ರೈತ ನಾಯಕ ರಾಕೇಶ್ ಟಿಕಾಯತ್ ಶನಿವಾರ ತಮ್ಮ ಮುಂದಿನ ನಡೆ ಸಾರ್ವಜನಿಕ ವಲಯದ ಬ್ಯಾಂಕ್ಗಳ ಖಾಸಗೀಕರಣದ ವಿರುದ್ಧ ಎಂಬ ಸುಳಿವು ನೀಡಿದ್ದಾರೆ. ಚಳಿಗಾಲದ ಅಧಿವೇಶನದಲ್ಲಿ ಡಿಸೆಂಬರ್ 6 ರಂದು ಸಂಸತ್ತಿನಲ್ಲಿ ಈ ಬಗ್ಗೆ ಮಸೂದೆಯನ್ನು ಮಂಡಿಸಲು ನಿರ್ಧರಿಸಲಾಗಿದೆ ಎಂದು ರೈತ ಮುಖಂಡರು ಹೇಳಿದ್ದಾರೆ.
ಈ ಕುರಿತು ಶನಿವಾರ ರಾಕೇಶ್ ಟಿಕಾಯತ್ ಟ್ವೀಟ್ ಮಾಡಿದ್ದು, “ನಾವು ಚಳವಳಿಯ (ಕೃಷಿ ಕಾನೂನುಗಳ ವಿರುದ್ಧ ರೈತರ ಆಂದೋಲನ) ಆರಂಭದಲ್ಲಿಯೇ ಎಚ್ಚರಿಸಿದ್ದೆವು ನಮ್ಮ ಮುಂದಿನ ಹೋರಾಟ ಬ್ಯಾಂಕ್ಗಳ ಖಾಸಗೀಕರಣ ವಿರುದ್ಧ ಎಂದು. ಫಲಿತಾಂಶವನ್ನು ನೋಡಿ, ಡಿಸೆಂಬರ್ 6 ರಂದು, ಸಾರ್ವಜನಿಕರ ಬ್ಯಾಂಕುಗಳ ಖಾಸಗೀಕರಣದ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುತ್ತಿದೆ, ಖಾಸಗೀಕರಣದ ವಿರುದ್ಧ ದೇಶಾದ್ಯಂತ ಸಾಮಾನ್ಯ ಚಳವಳಿಯ ಅಗತ್ಯವಿದೆ ಎಂದು ಟ್ವೀಟ್ ಮಾಡಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಭಾಷಣದಲ್ಲಿ ಘೋಷಿಸಿದ ಬ್ಯಾಂಕ್ಗಳ ಖಾಸಗೀಕರಣದ ವಿರುದ್ಧ ಈಗ ರೈತ ಹೋರಾಟ ಮುಖಂಡ ರಾಕೇಶ್ ಟಿಕಾಯತ್ ಟ್ವೀಟ್ ಮಾಡುವ ಮೂಲಕ ಬೃಹತ್ ಆಂದೋಲನ ಮಾಡವ ಸುಳಿವು ನೀಡಿದ್ದಾರೆ.
ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಿದ ನಂತರ ಮತ್ತು ಕನಿಷ್ಠ ಬೆಂಬಲ ಬೆಲೆಗಳ ಸಮಿತಿಯನ್ನು ಸ್ಥಾಪಿಸಲು ಕೇಂದ್ರವು ಒಪ್ಪಿಗೆ ನೀಡಿದ ನಂತರ ಈ ಬೆಳವಣಿಗೆಯಾಗಿದ್ದು ಬ್ಯಾಂಕ್ ಖಾಸಗೀಕರಣದ ವಿರುದ್ಧದ ಈ ಹೊಸ ಪ್ರತಿಭಟನೆಯು ರೈತ ಮುಖಂಡರಿಂದ ಮುಂದುವರಿಯಬಹುದು ಎನ್ನಲಾಗಿದೆ.
ಮೂರು ಕೃಷಿ ಕಾನೂನುಗಳ ವಿರುದ್ಧ ರೈತರ ಆಂದೋಲನವನ್ನು ಮುನ್ನಡೆಸಿದ ನಾಯಕರಲ್ಲಿ ಟಿಕಾಯತ್ ಕೂಡ ಒಬ್ಬರು. ಅಂತಿಮವಾಗಿ ನವೆಂಬರ್ 19 ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಮೂರು ಕಾನೂನುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದಾಗ ಹೇಳಿದರು. ಬಾಕಿ ಉಳಿದಿರುವ ಎಂಎಸ್ ಪಿ ಬೇಡಿಕೆಯನ್ನು ಜಾರಿಗೊಳಿಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದು ಕೂತಿದ್ದಾರೆ.
ಬಾಕಿ ಉಳಿದಿರುವ ಬೇಡಿಕೆಗಳ ಕುರಿತು ನಿರ್ಣಾಯಕ ಸಭೆಯ ನಂತರ ಸಂಯುಕ್ತ ಕಿಸಾನ್ ಮೋರ್ಚಾ (SKM), ಸರ್ಕಾರ ಮತ್ತು ರೈತರ ನಡುವಿನ MSP ಮತ್ತು ಇತರ ಬಾಕಿ ಇರುವ ಸಮಸ್ಯೆಗಳ ಸಮಿತಿಗಾಗಿ ಕೇಂದ್ರಕ್ಕೆ 5 ಹೆಸರುಗಳನ್ನು ಸೂಚಿಸಿತು.
ಕೇಂದ್ರ ಸರ್ಕಾರ ಎಂಎಸ್ ಪಿ ಬೇಡಿಕೆಯನ್ನು ಪರಿಶೀಲಿಸಲು ಸಮೀತಿ ಮಾಡಲು ಅನುಮತಿ ನೀಡಿದ್ದು ರೈತ ಹೋರಾಟಕ್ಕೆ ಮತ್ತೊಂದು ಜಯ ಸಿಕ್ಕಿದೆ ಮತ್ತು SKM ತನ್ನ ಮುಂದಿನ ನಿರ್ಣಾಯಕ ಸಭೆಯನ್ನು ಡಿಸೆಂಬರ್ 7 ರಂದು ನಡೆಯಲಿದ್ದು ತನ್ನ ಪ್ರತಿಭಟನೆಯ ಅಂತ್ಯವನ್ನು ಘೋಷಿಸಬಹುದು ಎನ್ನಲಾಗಿದೆ.. ಈ ಸಭೆಯಲ್ಲೇ ಸಾರ್ವಜನಿಕ ಬ್ಯಾಂಕುಗಳು ಖಾಸಗೀಕರಣ ಆಗುತ್ತಿರುವ ಕುರಿತು ಒಂದು ಬೃಹತ್ ಆಂದೋಲನ ರೂಪಿಸುವ ಕುರಿತು ಚರ್ಚೆಯಾಗಲಿದೆ ಎನ್ನಲಾಗಿದೆ.