ನಟ ಹಾಗೂ ಸಾಮಾಜಿಕ ಚಿಂತಕ ಚೇತನ್ ಒಂದಲ್ಲ ಒಂದು ವಿವಾದಗಳನ್ನು ತಮ್ಮ ಮೈ ಮೇಲೆ ಎಳೆದುಕೊಳ್ಳುತ್ತದೆ ಇರುತ್ತಾರೆ. ಅವರ ಈ ವಿವಾದಗಳು ಕೆಲವೊಮ್ಮೆ ಪ್ರಬಲ ವರ್ಗಗಳ ಆಕ್ರೋಶಕ್ಕೆ ಹಾಗೂ ಕೆಲ ಸಂಘಟನೆಗಳ ಕೆಂಗಣ್ಣಿಗೆ ಕೂಡ ಗುರಿಯಾಗುತ್ತವೆ.
ಅದರಲ್ಲೂ ಪ್ರತಿ ಬಾರಿ ಚೇತನ್ ಯಾವುದೇ ವಿಚಾರವನ್ನು ಮಾತನಾಡಬೇಕಾದರೂ ಅವುಗಳ ಬಗ್ಗೆ ಲಯ ಮತ್ತು ಹಿಡಿತವಿಲ್ಲದೆ ಮಾತನಾಡುವುದರಿಂದ ಸಾಕಷ್ಟು ಎಡವಟ್ಟುಗಳನ್ನ ಮಾಡಿಕೊಳ್ಳುತ್ತಲೇ ಇರುತ್ತಾರೆ ಈ ಎಡವಟ್ಟುಗಳಿಂದಾಗಿ ನಟ ಚೇತನ್ ಕೆಲವೊಮ್ಮೆ ನಗೆ ಪಾಟಲಿಗೆ ಈಡಾಗಿದ್ದು ಕೂಡ ಉಂಟು. ಸಾಕಷ್ಟು ಬಾರಿ ಸಾಮಾಜಿಕ ಜಾಲತಾಣದಲ್ಲಿ ಕೂಡ ಹಲವಾರು ವಿವಾದಗಳನ್ನ ಚೇತನ್ ತಮ್ಮ ಮೈಮೇಲೆ ಎಳೆದುಕೊಂಡಿದ್ದಾರೆ ಈ ವಿವಾದಗಳಿಂದ ಕೆಲ ಸಮಯ ಜೈಲು ಸೇರಿರುವ ಉದಾಹರಣೆಗಳು ಕೂಡ ಇವೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಚೇತನ್ ಹಂಚಿಕೊಂಡ ಸಾಕಷ್ಟು ವಿವಾದಾತ್ಮಕ ವಿಚಾರಗಳು ಹಲವು ಚರ್ಚೆಗಳನ್ನು ಹುಟ್ಟುಹಾಕಿವೆ.
![](https://pratidhvani.com/wp-content/uploads/2023/05/WhatsApp-Image-2023-05-20-at-5.13.20-PM-893x1024.jpeg)
![](https://pratidhvani.com/wp-content/uploads/2023/05/WhatsApp-Image-2023-05-20-at-5.06.26-PM-1-1024x683.jpeg)
ಇದೀಗ ಇಂತಹದ್ದೇ ಒಂದು ವಿವಾದವನ್ನು ಮತ್ತೆ ನಟ ಚೇತನ್ ತಮ್ಮ ಮೇಲೆ ತಿಳಿದುಕೊಂಡಿದ್ದಾರೆ ಅದು ಕೂಡ ಈ ಬಾರಿ ಸಿದ್ದರಾಮಯ್ಯರವರನ್ನ ಟೀಕೆ ಮಾಡಿ ಹಲವು ಚರ್ಚೆಗಳಿಗೆ ಗ್ರಾಸವಾಗಿದ್ದಾರೆ. ಇಂದು ಸಿದ್ದರಾಮಯ್ಯನವರ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭದ ಬಗ್ಗೆ ಟೀಕೆ ಮಾಡಿರುವ ನಟ ಚೇತನ್
![](https://pratidhvani.com/wp-content/uploads/2023/05/WhatsApp-Image-2023-05-20-at-5.13.32-PM-640x1024.jpeg)
‘ವಿಚಾರವಾದಿ’ ಎಂದು ಕರೆಸಿಕೊಳ್ಳುವ ಸಿದ್ದರಾಮಯ್ಯ ಅವರು ಕರ್ನಾಟಕದ ಸಿಎಂ ಆಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರಾ? ಯಾವ/ಯಾರು ದೇವರು? ದೇವರು ಎಲ್ಲಿದ್ದಾನೆ/ಳೆ/ರೆ? ಇದು ನಿರ್ದಿಷ್ಟವಾದ ಸೈದ್ಧಾಂತಿಕ ಆರಂಭವಲ್ಲ” ಎಂದು ಹೇಳಿದ್ದಾರೆ. ಇದರ ಜೊತೆಗೆ ಇಂದು ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ ಸತೀಶ್ ಜಾರಕಿಹೊಳಿಯವರನ್ನು ಉದ್ದೇಶಿಸಿ ಕೂಡ ನಟ ಚೇತನ್ ಉದ್ದೇಶಿಸಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ
![](https://pratidhvani.com/wp-content/uploads/2023/05/FwjeFvnX0AAYDLK-1.png)
” ಶಾಸಕ ಸತೀಶ ಜಾರಕಿಹೊಳಿ ಅವರು ‘ಬುದ್ಧ-ಬಸವ-ಅಂಬೇಡ್ಕರ್’ ಅಡಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕಾಂಗ್ರೆಸ್ ಪಕ್ಷವು ತನ್ನ ಸ್ವ-ಲಾಭದಾಯಕ ರಾಜಕೀಯ ಅಧಿಕಾರಕ್ಕಾಗಿ ನಮ್ಮ ಸಮಾನತೆಯ ಐಕಾನ್ಗಳನ್ನು ಯಾವಾಗಲೂ ಹೈಜಾಕ್ ಮಾಡಿದೆ. ಎಸ್ಟಿ ನಾಯಕ ಸಮುದಾಯದ ಸತೀಶ್ ಜಾರಕಿಹೊಳಿ ಶೋಷಿತ ಎಸ್ಟಿಗಳಿಗೆ ಒಳಮೀಸಲಾತಿಯನ್ನು ಬೆಂಬಲಿಸುತ್ತಾರೆಯೇ? ಅಥವಾ ಬುದ್ಧ-ಬಸವ-ಅಂಬೇಡ್ಕರ್ ಕೇವಲ ಗಿಮಿಕ್ ಮಾತ್ರವೇ?” ಎಂದು ನೂತನ ಸಚಿವ ಸತೀಶ್ ಜಾರಕಿಹೊಳಿಯವರ ವಿರುದ್ಧವೂ ಕೂಡ ಕಿಡಿಕಾರಿದ್ದಾರೆ.
ಒಟ್ಟಾರೆಯಾಗಿ ನಟ ಚೇತನ್ ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯಾಗಿ ಬರೆದುಕೊಂಡಿರುವುದು ಕಾಂಗ್ರೆಸಿಗರ ಹಾಗೂ ಸಿಎಂ ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ ಅವರ ಅಭಿಮಾನಿಗಳ ಆಕ್ರೋಶಕ್ಕೆ ಕೂಡ ಕಾರಣವಾಗಿದೆ