ಸ್ಯಾಂಡಲ್ವುಡ್ ನಟ ಶ್ರೀ ಮುರಳಿ ಕಾಲಿಗೆ ಪೆಟ್ಟಾಗಿದ್ದು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಘೀರ ಚಿತ್ರದ ಶೂಟಿಂಗ್ನಲ್ಲಿ ಭಾಗಿಯಾಗಿದ್ದ ನಟ ಮುರಳಿ ಕಾಲಿಗೆ ಪೆಟ್ಟಾಗಿದೆ. ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿರುವ ಮುರಳಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
![](https://pratidhvani.com/wp-content/uploads/2024/04/Sri-Murali.webp)
ಹೊಂಬಾಳೆ ಪ್ರೊಡಕ್ಷನ್ನಲ್ಲಿ ಮೂಡಿ ಬರುತ್ತಿರುವ ಈ ಚಿತ್ರವನ್ನು ಲಕ್ಕಿ ಚಿತ್ರದ ನಿರ್ದೇಶಕ ಸೂರಿ ನಿರ್ದೇಶನ ಮಾಡುತ್ತಿದ್ದಾರೆ. ಫೈಟಿಂಗ್ ಸೀನ್ ಶೂಟಿಂಗ್ ಮಾಡುವಾಗ ಅವಘಡ ಸಂಭವಿಸಿದೆ. ಸ್ಟಂಟ್ ಮಾಡಲು ಹೋಗಿ ಪೆಟ್ಟು ಮಾಡಿಕೊಂಡು ಆಸ್ಪತ್ರೆ ಸೇರಿದ್ದಾರೆ ನಟ ಶ್ರೀಮುರಳಿ.
![](https://pratidhvani.com/wp-content/uploads/2024/04/9995effd-883d-4b09-8652-93c8c6fcc459-a21bea2f-8bcf-48c2-ad73-8cc3a53f6fd4_compressed_40.jpg)
ಸದ್ಯಕ್ಕೆ ಆತಂಕ ಪಡುವಂತಹ ವಿಚಾರ ಏನಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಮೈಸೂರಿನಲ್ಲೇ ಚಿಕಿತ್ಸೆ ನೀಡಬೇಕಾ..? ಅಥವಾ ಬೆಂಗಳೂರಿಗೆ ಶಿಫ್ಟ್ ಮಾಡಬೇಕಾ..? ಅನ್ನೋ ಬಗ್ಗೆ ಕುಟುಂಬಸ್ಥರು ಇನ್ನೂ ನಿರ್ಧಾರ ಮಾಡಿಲ್ಲ, ತಜ್ಞ ವೈದ್ಯರ ಸಲಹೆಯಂತೆ ಮುಂದುವರಿಯಲು ನಿರ್ಧಾರ ಮಾಡಲಾಗಿದೆ.
![](https://pratidhvani.com/wp-content/uploads/2024/04/images-43.jpeg)