• Home
  • About Us
  • ಕರ್ನಾಟಕ
Friday, July 25, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಓಮೈಕ್ರಾನ್ ತಡೆಗಟ್ಟಲು ತಜ್ಞರಿಂದ ನೈಟ್ ಕರ್ಫ್ಯೂ ಸಲಹೆ : ನಾಳೆ ಅಧಿಕಾರಿಗಳ ಸಭೆ ಕರೆದ ಸಿಎಂ ಬಸವರಾಜ ಬೊಮ್ಮಾಯಿ

ಕರ್ಣ by ಕರ್ಣ
December 25, 2021
in ಕರ್ನಾಟಕ
0
ಓಮೈಕ್ರಾನ್ ತಡೆಗಟ್ಟಲು ತಜ್ಞರಿಂದ ನೈಟ್ ಕರ್ಫ್ಯೂ ಸಲಹೆ : ನಾಳೆ ಅಧಿಕಾರಿಗಳ ಸಭೆ ಕರೆದ ಸಿಎಂ ಬಸವರಾಜ ಬೊಮ್ಮಾಯಿ
Share on WhatsAppShare on FacebookShare on Telegram

ಹೆಚ್ಚು ಕಮ್ಮಿ ಮೂರನೇ ಅಲೆ ಮುನ್ಸೂಚನೆ ಸಿಕ್ಕಂತಿದೆ. ಈಗಾಗಲೇ ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ 31 ಓಮೈಕ್ರಾನ್ ಕೇಸ್ ಗಳು ಹಾಗೂ ಒಂದು ಪ್ರಕರಣ ಇಂದು ಬೆಳಕಿಗೆ ಬಂದಿದೆ. ಈ ಮೂಲಕ ದಿನದಿಂದ ದಿನಕ್ಕೆ ಓಮೈಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಹಿನ್ನೆಲೆ ನೈಟ್ ಕರ್ಫ್ಯೂ ಜಾರಿ ಮಾಡಬೇಕು ಎಂಬ ಬೇಡಿಕೆ ಹೆಚ್ಚಾಗಿದೆ. ಈ ವಿಚಾರದ ಕುರಿತು ನಾಳೆ ಸಿಎಂ ಅಧಿಕಾರಿಗಳ ಜೊತೆ ಸಭೆ ನಡೆಸಲು ತೀರ್ಮಾನ ಮಾಡಿದ್ದಾರೆ.

ADVERTISEMENT

ನಾಳೆ ಅಧಿಕಾರಿಗಳ ಸಭೆ ಕರೆದ ಸಿಎಂ ಬೊಮ್ಮಾಯಿ

ಡಿಸೆಂಬರ್ 2ರಂದು ಇಡೀ ದೇಶದಲ್ಲೇ ಚೊಚ್ಚಲ ಕೇಸ್ ವಕ್ಕರಿಸಿದ್ದು ಬೆಂಗಳೂರಲ್ಲಿ. ಆದಾದ ಬಳಿಕ ದಿನ ಕಳೆದಂತೆ ಒಂದೊಂದೇ ಓಮೈಕ್ರಾನ್ ಪ್ರಕರಣಗಳು ಬೆಳಕಿಗೆ ಬರಲು ಶುವಿಟ್ಟುಕೊಂಡಿತ್ತು. ಇಡೀ ರಾಜ್ಯದಲ್ಲಿ ಸದ್ಯ 31 ಓಮೈಕ್ರಾನ್ ಸೋಂಕಿತರಿದ್ದಾರೆ. ಬೆಂಗಳೂರಿನಲ್ಲಿ ಮತ್ತು ಮಂಗಳೂರಿನಲ್ಲಿ ಈ ಪೈಕಿ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಆಘಾತಕಾರಿ ಅಂಶವೆಂದರೆ ಈ ಓಮೈಕ್ರಾನ್ ಕೊರೋನಾದ ಇತರೆ ರೂಪಾಂತರಿಗಿಂತ ವೇಗವಾಗಿ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಹೀಗಾಗಿ ಪ್ರಕರಣಗಳ ಸಂಖ್ಯೆ ಕ್ಷಣ ಮಾತ್ರದಲ್ಲಿ ಏರಿಕೆಯಾಗುವ ಸಂಭವವೂ ಇದೆ. ಈ ಹಿನ್ನೆಲೆ ತಾಂತ್ರಿಕ ಸಲಹಾ ಸಮಿತಿಯಿಂದ ಈಗೀಂದಿಗಲೇ ಕೆಲವೊಂದು ಕಠಿಣ ಕ್ರಮ ಜಾರಿ ಮಾಡಲು ಸರ್ಕಾರಕ್ಕೆ ಸಲಹೆಗಳು ಹೋಗಿದೆ. ಈ ಪೈಕಿ ನೈಟ್ ಕರ್ಫ್ಯೂ ಕೂಡ ಒಂದು.

ನಾಳೆ ಓಮೈಕ್ರಾನ್ ನೈಟ್ ಕರ್ಫ್ಯೂ ಭವಿಷ್ಯ ನಿರ್ಧಾರ

ತಜ್ಞರು ಓಮೈಕ್ರಾನ್ ಐದಾರು ಪ್ರಕರಣಗಳು ಬಂದಾಗಲೇ ನೈಟ್ ಕರ್ಫ್ಯೂ ಸೇರಿದಂತೆ ಹಲವು ಟಫ್ ರೂಲ್ಸ್ ಜಾರಿ ಮಾಡಬೇಕೆಂದು ಸರ್ಕಾರಕ್ಕೆ ಸಲಹೆ ನೀಡಿತ್ತು. ಆದರೆ ಸದ್ಯಕ್ಕೆ ಅದರ ಅಗತ್ಯವಿಲ್ಲ ಎಂದಿದ್ದ ಕಾರಣ ಕಠಿಣ ಕ್ರಮಗಳನ್ನು ಸರ್ಕಾರ ಜಾರಿಮಾಡಿರಲಿಲ್ಲ. ಇದೀಗ ಸಂಖ್ಯೆ ಏರುತ್ತಲೇ ಇರುವ ಕಾರಣ ನೈಟ್ ಕರ್ಫ್ಯೂ ಬಗ್ಗೆ ಸರ್ಕಾರ ಚಿಂತಿಸಿದೆ. ಇದೇ ವಿಚಾರವಾಗಿ ನಾಳೆ ಸಂಜೆ ಸಿಎಂ ಬಸವರಾಜ ಬೊಮ್ಮಾಯಿ ತಾಂತ್ರಿಕ ಸಲಹಾ ಸಮಿತಿ ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ನೈಟ್ ಕರ್ಫ್ಯೂ ಹಾಗೂ ಇನ್ನಿತರ ವಿಚಾರಗಳ ಕುರಿತು ಚರ್ಚೆಯಾಗಲಿದೆ.

ನೈಟ್ ಕರ್ಫ್ಯೂ ಜಾರಿ ಮಾಡಿದರೆ ಉತ್ತಮ ಎಂದ ಬಿಜೆಪಿ ಶಾಸಕ ಗರುಡಾಚಾರ್

ರಾಜ್ಯದಲ್ಲಿ ನೈಟ್ ಕರ್ಫ್ಯೂ ಬೇಕೋ ಬೇಡವೋ ಎಂಬ ಚರ್ಚೆಯ ಮಧ್ಯೆಯೇ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ನೈಟ್ ಕರ್ಫ್ಯೂ ಪರವಹಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಈಗಾಗಲೇ ಬೇರೆ ರಾಜ್ಯದಲ್ಲಿ ನೈಟ್ ಕರ್ಫ್ಯೂ ಹೇರಲಾಗಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ನೈಟ್ ಕರ್ಫ್ಯೂ ಜಾರಿಯಾದರೆ ಉತ್ತಮ. ತುಂಬಾ ವೇಗವಾಗಿ ಹರಡೋ ವೈರಸ್ ಓಮೈಕ್ರಾನ್. ಇದರ ನಿಯಂತ್ರಣಕ್ಕೆ ನೈಟ್ ಕರ್ಫ್ಯೂ ವಿಧಿಸಿದರೆ ಸೂಕ್ತ. ಆದರೆ ಎಷ್ಟು ಸಮಯ ಅನ್ನೋದು ಮುಖ್ಯ. ರಾತ್ರಿ 10ರ ನಂತರ ನೈಟ್ ಕರ್ಫ್ಯೂ ಜಾರಿ ಮಾಡಿದ್ರೆ ಸೂಕ್ತ ಎಂಬುವುದು ನನ್ನ ಅಭಿಪ್ರಾಯ ಎಂದು ಗರುಡಾಚಾರ್ ಹೇಳಿದ್ದಾರೆ.

ತಜ್ಞರು ಆರಂಭದಲ್ಲಿ ಕೊಟ್ಟ ಎಚ್ಚರಿಕೆ ಈಗ ನಿಜವಾಗ ತೊಡಗಿದೆ. ಆರಂಭದಲ್ಲೇ ಮದುವೆ, ಸಾಂಸ್ಕೃತಿಕ, ರಾಜಕೀಯ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಿ ಜನ ದಟ್ಟಣೆ ವಿಧಿಸುವುದು, ಅಂತರರಾಷ್ಟ್ರೀಯ ಹಾಗೂ ಅಂತರ್ ರಾಜ್ಯ ಪ್ರಯಾಣಿಕರ ಮೇಲೆ ಸೂಕ್ಷ್ಮ ನಿಗಾ, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳದಿದ್ದರೆ ಕಠಿಣ ಕ್ರಮ ವಹಿಸಿದ್ದರೆ ಒಳ್ಳೆಯದ್ದಿತ್ತು ಎಂಬ ಅಭಿಪ್ರಾಯವೂ ಈಗ ವ್ಯಕ್ತವಾಗುತ್ತಿದೆ. ಹೀಗೆ ಈ ಎಲ್ಲಾ ಕಾರಣದಿಂದ ಸಿಎಂ ಬೊಮ್ಮಾಯಿ ನಡೆಸಲಿರುವ ಓಮೈಕ್ರಾನ್ ಸಭೆ ಮಹತ್ವ ಪಡೆದುಕೊಂಡಿದೆ. ಈ ಸಭೆಯಲ್ಲಿ ನೈಟ್ ಕರ್ಫ್ಯೂ ಬಗ್ಗೆಯೂ ನಿರ್ಧಾರವಾಗಲಿದೆ.

Tags: Basavaraj BommaiBJPCovid 19ಕರೋನಾಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ರೈತನ ಕಾರ್ಯ ಮೆಚ್ಚಿ ಸನ್ಮಾನಿಸಿದ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಮೂರ್ತಿ ವಿ.ಗೋಪಾಲಗೌಡ

Next Post

ವ್ಯಕ್ತಿ ವಿಶೇಷ | ಜೀವನದುದ್ದಕ್ಕೂ ನೇರ ನಿಷ್ಠುರವಾಗಿಯೇ ಬದುಕಿದ ʼಹುಲಿಯಾʼ ಖ್ಯಾತಿಯ ಕೆ.ವಿ.ರಾಜು

Related Posts

Top Story

ಸದ್ಯದಲ್ಲೇ ಬಿಡುಗಡೆಯಾಗಲಿದೆ “ಕಾದಲ್ ಚಿತ್ರದ ಮೊದಲ ಹಾಡು .

by ಪ್ರತಿಧ್ವನಿ
July 25, 2025
0

ಲವ್ ಜಾನರ್ ನ ಈ ಚಿತ್ರದ ಚಿತ್ರೀಕರಣ ಆಗಸ್ಟ್ ನಲ್ಲಿ ಆರಂಭ ಕನ್ನಡದಲ್ಲಿ ಪ್ರೇಮಕಥೆಗಳುಳ್ಳ ಚಿತ್ರಗಳು ಸಾಕಷ್ಟು ‌ಬಂದಿವೆಯಾದರೂ, ಒಂದಕ್ಕಿಂತ ಒಂದು ವಿಭಿನ್ನ ಎನ್ನಬಹುದು. ಪ್ರೇಮಕಥೆಯೇ ಪ್ರಧಾನವಾಗಿರುವ...

Read moreDetails
SSLC ಪರೀಕ್ಷಾ ನಿಯಮದಲ್ಲಿ ಬದಲಾವಣೆ..! ಇನ್ಮುಂದೆ 35% ಅಲ್ಲ..33% ಗೆ ವಿದ್ಯಾರ್ಥಿಗಳು ಪಾಸ್..?

SSLC ಪರೀಕ್ಷಾ ನಿಯಮದಲ್ಲಿ ಬದಲಾವಣೆ..! ಇನ್ಮುಂದೆ 35% ಅಲ್ಲ..33% ಗೆ ವಿದ್ಯಾರ್ಥಿಗಳು ಪಾಸ್..?

July 25, 2025
ಮಹಾದಾಯಿ ವಿಚಾರದಲ್ಲಿ ಕರ್ನಾಟಕಕ್ಕೆ ಘೋರ ಅನ್ಯಾಯ – ತಾಕತ್ತಿದ್ದರೆ ಸಂಸದರು ಧ್ವನಿ ಎತ್ತಿ : ವಾಟಾಳ್ ನಾಗರಾಜ್ 

ಮಹಾದಾಯಿ ವಿಚಾರದಲ್ಲಿ ಕರ್ನಾಟಕಕ್ಕೆ ಘೋರ ಅನ್ಯಾಯ – ತಾಕತ್ತಿದ್ದರೆ ಸಂಸದರು ಧ್ವನಿ ಎತ್ತಿ : ವಾಟಾಳ್ ನಾಗರಾಜ್ 

July 25, 2025
ಪೇಮೆಂಟ್ ಪಡೆದು ಪ್ರೊಟೆಸ್ಟ್ ಮಾಡುವ ಕಾಂಗ್ರೆಸ್ಸಿಗರೇ..! – ಮೇಕೆದಾಟುಗೆ DMK ತಕರಾರಿಗೆ ನಿಮ್ಮ ಬದ್ಧತೆ ಏನು ..?! : ಜೆಡಿಎಸ್ ಪ್ರಶ್ನೆ 

ಒಟ್ಟೊಟ್ಟಿಗೆ ದೆಹಲಿಗೆ ಹಾರಿದ ಸಿಎಂ & ಡಿಸಿಎಂ..! ತರಾತುರಿಯಲ್ಲಿ ಹೈಕಮಾಂಡ್ ನಾಯಕರ ಭೇಟಿ..?! 

July 25, 2025

ಡಿಕೆ ಶಿವಕುಮಾರ್‌ ಮೌನ ವ್ರತದ ಹಿಂದೆ ಡಿಸೆಂಬರ್‌ ರಹಸ್ಯ..! ಬೆಚ್ಚಿ ಬಿದ್ದ ಸಿಎಂ ಸಿದ್ದರಾಮಯ್ಯ

July 24, 2025
Next Post
ವ್ಯಕ್ತಿ ವಿಶೇಷ | ಜೀವನದುದ್ದಕ್ಕೂ ನೇರ ನಿಷ್ಠುರವಾಗಿಯೇ ಬದುಕಿದ ʼಹುಲಿಯಾʼ ಖ್ಯಾತಿಯ ಕೆ.ವಿ.ರಾಜು

ವ್ಯಕ್ತಿ ವಿಶೇಷ | ಜೀವನದುದ್ದಕ್ಕೂ ನೇರ ನಿಷ್ಠುರವಾಗಿಯೇ ಬದುಕಿದ ʼಹುಲಿಯಾʼ ಖ್ಯಾತಿಯ ಕೆ.ವಿ.ರಾಜು

Please login to join discussion

Recent News

Top Story

ಸದ್ಯದಲ್ಲೇ ಬಿಡುಗಡೆಯಾಗಲಿದೆ “ಕಾದಲ್ ಚಿತ್ರದ ಮೊದಲ ಹಾಡು .

by ಪ್ರತಿಧ್ವನಿ
July 25, 2025
SSLC ಪರೀಕ್ಷಾ ನಿಯಮದಲ್ಲಿ ಬದಲಾವಣೆ..! ಇನ್ಮುಂದೆ 35% ಅಲ್ಲ..33% ಗೆ ವಿದ್ಯಾರ್ಥಿಗಳು ಪಾಸ್..?
Top Story

SSLC ಪರೀಕ್ಷಾ ನಿಯಮದಲ್ಲಿ ಬದಲಾವಣೆ..! ಇನ್ಮುಂದೆ 35% ಅಲ್ಲ..33% ಗೆ ವಿದ್ಯಾರ್ಥಿಗಳು ಪಾಸ್..?

by Chetan
July 25, 2025
ಮಹಾದಾಯಿ ವಿಚಾರದಲ್ಲಿ ಕರ್ನಾಟಕಕ್ಕೆ ಘೋರ ಅನ್ಯಾಯ – ತಾಕತ್ತಿದ್ದರೆ ಸಂಸದರು ಧ್ವನಿ ಎತ್ತಿ : ವಾಟಾಳ್ ನಾಗರಾಜ್ 
Top Story

ಮಹಾದಾಯಿ ವಿಚಾರದಲ್ಲಿ ಕರ್ನಾಟಕಕ್ಕೆ ಘೋರ ಅನ್ಯಾಯ – ತಾಕತ್ತಿದ್ದರೆ ಸಂಸದರು ಧ್ವನಿ ಎತ್ತಿ : ವಾಟಾಳ್ ನಾಗರಾಜ್ 

by Chetan
July 25, 2025
ಪೇಮೆಂಟ್ ಪಡೆದು ಪ್ರೊಟೆಸ್ಟ್ ಮಾಡುವ ಕಾಂಗ್ರೆಸ್ಸಿಗರೇ..! – ಮೇಕೆದಾಟುಗೆ DMK ತಕರಾರಿಗೆ ನಿಮ್ಮ ಬದ್ಧತೆ ಏನು ..?! : ಜೆಡಿಎಸ್ ಪ್ರಶ್ನೆ 
Top Story

ಒಟ್ಟೊಟ್ಟಿಗೆ ದೆಹಲಿಗೆ ಹಾರಿದ ಸಿಎಂ & ಡಿಸಿಎಂ..! ತರಾತುರಿಯಲ್ಲಿ ಹೈಕಮಾಂಡ್ ನಾಯಕರ ಭೇಟಿ..?! 

by Chetan
July 25, 2025
ಸೆಕ್ಯುಲರಿಸಂ ಆರಂಭದಿಂದಲೇ ಸೂಚ್ಯವಾಗಿತ್ತು 1976ರಲ್ಲಿ ಸ್ಪಷ್ಟವಾಯಿತು
Top Story

ಸೆಕ್ಯುಲರಿಸಂ ಆರಂಭದಿಂದಲೇ ಸೂಚ್ಯವಾಗಿತ್ತು 1976ರಲ್ಲಿ ಸ್ಪಷ್ಟವಾಯಿತು

by ನಾ ದಿವಾಕರ
July 25, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸದ್ಯದಲ್ಲೇ ಬಿಡುಗಡೆಯಾಗಲಿದೆ “ಕಾದಲ್ ಚಿತ್ರದ ಮೊದಲ ಹಾಡು .

July 25, 2025
SSLC ಪರೀಕ್ಷಾ ನಿಯಮದಲ್ಲಿ ಬದಲಾವಣೆ..! ಇನ್ಮುಂದೆ 35% ಅಲ್ಲ..33% ಗೆ ವಿದ್ಯಾರ್ಥಿಗಳು ಪಾಸ್..?

SSLC ಪರೀಕ್ಷಾ ನಿಯಮದಲ್ಲಿ ಬದಲಾವಣೆ..! ಇನ್ಮುಂದೆ 35% ಅಲ್ಲ..33% ಗೆ ವಿದ್ಯಾರ್ಥಿಗಳು ಪಾಸ್..?

July 25, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada