• Home
  • About Us
  • ಕರ್ನಾಟಕ
Thursday, July 10, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Uncategorized

Fact Check : ಸರ್ಕಾರಿ ಆಸ್ಪತ್ರೆಯಲ್ಲಿ 7 ದಿನ.. ಖಾಸಗಿ ಆಸ್ಪತ್ರೆಯಲ್ಲಿ 3 ದಿನದಲ್ಲೇ ಸೋಂಕು ಗುಣ : ಏನಿದರ ಹಿಂದಿನ ಅಸಲಿಯತ್ತು?

ಕರ್ಣ by ಕರ್ಣ
January 23, 2022
in Uncategorized, ಕರ್ನಾಟಕ
0
Fact Check : ಸರ್ಕಾರಿ ಆಸ್ಪತ್ರೆಯಲ್ಲಿ 7 ದಿನ.. ಖಾಸಗಿ ಆಸ್ಪತ್ರೆಯಲ್ಲಿ 3 ದಿನದಲ್ಲೇ ಸೋಂಕು ಗುಣ : ಏನಿದರ ಹಿಂದಿನ ಅಸಲಿಯತ್ತು?
Share on WhatsAppShare on FacebookShare on Telegram

ಕೊರೋನಾ ಸೋಂಕು ಬಾಧಿಸುವ ಜನರು ಖಾಸಗಿ ಆಸ್ಪತ್ರೆಯಲ್ಲಿ ಕೇವಲ ಎರಡ್ಮೂರು ದಿನಗಳಿಗೆ ಗುಣಮುಖರಾಗಿ ಹೊರ ಬರುತ್ತಿದ್ದಾರೆ. ಆದರೆ ಇದೇ ವೇಳೆ ಸರ್ಕಾರಿ ಆಸ್ಪತ್ರೆಯಲ್ಲಿ 7 ದಿನಗಳವರೆಗೆ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆ ಬಳಿಕವಷ್ಟೇ ಸರ್ಕಾರಿ ಆಸ್ಪತ್ರೆಯಲ್ಲಿರುವ ಸೋಂಕಿತರು ಗುಣಮುಖರಾಗುತ್ತಿದ್ದಾರೆ. ಇದು ಈಗ ಬಹಳ ಗೊಂದಲ ಸೃಷ್ಟಿಸಿದ್ದು, ಕೆಲವರಲ್ಲಂತೂ ಬಹಳ ಗೊಂದಲ ಸೃಷ್ಟಿಸಿದೆ. ಅಷ್ಟಕ್ಕೂ ಏನಿದರ ಹಿಂದಿನ ಅಸಲಿಯತ್ತು..? ಎಂಬುವುದನ್ನು ಪ್ರತಿಧ್ವನಿ ಪತ್ತೆ ಮಾಡಿ, ಓದುಗರಿಗೆ ವಿವರಿಸುವ ಪ್ರಯತ್ನ ಮಾಡುತ್ತಿದೆ. 

ADVERTISEMENT

ಸರ್ಕಾರಿ ಆಸ್ಪತ್ರೆಗಳಿಗಿಂತ ಹೆಚ್ಚು ಸೋಂಕಿತರು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಸದ್ಯ ಹೆಚ್ಚು ಕಮ್ಮಿ ಬೆಂಗಳೂರಿನಲ್ಲಿ 700 ಮಂದಿಯಷ್ಟು ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 75% ಮಂದಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಮನಸ್ಸು ಮಾಡಿದ್ದಾರೆ. ಏಕೆಂದರೆ, ಬಹು ಬೇಗನೆ ಖಾಸಗಿ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರು ಗುಣಮುಖರಾಗುತ್ತಿದ್ದಾರೆ. ಗುಣ ಲಕ್ಷಣಗಳೊಂದಿಗೆ ದಾಖಲಾದರೆ ಎರಡ್ಮೂರು ದಿನದಲ್ಲೇ ಸೋಂಕಿತರಿಗೆ ಕೊರೋನಾದಿಂದ ಮುಕ್ತಿ ಪಡೆಯುತ್ತಿದ್ದಾರೆ. ಆದರೆ ಸರ್ಕಾರಿ ಆಸ್ಪತ್ರೆಯಲ್ಲಿ ಗುಣಮುಖರಾಗಲು ಏಳು ದಿನಗಳು ತಗುಲುತ್ತಿದೆ. ಸರ್ಕಾರಿ ಆಸ್ಪತ್ರೆಯಲ್ಲೊಂದು ರೀತಿ, ಖಾಸಗಿ ಆಸ್ಪತ್ರೆಯಲ್ಲಿ ಮತ್ತೊಂದು ರೀತಿಯಿಂದಾಗಿ ಜನರೀಗ ಗುಮಾನಿಯಿಂದ ನೋಡುವಂತಾಗಿದೆ.  ಅಷ್ಟಕ್ಕೂ ಇದಕ್ಕೇನು ಕಾರಣ..?

ಈ ಬಗ್ಗೆ ಪ್ರತಿಧ್ವನಿ ತಂಡ ಖಾಸಗಿ ಆಸ್ಪತ್ರೆಗಳ ವೈದ್ಯರ ಬಳಿ ಗೌಪ್ಯವಾಗಿ ವಿಚಾರ ತಿಳಿದುಕೊಳ್ಳುವಂತ ಪ್ರಯತ್ನ ಮೊದಲು ಮಾಡಿತು. ಈ ವೇಳೆ ಅಸ್ಪಷ್ಟವಾದ ಮಾಹಿತಿ ಸಿಕ್ಕಿತ್ತಾದರೂ ಎರಡ್ಮೂರು ದಿನಗಳಲ್ಲೇ ಸೋಂಕಿತರು ಗುಣಮುಖರಾಗುತ್ತಿರುವುದರ ಹಿಂದಿನ ರಹಸ್ಯ ಗೊತ್ತಾಗಿರಲಿಲ್ಲ. ಆದರೆ ನಿರಂತರವಾದ ಪ್ರಯತ್ನ ಹಾಗೂ ತನಿಖೆಯಿಂದಾಗಿ ಕೊನೆಗೂ ಇದೀಗ ಪ್ರತಿಧ್ವನಿ ಇದರ ಹಿಂದಿನ ಅಸಲಿಯತ್ತನ್ನು ಪತ್ತೆ ಮಾಡಿ ಜನರ ಮುಂದಿಡುತ್ತಿದೆ. 

ಖಾಸಗಿ ಆಸ್ಪತ್ರೆ ಸೇರುತ್ತಿರುವ ಕೊರೋನಾ ಸೋಂಕಿತರು ಬಹುಬೇಗನೆ ಗುಣಮುಖರಾಗಲು ಪ್ರಮುಖ ಕಾರಣ ಮೊಲ್ನಾಪಿರಾವಿರ್ ಎಂಬ ಮಾತ್ರೆಯನ್ನು ಸೋಂಕಿತರಿಗೆ ನೀಡುತ್ತಿರುವುದರಿಂದ. ಈ ಮೊಲ್ನಾಪಿರಾವಿರ್ ಔಷಧಿ ಒಂದು ಬಗೆಯ Anti Viral Capsule. ಕೊರೋನಾ ಪಾಸಿಟಿವ್ ಆಗಿ ದಾಖಲಾಗುತ್ತಿರುವ ಸೋಂಕಿತರಿಗೆ ಖಾಸಗಿ ಆಸ್ಪತ್ರೆಯಲ್ಲಿ ಈ ಮಾತ್ರೆಯನ್ನು ನೀಡಲಾಗುತ್ತಿದೆ. ಎರಡನೇ ಅಲೆಯಲ್ಲಿ ಸ್ಟಿರಾಯ್ಡ್ ಮಾದರಿಯ ಮಾತ್ರೆಗಳನ್ನು ಕೊಟ್ಟ ಪರಿಣಾಮ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡು ಆತಂಕ ಮತ್ತಷ್ಟು ಹೆಚ್ಚಿಸಿತ್ತು. ಇದೀಗ ಮೂರನೇ ಅಲೆಯಲ್ಲೂ ಖಾಸಗಿ ಆಸ್ಪತ್ರೆಗಳು ಅದೇ ಮಾದರಿಯ ಔಷಧಿಯನ್ನು ಸೋಂಕಿತರಿಗೆ ಕೊಡಮಾಡುತ್ತಿದೆ. ಇದು ಈಗ ಆತಂಕ ಇಮ್ಮಡಿಯಾಗಿಸಿದೆ. ಏಕೆಂದರೆ ಕೊರೋನಾ ತಡೆಯುವಲ್ಲಿ ಈ ಔಷಧಿ ಶಕ್ತಿಶಾಲಿಯಾಗಿದ್ದರೆ ಸರ್ಕಾರಿ ಆಸ್ಪತ್ರೆಯಲ್ಲೇಕೆ ಇದನ್ನು ನೀಡುತ್ತಿಲ್ಲಾ ಎಂಬ ಪ್ರಶ್ನೆ ಸದ್ಯದ್ದು.

ಹೇಳಿ ಕೇಳಿ, ಈ ಮೊಲ್ನಾಪಿರಾವಿರ್ ಮಾತ್ರೆಯನ್ನು ICMR ಕೊರೋನಾ ಸೊಂಕಿತರಿಗೆ ನೀಡಲಾಗಿತ್ತುರುವ ಔಷಧಿಗಳ ಪಟ್ಟಿಯಿಂದ ಹಲವು ಕಾರಣಳಿಂದ ಕೈ ಬಿಟ್ಟಿದೆ. ಮೂರನೇ ಅಲೆಯಲ್ಲಿ ಸೋಂಕು ಹೆಚ್ಚಳವಾದರೂ ಅದರ ತೀವ್ರತೆ ಕಡಿಮೆಯಿದೆ. ಹೀಗಾಗಿ ದೇಹದ ಮೇಲೆ ಭಾರೀ ಪ್ರಮಾಣದಲ್ಲಿ ಪ್ರಭಾವ ಬೀರುವ ಔಷಧಿಗಳನ್ನೆಲ್ಲಾ ಸರ್ಕಾರ ICMR ಸಲಹೆಯ ಮೇರೆಗೆ ಕೈ ಬಿಟ್ಟಿದೆ. ಹೀಗಿದ್ದರೂ ಖಾಸಗಿ ಆಸ್ಪತ್ರೆಗಳು ಸರ್ಕಾರದ ಕೊರೋನಾ ನಿಯಮಾವಳಿಗಳನ್ನು ಗಾಳಿಗೆ ತೂರಿ ಕಾನೂನು ಬಾಹಿರವಾಗಿ ಈ  ಮೊಲ್ನಾಪಿರಾವಿರ್ ಮಾತ್ರೆಯನ್ನು ಸೋಂಕಿತರಿಗೆ ನೀಡಲಾಗುತ್ತಿದೆ. ಈ ಬಗ್ಗೆ ಪ್ರತಿಧ್ವನಿಯೊಂದಿಗೆ ಮಾತನಾಡಿದ ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಅಧ್ಯಕ್ಷ ಡಾ. ಪ್ರಸನ್ನ, ವಿದೇಶಗಳಲ್ಲಿ ಈ ಮೊಲ್ನಾಪಿರಾವಿರ್ ಔಷಧಿ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಆದರೆ ICMR ಯಾಕೆ ಕೊರೋನಾ ಚಿಕಿತ್ಸೆಯಿಂದ ಕೈ ಬಿಟ್ಟಿದೆ ಎಂಬುವುದು ಗೊತ್ತಿಲ್ಲ. ಆದರೆ ಅವರು ಕೈ ಬಿಟ್ಟಿದ್ದಾರೆ ಎಂಬ ಮಾತ್ರಕ್ಕೆ ನಾವು ಔಷಧಿಯನ್ನು ಕೊಡಬಾರದು ಎಂಬ ನಿಯಮವೇನಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. 

ಇನ್ನು ಈ ಮೊಲ್ನಾಪಿರಾವಿರ್ ಮಾತ್ರೆಯ ಬೆಲೆ ಬಹಳ ಅಗ್ಗವಾಗಿದ್ದು ಒಂದು ಸ್ಟ್ರಿಪ್ ಮಾತ್ರೆಗೆ 600 ರೂಪಾಯಿ ಇದೆ.  ಓರ್ವ ಕೊರೋನಾ ಸೋಂಕಿತನಿಗೆ ಐದು ಕೋರ್ಸ್ ಮಾದರಿಯಲ್ಲಿ 800 mg ಯಷ್ಟು ಪ್ರಮಾಣದಲ್ಲಿ ನೀಡಿದರೆ ಎರಡ್ಮೂರು ದಿನದಲ್ಲೇ ಸೋಂಕಿತರು ಸೋಂಕು ಮುಕ್ತರಾಗುತ್ತಿದ್ದಾರೆ. ಇದೇ ಕಾರಣಕ್ಕೆ ಖಾಸಗಿ ಆಸ್ಪತ್ರೆಗೆ ಹೆಚ್ಚೆಚ್ಚು ಜನ ಮುಖ ಮಾಡಿದ್ದು ಕೆಲವೇ ಕೆಲವು ದಿನಗಳಲ್ಲಿ ಸೋಂಕು ಮುಕ್ತರಾಗುತ್ತಿದ್ದಾರೆ.

Tags: BJPCongress PartyCovid 19ಕರೋನಾಕೋವಿಡ್-19
Previous Post

ದೆಹಲಿಯಲ್ಲಿ ಪ್ರಜ್ವಲಿಸಲಿದೆ ಹುಬ್ಬಳ್ಳಿಯ ಭರತನಾಟ್ಯ; ಗಣರಾಜ್ಯೋತ್ಸವಕ್ಕೆ ಮಯೂರಿ ನೃತ್ಯ ತಂಡದ ಪ್ರದರ್ಶನ

Next Post

`ಟ್ರೆಂಡ್ ಶತಮಾನಗಳ ಕಾಲ ಉಳಿಯಲಿ’: ಟ್ವಿಟರ್ ಟ್ರೆಂಡ್‌ಗೆ ಭಾರತೀಯ ಮಹಿಳೆಯರ ಪ್ರತಿಕ್ರಿಯೆ

Related Posts

Top Story

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

by ಪ್ರತಿಧ್ವನಿ
July 9, 2025
0

ತರುಣ್‌ ಸುಧೀರ್‌ ನಿರ್ಮಾಣದ ಹೊಸ ಚಿತ್ರಕ್ಕೆ ಶಿವಣ್ಣ-ಪ್ರೇಮ್‌ ಸಾಥ್..ʼಏಳುಮಲೆʼ ಟೈಟಲ್‌ ಟೀಸರ್‌ನಲ್ಲಿ ಮಿಂಚಿದ ರಕ್ಷಿತಾ ಸಹೋದರ ರಾಣಾ. ತರುಣ್ ಕಿಶೋರ್ ಸುಧೀರ್ ನಿರ್ಮಾಣ ಮಾಡುತ್ತಿರುವ ಪುನೀತ್ ರಂಗಸ್ವಾಮಿ...

Read moreDetails

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

July 9, 2025

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

July 9, 2025

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

July 9, 2025

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಗೌರಿಬಿದನೂರು

July 9, 2025
Next Post
`ಟ್ರೆಂಡ್ ಶತಮಾನಗಳ ಕಾಲ ಉಳಿಯಲಿ’: ಟ್ವಿಟರ್ ಟ್ರೆಂಡ್‌ಗೆ ಭಾರತೀಯ ಮಹಿಳೆಯರ ಪ್ರತಿಕ್ರಿಯೆ

`ಟ್ರೆಂಡ್ ಶತಮಾನಗಳ ಕಾಲ ಉಳಿಯಲಿ': ಟ್ವಿಟರ್ ಟ್ರೆಂಡ್‌ಗೆ ಭಾರತೀಯ ಮಹಿಳೆಯರ ಪ್ರತಿಕ್ರಿಯೆ

Please login to join discussion

Recent News

Top Story

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

by ಪ್ರತಿಧ್ವನಿ
July 9, 2025
Top Story

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

by ಪ್ರತಿಧ್ವನಿ
July 9, 2025
Top Story

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

by ಪ್ರತಿಧ್ವನಿ
July 9, 2025
Top Story

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

by ಪ್ರತಿಧ್ವನಿ
July 9, 2025
Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಗೌರಿಬಿದನೂರು

by ಪ್ರತಿಧ್ವನಿ
July 9, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

July 9, 2025

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

July 9, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada