
ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಈಗಲೂ ಸಹ ನೀರಿನ ಬಿಕ್ಕಟ್ಟು ಬಹಳ ಆಳವಾಗಿದೆ. ಇಲ್ಲಿನ ಯವತ್ಮಾಲ್ ಜಿಲ್ಲೆಯ ಅರ್ನಿ ತಹಸಿಲ್ನ ಹಳ್ಳಿಗಳಲ್ಲಿ ಮಹಿಳೆಯರು ದೈನಂದಿನ ಬಳಕೆಗೆ ನೀರು ತರಲು ಇನ್ನಿಲ್ಲದ ಪಾಡು ಪಡುತ್ತಿದ್ದಾರೆ.

ಈ ಗ್ರಾಮದಲ್ಲಿ ಬಾವಿಗಳು ಮತ್ತು ಬೋರ್ ವೆಲ್ ಗಳು ಬತ್ತಿ ಹೋಗುತ್ತಿರುವ ಕಾರಣ ಗ್ರಾಮದ ಮಹಿಳೆಯರು ಪ್ರತಿದಿನ 2 ರಿಂದ 3 ಕಿಲೋಮೀಟರ್ ನಡೆದು ನೀರು ತರಬೇಕಾದ ಅನಿವಾರ್ಯತೆ ಇದೆ. ಕಾಲ್ನಡಿಗೆಯಲ್ಲಿ ಮತ್ತು ಒರಟಾದ ಭೂಪ್ರದೇಶದಲ್ಲಿ ನಡೆದು ಸಾಗಿ ನೀರು ತರಬೇಕಾದ ಅನಿವಾರ್ಯತೆಯಿದೆ.
ಈ ಕುರಿತು ತಮ್ಮ ನೋವು ಹಂಚಿಕೊಂಡ ಗ್ರಾಮದ ನಿವಾಸಿ ಪೂಜಾ,ನಾವು ಯಲ್ಲಿ ಜಾರಿ ಬಿದ್ದು ಇನ್ನೇನು ಅವಘಡ ಸಂಭವಿಸುತ್ತೋ ಎಂಬ ಭಯದಲ್ಲಿ ನಿತ್ಯ ನೀರು ತರುತ್ತೇವೆ.ಪ್ರತಿದಿನ ಬಹಳ ದೂರ ನಡೆಯಬೇಕು. ಆದರೆ ನಮಗೆ ಬೇರೆ ದಾರಿಯಿಲ್ಲ, ನಮಗೆ ನೀರು ಬೇಕು ಎಂದು ಹೇಳಿಕೊಂದಿದ್ದಾರೆ.

ನಾಸಿಕ್ ಜಿಲ್ಲೆಯ ತಾಲೂಕಾ ಪೇಠ್ನ ಬೋರಿಚಿವಾರಿ ಗ್ರಾಮದ ಮಹಿಳೆಯರು ಕೂಡ ಇದೇ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಬೇಸಿಗೆಯ ಬಿಸಿಲಿನ ಬೇಗೆಯಲ್ಲಿ ಪ್ರತಿದಿನ ಎರಡು ಕಿಲೋಮೀಟರ್ಗಳಷ್ಟು ನಡೆದುಕೊಂಡು ನೀರು ತರಲು ಬಹಳ ಕಷ್ಟವಾಗಿದೆ ಅಂತ ಅಳಲು ತೋಡಿಕೊಳ್ತಾರೆ.
ಇನ್ನು ಗ್ರಾಮದಲ್ಲಿ ಯಾವುದೇ ನೀರಿನ ಮೂಲವಿಲ್ಲದ ಪರಿಣಾಮ, ಮಹಿಳೆಯರು ತಮ್ಮ ಸುರಕ್ಷತೆಯನ್ನೂ ಮರೆತು ಬಾವಿಗೆ ಇಳಿದು ಜೀವ ಪಣಕ್ಕಿಟ್ಟು ನೀರು ತರ್ತಾರೆ. ನಾವು ಕುಡಿಯುವ ನೀರಿಗೆ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಮತ್ತೊಬ್ಬ ಮಹಿಳೆ, ಇಷ್ಟು ದೂರದ ಬಿಸಿಯಲ್ಲಿ ನಡೆದರೂ, ನಾವು ಕೇವಲ ಒಂದು ಪಾತ್ರೆಯಲ್ಲಿ ನೀರನ್ನು ಪಡೆಯುತ್ತೇವೆ. ಇದು ಸಾಕಾಗುವುದಿಲ್ಲ, ನಾವು ನೀರನ್ನು ಕುದಿಸುತ್ತೇವೆ, ಆದರೆ ನಮ್ಮ ಮಕ್ಕಳು ಇನ್ನೂ ಅನಾರೋಗ್ಯಕ್ಕೆ ಒಳಗಾಗುತ್ತಾರೆ, ನಾವು ಸಮಸ್ಯೆಯನ್ನು ಹಲವಾರು ಬಾರಿ ಹೇಳಿಕೊಂಡಿದ್ದೇವೆ, ಆದರೆ ಯಾವುದೇ ಸಹಾಯ ಸಿಕ್ಕಿಲ್ಲ ಎಂದು ಹೇಳಿಕೊಂಡಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಗ್ರಾಮದ ಉಪ ಸರಪಂಚ್, ‘ಮಹಿಳೆಯರು ನೀರು ಪಡೆಯಲು ಸುಮಾರು 2 ಕಿಲೋಮೀಟರ್ ನಡೆದುಕೊಂಡು ಹೋಗಬೇಕು, ಪ್ರಯಾಣ ಮಾಡಲಾಗದವರು ಕಡಿಮೆ ಪ್ರಮಾಣದ ನೀರು ಪಡೆಯಲು ಇತರರಿಗೆ 60 ರೂ. ನೀಡಬೇಕು ಎಂದು ಹೇಳಿಕೊಂಡಿದ್ದಾರೆ.

ಬುಡಕಟ್ಟು ಜನಾಂಗದವರೇ ಹೆಚ್ಚಾಗಿರುವ ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಧನಗಾಂವ್ ಗ್ರಾಮ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಸ್ಥಳೀಯರು ಸೌಲಭ್ಯಗಳ ಕೊರತೆಯನ್ನು ಎತ್ತಿ ತೋರಿಸುತ್ತಿದ್ದಾರೆ.
ಬೇಸಿಗೆ ಆರಂಭವಾಗುತ್ತಿದ್ದಂತೆ ಕಿಲೋಮೀಟರ್ಗಳಷ್ಟು ದೂರ ಕ್ರಮಿಸುವ ಮೂಲಕ ತಮಗೂ ಮತ್ತು ಕುಟುಂಬಕ್ಕೂ ನೀರಿಗಾಗಿ ಅಲೆಯುವ ಅನಿವಾರ್ಯತೆ ಎದುರಾಗಿದೆ ಎನ್ನುತ್ತಾರೆ ಇಲ್ಲಿನ ಮಹಿಳೆಯರು.
ಹೀಗಾಗಿ ದೂರದಲ್ಲಿರುವ ತಮ್ಮ ಗ್ರಾಮಕ್ಕೆ ಒಂದಿಷ್ಟು ಸೌಲಭ್ಯ ಕಲ್ಪಿಸಿಕೊಡುವಂತೆ ಅಧಿಕಾರಿಗಳಿಗೆ ಹಲವು ಬಾರಿ ಒತ್ತಾಯಿಸಿದರೂ ತಮ್ಮ ಮನವಿಗೆ ಕಿವಿಗೊಟ್ಟಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.