ಮಂಡ್ಯ : ನಡುರಸ್ತೆಯಲ್ಲಿ ಆಟೋ ಚಾಲಕನ ಮೇಲೆ ಪೊಲೀಸ್ ದರ್ಪ ತೋರಿದ ಪ್ರಕರಣ ಸಂಬಂಧ ಪೊಲೀಸ್ ಪೇದೆ ಮಹೇಂದ್ರ ಸಸ್ಪೆಂಡ್ ಆಗಿದ್ದಾರೆ. ಮಂಡ್ಯದ ಎಸ್ಪಿ ಎನ್. ಯತೀಶ್ ಮಹೇಂದ್ರರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಮಂಡ್ಯ ನಗರದಲ್ಲಿ ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು ತಮ್ಮ ಬೈಕ್ಗೆ ಆಟೋ ಡಿಕ್ಕಿ ಹೊಡೆಯಿತು ಎಂಬ ಕಾರಣಕ್ಕೆ ಸಾರ್ವಜನಿಕವಾಗಿ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ತಪ್ಪಾಯ್ತು ಎಂದು ಆಟೋ ಚಾಲಕ ಪರಿಪರಿಯಾಗಿ ಬೇಡಿಕೊಂಡರೂ ಕೇಳದ ಪೊಲೀಸ್ ಪೇದೆ ಮಹೇಂದ್ರ ಹಲ್ಲೆ ನಡೆಸಿದ್ದರು.
30/05/2023ರ ಬೆಳಿಗ್ಗೆ 11:45ರ ಸುಮಾರಿಗೆ ಮಂಡ್ಯ ಸರಕಾರಿ ಆಸ್ಪತ್ರೆಯ ಮುಂದೆ ಹೋಗುವಾಗ ಪೋಲಿಸ್ ಒಬ್ಬ ಆಟೋ ಡ್ರೈವರ್ಗೆ ಸಾರ್ವಜನಿಕವಾಗಿ ಎಲ್ಲರ ಮುಂದೆ ಹೊಡೆಯುತ್ತಾ ಇದ್ದ, ಏನೇ ತಪ್ಪಾಗಿದ್ದರು ಈ ರೀತಿಯಲ್ಲಿ ಹೊಡೆಯಬಹುದಾ? ಪೋಲೀಸರ ಕೆಲಸ ಕೇಸ್ ಮಾಡಿ ಶಕ್ಷೆ ಕೊಡಿಸೋದ ಇಲ್ಲವೇ ಇವರೇ ಶಿಕ್ಷೆ ಕೊಡೋದಾ? @siddaramaiah @DKShivakumar pic.twitter.com/LxY2fdmfAu
— ದಡಿಗ ಗಂಗವಾಡಿ | Ganga Dynasty (@dadigagangawadi) May 31, 2023
ಮಂಡ್ಯದ ಮಿಮ್ಸ್ ಆಸ್ಪತ್ರೆ ಮುಂಭಾಗದಲ್ಲಿ ಈ ಘಟನೆ ಸಂಭವಿಸಿತ್ತು. ಹಲ್ಲೆ ನಡೆಯುತ್ತಿರು ವಿಡಿಯೋವನ್ನು ಚಿತ್ರೀಕರಿಸಿದ್ದ ಪ್ರತ್ಯಕ್ಷದರ್ಶಿಗಳು ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು . ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಅಲರ್ಟ್ ಆದ ಮಂಡ್ಯ ಪೊಲೀಸ್ ಇಲಾಖೆ ಪೇದೆ ವಿರುದ್ಧ ಕ್ರಮ ಕೈಗೊಂಡಿದೆ.