ಬೆಳಗಾವಿ: ಇಲ್ಲಿಯ ಸ್ವಾಮಿ ವಿವೇಕಾನಂದ ದತ್ತು ಸ್ವೀಕಾರ ಕೇಂದ್ರದ ಅಭಿರಕ್ಷಣೆಯಲ್ಲಿ ಇದ್ದ ಮಗುವನ್ನು CARA ನಿಯಮಗಳಂತೆ ಆಯ್ಕೆಯಾದ ದಂಪತಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್(Lakshmihebbalkar)ಶನಿವಾರ ಹಸ್ತಾಂತರಿಸಿದರು.
![](https://pratidhvani.com/wp-content/uploads/2024/02/IMG-20240203-WA0145-1024x731.webp)
ಕೇರಳ ರಾಜ್ಯದ ದತ್ತು ಪೋಷಕರಿಗೆ ಮೂರುವರೆ ತಿಂಗಳ ಗಂಡು ಮಗುವನ್ನು ಹಸ್ತಾಂತರಿಸಿದ ಸಚಿವರು, ಮಗುವನ್ನು ಅತ್ಯಂತ ಕಾಳಜಿಯಿಂದ ಸಾಕಿ ಸಲಹುವಂತೆ ವಿನಂತಿಸಿದರು.ಮಗು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಾಮಿ ವಿವೇಕಾನಂದ ದತ್ತು ಸ್ವೀಕಾರ ಕೇಂದ್ರದ ಅಭಿರಕ್ಷಣೆಯಲ್ಲಿ ಇರಿಸಲಾಗಿತ್ತು.
![](https://pratidhvani.com/wp-content/uploads/2024/02/IMG-20240203-WA0148-1024x576.webp)
ನಿಯಮಾವಳಿಯಂತೆ ಕಾನೂನು ಪ್ರಕ್ರಿಯೆಗಳನ್ನು ಪೂರೈಸಿ ಮಗುವನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ
ಮಹಾಂತೇಶ್ ಭಜಂತ್ರಿ, ಸಚಿವರ ಮಾಧ್ಯಮ ಸಲಹೆಗಾರ ಎಂ.ಕೆ.ಹೆಗಡೆ, ವಿಶೇಷಾಧಿಕಾರಿ ರವೀಂದ್ರ ರತ್ನಾಕರ್, ಆರ್ ಆರ್. ನಾಡಗೌಡರ್, ಸಚಿನ್ ಹಿರೇಮಠ್ ಮೊದಲಾದವರು ಉಪಸ್ಥಿತರಿದ್ದರು.
#Lakshmihebbalkar #Congress #Belagavi