
ವಿರಾಜಪೇಟೆ: ಆಸ್ತಿ ವೈಷಮ್ಯದಿಂದ ಮಹಿಳೆಯನ್ನು ಕೊಲೆಗೈದು, ಮತ್ತೊಂದು ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ (fatally assaulting a woman)ನಡೆಸಿ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಎರಡೂವರೆ ವರ್ಷಗಳ (Two and a half years)ಬಳಿಕ ಪೊಲೀಸರು ಪತ್ತೆ ಹಚ್ಚಿ ಬಂಧಿಸುವಲ್ಲಿ (Arrested)ಯಶಸ್ವಿಯಾಗಿದ್ದಾರೆ.

ಮೂಲತಃ ಟಿ.ಶೆಟ್ಟಿಗೇರಿ ನಿವಾಸಿ, ಮಂಗಳೂರಿನ ಬೇಂದ್ರೆ ತಣ್ಣೀರು ಬಾವಿಯಲ್ಲಿ ನೆಲೆಸಿದ್ದ ರಾಜೇಶ್ (೪೨) ಎಂಬಾತನನ್ನು ಪೊಲೀಸ್ ತನಿಖಾ ತಂಡ ತಾ. ೨೫ ರಂದು ಪುತ್ತೂರು ಸಮೀಪದ ಕುಂಬ್ರದಲ್ಲಿ ಬಂಧಿಸಿದೆ.
ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಟಿ.ಶೆಟ್ಟಿಗೇರಿ ಗ್ರಾಮದ ನಿವಾಸಿ ಪ್ರೇಮಾ ಅವರು ತನ್ನ ತಂಗಿ ವೀಣಾ ಅವರೊಂದಿಗೆ ತಾ. ೬-೨-೨೦೨೨ ರಂದು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಮದುವೆ ಕಾರ್ಯಕ್ರಮಕ್ಕೆ ತೆರಳಿ ಮನೆಗೆ ಹಿಂದಿರುಗುವಾಗ ಸಂಜೆ ಸುಮಾರು ೫ ಗಂಟೆ ವೇಳೆಯಲ್ಲಿ ಆರೋಪಿ ರಾಜೇಶ್ ಮಾರ ಕಾಯುಧದಿಂದ ತಲೆ ಹಾಗೂ ಕುತ್ತಿಗೆಗೆ ಹಲ್ಲೆ ನಡೆಸಿ ಪ್ರೇಮಾ ಅವರನ್ನು ಕೊಲೆ ಗೈದಿದ್ದಾನೆ. ವೀಣಾ ಗಂಭೀರವಾಗಿ ಗಾಯಗೊಂಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿ ಕೊಂಡ ಪೊಲೀಸರು ಗಂಭೀರ ಗಾಯ ಗೊಂಡ ವೀಣಾ ಅವರನ್ನು ವಿಚಾರಣೆ ನಡೆಸಿದ ಸಂದರ್ಭ ಮೃತ ಪ್ರೇಮಾ ಅವರ ಪತಿ ಸೋಮಶೇಖರ್ ಅವರ ಅಕ್ಕನ ಮಗ ರಾಜೇಶ್ ಎಂಬಾತನು ಆಸ್ತಿ ವಿಚಾರಕ್ಕೆ ಕೊಲೆ ಮಾಡಿರುವುದಾಗಿ ತನಿಖೆಯಿಂದ ತಿಳಿದು ಬಂದಿತ್ತು.
ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಮಾಹಿತಿ ಹಾಗೂ ಸಾಕ್ಷಾö್ಯ ಧಾರಗಳನ್ನು ಕಲೆ ಹಾಕಿ ತಲೆಮರೆಸಿಕೊಂಡಿದ್ದ ಆರೋಪಿ ಪತ್ತೆಗಾಗಿ ಅಂದಿನ ಡಿವೈಎಸ್ಪಿ ಮೋಹನ್ ಕುಮಾರ್, ವೃತ್ತ ನಿರೀಕ್ಷಕ ಸಿ.ಎ. ಮಂಜಪ್ಪ, ಪಿಎಸ್ಐ ರವೀಂದ್ರ, ಎ.ಎಸ್.ಐ. ಪ್ರಮೋದ್, ಪೇದೆ ಮಹದೇವಸ್ವಾಮಿ ಹಾಗೂ ಪೊಲೀಸ್ ಸಿಬ್ಬಂದಿ, ತಾಂತ್ರಿಕ ಸಿಬ್ಬಂದಿಗಳನ್ನು ಒಳಗೊಂಡ ವಿಶೇಷ ತಂಡ ರಚಿಸಲಾಗಿತ್ತು.ಪ್ರಕರಣದಲ್ಲಿ ತಲೆಮರೆಸಿ ಕೊಂಡಿದ್ದ ಟಿ. ಶೆಟ್ಟಿಗೇರಿ ನಿವಾಸಿ ರಾಜೇಶ್ ಪತ್ತೆಗಾಗಿ ತಂಡ ಕಳೆದ ಎರಡೂವರೆ ವರ್ಷಗಳಿಂದ ಕಾರ್ಯಾಚರಣೆ ನಡೆಸಿ ಅವನನ್ನು ಬಂಧಿಸಿದೆ.
ಆರೋಪಿ ರಾಜೇಶ್ ಮಾವ ಸೋಮಶೇಖರ್ ೨೦೨೧ರಲ್ಲಿ ಮೃತರಾಗಿದ್ದು, ಮಾವನ ಸಾವಿಗೆ ಅವರ ಪತ್ನಿ ಪ್ರೇಮಾ ಕಾರಣರಾಗಿರಬಹುದು ಎಂದು ಹಾಗೂ ರಾಜೇಶ್ ಕುಟುಂಬಕ್ಕೆ ಸೇರಿದ ಆಸ್ತಿಯನ್ನು ಪ್ರೇಮಾ ಅನುಭವಿಸುತ್ತಿರು ವುದಾಗಿ ಕೊಲೆ ಮಾಡಿ ಮುರುಡೇಶ್ವರಕ್ಕೆ ತೆರಳಿ ನಂತರ ಭಟ್ಕಳದಲ್ಲಿ ಮೊಬೈಲ್ ನಾಶಗೊಳಿಸಿ ಮಹಾರಾಷ್ಟçದ ಪನ್ವೇಲ್ನಲ್ಲಿ ಕೆಲಸ ಮಾಡಿಕೊಂಡಿದ್ದ ಎಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಪೊಲೀಸ್ ಕಾರ್ಯಾಚರಣೆ ತಂಡದ ಕೆಲಸವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಶ್ಲಾಘಿಸಿ ಅಭಿನಂದಿಸಿ ದ್ದಾರೆ.