• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಏಕಾಏಕಿ 19 ಕ್ಕೇರಿದ ಓಮೈಕ್ರಾನ್ ಸೋಂಕಿತರ ಸಂಖ್ಯೆ : ಮೈಮರೆತರೆ ಕಷ್ಟ ಎಂದ ಸಚಿವ ಸುಧಾಕರ್

Any Mind by Any Mind
December 20, 2021
in ಕರ್ನಾಟಕ, ರಾಜಕೀಯ
0
ಒಮಿಕ್ರಾನ್ ವೈರಸ್ ಭೀತಿ : ಮತ್ತೆ ಎರಡನೇ ಅಲೆ ಕರೋನಾ ನಿಯಮಜಾರಿ ಮಾಡಿದ ಬಿಬಿಎಂಪಿ!
Share on WhatsAppShare on FacebookShare on Telegram

ಕರುನಾಡು ಕ್ರಮೇಣವಾಗಿ ಓಮೈಕ್ರಾನ್ ಕಬಂಧಬಾಹುವಿಗೆ ಸೇರಿಕೊಳ್ಳುತ್ತಿರುವ ಲಕ್ಷಣಗಳು ಪ್ರತಿ ದಿನವೂ ಗೋಚರವಾಗ ತೊಡಗಿದೆ. ರಾಜ್ಯದ ಮೂಲಕವೇ ದೇಶಕ್ಕೆ ಎಂಟ್ರಿಕೊಟ್ಟ ವೈರಸ್ ಸದ್ದಿಲ್ಲದೆ ಎಲ್ಲೆಡೆಆವರಿಸುತ್ತಿದೆ. ಒಂದಲ್ಲಾ ಎರಡಲ್ಲಾ ಒಂದೇ ದಿನ ಐದು ಹೊಸ ಓಮೈಕ್ರಾನ್ ಕೇಸ್ ಗಳು ಪತ್ತೆಯಾಗಿದ್ದು, ರಾಜ್ಯಕ್ಕೆ ಓಮೈಕ್ರಾನ್ ಕರಿನೆರಳು ಆವರಿಸಿದೆ. ಕೇಸ್ ಜಾಸ್ತಿಯಾಗ್ತಿದ್ದಂತೆ ಈ ಓಮೈಕ್ರಾನ್ ಕಡಿವಾಣಕ್ಕೆ ಸರ್ಕಾರ ಸಜ್ಜಾಗುತ್ತಿದೆ. ಜೊತೆಗೆ ಬೆಂಗಳೂರಿನ ಮಟ್ಟಕ್ಕೆ ಬಿಬಿಎಂಪಿ ಪಣತೊಟ್ಟಿದೆ.

ADVERTISEMENT

ರೂಪಾಂತರಿ ವೈರಸ್ ಗೆ ಕಡಿವಾಣ ಹಾಕಲು ಟಫ್ ರೂಲ್ಸ್ ಗೆ ತಯಾರಿ


ಓಮೈಕ್ರಾನ್ ವೈರಸ್ ಸೈಲೆಂಟಾಗಿ ಇಡೀ ರಾಜ್ಯಕ್ಕೆ ಕಂಟಕವಾಗುವತ್ತ ದಾಪುಗಾಲಿಡುತ್ತಿದೆ. ರಾಜಧಾನಿಯಲ್ಲಿ ಆ್ಯಕ್ಟೀವ್ ಆಗಿದ್ದ ವೈರಸ್, ರಾಜ್ಯದೆಲ್ಲೆಡೆ ಪಸರಿಸುತ್ತಿದ್ದು ಐದು ಹೊಸ ಓಮೈಕ್ರಾನ್ ಕೇಸ್ ಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಓಮೈಕ್ರಾನ್ ಸೋಂಕಿತರ ಸಂಖ್ಯೆ 19ಕ್ಕೇರಿದ್ದು ಆತಂಕ ಹೆಚ್ಚಾಗಿದೆ. ಧಾರವಾಡದ 54 ವರ್ಷದ ಪುರುಷ, ಭದ್ರಾವತಿಯ 20 ವರ್ಷದ ಯುವತಿ, ಉಡುಪಿಯ 82, 73 ವರ್ಷದ ವೃದ್ಧ ದಂಪತಿಗಳು ಹಾಗೂ ಮಂಗಳೂರಿನ 19 ವರ್ಷದ ಯುವತಿಗೆ ೋಮೈಕ್ರಾನ್ ಸೋಂಕು ಹೊಸದಾಗಿ ದೃಢವಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ಸುಧಾಕರ್ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.

ಓಮೈಕ್ರಾನ್ ಕಡಿವಾಣ ಸರ್ಕಾರಕ್ಕೆ ಸವಾಲಾಗಿ ಎದುರಾಗಿದೆ. ಈ ಹೊಸ ತಳಿಯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ, ಅಪಾಯ ಕಟ್ಟಿಟ್ಟ ಬುತ್ತಿ. ಇನ್ನು ಈ ಬಗ್ಗೆ ಮಾತನಾಡಿರುವ ಆರೋಗ್ಯ ಸಚಿವ ಸುಧಾಕರ್ ಆತಂಕ ಹೊರ ಹಾಕಿದ್ದಾರೆ. ಈ ತಳಿ ವೇಗವಾಗಿ ಹರಡುತ್ತದೆ. ಇಂತಹ ತಳಿಯನ್ನ ನೋಡೆಯಿಲ್ಲ ಅಂತ WHO ಹೇಳಿದೆ. ಜೊತೆಗೆ ಹಲವು ಮಾರ್ಗದರ್ಶನಗಳನ್ನು ನೀಡಿದೆ. ಆ ರೀತಿಯೆ ನಾವು ಕಾರ್ಯಪ್ರವೃತ್ತರಾಗಿದ್ದೇವೆ. ಬೇರೆ 79-80 ದೇಶದಲ್ಲಿ ನೋಡಿದಾಗ ವೇಗವಾಗಿ ಹರಡುತ್ತಿರೋದು ಗೊತ್ತಾಗುತ್ತಿದೆ. ನಮ್ಮ ರಾಜ್ಯದಲ್ಲೇ ಸಧ್ಯ 19 ಜನರಲ್ಲಿ ಓಮೈಕ್ರಾನ್ ಪತ್ತೆಯಾಗಿದೆ. ಆ ಪೈಕಿ ಅನೇಕ ಮಂದಿ ವಿದೇಶಿ ಪ್ರಯಾಣ ಮಾಡಿ ಬಂದವರು. ಈ ವೈರಸ್ ನಿಯಂತ್ರಿಸಬೇಕಾದರೆ, ಬಹಿರಂಗ ಸಭೆ, ದೊಡ್ಡ ಒಳಾಂಗಣ ಸಭಾ ಕಾರ್ಯಕ್ರಮಗಳಿಗೆ ಒಂದೆರೆಡು ತಿಂಗಳು ಕಾಲ ಕಡಿವಾಣ ಹಾಕಬೇಕು. ನಿಯಂತ್ರಣ ಮಾಡದೇ ಹೋದರೆ ಮುಂದೆ ಸಮಸ್ಯೆಯಾಗುತ್ತದೆ. ಹೆಚ್ಚು ಕೇಸ್ ಆದಾಗ ಆಸ್ಪತ್ರೆ ಗಳ ಮೇಲೆ ಲೋಡ್ ಆಗುತ್ತೆ. ಹೆಚ್ಚು ಜನರಿಗೆ ಹರಡಿದಾಗ ನಿಯಂತ್ರಿಸೋದು ಸವಾಲಾಗುತ್ತದೆ ಎಂದು ಹೇಳೊ ಮೂಲಕ ಟಫ್ ರೂಲ್ಸ್ ಜಾರಿಯ ಸುಳಿವು ಬಿಟ್ಟು ಕೊಟ್ಟಿದ್ದಾರೆ.

ಓಮೈಕ್ರಾನ್ ಕಪಿಮುಷ್ಟಿಗೆ ಒಳಗಾಗುತ್ತಾ ಬೆಂಗಳೂರು

ಇತ್ತ ಓಮೈಕ್ರಾನ್ ಅಬ್ಬರದ ನಡುವೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಲೆ ಇದೆ. ಮುಂದಿನ ದಿನಗಳಲ್ಲಿ ಕೊರೋನಾ ಕೇಸ್ ಹೆಚ್ಚಳ ಕಾಣಲಿದೆ ಎಂಬ ಆತಂಕ ಪಾಲಿಕೆಗೆ ಇದೆ. ಇನ್ನು ಈ ಬಗ್ಗೆ ಮಾತನಾಡಿರೊ ಪಾಲಿಕೆ ಆಯುಕ್ತರು, ವಿದೇಶಗಳಲ್ಲಿ ಪ್ರತಿದಿನ 70-80 ಸಾವಿರ ಕೇಸ್ ಗಳು ಹೆಚ್ಚಳ ಆಗುತ್ತಿದೆ. ಲಂಡನ್ ನಿಂದ ಈ ಅಂಕಿ ಅಂಶ ಅಪ್ಡೇಟ್ ಆಗುತ್ತಿದೆ. ನಮ್ಮ ದೇಶಕ್ಕೂ ವಿಶ್ವದ ಜತೆ ಸಂಪರ್ಕ ಇರುವುದರಿಂದ, ಹೈರಿಸ್ಕ್ ದೇಶದ ಪ್ರಯಾಣಿಕರ ಮೇಲೆ ನಿಗಾ ಇದೆ. ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ. ಹೊಸ ರೂಪ ಪಡೆದ್ಕೊಂಡು ಪ್ರತ್ಯಕ್ಷವಾಗಿರುವ ಕೊರೊನಾ ಸೋಂಕು ಮಾನವ ಕುಲಕ್ಕೆ ಮಾರಕವಾಗುತ್ತಿದೆ. ಇತ್ತ ನಾವುಗಳು ಸಹ ಸೋಂಕಿದೆ ಎಂಬುದನ್ನ ಮೈ ಮರೆತರೆ ಕೊರೊನಾಗೆ ಆಹ್ವಾನ ನೀಡಿದಂತಾಗಲಿದೆ. ಹೀಗಾಗಿ ಸಾಧ್ಯವದಷ್ಟು ಎಚ್ಚರಿಕೆಯಿಂದ ಇರುವುದು ಒಳಿತು. ಇದನ್ನೇ ತಜ್ಞರು ಹೇಳುತ್ತಿದ್ದಾರೆ. ಜನರು ಎಲ್ಲಾ ನಿಯಮಗಳನ್ನ ಪಾಲಿಸಿ ತಮ್ಮ ಎಚ್ಚರಿಕೆಯಲ್ಲಿರುವುದು ಸೂಕ್ತ.

Tags: BJPCongress PartyCovid 19ಎಚ್ ಡಿ ಕುಮಾರಸ್ವಾಮಿಕರೋನಾಕೋವಿಡ್-19ಬಿಜೆಪಿ
Previous Post

ಕುಟುಂಬ ರಾಜಕಾರಣಕ್ಕೆ ಬೇಸತ್ತು ಒಂದೊಂದಾಗಿಯೇ ಉದುರುತ್ತಿರುವ ತೆನೆಗಳು! : ದಳದ ಮುಂದಿನ ಭವಿಷ್ಯವೇನು?

Next Post

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಭಗ್ನ : ಸದನದಲ್ಲಿ ಬೊಮ್ಮಾಯಿ ಸರ್ಕಾರಕ್ಕೆ ಶಾಸಕ ಅನ್ನದಾನಿ ಫುಲ್ ಕ್ಲಾಸ್

Related Posts

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..
Top Story

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

by ಪ್ರತಿಧ್ವನಿ
April 14, 2026
0

ಬೆಂಗಳೂರು : ಸುಮಾರು ಎರಡು ದಶಕಗಳ ಕಾಲ 10 ಬಾರಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ನಂತರ ಬಿಹಾರದ (Bihar CM) ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್...

Read moreDetails
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

April 14, 2026
ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

April 14, 2026
“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

April 14, 2026
Next Post
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಭಗ್ನ : ಸದನದಲ್ಲಿ ಬೊಮ್ಮಾಯಿ ಸರ್ಕಾರಕ್ಕೆ ಶಾಸಕ ಅನ್ನದಾನಿ ಫುಲ್ ಕ್ಲಾಸ್

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಭಗ್ನ : ಸದನದಲ್ಲಿ ಬೊಮ್ಮಾಯಿ ಸರ್ಕಾರಕ್ಕೆ ಶಾಸಕ ಅನ್ನದಾನಿ ಫುಲ್ ಕ್ಲಾಸ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada