ಕಳೆದ ವಾರ ರಾಜ್ಯಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಸ್ಚಾಗತ ಮಾಡಲು ಸಾಲು ಸಾಲು ಬಿಜೆಪಿ ನಾಯಕರುಗಳು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನನಿಲ್ದಾಣ (KIAL) ಕ್ಕೆ ತೆರಳಿದ್ದರು. ಅಚ್ಚರಿ ಅಂದರೆ, ಇದೊಂದು ಫೋಟೋ ಮಾತ್ರ ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ. ಅಷ್ಟಕ್ಕೂ ಯಾವುದು ಆ ಪೋಟೋ ಅಂತೀರಾ? ಅದೇ ಮಾಜಿ ಸಚಿವ ಎಂಟಿಬಿ ನಾಗರಾಜ್ (MTB Nagaraj) ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಹೋದಾಗ ಕ್ಲಿಕ್ಕಿಸಿಕೊಂಡಿರುವ ಈ ಫೋಟೋ.
![](https://pratidhvani.com/wp-content/uploads/2024/01/IMG-20240123-WA0059-1-1024x680.webp)
ಈ ಫೋಟೋದಲ್ಲಿ ಏನಿದೆ ವಿಶೇಷ?
ಕಳೆದ ವಾರ ರಾಜ್ಯಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಸ್ವಾಗತಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕರುಗಳಾದ ಡಾ.ಸಿ.ಎನ್. ಅಶ್ವತ್ಥ್ನಾರಾಯಣ್, ಎಸ್.ಆರ್. ವಿಶ್ವನಾಥ್, ಎಸ್.ಮುನಿರಾಜು, ಬೈರತಿ ಬಸವರಾಜು, ಸಂಸದ ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್ ಆದಿಯಾಗಿ ಹಲವು ನಾಯಕರುಗಳು ವಿಮಾನನಿಲ್ದಾಣಕ್ಕೆ ತೆರಳಿದ್ದರು. ಆದ್ರೆ ಅಚ್ಚರಿ ಎಂಬಂತೆ ಮಾಜಿ ಸಚಿವ ಎಂಟಿಬಿ ನಾಗರಾಜ್ ಕೂಡ ವಿಮಾನನಿಲ್ದಾಣಕ್ಕೆ ತೆರಳಿದ್ದು, ಪ್ರಧಾನಿಗಳನ್ನು ಸ್ವಾಗತಿಸಿದ್ದು, ಆ ಫೋಟೋ ಈಗ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ.
![](https://pratidhvani.com/wp-content/uploads/2024/01/MTB-Nagaraj-1-jpg.webp)
ಇಷ್ಟು ದಿನ ಕಾಣೆಯಾಗಿದ್ದ ಎಂಟಿಬಿ ಏಕಾಏಕಿ ಪ್ರತ್ಯಕ್ಷ!
ಇಷ್ಟು ದಿನ ಪಕ್ಷದ ಚಟುವಟಿಕೆಗಳು ಹಾಗೂ ರಾಜಕಾರಣದಿಂದಲೇ ದೂರವುಳಿದಿದ್ದ ಮಾಜಿ ಸಚಿವ ಎಂಟಿಬಿ ನಾಗರಾಜ್ ಈಗ ಏಕಾಏಕಿ ಪ್ರತ್ಯಕ್ಷವಾಗಿದ್ದು ಏಕೆ? ಎಂಬ ಪ್ರಶ್ನೆ ಮೂಡಿದ್ದು, 2024 ರ ಲೋಕಸಭಾ ಚುನಾವಣೆಯಲ್ಲಿ (Lokasabha Election) ಚಿಕ್ಕಬಳ್ಳಾಪುರ ( Chikkaballapura) ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಏನಾದ್ರೂ ಕಣಕ್ಕಿಳಿಯುವ ಇರಾದೆಯನ್ನು ಎಂಟಿಬಿ ನಾಗರಾಜ್ ಹೊಂದಿದ್ದಾರಾ? ಎಂಬ ಚರ್ಚೆಗಳು ಆರಂಭವಾಗಿದೆ.
ಇನ್ನು ಮೇಲ್ನೋಟಕ್ಕೆ ಇಂತಹ ಒಂದು ಸಾಧ್ಯತೆಗಳು ಕೂಡ ನಿರ್ಮಾಣವಾಗುವ ಲೆಕ್ಕಾಚಾರ ಇದೆ. ಈಗಾಗಲೇ ಚಿಕ್ಕಬಳ್ಳಾಪುರ ( Chikkaballapura) ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ,(B.N.Bachhegowda) ಒಂದು ಕಾಲನ್ನು ಎತ್ತಿ ಹೊರಹೆ ಇಟ್ಟಿರುವುದು ಆಗಿದೆ. ಆರೋಗ್ಯದ ಕಾರಣವನ್ನೊಡ್ಡಿ ಮುಂದಿನ ಚುನಾವಣೆಯಲ್ಲಿ ಸ್ಫರ್ಧೆ ಮಾಡುವುದಿಲ್ಲ ಅಂತಲೂ ಘೋಷಿಸಿರುವುದಾಗಿದೆ. ಈಗ ಆ ಕ್ಷೇತ್ರಕ್ಕೆ ಹೊಸಮುಖದ ಅಭ್ಯರ್ಥಿಯನ್ನು ತಯಾರು ಮಾಡಬೇಕಾದ ಗುರುತರ ಜವಾಬ್ದಾರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ.ವಿಜಯೇಂದ್ರರ ಮೇಲಿದ್ದು, ಮೋದಿ ಆಗಮನಕ್ಕೂ ಮುನ್ನಾ ಖುದ್ದು ವಿಜಯೇಂದ್ರ ಎಂಟಿಬಿ ನಾಗರಾಜ್ ಅವರ ನಿವಾಸಕ್ಕೂ ಭೆರಟಿ ಕೊಟ್ಟು ಮಾತುಕತೆ ಮಾಡಿ ವಾಪಸ್ ಆಗಿದ್ದಾರೆ.
ಇದೆಲ್ಲಾ ಅಂಶಗಳ ಮೇಲೆ ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರ ಆಗಮನದ ಸಂದರ್ಭದಲ್ಲಿ ಖುದ್ದು ಎಂಟಿಬಿ ನಾಗರಾಜ್ ಪ್ರತ್ಯಕ್ಷವಾಗಿದ್ದು, ಈಗ ಎದುರಾಗಲಿರುವ ಲೋಕಸಭಾ ಚುನಾವಣೆಯಲ್ಲಿ ಎಂಟಿಬಿ ನಾಗರಾಜ್ ಸ್ಫರ್ಧೆ ಮಾಡಲಿದ್ದಾರೆ ಎಂಬ ಮಾತುಗಳು ಚರ್ಚೆಯಾಗಲಾರಂಭಿಸಿದೆ.