂಸಾಕಾಂಡದ ಕರೆಯೊಡನೆ!

Next Post

ಪ್ರೇಮಿಗಳ ದಿನದಂದು ಪ್ರೇಮಂ ಪೂಜ್ಯಂ 2 ; ಪ್ರೇಮ್ ಹೊಸ ಚಿತ್ರಕ್ಕೆ ಫೆಬ್ರವರಿ 14ಕ್ಕೆ ಚಾಲನೆ

Related Posts

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ
Top Story

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

by ಪ್ರತಿಧ್ವನಿ
January 17, 2026
0

ಬಿಗ್‌ ಬಾಸ್‌ ಕನ್ನಡ ಸೀಸನ್‌ 12(Bigg Boss Kannada 12) ಕಾರ್ಯಕ್ರಮ ಪ್ರಾರಂಭವಾದ ದಿನದಿಂದಲೇ ಗಿಲ್ಲಿ ನಟ(Gilli Nata) ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದಾರೆ. ತಮ್ಮ...

Read moreDetails
Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

January 17, 2026
BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?

BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?

January 17, 2026
ಕಲ್ಟ್ ಸಿನಿಮಾದ ಫ್ಲೆಕ್ಸ್ ವಿಚಾರಕ್ಕೆ ಪೌರಾಯುಕ್ತೆಗೆ ನಿಂದನೆ: ಕ್ಷಮೆ ಕೇಳಿದ ನಟ ಝೈದ್ ಖಾನ್

ಕಲ್ಟ್ ಸಿನಿಮಾದ ಫ್ಲೆಕ್ಸ್ ವಿಚಾರಕ್ಕೆ ಪೌರಾಯುಕ್ತೆಗೆ ನಿಂದನೆ: ಕ್ಷಮೆ ಕೇಳಿದ ನಟ ಝೈದ್ ಖಾನ್

January 17, 2026
Mangaluru: ʼವಾಟ್ಸಾಪ್ ಯೂನಿವರ್ಸಿಟಿʼ ಸುಳ್ಳು ಸುದ್ದಿಗೆ ಹಿರಿಯರೇ ಬಲಿ: ಮಂಗಳೂರಿನಲ್ಲಿ ಆಗಿದ್ದೇನು..?

Mangaluru: ʼವಾಟ್ಸಾಪ್ ಯೂನಿವರ್ಸಿಟಿʼ ಸುಳ್ಳು ಸುದ್ದಿಗೆ ಹಿರಿಯರೇ ಬಲಿ: ಮಂಗಳೂರಿನಲ್ಲಿ ಆಗಿದ್ದೇನು..?

January 17, 2026
Next Post
ಪ್ರೇಮಿಗಳ ದಿನದಂದು ಪ್ರೇಮಂ ಪೂಜ್ಯಂ 2 ; ಪ್ರೇಮ್ ಹೊಸ ಚಿತ್ರಕ್ಕೆ ಫೆಬ್ರವರಿ 14ಕ್ಕೆ ಚಾಲನೆ

ಪ್ರೇಮಿಗಳ ದಿನದಂದು ಪ್ರೇಮಂ ಪೂಜ್ಯಂ 2 ; ಪ್ರೇಮ್ ಹೊಸ ಚಿತ್ರಕ್ಕೆ ಫೆಬ್ರವರಿ 14ಕ್ಕೆ ಚಾಲನೆ

Please login to join discussion

Recent News

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ
Top Story

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

by ಪ್ರತಿಧ್ವನಿ
January 17, 2026
Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
Top Story

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

by ಪ್ರತಿಧ್ವನಿ
January 17, 2026
BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?
Top Story

BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?

by ಪ್ರತಿಧ್ವನಿ
January 17, 2026
ಕಲ್ಟ್ ಸಿನಿಮಾದ ಫ್ಲೆಕ್ಸ್ ವಿಚಾರಕ್ಕೆ ಪೌರಾಯುಕ್ತೆಗೆ ನಿಂದನೆ: ಕ್ಷಮೆ ಕೇಳಿದ ನಟ ಝೈದ್ ಖಾನ್
Top Story

ಕಲ್ಟ್ ಸಿನಿಮಾದ ಫ್ಲೆಕ್ಸ್ ವಿಚಾರಕ್ಕೆ ಪೌರಾಯುಕ್ತೆಗೆ ನಿಂದನೆ: ಕ್ಷಮೆ ಕೇಳಿದ ನಟ ಝೈದ್ ಖಾನ್

by ಪ್ರತಿಧ್ವನಿ
January 17, 2026
Mangaluru: ʼವಾಟ್ಸಾಪ್ ಯೂನಿವರ್ಸಿಟಿʼ ಸುಳ್ಳು ಸುದ್ದಿಗೆ ಹಿರಿಯರೇ ಬಲಿ: ಮಂಗಳೂರಿನಲ್ಲಿ ಆಗಿದ್ದೇನು..?
Top Story

Mangaluru: ʼವಾಟ್ಸಾಪ್ ಯೂನಿವರ್ಸಿಟಿʼ ಸುಳ್ಳು ಸುದ್ದಿಗೆ ಹಿರಿಯರೇ ಬಲಿ: ಮಂಗಳೂರಿನಲ್ಲಿ ಆಗಿದ್ದೇನು..?

by ಪ್ರತಿಧ್ವನಿ
January 17, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

25 ಲಕ್ಷ ರೂ.ಲಂಚ: ಅಬಕಾರಿ ಡಿಸಿಯೇ ಟ್ರ್ಯಾಪ್

25 ಲಕ್ಷ ರೂ.ಲಂಚ: ಅಬಕಾರಿ ಡಿಸಿಯೇ ಟ್ರ್ಯಾಪ್

January 17, 2026
BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

January 17, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada