• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಬಡ್ಡಿದರ ಏರಿಕೆ ನಿರ್ಧಾರ; ಅಡಕತ್ತರಿಯಲ್ಲಿ ಸಿಕ್ಕ ಭಾರತೀಯ ರಿಸರ್ವ್ ಬ್ಯಾಂಕ್

ಪ್ರತಿಧ್ವನಿ by ಪ್ರತಿಧ್ವನಿ
February 7, 2022
in ದೇಶ
0
ಬಡ್ಡಿದರ ಏರಿಕೆ ನಿರ್ಧಾರ; ಅಡಕತ್ತರಿಯಲ್ಲಿ ಸಿಕ್ಕ ಭಾರತೀಯ ರಿಸರ್ವ್ ಬ್ಯಾಂಕ್
Share on WhatsAppShare on FacebookShare on Telegram

ಬಡ್ಡಿದರ ಏರಿಕೆ ಆಗಲಿದೆಯೇ? ಎಷ್ಟು ಏರಿಕೆ ಆಗಲಿದೆ? ಎಂಬುದು ಹಣಕಾಸು ಮಾರುಕಟ್ಟೆಯಲ್ಲೀಗ ಚಾಲ್ತಿಯಲ್ಲಿರುವ ಪ್ರಶ್ನೆಗಳು. ಭಾರತೀಯ ರಿಸರ್ವ್ ಬ್ಯಾಂಕಿನ ಹಣಕಾಸು ನೀತಿ ಸಮಿತಿಯ ದ್ವೈಮಾಸಿಕ ಸಭೆ ಫೆಬ್ರವರಿ 8-10ರವರೆಗೆ ಮೂರು ದಿನಗಳ ಕಾಲ ನಡೆಯಲಿದ್ದು, ಹಣಕಾಸು ನೀತಿ ಪರಾಮರ್ಶೆ ಮಾಡಲಿದೆ. ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಳ್ಳಬೇಕೋ ಅಥವಾ ಏರಿಕೆ ಮಾಡಬೇಕೋ ಎಂಬ ನಿರ್ಧಾರವನ್ನು ಫೆ.10ರಂದು ಗವರ್ನರ್ ಶಕ್ತಿಕಾಂತ ದಾಸ್ ಪ್ರಕಟಿಸಲಿದ್ದಾರೆ.

ADVERTISEMENT

ಸದ್ಯಕ್ಕೆ ಬಡ್ಡಿದರ ಇಳಿಯುವ ಯಾವುದೇ ಸಾಧ್ಯತೆಯಂತೂ ಇಲ್ಲವೇ ಇಲ್ಲ. ಏಕೆಂದರೆ ಕಳೆದ 21 ತಿಂಗಳಿಂದಲೂ ಬಡ್ಡಿದರ ಸಾರ್ವಕಾಲಿಕ ಕನಿಷ್ಠಮಟ್ಟದಲ್ಲೇ ಇದೆ. ಸುಧೀರ್ಘ ಅವಧಿಗೆ ಕನಿಷ್ಠ ಮಟ್ಟದ ಬಡ್ಡಿದರ ಕಾಯ್ದುಕೊಳ್ಳುವುದು ಅತ್ಯಪರೂಪ. ಈಗ ಕೋವಿಡ್ ಸಂಕಷ್ಟದಿಂದ ಆರ್ಥಿಕತೆ ಪಾರಾಗಲಿ ಎಂಬ ಕಾರಣಕ್ಕೆ ಕನಿಷ್ಠ ಮಟ್ಟದ ಬಡ್ಡಿದರ ಕಾಯ್ದುಕೊಳ್ಳಲಾಗಿದೆ.

ಈಗಾಗಲೇ ಕಡಮೆ ಬಡ್ಡಿದರದ ಪರಿಣಾಮ ಮಾರುಕಟ್ಟೆಯಲ್ಲಿ ನಗದು ಹರಿವು ಹೆಚ್ಚಿದ್ದು, ಹಣದುಬ್ಬರ ಏರುಹಾದಿಯಲ್ಲಿ ಸಾಗಿದೆ. ಚಿಲ್ಲರೆ ದರ ಹಣದುಬ್ಬರು ಶೇ.5.6ರಷ್ಟಿದ್ದು, ಸಗಟು ದರ ಹಣದುಬ್ಬರವು ಶೇ.13.5ರಷ್ಟಿದೆ. ಹಣದುಬ್ಬರ ಈ ಪ್ರಮಾಣದಲ್ಲಿ ಏರಿಕೆಯಾಗಿದ್ದಾಗಲೂ ಕನಿಷ್ಠ ಪ್ರಮಾಣದ ಬಡ್ಡಿದರ ಕಾಯ್ದುಕೊಳ್ಳುವುದು ಜಾಣತನವಲ್ಲ.

ಈ ಕಾರಣಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಇಕ್ಕಟ್ಟಿಗೆ ಸಿಲುಕಿದೆ. ತಕ್ಷಣ ಬಡ್ಡಿದರ ಏರಿಕೆ ಮಾಡಿದರೆ, ಚೇತರಿಕೆಯ ಹಾದಿಯಲ್ಲಿರುವ ಆರ್ಥಿಕತೆ ಮತ್ತೆ ತಟಸ್ಥವಾಗಬಹುದು ಅಥವಾ ಹಿಮ್ಮುಖವಾಗಿ ಚಲಿಸಲೂ ಬಹುದು. ಒಂದು ವೇಳೆ ಬಡ್ಡಿದರ ಏರಿಕೆ ಮಾಡದೇ ಹೋದರೆ, ಹಣದುಬ್ಬರ ಮತ್ತಷ್ಟು ಏರಬಹುದು. ಚಿಲ್ಲರೆ ದರ ಹಣದುಬ್ಬರ ಶೇ.6ರ ಗಡಿದಾಟಲೂ ಬಹುದು. ಸಗಟುದರ ಹಣದುಬ್ಬರ ಶೇ.15ರ ಆಜುಬಾಜಿಗೂ ಜಿಗಿಯಬಹುದು.

ಆರ್ಬಿಐ ಇಕ್ಕಟ್ಟಿನಲ್ಲಿ ಏಕೆ ಸಿಲುಕಿದೆ ಎಂದರೆ- ಕಳೆದ ಕಳೆದ ನವೆಂಬರ್ ತಿಂಗಳಿಂದ ಪೆಟ್ರೋಲ್, ಡಿಸೇಲ್ ದರ ತಟಸ್ಥವಾಗಿದೆ. ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ಚುನಾವಣೆ ಘೋಷಣೆಯಾಗುವ ಮುನ್ನವೇ ಕೇಂದ್ರದ ಮೋದಿ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆಗೆ ತಡೆಯೊಡ್ಡಿದೆ. ಚುನಾವಣೆ ಮುಗಿಯುವವರೆಗೂ ದರ ಏರಿಕೆಯಾಗುವುದಿಲ್ಲ. ಆದರೆ, ಚುನಾವಣೆ ಮುಗಿದ ನಂತರ ತೀವ್ರ ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ಏರಲಿದೆ.

ಏಕೆಂದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದರ ಜಿಗಿದಿದೆ. ಈಗಾಗಲೇ ಪ್ರತಿ ಬ್ಯಾರೆಲ್ ಗೆ 80 ಡಾಲರ್ ಗಡಿದಾಟಿದೆ. ಹೀಗಾಗಿ ದರ ಏರಿಕೆ ಅನಿವಾರ್ಯವಾಗುತ್ತದೆ. ಮತ್ತು ಎಷ್ಟು ತೀವ್ರವಾಗಿ ಏರುತ್ತದೆ ಎಂದರೆ ಏಪ್ರಿಲ್ ತಿಂಗಳಲ್ಲಿ ಹಣದುಬ್ಬರ ಪ್ರಮಾಣ ಶೇ.6.5ರಷ್ಟಕ್ಕೆ ಜಿಗಿದರೂ ಅಚ್ಚರಿಯಿಲ್ಲ. ಈ ಕಾರಣಗಳಿಗಾಗಿ ಆರ್ಬಿಐ ಬಡ್ಡಿದರ ಏರಿಕೆ ಮಾಡಿ ಹಣದುಬ್ಬರ ನಿಯಂತ್ರಿಸಬೇಕೋ ಅಥವಾ ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಂಡು ಆರ್ಥಿಕತೆ ಚೇತರಿಕೆಗೆ ಮತ್ತಷ್ಟು ಕಾಲವಕಾಶ ಕೊಡಬೇಕೋ ಎಂಬ ದ್ವಂದ್ವದಲ್ಲಿದೆ. ಈ ಹಂತದಲ್ಲಿ ಆರ್ಬಿಐ ಯಾವ ನಿರ್ಧಾರ ಕೈಗೊಂಡರೂ ಅದರಿಂದ ವ್ಯತಿರಿಕ್ತ ಪರಿಣಾಮಗಳಾಗುತ್ತವೆ.

ಹಾಲಿ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಕೇಂದ್ರ ಸರ್ಕಾರದ ಅಣತಿಯಂತೆಯೇ ನಿರ್ಧಾರ ಕೈಗೊಳ್ಳುವವರು. ಹೀಗಾಗಿ ಪ್ರಧಾನಿ ಸಚಿವಾಲಯ ಏನು ಸಂದೇಶ ನೀಡುತ್ತದೋ ಅದನ್ನಾಧರಿಸಿಯೇ ನಿರ್ಧಾರ ಕೈಗೊಳ್ಳುತ್ತಾರೆಂಬುದು ಗುಟ್ಟಾಗಿ ಏನೂ ಉಳಿದಿಲ್ಲ.

ಇವೆಲ್ಲದರ ನಡುವೆಯೂ ಬಡ್ಡಿದರ ಏರಿಕೆ ಕುರಿತಂತೆ ಹಣಕಾಸು ಮಾರುಕಟ್ಟೆಯಲ್ಲೇ ಭಿನ್ನ ಅಭಿಪ್ರಾಯಗಳಿವೆ. ಕೆಲವು ಅರ್ಥಶಾಸ್ತ್ರಜ್ಞರು ಆರ್ಥಿಕತೆ ಚೇತರಿಕೆಗಾಗಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂಬ ವಾದ ಮಂಡಿಸಿದರೆ, ಹಣದುಬ್ಬರ ಈಗಾಗಲೇ ಅಪಾಯಕಾರಿ ಮಟ್ಟ ಮುಟ್ಟಿರುವುದರಿಂದ ಬಡ್ಡಿದರ ಏರಿಸಿ ನಗದು ಹರಿವಿಗೆ ಕಡಿವಾಣ ಹಾಕಬೇಕು ಎಂದು ಮತ್ತೆ ಕೆಲವರು ವಾದಿಸುತ್ತಾರೆ.

ಕೆಲವರು ರೆಪೊದರ ಯಥಾಸ್ಥಿತಿ ಕಾಯ್ದುಕೊಂಡು ರಿವರ್ಸ್ ರೆಪೊ ದರವನ್ನು ಹೆಚ್ಚಿಸುವ ಸಾಧ್ಯತೆಯನ್ನು ಪ್ರತಿಪಾದಿಸುತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ರಿವರ್ಸ್ ರೆಪೊದರ ಏರಿಕೆ ಮಾಡುವುದೇ ಸೂಕ್ತ ಎಂಬುದು ಇವರ ವಾದ. ಸದ್ಯ ರೆಪೊ ದರವು ಶೇ.4ರಷ್ಟಿದ್ದರೆ, ರಿವರ್ಸ್ ರೆಪೊ ದರವು ಶೇ.3.45 ರಷ್ಟಿದೆ. ಇದನ್ನು ಶೇ.3.75ಕ್ಕೆ ಏರಿಸುವ ಸಾಧ್ಯತೆಯೂ ಇದೆ.

ದೇಶದಲ್ಲಿ ಆರ್ಥಿಕತೆ ಚೇತರಿಕೆಯ ಹಾದಿಯಲ್ಲಿದೆ ಎಂಬ ಕಾರಣಕ್ಕೆ ಬಡ್ಡಿದರ ಏರಿಕೆ ಮಾಡುವ ನಿರೀಕ್ಷೆ ಹಣಕಾಸು ಮಾರುಕಟ್ಟೆಯಲ್ಲಿದೆ. ಬಡ್ಡಿದರ ಏರಿಕೆಯಾದರೆ ಮತ್ತೆ ಸಾಲದ ಮೇಲಿನ ಬೇಡಿಕೆ ತಗ್ಗಿ, ಆರ್ಥಿಕ ಚೇತರಿಕೆಗೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಕೆಲ ಅರ್ಥಶಾಸ್ತ್ರಜ್ಞರು.

ಅಂತಿಮವಾಗಿ ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರು, ಬಡ್ಡಿದರ ಏರಿಕೆ ಮಾಡಿದರೆ, ಈಗಾಗಲೇ ಮಾಡಿರುವ ಸಾಲಗಳ ಮೇಲಿನ ಇಎಂಐ (ಮಾಸಿಕ ಸಮಾನ ಕಂತು) ಹೆಚ್ಚಳವಾಗಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ.

Tags: BJPCongress PartyCovid 19Interest rate hike decision; Reserve Bank of Indiaಕರೋನಾಕೋವಿಡ್-19ನರೇಂದ್ರ ಮೋದಿಬಿಜೆಪಿ
Previous Post

ಅಸಾದುದ್ದೀನ್ ಓವೈಸಿಗೆ Z-category security ಸ್ವೀಕರಿಸುವಂತೆ ಗೃಹ ಸಚಿವ ಅಮಿತ್ ಷಾ ಮನವಿ

Next Post

ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರಿಗೆ RTPCR ವರದಿ ಕಡ್ಡಾಯ ಬೇಡ : ಸರ್ಕಾರಕ್ಕೆ TAC ಸಲಹೆ

Related Posts

Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
0

ಹಾಸನ ಜಿಲ್ಲೆಯ ಇಂಧನ ಇಲಾಖೆ ಪ್ರಗತಿ ಪರಿಶೀಲನಾ ಸಭೆ ರಾಜ್ಯದಲ್ಲಿ ಮೂರು ಸಾವಿರ ಅಕ್ರಮ ಪಂಪ್ ಸೆಟ್ ಗಳ ಸಕ್ರಮ ಕೃಷಿ ಫೀಡರ್ ಗಳನ್ನು ಸೌರೀಕರಣಗೊಳಿಸಿ ರೈತರ...

Read moreDetails

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

July 3, 2025
Next Post
ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರಿಗೆ RTPCR ವರದಿ ಕಡ್ಡಾಯ ಬೇಡ : ಸರ್ಕಾರಕ್ಕೆ TAC ಸಲಹೆ

ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರಿಗೆ RTPCR ವರದಿ ಕಡ್ಡಾಯ ಬೇಡ : ಸರ್ಕಾರಕ್ಕೆ TAC ಸಲಹೆ

Please login to join discussion

Recent News

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,
Top Story

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

by ಪ್ರತಿಧ್ವನಿ
July 5, 2025
Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

July 5, 2025

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada