ನವದೆಹಲಿ: ಕಿನ್ನೌರ್ ಜಿಲ್ಲೆಯ ಎರಡು ಜಲವಿದ್ಯುತ್ ಯೋಜನೆಗಳಿಗೆ ಸಂಬಂಧಿಸಿದಂತೆ ಬಡ್ಡಿ ಸಮೇತ 280 ಕೋಟಿ ರೂಪಾಯಿ ಮರುಪಾವತಿ ಕೋರಿ ಅದಾನಿ ಪವರ್ ಲಿಮಿಟೆಡ್ ಸಲ್ಲಿಸಿರುವ ಮನವಿಗೆ ಹಿಮಾಚಲ ಪ್ರದೇಶದಿಂದ ಸುಪ್ರೀಂ ಕೋರ್ಟ್ ಸೋಮವಾರ ಪ್ರತಿಕ್ರಿಯೆ ಕೇಳಿದೆ.ನ್ಯಾಯಮೂರ್ತಿಗಳಾದ ಎಂಎಂ ಸುಂದ್ರೇಶ್ ಮತ್ತು ಅರವಿಂದ್ ಕುಮಾರ್ ಅವರನ್ನೊಳಗೊಂಡ ಪೀಠವು ಪ್ರಕರಣದ ವಿಚಾರಣೆ ನಡೆಸಿತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅದಾನಿ ಪವರ್ ಸಲ್ಲಿಸಿದ್ದ ಮೇಲ್ಮನವಿ ಕುರಿತು ಪೀಠವು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಪ್ರಕರಣದ ವಿವಾದವು ಜಂಗಿ ಥೋಪಾನ್ ಮತ್ತು ತೋಪಾನ್ ಪೊವಾರಿ ತಲಾ 480 ಮೆಗಾವ್ಯಾಟ್ ನ ಎರಡು ಜಲವಿದ್ಯುತ್ ಯೋಜನೆಗಳಿಗೆ ಸಂಬಂಧಿಸಿದೆ.
280 ಕೋಟಿ ಮೊತ್ತವನ್ನು ಅದಾನಿ ಪವರ್ಗೆ ಹಿಂದಿರುಗಿಸುವ ಏಕ ಪೀಠದ ತೀರ್ಪನ್ನು ಹೈಕೋರ್ಟ್ನ ವಿಭಾಗೀಯ ಪೀಠ ಜುಲೈನಲ್ಲಿ ರದ್ದುಗೊಳಿಸಿತ್ತು. ಹೈಕೋರ್ಟ್ ತೀರ್ಪಿನ ವಿರುದ್ಧ ಖಾಸಗಿ ಕಂಪನಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಹಿಮಾಚಲ ಪ್ರದೇಶ ಸರ್ಕಾರವು 2022 ರಲ್ಲಿ ಏಕ ಪೀಠದ ತೀರ್ಪಿನ ವಿರುದ್ಧ ಹೈಕೋರ್ಟ್ನ ವಿಭಾಗೀಯ ಪೀಠದ ಮುಂದೆ ಅರ್ಜಿ ಸಲ್ಲಿಸಿತ್ತು.
ಸೆಪ್ಟೆಂಬರ್ 4, 2015 ರಂದು ಮಂತ್ರಿಗಳ ಮಂಡಳಿಯು (ಹಿಮಾಚಲ ಸರ್ಕಾರದ) ಮರುಪಾವತಿಯ ನಿರ್ಧಾರವನ್ನು ಮರುಪರಿಶೀಲಿಸಲು ನಿರ್ಧರಿಸಿದೆ ಮತ್ತು ರಾಜ್ಯವು ತನ್ನ ಸ್ವಂತ ಇಚ್ಛೆಯ ಮೇರೆಗೆ ಅದಾನಿ ಪವರ್ಗೆ ಈ ಹಣವನ್ನು ಮರುಪಾವತಿಸಲು ನಿರ್ಧರಿಸಿದೆ ಎಂದು ಮನವಿಯಲ್ಲಿ ಪ್ರತಿಪಾದಿಸಲಾಗಿದೆ. ಮೇಲೆ ಹೇಳಲಾದ ಹಣವನ್ನು ಮರುಪಾವತಿ ಮಾಡದಿರುವುದು ಅರ್ಜಿದಾರರ ಆರ್ಥಿಕ ಸಾಮರ್ಥ್ಯ ಮತ್ತು ಹೂಡಿಕೆ ಒಳಹರಿವಿನ ಮೇಲೆ ತೀವ್ರವಾಗಿ ಪರಿಣಾಮ ಬೀರಿದೆ ಎಂದು ಮನವಿಯಲ್ಲಿ ಪ್ರತಿಪಾದಿಸಲಾಗಿದೆ.