ಮುಂದಿನ ತಿಂಗಳು ಏಳು ಹಂತಗಳಲ್ಲಿ ಚುನಾವಣೆ ಎದುರಿಸಲಿರುವ ಉತ್ತರಪ್ರದೇಶದಲ್ಲಿ ಬಿಜೆಪಿಗೆ ಆಘಾತದ ಮೇಲೆ ಆಘಾತ ಉಂಟಾಗುತ್ತಿದೆ ಈಗಾಗಲೇ ಮೂವರು ಸಚಿವರು ಹಾಗೂ 6 ಶಾಸಕರು ಬಿಜೆಪಿ ಪಕ್ಷವನ್ನು ತೊರೆದು ಎಸ್ಪಿ ಹಾಗೂ ಆರ್ಎಲ್ಡಿಗೆ ಸೇರಿದ್ದಾರೆ. ಈ ಮಧ್ಯೆ ಬಿಜೆಪಿಯ ಮಿತ್ರ ಪಕ್ಷ ಅಪ್ನಾ ದಳದ ಇಬ್ಬರು ಶಾಸಕರು ರಾಜೀನಾಮೆಯನ್ನು ನೀಡಿ ಎಸ್ಪಿಗೆ ಸೇರುವುದಾಗಿ ಹೇಳಿದ್ದಾರೆ.
ಅಪ್ನಾ ದಳದ ಚೌಧರಿ ಅಮರ್ ಸಿಂಗ್ ಹಾಗೂ ಆರ್.ಕೆ.ವರ್ಮಾ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಎಸ್ಪಿಗೆ ಸೇರುವುದಾಗಿ ಘೋಷಿಸಿದ್ದಾರೆ. ರಾಜೀನಾಮೆ ನೀಡಿದ ನಂತರ ಮಾತನಾಡಿದ ಇಬ್ಬರು ಶಾಸಕರು ಯೋಗಿ ಆದಿತ್ಯನಾಥ್ ಹಾಗೂ ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ ಮತ್ತು ಇದು ಹಿಂದುಳಿದವರ ವಿರೋಧಿ ಸರ್ಕಾರ ಎಂದು ಇಲ್ಲಿಯವರೆಗೂ ರಾಜೀನಾಮೆ ನೀಡರುವ ಅಷ್ಟು ಸಚಿವರು ಹಾಗೂ ಶಾಸಕರು ಆರೋಪಿಸಿದ್ದಾರೆ.