• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಧಾರವಾಡ MLC ಚುನಾವಣೆ: ಕಾಂಗ್ರೆಸ್ ಟಿಕೆಟ್ ಸ್ಥಳೀಯ ಶಕೀರ್ ಸನದಿಗೋ? ವಲಸೆ ಹಕ್ಕಿ ಸಲೀಂ ಅಹ್ಮದ್‌ಗೋ?

ಪಿಕೆ ಮಲ್ಲನಗೌಡರ್ by ಪಿಕೆ ಮಲ್ಲನಗೌಡರ್
November 20, 2021
in ಕರ್ನಾಟಕ, ರಾಜಕೀಯ
0
ಧಾರವಾಡ MLC ಚುನಾವಣೆ: ಕಾಂಗ್ರೆಸ್ ಟಿಕೆಟ್ ಸ್ಥಳೀಯ ಶಕೀರ್ ಸನದಿಗೋ? ವಲಸೆ ಹಕ್ಕಿ ಸಲೀಂ ಅಹ್ಮದ್‌ಗೋ?
Share on WhatsAppShare on FacebookShare on Telegram

ಧಾರವಾಡ ಎಂಎಲ್ಸಿ ಕ್ಷೇತ್ರ ವಿಶಾಲವಾದುದು. ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳನ್ನು ಒಳಗೊಂಡ ಈ ಕ್ಷೇತ್ರದಿಂದ ಇಬ್ಬರು ಎಂಎಲ್ಸಿ ಆಯ್ಕೆ ಆಗುತ್ತಾರೆ.

ADVERTISEMENT

ಇಲ್ಲಿ ಪ್ರತಿ ಪಾರ್ಟಿಗೂ ಇಬ್ಬರು ಅಭ್ಯರ್ಥಿಗಳನ್ನು ಹಾಕುವ ಅವಕಾಶವಿದ್ದರೂ ಕೂಡ ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಒಂದೇ ಅಭ್ಯರ್ಥಿ ಹಾಕುವ ಮೂಲಕ ಹಂಚಿ ತಿನ್ನುವ ಕೆಲಸ ಮಾಡುತ್ತವೆ.

ಬಿಜೆಪಿಯಿಂದ ಈಗಾಗಲೇ ಎರಡು ಅವಧಿ ಮುಗಿಸಿರುವ ಪ್ರದೀಪ್ ಶೇಟ್ಟರ್ ಈ ಸಲವೂ ಅಭ್ಯರ್ಥಿ. ಕಳೆದ ಬಾರಿ ಕಾಂಗ್ರೆಸ್ನಿಂದ ಗೆದ್ದಿದ್ದ ಶ್ರೀನಿವಾಸ್ ಮಾನೆ ಈಗ ಹಾನಗಲ್ ಉಪ ಚುನಾವಣೆಯಲ್ಲಿ ಗೆದ್ದು ವಿಧಾನಸಭೆಯ ಸದಸ್ಯರಾಗಿದ್ದಾರೆ.

ಈಗಿನ ಸಂದರ್ಭದಲ್ಲಿ ಬಿಜೆಪಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಸಹೋದರ ಪ್ರದೀಪ್ ಶೇಟ್ಟರ್ ಅವರಿಗೆ ಟಿಕೆಟ್ ನೀಡಲಾಗಿದೆ. ಹೀಗಾಗಿ ಬಿಜೆಪಿಯಲ್ಲಿ ಸ್ಪರ್ಧೆ ಇಲ್ಲ. ಸ್ಥಳೀಯ ಸಂಸ್ಥೆಗಳ ಸದಸ್ಯರ ಮತದಾನದಿಂದ ನಡೆಯುವ ಈ ಚುನಾವಣೆಯಲ್ಲಿ ಜೆಡಿಎಸ್ ಲೆಕ್ಕಕ್ಕೇ ಇಲ್ಲ,

ಕಾಂಗ್ರೆಸ್ನಲ್ಲಿ 28 ಜನ ಅರ್ಜಿ ಹಾಕಿದ್ದರು. ಈ ವರದಿ ಬರೆಯುವ ಹೊತ್ತಿನಲ್ಲಿ ಮೂವರು ಅಂತಿಮ ಸ್ಪರ್ಧೆಯಲ್ಲಿ ಇದ್ದಾರೆ. ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೊಡಬೇಕು ಎಂದು ಬಲವಾದ ಒತ್ತಡ ಇರುವುದರಿಂದ ಈಗ ಅಂತಿಮವಾಗಿ ಮಾಜಿ ಎಂಎಲ್ಸಿ ಎ.ಎಂ ಹಿಂಡಸಗೇರಿ, ವಲಸೆ ಹಕ್ಕಿ ಸಲೀಂ ಅಹ್ಮದ್ ಮತ್ತು ಸ್ಥಳೀಯ ಯುವ ನಾಯಕ ಶಕೀರ್ ಸನದಿ ಟಿಕೆಟ್ಗಾಗಿ ಸ್ಪರ್ಧೆಯಲ್ಲಿದ್ದಾರೆ.

ಸಲೀಂ ಅಹ್ಮದ್‌ ಮತ್ತು ಶಕೀರ್ ಸನದಿ

ಎ.ಎಂ ಹಿಂಡಸಗೇರಿ ಹಿರಿಯ ಮತ್ತು ಸಜ್ಜನ ರಾಜಕಾರಣಿ. ಆದರೆ, ಈ ಸಂದರ್ಭಕ್ಕೆ ಅವರು ಹೊಂದಲಾರರು. ಕೋಮುವಿಷ ಹರಡುತ್ತಿರುವ ಈ ಸಮಯದಲ್ಲಿ ಹಿಂಡಸಗೇರಿಯಂತಹ ನಾಯಕರು ಅಪ್ರಸ್ತುತರಾಗುತ್ತಾರೆ.

ಇನ್ನು ಸಲೀಂ ಅಹ್ಮದ್ ಎಂಬ ವಲಸೆ ಹಕ್ಕಿ ಹೇಗಾದರೂ ಅಧಿಕಾರದಲ್ಲಿ ಇರುವ ಆಶೆ ಅಥವಾ ದುರಾಶೆ ಹೊಂದಿದವರು. ಮೂಲತಃ ಶ್ರೀಮಂತ ಕುಟುಂಬದಿಂದ ಬಂದವರು. ಮಂಗಳೂರು ಮೂಲದ ಸಲೀಂ ಈಗ ಬೆಂಗಳೂರಿನಲ್ಲಿ ಸೆಟ್ಲ್ ಆಗಿದ್ದಾರೆ. ಸದ್ಯ ರಾಜ್ಯ ಕಾಂಗ್ರೆಸ್ನ ಕಾರ್ಯಾಧ್ಯಕ್ಷರಾಗಿರುವ ಅವರಿಗೆ ದೆಹಲಿ ಹೈಕಮಾಂಡ್ನಲ್ಲಿ ಸಾಕಷ್ಟು ಸಂಪರ್ಕವಿದೆ. ಇಲ್ಲಿವರೆಗೂ ಅವರು ಎಂದೂ ಒಂದು ನೇರ ಚುನಾವಣೆ ಗೆದ್ದಿಲ್ಲ. ಒಂದು ಸಲ ನಾಮನಿರ್ದೇಶಿತರಾಗಿ ಎಂಎಲ್ಸಿ ಆಗಿದ್ದರು. ಅಪರಿಚಿತ ಹಾವೇರಿ ಸಂಸತ್ ಕ್ಷೇತ್ರದಲ್ಲಿ ಎರಡು ಸಲ ಸ್ಪರ್ಧಿಸಿ ಸೋತಿದ್ದಾರೆ. ಹಾವೇರಿಯಲ್ಲಿ ಇವರ ಸ್ಪರ್ಧೆಯ ಕಾರಣಕ್ಕೆ ಹಿಂದೂ-ಮುಸ್ಲಿಂ ಮತಗಳ ಧ್ರುವೀಕರಣವಾಗಿ ಬಿಜೆಪಿಯ ಸಂಸದ ಶಿವಕುಮಾರ್ ಉದಾಸಿ ಬಂಪರ್ ಲಾಭ ಮಾಡಿಕೊಳ್ಳುತ್ತಿದ್ದಾರೆ.

ಶಕೀರ್ ಎಂಬ ಪ್ರಗತಿಪರ

ಎರಡು ಸಲ ಧಾರವಾಡ ದಕ್ಷಿಣ ಕ್ಷೇತ್ರದಿಂದ ಸಂಸದರಾಗಿದ್ದ ಮತ್ತು ಒಮ್ಮೆ ಹುಬ್ಬಳ್ಳಿ ನಗರದಿಂದ ಎಂಎಲ್ಎ ಆಗಿದ್ದ ಹಿರಿಯ ಸಜ್ಜನ ರಾಜಕಾರಣಿ ಐ.ಜಿ. ಸನದಿಯವರ ಪುತ್ರ ಶಕೀರ್ ಸನದಿ ಅವರಿಗೆ ಟಿಕೆಟ್ ಸಿಗಲಿದೆ ಎಂಬ ಮಾತಿದೆ. ಹುನ್ನಳ್ಳಿಯ ಸ್ಥಳೀಯ ನಿವಾಸಿಯೂ ಆಗಿರುವ ಅವರು ಯುವ ಕಾಂಗ್ರೆಸ್ ಘಟಕದ ಹಲವಾರು ಹುದ್ದೆಗಳಲ್ಲಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ. ಯುವ ಕಾಂಗ್ರೆಸ್ ಘಟಕದ ಚುನಾವಣಾ ಪ್ರಕ್ರಿಯೆ ರೂಪಿಸಿದ್ದು ಅವರೇ. ಅದು ಈಗಲೂ ಚಾಲ್ತಿಯಲ್ಲಿದೆ. ತಂದೆಯಂತೆ ಜಾತ್ಯಾತೀತ ನಿಲುವು ಹೊಂದಿರುವ ಶಕೀರ್, ಕಾಂಗ್ರೆಸ್ನಲ್ಲಿ ಜಾತ್ಯಾತೀತ ಧೋರಣೆಗೆ ಧಕ್ಕೆ ಬಂದಾಗ ಆಂತರಿಕವಾಗಿ ಧ್ವನಿ ಎತ್ತಿದ್ದಾರೆ. ಮುಸ್ಲಿಂಮರಲ್ಲಿ ಇರುವ ಜಾತಿ ಅಸಮಾಮನತೆಯ ಬಗ್ಗೆಯೂ ಅವರು ಮಾತನಾಡಿದ್ದಲ್ಲದೇ, ವಂಚಿತ ಮುಸ್ಲಿಂ ಸಮುದಾಯಗಳನ್ನು ಮುಖ್ಯವಾಹಿನಿಗೆ ತರಲು ಯತ್ನಿಸಿದ್ದಾರೆ.

ಧಾರವಾಡ ಕ್ಷೇತ್ರದ ಎರಡು ಸ್ಥಾನಗಳಲ್ಲಿ ಒಂದು ಬಿಜೆಪಿಯ ಹಾಲಿ ಎಂಎಲ್ಸಿ ಪ್ರದೀಪ್ ಶೇಟ್ಟರ್ ಪಾಲಾಗಲಿದೆ. ಕಾಂಗ್ರೆಸ್ನಿಂದ ಯಾರೇ ನಿಂತರೂ ಗೆಲುವು ಖಚಿತ. ಪ್ರಚಲಿತ ವಿದ್ಯಮಾನ ಗನಬಿಸಿದರೆ ಶಕೀರ್ ಸನದಿಯವರೇ ಸೂಕ್ತ ಅಭ್ಯರ್ಥಿ.

Tags: Basavaraj BommaiBJPCongress Partyಎಚ್ ಡಿ ಕುಮಾರಸ್ವಾಮಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಮುಂಬೈ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಮೊದಲ ಪಾಡ್ ಹೋಟೆಲ್ ಉದ್ಘಾಟನೆ !

Next Post

ತಾಲಿಬಾನಿಗೆ ಪ್ರಧಾನಿ ಮೋದಿ ನೀಡಿದ 4 ಸಲಹೆಗಳೇನು? ಯಾಕೆ?

Related Posts

ಮೀಸಲಾತಿ ಜಾರಿಯಲ್ಲಿ ಕಾಂಗ್ರೆಸ್ ಕಳ್ಳಾಟ: ರಾಜ್ಯಾದ್ಯಂತ ಜನಾಂದೋಲನಕ್ಕೆ ಬಿಜೆಪಿ ಎಚ್ಚರಿಕೆ
ಕರ್ನಾಟಕ

ಮೀಸಲಾತಿ ಜಾರಿಯಲ್ಲಿ ಕಾಂಗ್ರೆಸ್ ಕಳ್ಳಾಟ: ರಾಜ್ಯಾದ್ಯಂತ ಜನಾಂದೋಲನಕ್ಕೆ ಬಿಜೆಪಿ ಎಚ್ಚರಿಕೆ

by ಪ್ರತಿಧ್ವನಿ
March 5, 2026
0

ಬೆಂಗಳೂರು: ಮೀಸಲಾತಿ ಹಾಗೂ ಒಳಮೀಸಲಾತಿ ಜಾರಿಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಬದ್ಧತೆಯಿಲ್ಲದೆ ನಡೆದುಕೊಳ್ಳುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು. ಶೀಘ್ರದಲ್ಲೇ ರಾಜ್ಯಾದ್ಯಂತ ದೊಡ್ಡ...

Read moreDetails
ಡಿ.ಫಾರ್ಮ್ ವಾರ್ಷಿಕ ಪರೀಕ್ಷೆ: 100 ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ

ಡಿ.ಫಾರ್ಮ್ ವಾರ್ಷಿಕ ಪರೀಕ್ಷೆ: 100 ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ

March 4, 2026
ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

March 4, 2026
“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

March 4, 2026
ಬೆಂಗಳೂರಿಗರೇ ಗಮನಿಸಿ: ಕೆಲ ಮಾರ್ಗಗಳಲ್ಲಿ ಸಂಚಾರ ವ್ಯತ್ಯಯ

ಬೆಂಗಳೂರಿಗರೇ ಗಮನಿಸಿ: ಕೆಲ ಮಾರ್ಗಗಳಲ್ಲಿ ಸಂಚಾರ ವ್ಯತ್ಯಯ

March 4, 2026
Next Post
NEP: ಎಂಜಿನಿಯರಿಂಗ್ ಕೋರ್ಸ್‌ಗಳನ್ನು ಈಗ 11 ಪ್ರಾದೇಶಿಕ ಭಾಷೆಗಳಲ್ಲಿ ಕಲಿಸಲಾಗುವುದು: ಪ್ರಧಾನಿ ಮೋದಿ

ತಾಲಿಬಾನಿಗೆ ಪ್ರಧಾನಿ ಮೋದಿ ನೀಡಿದ 4 ಸಲಹೆಗಳೇನು? ಯಾಕೆ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada