• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಿಶೇಷ

ಲಾಕ್ಡೌನ್ ಭೀತಿ; ಮತ್ತೆ ತಮ್ಮೂರಿನತ್ತ ಮುಖ ಮಾಡಿದ ವಲಸೆ ಕಾರ್ಮಿಕರು

Any Mind by Any Mind
January 11, 2022
in ವಿಶೇಷ
0
ಲಾಕ್ಡೌನ್ ಭೀತಿ; ಮತ್ತೆ ತಮ್ಮೂರಿನತ್ತ ಮುಖ ಮಾಡಿದ ವಲಸೆ ಕಾರ್ಮಿಕರು
Share on WhatsAppShare on FacebookShare on Telegram

ಕಳೆದ ವರ್ಷದಿಂದಲೇ ಶುರುವಾದ ಕರೋನಾ ಹಾವಳಿ ಜನರ ಬದುಕು ಕಸಿದುಕೊಳ್ಳುತ್ತಿದ್ದು, ಇದೀಗ ಪುನಃ ಮತ್ತೆ ವೀಕೆಂಡ್ ಕರ್ಫ್ಯೂ ವಿಧಿಸಿ ವ್ಯಾಪಾರಿಗಳಿಗೆ ಹಾಗೂ ಇನ್ನಿತರ ಉದ್ಯಮಿಗಳಿಗೆ ಹೊಡೆತ ಬಿದ್ದಿದೆ. ದೆಹಲಿಯಲ್ಲಂತೂ ಪರಿಸ್ಥಿತಿ ಬಿಗಡಾಯಿಸಿದ್ದು, ಭಯದಿಂದ ಜನ ತಮ್ಮ ಊರುಗಳತ್ತ ಗಂಟುಮೂಟೆ ಸಮೇತ ತೆರಳುತ್ತಿದ್ದಾರೆ.

ADVERTISEMENT

ರಾಜ್ಯ ಸರ್ಕಾರದರ ಧಿಡೀರ್ ಕರ್ಫ್ಯೂ ಬಗ್ಗೆ ಭಯಭೀತರಾದ ಅದೆಷ್ಟೋ ಜನ ವಾಪಾಸು ಎಲ್ಲಿ ಲಾಕ್ ಡೌನ್ ಆಗುತ್ತದೋ ಎಂಬ ಭಯದಿಂದ ತವರು ರಾಜ್ಯಗಳತ್ತ ಕಾಲಿಡುತ್ತಿದ್ದಾರೆ. ಈ ಕುರಿತು ಮಾತನಾಡಿದ ವಲಸೆ ಕಾರ್ಮಿಕ ಮಾರ್ಯ, ಕಳೆದ ಬಾರಿ, ನಾನು ನನ್ನ ಕುಟುಂಬದೊಂದಿಗೆ ಸಿಲುಕಿಕೊಂಡಿದ್ದೆ. ಲಾಕ್ಡೌನ್ ಅವಧಿಯನ್ನು ಕ್ರಮೇಣ ವಿಸ್ತರಿಸಲಾಯಿತು. ಈ ವೇಳೆ ನಾನು ಸಾಕಷ್ಟು ಕಷ್ಟಗಳನ್ನು ಎದುರಿಸಿದೆ. ಅದಕ್ಕಾಗಿಯೇ ಕರ್ಫ್ಯೂ ಬಗ್ಗೆ ಕೇಳಿದಾಗ ಭಯವಾಗುತ್ತದೆ ಎಂದರು. ತನ್ನ ನೋವನ್ನು ಹೊರಹಾಕಿದ ಇವರು, ಈ ಬಾರಿ ಕರ್ಫ್ಯೂ ವಿಸ್ತರಿಸದಿದ್ದರೆ ನಾವು ಪುನಃ ಬರುತ್ತೇವೆ. ಲಾಕ್ ಡೌನ್ ಗೆ ಹೆದರಿಕೊಂಡು ನಾನು ಜನವರಿ 6 ರಂದು ಮನೆಗೆ ಹೊರಟೆ. ನಮಗೆ ಜೀವ, ಜೀವನ ಎರಡೂ ಮುಖ್ಯ. ನಮ್ಮ ಜೊತೆ ವಿನೋದ್ ಎಂಬ ಗ್ರಾಮಸ್ಥನೂ ಒಟ್ಟಿಗೆ ಬಂದಿದ್ದಾರೆ. ಮುಂದಿನ ಪರಿಸ್ಥಿತಿ ನೋಡಿಕೊಂಡು ರಾಷ್ಟ್ರ ರಾಜಧಾನಿಯತ್ತ ಬರುತ್ತೇವೆ ಎಂದು ನೋವು ತೋಡಿಕೊಂಡರು.

ದೆಹಲಿಯ ದೈನಂದಿನ ಕೋವಿಡ್ ಸಂಖ್ಯೆ ಒಂದು ದಿನದಲ್ಲಿ 20,000 ಕ್ಕೂ ಹೆಚ್ಚು ಪ್ರಕರಣ ದಾಟಿದೆ. ಸೋಂಕಿನ ಉಲ್ಬಣದಿಂದಾಗಿ, ಲಾಕ್ಡೌನ್ ಹೇರುವ ಸಾಧ್ಯತೆಯಿದೆ. ಇದು ವಲಸೆ ಕಾರ್ಮಿಕರ ಆತಂಕಕ್ಕೆ ಕಾರಣವಾಗಿದೆ.

ಕೋವಿಡ್ ನಿಯಂತ್ರಿಸಲು ಸರ್ಕಾರ ರಾತ್ರಿ, ವಾರಾಂತ್ಯದ ಕರ್ಫ್ಯೂ ವಿಧಿಸಿದ್ದರೂ, ಪ್ರಸ್ತುತ ಪರಿಸ್ಥಿತಿ ಗಮನಿಸಿದರೆ, ವಲಸೆ ಕಾರ್ಮಿಕರು ಈ ಬಾರಿ ನೆಲೆನಿಲ್ಲಲು ಹಿಂದೇಟು ಹಾಕುತ್ತಿದ್ದಾರೆ.

ದೆಹಲಿಯ ಪ್ರೇಮ್ ನಗರದ ಸೊಸೈಟಿಯೊಂದರಲ್ಲಿ ಗುತ್ತಿಗೆದಾರರಾಗಿರುವ ತೌಫಿಕ್ ಅವರ ಜೊತೆ ಕೆಲಸ ಮಾಡುತ್ತಿರುವ ಅನೇಕ ಹಳ್ಳಿಗರು, ರಾಷ್ಟ್ರ ರಾಜಧಾನಿಯಲ್ಲಿ ಕರ್ಫ್ಯೂ ಹೇರುವ ಮುಂಚೆಯೇ ತಮ್ಮ ಮನೆಗೆ ತೆರಳಿದ್ದಾರೆ. ಆಹಾರದ ಕೊರತೆಯಿಲ್ಲ ಎಂದು ವಲಸೆ ಕಾರ್ಮಿಕರಿಗೆ ನಾವು ಭರವಸೆ ನೀಡಿದ್ದರೂ, ಅವರು ಭಯಭೀತರಾಗಿದ್ದರು ಎಂದು ತೌಫಿಕ್ ಹೇಳಿದ್ದಾರೆ

ದೆಹಲಿಯಲ್ಲಿ ಕೆಲಸ ಮಾಡುವ ಹೆಚ್ಚಿನ ಜನರು ಬೇರೆ ರಾಜ್ಯಗಳಿಂದ ಬಂದವರು. ಕೋವಿಡ್ ಪರಿಸ್ಥಿತಿ ಸುಧಾರಿಸದಿದ್ದರೆ, ಹಿಂದಿನ ಲಾಕ್ಡೌನ್ಗಳ ಸಮಯದಲ್ಲಿ ಎದುರಿಸಿದ ಸಮಸ್ಯೆಗಳಿಗೆ ರಾಷ್ಟ್ರ ರಾಜಧಾನಿ ಮರು ಸಾಕ್ಷಿಯಾಗಬಹುದು.ದೆಹಲಿಯಲ್ಲಿ ಮುಂದಿನ ಸೋಮವಾರದಂದು ಕೇಜ್ರಿವಾಲ್ ಸರ್ಕಾರ ಕೋವಿಡ್ ಪರಿಸ್ಥಿತಿಯನ್ನು ಪರಿಶೀಲಿಸಿಕೊಂಡ ನಂತರ ಲಾಕ್ ಡೌನ್ ಹೇರಬೇಕೋ? ಬೇಡವೋ ಎಂದು ನಿರ್ಧರಿಸುತ್ತದೆ.

Tags: BJPCongress PartyCovid 19Lockdownಕರೋನಾಕೋವಿಡ್-19ಬಿಜೆಪಿ
Previous Post

ಪ್ರಿಯಾಂಕ ಗಾಂಧಿ ಸತತ ಪರಿಶ್ರಮದ  ಫಲವಾಗಿ ಯುಪಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ : ಕಮಲನಾಥ್ ಭವಿಷ್ಯ

Next Post

ಸರ್ಕಾರದ ಪಾರದರ್ಶಕತೆಗೆ ತಗುಲಿದ ಸೋಂಕು, ಒಮಿಕ್ರೋನ್ ಅಲೆಯಲ್ಲೂ ತೀವ್ರ!

Related Posts

ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 23, 2026
0

ಬೆಂಗಳೂರು: ಬೆಸ್ಕಾಂನ ಹೈ ಟೆನ್ಷನ್ ಗ್ರಾಹಕರಿಗಾಗಿ ಸಂಸ್ಥೆಯ ಇಂಜಿನಿಯರ್‌ಗಳು ಅಭಿವೃದ್ಧಿಪಡಿಸಿರುವ ಸೇವೆ ಕೋರಿಕೆ/ಕುಂದುಕೊರತೆ ಪರಿಹಾರ ಪೋರ್ಟಲ್ 'ಹೆಚ್‌ಟಿ ಮಿತ್ರ'ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಗುರುವಾರ...

Read moreDetails
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

April 23, 2026
ಸುಡುವುದಿಲ್ಲ, ಹೂಳುವುದಿಲ್ಲ… ಈ ಗ್ರಾಮದ ವಿಚಿತ್ರ ಅಂತ್ಯಕ್ರಿಯೆ ಪದ್ಧತಿ!

ಸುಡುವುದಿಲ್ಲ, ಹೂಳುವುದಿಲ್ಲ… ಈ ಗ್ರಾಮದ ವಿಚಿತ್ರ ಅಂತ್ಯಕ್ರಿಯೆ ಪದ್ಧತಿ!

April 15, 2026
ಪಾಸ್‌ಪೋರ್ಟ್ ಇಲ್ಲದೇ ವಿಶ್ವ ಸುತ್ತುವ 3 ಮಂದಿ ಯಾರು? ಇಲ್ಲಿದೆ ಕುತೂಹಲಕಾರಿ ಮಾಹಿತಿ

ಪಾಸ್‌ಪೋರ್ಟ್ ಇಲ್ಲದೇ ವಿಶ್ವ ಸುತ್ತುವ 3 ಮಂದಿ ಯಾರು? ಇಲ್ಲಿದೆ ಕುತೂಹಲಕಾರಿ ಮಾಹಿತಿ

April 14, 2026
Next Post
ಸರ್ಕಾರದ ಪಾರದರ್ಶಕತೆಗೆ ತಗುಲಿದ ಸೋಂಕು, ಒಮಿಕ್ರೋನ್ ಅಲೆಯಲ್ಲೂ ತೀವ್ರ!

ಸರ್ಕಾರದ ಪಾರದರ್ಶಕತೆಗೆ ತಗುಲಿದ ಸೋಂಕು, ಒಮಿಕ್ರೋನ್ ಅಲೆಯಲ್ಲೂ ತೀವ್ರ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada