• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಯುವ ನೀತಿ ಸಮಿತಿಯಲ್ಲಿ ಚಕ್ರವರ್ತಿ ಸೂಲಿಬೆಲೆ: ಶರಣ್ ಪಂಪ್ವೆಲ್, ಡ್ರೋಣ್ ಪ್ರತಾಪ್ ಏಕಿಲ್ಲ ಎಂದು ಜನರ ವ್ಯಂಗ್ಯ!

ಪಿಕೆ ಮಲ್ಲನಗೌಡರ್ by ಪಿಕೆ ಮಲ್ಲನಗೌಡರ್
October 24, 2021
in ಅಭಿಮತ
0
ಯುವ ನೀತಿ ಸಮಿತಿಯಲ್ಲಿ ಚಕ್ರವರ್ತಿ ಸೂಲಿಬೆಲೆ: ಶರಣ್ ಪಂಪ್ವೆಲ್, ಡ್ರೋಣ್ ಪ್ರತಾಪ್ ಏಕಿಲ್ಲ ಎಂದು ಜನರ ವ್ಯಂಗ್ಯ!
Share on WhatsAppShare on FacebookShare on Telegram

ಕರ್ನಾಟಕ ಯುವ ನೀತಿ- 2021 ರೂಪಿಸಲು ರಾಜ್ಯ ಸರ್ಕಾರ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಸಂಸ್ಥಾಪಕ ಡಾ.ಬಾಲಸುಬ್ರಹ್ಮಣ್ಯಂ ಅವರ ಅಧ್ಯಕ್ಷತೆಯ ಸಮಿತಿಯನ್ನು ರಚಿಸಿದೆ.

ADVERTISEMENT

ಬೆಂಗಳೂರಿನ ಮಲ್ಲಿಕಾರ್ಜುನ್ ಬಿ.ಪಾಟೀಲ್, ವಿನೋದ್ ಕೃಷ್ಣಮೂರ್ತಿ, ನೆಹರೂ ಯುವ ಕೇಂದ್ರದ ನಿರ್ದೇಶಕ ಎಂ.ಎನ್.ನಟರಾಜ್, ರಾಜ್ಯ ಎನ್‌‌ಎಸ್‌ಎಸ್ ಅಧಿಕಾರಿ ಡಾ.ಪ್ರತಾಪ್ ಲಿಂಗಯ್ಯ, ದೊಡ್ಡಬಳ್ಳಾಪುರದ ಡಾ.ಡಿ.ಎಸ್.ಕೃಷ್ಣ, ಮಂಡ್ಯದ ಕೆ.ನಾಗಣ್ಣಗೌಡ, ಬೇಲೂರಿನ ಸಂತೋಷ್ ಸೋಮಶೇಖರ್ (ಕೆಂಚಾಂಬ) ಅವರು ಸಮಿತಿ ಸದಸ್ಯರಾಗಿದ್ದಾರೆ. ಇವರ ಬಗ್ಗೆ ಅಂತಹ ಆಕ್ಷೇಪಗಳೇನೂ ಕೇಳಿ ಬಂದಿಲ್ಲ.

ಈ ಸಮಿತಿಯಲ್ಲಿ ಮೂರು ಹೆಸರುಗಳು ಈಗ ವಿವಾದಕ್ಕೆ ಈಡಾಗಿವೆ. ಯುವ ಬ್ರಿಗೇಡ್‍ನ ಚಕ್ರವರ್ತಿ ಸೂಲಿಬೆಲೆ, ಜಗದೀಶ್‍ ಶೆಟ್ಟರ್ ಅವರ ಎರಡನೇ ಪುತ್ರ ಸಂಕಲ್ಪ್‍ ಶೆಟ್ಟರ್ ಮತ್ತು ಕೇಂದ್ರ ಮಾಜಿ ಸಚಿವ ದಿ. ಅನಂತಕುಮಾರ್‍ ಪುತ್ರಿ ಐಶ್ವರ್ಯ ದಿನೇಶ್‍ ಅವರನ್ನು ಸಮಿತಿಯಲ್ಲಿ ಸೇರಿಸಿರುವುದು ತೀವ್ರ ಆಕ್ಷೇಪಗಳು ವ್ಯಕ್ತವಾಗಿವೆ.

ಮೊದಲಿಗೆ ಚಕ್ರವರ್ತಿ ಸೂಲಿಬೆಲೆ. ಇತಿಹಾಸದ ಖಚಿತತೆಗೆ ಗೌರವ ಕೊಡದವರು ಭವಿಷ್ಯವನ್ನು ರೂಪಿಸಲು ಸಾಧ್ಯವೇ ಎಂಬ ಪ್ರಶ್ನೆ ನಮ್ಮ ಮುಂದಿದೆ. ಸೂಲಿಬೆಲೆ ಇತಿಹಾಸವನ್ನೆ ತಿರುಚಿ ಭಾಷಣಗಳನ್ನು ಕುಟ್ಟುತ್ತ ಒಂದು ತಲೆಮಾರಿನ ಹುಂಬ ಯುವಕರ ತಲೆಗೆ ಹುಳ ಬಿಟ್ಟವರು.

ಈ ದೇಶದ ಆರ್ಥಿಕತೆ ಅಧೋಗತಿಗೆ ಇಳಿದಾಗಲೂ ಅವರು ತಮ್ಮದೇ ಅಂಕಿಅಂಶಗಳ ಮೂಲಕ ದೇಶ ಸುಖಿಯಾಗಿದೆ ಎಂದು ರೀಲು ಬಿಡುತ್ತ ಬಂದವರು. ಈ ದೇಶದ ಯುವಕರು ಈಗ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಉದ್ಯೋಗದ್ದು. ಇಲ್ಲಿ ಮೇಕ್‍ ಇನ್‍ ಇಂಡಿಯಾ, ಸ್ಕಿಲ್‍ ಇಂಡಿಯಾ ಎಲ್ಲ ವಿಫಲವಾಗಿವೆ. ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಯೇ ಇಲ್ಲ. ಆದರೆ ಸೂಲಿಬೆಲೆ ಹಾಗೇನೂ ಆಗಿಲ್ಲ ಎಂಬಂತೆ ಬಿಂಬಿಸುತ್ತ ಬಂದವರು.

ಅವರು ಹಿಂದೂತ್ವದ ಅದರಲ್ಲೂ ಅಪಾಯಕಾರಿ ಹಿಂದೂತ್ವದ ಪ್ರತಿಪಾದಕರು. ಇತ್ತೀಚೆಗೆ ಅವರು ಮಾಡಿದ ಟ್ವೀಟ್‍ಗೆ ಪ್ರತಿಕ್ರಿಯಿಸಿದ್ದ ಹಿರಿಯ ಪೊಲೀಸ್‍ ಅಧಿಕಾರಿ ಭಾಸ್ಕರ್‌ ರಾವ್‍, ಜನರನ್ನು ಪ್ರಚೋದಿಸುವುದನ್ನು ನಿಲ್ಲಿಸಿ ಎಂದು ಬುದ್ಧಿವಾದ ಹೇಳಿದ್ದರು.

ಸೂಲಿಬೆಲೆ ಸಮಿತಿಯಲ್ಲಿ ಇರುವುದಾದರೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾಗೆ ಹಾರಿಸಿ ಬಂದ ಡ್ರೋಣ್‍ ಪ್ರತಾಪ್‍ ಈ ಸಮಿತಿಯಲ್ಲಿ ಇರಲೇಬೇಕಿತ್ತು, ಛೇ ಸೂಲಿಬೆಲೆ ಪಕ್ಕ ಈ ಚೋಟಾ ಸುಳ್ಳುಗಾರ ಇರಲೇಬೇಕಿತ್ತು ಎಂದು ಜನ ವ್ಯಂಗ್ಯ ಮಾಡುತ್ತಿದ್ದಾರೆ. ಹಾಗೆಯೇ ಕರಾವಳಿಯ ಹಿಂದೂತ್ವವಾದಿ ಯುವ ಮುಖಂಡ ಶರಣ್‍ ಪಂಪ್‍ವೆಲ್‍ ಕೂಡ ಸಮಿತಿಯಲ್ಲಿ ಇದ್ದಿದ್ದರೆ ಸೂಪರ್‍ ಆಗುತ್ತಿತ್ತು ಎಂದೂ ಜನ ಕುಹಕ ಆಡುತ್ತಿದ್ದಾರೆ.

ಇನ್ನು ಮಾಜಿ ಮುಖ್ಯಮಂತ್ರಿ ಜಗದೀಶ್‍ ಶೆಟ್ಟರ್‍ ಪುತ್ರ ಸಂಕಲ್ಪ್‍ ಶೆಟ್ಟರ್‍ ಮತ್ತು ಅನಂತಕುಮಾರ್‍ ಪುತ್ರಿ ಐಶ್ವರ್ಯ ಅವರ ಸಾಧನೆ ಏನು? ಅವರು ಯುವ ಸಬಲೀಕರಣಕ್ಕೆ ಸಂಬಂಧಿಸಿದಂತೆ ಅಂತಹ ಯಾವ ಘನ ಕಾರ್ಯ ಮಾಡಿದ್ದಾರೆ? ತಜ್ಞರ ಸಮಿತಿಯಲ್ಲಿ ಸೇರುವ ಅರ್ಹತೆ ಅವರಿಗೆ ಇದೆಯೇ ಎಂಬ ಪ್ರಶ್ನೆಗಳು ಎದ್ದಿವೆ. ಇವರಿಬ್ಬರೂ ಬಿಜೆಪಿಯ ಹಿರಿಯ ನಾಯಕರ ಮಕ್ಕಳು ಎಂಬುದೇ ಇವರ ಅರ್ಹತೆ, ಇಲ್ಲೂ ವಂಶಪಾರಂಪರ್ಯ ಮುಂದುವರೆಸಿದ ಕೀರ್ತಿ ಬಿಜೆಪಿಗೆ ಸಲ್ಲಬೇಕು!

ವಿಜ್ಞಾನ, ಕ್ರೀಡೆ, ಗ್ರಾಮೀಣಾಭಿವೃದ್ಧಿ, ಮಹಿಳಾ ಸಬಲೀಕರಣ ಮುಂತಾದ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ವಿಭಿನ್ನ ಗುಂಪುಗಳಿಗೆ ಸೇರಿದವರನ್ನು ಸಮಿತಿಯ ಸದಸ್ಯರನ್ನಾಗಿ ಮಾಡಬೇಕಿತ್ತು. ಈ ರಾಜ್ಯದಲ್ಲಿ ಅಂತಹ ಸಾಧಕರಿಗೆ, ದೂರಗಾಮಿ ಆಲೋಚನೆ ಉಳ್ಳವರಿಗೇನೂ ಕೊರತೆ ಇಲ್ಲ ಅಲ್ಲವೇ?

ಈ ಹಿಂದೆ ರೋಹಿತ್‍ ಚಕ್ರತೀರ್ಥ ಎಂಬ ಸಂಘಪರಿವಾರದ ವ್ಯಕ್ತಿಯನ್ನು ಪಠ್ಯ ಪುಸ್ತಕ ಪರಿಶೀಲನಾ ಸಮಿತಿಗೆ ಸೇರಿಸುವ ಮೂಲಕ ಬಿಜೆಪಿ ಅಪಾಯಕಾರಿ ನಿಲುವು ತಳೆದಿತ್ತು. ಈಗ ಅದರ ಮುಂದುವರಿಕೆಯಾಗಿ ಸೂಲಿಬೆಲೆ, ಸಂಕಲ್ಪ್‍, ಐಶ್ವರ್ಯ ಅವರು ಈ ರಾಜ್ಯದ ಯುವಜನತೆಗೆ ನೀತಿಯೊಂದನ್ನು ರೂಪಿಸಲಿದ್ದಾರೆ. ಜೈ ಯುವ ಶಕ್ತಿ!

Previous Post

ಮೋದಿಯವರ ಸರ್ಕಾರವೇ ನಮ್ಮ ಜಿ.ಎಸ್.ಡಿ.ಪಿಯನ್ನು ಶ್ಲಾಘಿಸಿದೆ; ಬೊಮ್ಮಾಯಿ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು

Next Post

UP ಚುನಾವಣೆ; ಮಹಿಳಾ ಸಬಲೀಕರಣದ ಟ್ರಂಪ್‌ ಕಾರ್ಡ್‌ ಪ್ರಯೋಗಿಸಿದ ಪ್ರಿಯಾಂಕ ಗಾಂಧಿ

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
UP ಚುನಾವಣೆ; ಮಹಿಳಾ ಸಬಲೀಕರಣದ ಟ್ರಂಪ್‌ ಕಾರ್ಡ್‌ ಪ್ರಯೋಗಿಸಿದ ಪ್ರಿಯಾಂಕ ಗಾಂಧಿ

UP ಚುನಾವಣೆ; ಮಹಿಳಾ ಸಬಲೀಕರಣದ ಟ್ರಂಪ್‌ ಕಾರ್ಡ್‌ ಪ್ರಯೋಗಿಸಿದ ಪ್ರಿಯಾಂಕ ಗಾಂಧಿ

Please login to join discussion

Recent News

Top Story

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

by ಪ್ರತಿಧ್ವನಿ
July 5, 2025
Top Story

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
July 5, 2025
Top Story

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

by ಪ್ರತಿಧ್ವನಿ
July 5, 2025
Top Story

Mallikarjuna Kharge: ರಾಜ್ಯದಲ್ಲಿ ಅರಣ್ಯ ಪ್ರದೇಶ ಬೆಳಸಿ ಪರಿಸರ ಉಳಿಸಿ: ಮಲ್ಲಿಕಾರ್ಜುನ ಖರ್ಗೆ ಒತ್ತಾಸೆ.

by ಪ್ರತಿಧ್ವನಿ
July 5, 2025
Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಯಾದಗಿರಿ..!

by ಪ್ರತಿಧ್ವನಿ
July 5, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

July 5, 2025

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada