![](https://pratidhvani.com/wp-content/uploads/2024/06/5-3-1024x576.jpg)
ನಟ ದರ್ಶನ್ ಅಭಿಮಾನಿಯನ್ನೇ ಕೊಲೆ ಮಾಡಿದ ಆರೋಪದ ಮೇಲೆ ಬಂಧನ ಮಾಡಲಾಗಿದೆ. ನಟ ದರ್ಶನ್ ಜೊತೆಗೆ ಇನ್ನೂ 16 ಮಂದಿ ಆರೋಪಿಗಳು ಇದ್ದಾರೆ. ನಟ ದರ್ಶನ್ ಸ್ನೇಹಿತೆ ಪವಿತ್ರಗೌಡ A1 ಆರೋಪಿಯಾದ್ರೆ ನಟ ದರ್ಶನ್ A2 ಆರೋಪಿಯಾಗಿದ್ದಾರೆ. ಈಗಾಗಲೇ ಮದುವೆ ಆಗಿದ್ದ ನಟ ದರ್ಶನ್ಗೆ ಪವಿತ್ರಾಗೌಡ ಜೊತೆಗೆ ಸ್ನೇಹ ಹೆಚ್ಚಾಗಿ ತನ್ನ ಅಭಿಮಾನಿಯನ್ನೇ ಕೊಲೆ ಮಾಡುವ ಹಂತಕ್ಕೂ ಹೋಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ನಟ ದರ್ಶನ್ ಹಾಗು ವಿಜಯಲಕ್ಷ್ಮೀ ಬಾಳಲ್ಲಿ ಪವಿತ್ರಾಗೌಡ ಎಂಟ್ರಿ ಆಗಿದ್ದ ವಿಚಾರಕ್ಕೆ ಓರ್ವ ಅಭಿಮಾನಿಯಾಗಿ ಕೋಪಗೊಂಡಿದ್ದ. ಇನ್ಸ್ಟಾಗ್ರಾಂನಲ್ಲಿ ಪವಿತ್ರಾಗೌಡಗೆ ಮೆಸೇಜ್ ಮಾಡಿದ್ದ. ನಮ್ಮ ಅಣ್ಣ ಅತ್ತಿಗೆ ಬಾಳಿನಲ್ಲಿ ಯಾಕೆ ಎಂಟ್ರಿಯಾದೆ..? ಅವರನ್ನು ಬಿಟ್ಟುಬಿಡು. ನಿನ್ನ ದಾರಿ ನೋಡಿಕೋ ಎಂದು ಕಮೆಂಟ್ ಮಾಡಿದ್ದ. ಆ ಬಳಿಕ ರೇಣುಕಾಸ್ವಾಮಿ ಅಕೌಂಟ್ ಬ್ಲಾಕ್ ಮಾಡಲಾಗಿತ್ತು. ಮತ್ತಷ್ಟು ಕೋಪಗೊಂಡ ರೇಣುಕಾಸ್ವಾಮಿ ಮತ್ತೊಂದು ನಕಲಿ ಅಕೌಂಟ್ ಕ್ರಿಯೇಟ್ ಮಾಡಿ ಮತ್ತೆ ಕೆಟ್ಟದಾಗಿ ಕಮೆಂಟ್ ಮಾಡಿದ್ದ ಎನ್ನಲಾಗಿದೆ.
![](https://pratidhvani.com/wp-content/uploads/2024/06/7-1-1024x576.webp)
ರೇಣುಕಾಸ್ವಾಮಿ ಕೊಲೆಗೂ ಮುನ್ನ ಪವಿತ್ರಾಗೌಡ ಹಾಗು ನಟ ದರ್ಶನ್ ಸೇರಿದಂತೆ ಆಪ್ತ ಸಹಾಯಕರ ಜೊತೆಗೆ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಮೊಬೈಲ್ ಪರಿಶೀಲನೆ ವೇಳೆ ಒಂದು ವಾರದಿಂದ ಕಿಡ್ನ್ಯಾಪ್ಗೆ ಪ್ಲ್ಯಾನ್ ಮಾಡಿರೋದು ಬೆಳಕಿಗೆ ಬಂದಿದೆ. ಯಾರ ಮೂಲಕ ಕಿಡ್ನ್ಯಾಪ್ ಮಾಡಿಸೋದು ಅಂತ ಪ್ಲ್ಯಾನ್ ಮಾಡಿದ್ರು. ಕೊಲೆಯಾದ ಸ್ವಾಮಿ ಚಿತ್ರದುರ್ಗ ಅಂತ ಗೊತ್ತಾಗ್ತಿದ್ದ ಹಾಗೆ ರಾಘವೇಂದ್ರನನ್ನು ಬೆಂಗಳೂರಿಗೆ ಕರೆಸಿಕೊಂಡು ಮಾತುಕತೆ ನಡೆಸಿದ್ರು. ಆ ಬಳಿಕ ಕಿಡ್ನ್ಯಾಪ್ ಮಾಡಿ ಹಲ್ಲೆ ಮಾಡಿದ್ರು. ಹಲ್ಲೆ ಮಾಡುತ್ತಾ ಮಾಡುತ್ತಾ ಕೊಂದೇ ಬಿಟ್ರು.
ಅಭಿಮಾನಿ ಆಗಿದ್ದ ಕಾರಣಕ್ಕೇ ರೇಣುಕಾಸ್ವಾಮಿ ಪವಿತ್ರಾಗೌಡಳ ವಿರುದ್ಧ ಕೋಪಗೊಂಡಿದ್ದ. ವಿಜಯಲಕ್ಷ್ಮೀ ಹಾಗು ದರ್ಶನ್ ಜೀವನ ಪವಿತ್ರಾಗೌಡಳಿಂದ ಹಾಳಾಗುತ್ತಿದೆ ಅನ್ನೋದನ್ನು ತಿಳಿದಿದ್ದರಿಂದಲೇ ರೇಣುಕಾಸ್ವಾಮಿ ಅಭಿಮಾನದಿಂದ ಪವಿತ್ರಾಗೌಡಳನ್ನು ಟಾರ್ಗೆಟ್ ಮಾಡಿದ್ದ. ಆದರೆ ಪ್ರೀತಿಯ ಸೆರಗಿನಲ್ಲಿ ಸಿಲುಕಿದ್ದ ಡಿ ಬಾಸ್, ಸೆಲೆಬ್ರಿಟಿಯ ಉದ್ದೇಶ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೆ ಕೊಂದು ಮುಗಿಸಿದ್ದ. ಈಗಲೂ ಅಭಿಮಾನಿಗಳು ಎಂದು ಕರೆದುಕೊಳ್ಳುವ ಯುವಕರು ಡಿ ಬಾಸ್ ಮಾಡಿದ್ದೇ ಸರಿ ಎನ್ನುವ ಅಂಧ ಭಕ್ತಿ ಮೆರೆಯುತ್ತಿದ್ದಾರೆ ಅನ್ನೋದು ದುರಂತದ ಸಂಗತಿ
![](https://pratidhvani.com/wp-content/uploads/2024/06/6-1.webp)