• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಹಿಜಾಬ್ – ಕೇಸರಿ ಶಾಲು ವಿವಾದ | ಸಚಿವೆ ಶೋಭಾ ಕರಂದ್ಲಾಜೆಗೆ ಕರ್ನಾಟಕಕ್ಕಿಂತ ಉತ್ತರ ಪ್ರದೇಶವೇ ಹೆಚ್ಚಾಯಿತೇ?

Any Mind by Any Mind
February 8, 2022
in ಕರ್ನಾಟಕ, ದೇಶ, ರಾಜಕೀಯ
0
ಹಿಜಾಬ್ – ಕೇಸರಿ ಶಾಲು ವಿವಾದ | ಸಚಿವೆ ಶೋಭಾ ಕರಂದ್ಲಾಜೆಗೆ ಕರ್ನಾಟಕಕ್ಕಿಂತ ಉತ್ತರ ಪ್ರದೇಶವೇ ಹೆಚ್ಚಾಯಿತೇ?
Share on WhatsAppShare on FacebookShare on Telegram

ಹಿಂದೂ-ಮುಸ್ಲಿಂ ಕುರಿತ ಯಾವುದೇ ವಿವಾದ ರಾಜ್ಯದಲ್ಲಿ ಮುನ್ನೆಲೆಗೆ ಬಂದರೂ ಒಂದು ಹೆಜ್ಜೆ ಮುಂದೇ ಬಂದು ಮಾತನಾಡುತ್ತಿದ್ದವರಲ್ಲಿ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಕೂಡ ಒಬ್ಬರು. ಈಗ ತಾವೇ ಸಂಸದರಾಗಿ ಆಯ್ಕೆಯಾದ ಉಡುಪಿ – ಚಿಕ್ಕಮಗಳೂರು ಕ್ಷೇತ್ರದಲ್ಲೇ ಹಿಜಾಬ್‌ ವಿವಾದ ಆರಂಭವಾಗಿ ದೇಶಾದ್ಯಂತ ಚರ್ಚೆ ನಡೆಯುತ್ತಿದ್ದರೂ ಈವರೆಗೂ ಶೋಭಾ ಮಾತ್ರ ತುಟಿ ಬಿಚ್ಚದಿರುವುದು ಆಶ್ಚರ್ಯ ಮೂಡಿಸಿದೆ.

ADVERTISEMENT

ಶೋಭಾ ಅವರ ಕ್ಷೇತ್ರದಿಂದಲೇ ಈ ಹಿಜಾಬ್‌ ವಿವಾದ ಆರಂಭವಾಗಿ ಈಗ ರಾಜ್ಯವನ್ನು ಆವರಿಸಿದೆ. ಕೆಲವು ಜಿಲ್ಲೆಗಳಲ್ಲಿ ಹಿಜಾಬ್‌ ಹಾಗೂ ಕೇಸರಿ ಶಾಲು ಸತ್ತ ವಿದ್ಯಾರ್ಥಿಗಳ ಮಧ್ಯೆ ಘರ್ಷಣೆ ನಡೆದು, ಕಲ್ಲು ತೂರಾಟಗಳು ಕೂಡ ನಡೆದಿವೆ. ಇದರಿಂದ ಹಲವೆಡೆ ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿವೆ. ಇಷ್ಟೆಲ್ಲಾ ದುರ್ಘಟನೆ ನಡೆದಿದ್ದರೂ ಸಂಸದೆ ಶೋಭಾ ಮಾತ್ರ ಈ ವಿವಾದದ ಬಗ್ಗೆ ಈವರೆಗೂ ಮಾತನಾಡಿಲ್ಲ!

ಬಿಜೆಪಿಯಲ್ಲಿ ಮೊದಲ ಬಾರಿಗೆ ಒಂದು ರಾಜ್ಯದ ಉಸ್ತುವಾರಿಯಾಗಿ ಮಹಿಳೆಯನ್ನು ನೇಮಿಸಿದ್ದು ಸಂಸದೆ ಶೋಭಾ ಕರಂದ್ಲಾಜೆ ಅವರನ್ನು. ಅವರೀಗ ಉತ್ತರ ಪ್ರದೇಶ ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಕರ್ನಾಟಕದಲ್ಲಿ ಹಿಜಾಬ್‌ ವಿಚಾರ ಭುಗಿಲೆದ್ದು ತಮ್ಮ ಕ್ಷೇತ್ರದಲ್ಲೇ ಅಶಾಂತಿ ವಾತಾವರಣ ನಿರ್ಮಾಣವಾಗಿದೆ. ವಾಸ್ತವ ಹೀಗರಲೂ ಕೇಂದ್ರದಲ್ಲಿ ಕೃಷಿ ಮತ್ತು ರೈತ ಕಲ್ಯಾಣ ಕೇಂದ್ರದ ರಾಜ್ಯ ಸಚಿವೆಯಾಗಲು ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಮತದಾರರೇ ಕಾರಣ ಎಂಬ ಅಭಿಮಾನವನ್ನೇ ಶೋಭಾ ಮರೆತ್ರಾ? ಅಷ್ಟಕ್ಕೂ ಕರ್ನಾಟಕ ರಾಜ್ಯಕ್ಕಿಂತ ಅವರಿಗೆ ಉತ್ತರ ಪ್ರದೇಶವೇ ಮುಖ್ಯವಾಯಿತೇ?

ಒಂದು ಸಮಯದಲ್ಲಿ ಹಿಂದೂ – ಮುಸ್ಲಿಂ ಕುರಿತು ಯಾವುದೇ ವಿಚಾರ ಬಂದರೂ ತಕ್ಷಣವೇ ಶೋಭಾ ಪ್ರತಿಕ್ರಿಯಿಸುತ್ತಿದ್ದರು. ದೊಡ್ಡ ಮಟ್ಟದಲ್ಲಿ ಹಿಜಾಬ್ ರಾಜ್ಯದಲ್ಲಿ ವಿವಾದವಾಗಿ ಹೈಕೋರ್ಟ್‌ ಅಂಗಳಕ್ಕೆ ಬಂದಿದೆ. ಇಡೀ ದೇಶವೇ ಕರ್ನಾಟಕ ಹಿಜಾಬ್‌ ಸುತ್ತ ಚರ್ಚಿಸುತ್ತಿರುವಾಗ ಶೋಭಾ ಮಾತ್ರ ಮೌನವಾಗಿರುವುದು ವಿಪರ್ಯಾಸ! ಶೋಭಾ ಅವರ ಮೌನದ ನಡೆಕಂಡು ಉಡುಪಿ – ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಾರ್ವಜನಿಕರೇ ಶೋಭಾ ವಿರುದ್ಧ ಅಸಮಾಧಾನದ ಮಾತುಗಳನ್ನಾಡುತ್ತಿದ್ದಾರೆ.

ಮುಸ್ಲಿಂ ಹೆಣ್ಣು ಮಕ್ಕಳಿಗೆ ರಾಜ್ಯದಲ್ಲಿ ಶಿಕ್ಷಣ ವಂಚಿತರನ್ನಾಗಿ ಮಾಡಲಾಗುತ್ತಿದೆ ಎನ್ನುವ ಆರೋಪಗಳು ಹಿಜಾಬ್‌ ಸುತ್ತ ಹರಡಿಕೊಂಡಿವೆ. ಒಬ್ಬ ಮಹಿಳಾ ಪ್ರತಿನಿಧಿಯಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಧ್ವನಿ ಎತ್ತಬೇಕಾಗಿರುವುದು ಶೋಭಾ ಕರಂದ್ಲಾಜೆ ಅವರ ಜವಾಬ್ದಾರಿ. ಇನ್ನಾದರೂ ತಮ್ಮ ಮೌನ ಮುರಿಯುತ್ತಾರಾ ಎಂಬುದನ್ನು ಕಾದುನೋಡಬೇಕು.

Tags: BJPCongress PartyCovid 19ಉತ್ತರ ಪ್ರದೇಶಕರೋನಾಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಚಿವೆ ಶೋಭಾ ಕರಂದ್ಲಾಜೆಸಿದ್ದರಾಮಯ್ಯಹಿಜಾಬ್ – ಕೇಸರಿ ಶಾಲು
Previous Post

ಹಿಜಾಬ್ Vs ಕೇಸರಿ ಶಾಲು | ವಿದ್ಯಾರ್ಥಿಗೆ ಚಾಕುವಿನಿಂದ ಇರಿತ

Next Post

ಜೆಡಿಎಸ್ ನ ಜಾತ್ಯಾತೀತ ನಿಲುವು ದುರ್ಬಲಗೊಳ್ಳುತ್ತಿದೆ : ವೈ.ಎಸ್. ವಿ.ದತ್ತಾ

Related Posts

ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?
Top Story

ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

by ಪ್ರತಿಧ್ವನಿ
April 14, 2026
0

ಬೆಂಗಳೂರು : ಪಂಚಮಸಾಲಿ ಸಮಾಜದ ಎರಡು ಟ್ರಸ್ಟ್ ಸ್ವಂತ ಆಸ್ತಿಯಾಗಿವೆ, ಇದರಿಂದ ಸಮಾಜ ಹಾಗೂ ಜನರಿಂದ ನಂಬಿಕೆಗೆ ಅನರ್ಹವಾಗಿವೆ. ವಚನಾನಂದ ಶ್ರೀಗಳ ಉಚ್ಚಾಟನೆ ಅಷ್ಟೇನೂ ವಿಶೇಷ ಎಂದು...

Read moreDetails
ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

April 14, 2026
“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

April 14, 2026
ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಆದಿಚುಂಚನಗಿರಿ ಕಟ್ಟು ನಿಟ್ಟಿನ ಭದ್ರತೆ: ಸಿದ್ಧತೆ-ಭದ್ರತೆ ಹೀಗಿದೆ!

ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಆದಿಚುಂಚನಗಿರಿ ಕಟ್ಟು ನಿಟ್ಟಿನ ಭದ್ರತೆ: ಸಿದ್ಧತೆ-ಭದ್ರತೆ ಹೀಗಿದೆ!

April 14, 2026
ಮಂತ್ರಾಲಯ ರಾಯರ ಜಪದ ಕಟ್ಟೆ ಸಮೀಪ ಭೂ ವಿವಾದ ತೀವ್ರ; ಸರ್ವೆ ವೇಳೆ ಗಲಾಟೆ

ಮಂತ್ರಾಲಯ ರಾಯರ ಜಪದ ಕಟ್ಟೆ ಸಮೀಪ ಭೂ ವಿವಾದ ತೀವ್ರ; ಸರ್ವೆ ವೇಳೆ ಗಲಾಟೆ

April 14, 2026
Next Post
ಜೆಡಿಎಸ್ ನ ಜಾತ್ಯಾತೀತ ನಿಲುವು ದುರ್ಬಲಗೊಳ್ಳುತ್ತಿದೆ : ವೈ.ಎಸ್. ವಿ.ದತ್ತಾ

ಜೆಡಿಎಸ್ ನ ಜಾತ್ಯಾತೀತ ನಿಲುವು ದುರ್ಬಲಗೊಳ್ಳುತ್ತಿದೆ : ವೈ.ಎಸ್. ವಿ.ದತ್ತಾ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada