• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಲಸಿಕಾ ಮೇಳ ನಂತರ ದಿನನಿತ್ಯ ಲಸಿಕೆಗಳಲ್ಲಿ 90 ಪ್ರತಿಶತದಷ್ಟು ಇಳಿಕೆ: ಆರೋಗ್ಯ ಸಚಿವರಿಂದಿಲ್ಲ ಪ್ರತಿಕ್ರಿಯೆ !

Any Mind by Any Mind
September 22, 2021
in ಕರ್ನಾಟಕ
0
ಲಸಿಕಾ ಮೇಳ ನಂತರ ದಿನನಿತ್ಯ ಲಸಿಕೆಗಳಲ್ಲಿ 90 ಪ್ರತಿಶತದಷ್ಟು ಇಳಿಕೆ: ಆರೋಗ್ಯ ಸಚಿವರಿಂದಿಲ್ಲ ಪ್ರತಿಕ್ರಿಯೆ !
Share on WhatsAppShare on FacebookShare on Telegram

ಪ್ರಧಾನಿ ಮೋದಿ ಜನ್ಮದಿನದ ಪ್ರಯುಕ್ತ ಶುಕ್ರವಾರ ನಡೆದ ಲಸಿಕಾ ಮೇಳ (ವ್ಯಾಕ್ಸಿನೇಷನ್ ಡ್ರೈವ್) ಕರ್ನಾಟಕದಲ್ಲಿ ಯಶಸ್ವಿಯಾಗಿ ಜರುಗಿತ್ತು. ಆದರೀಗ ರಾಜ್ಯದಲ್ಲಿ ಲಸಿಕಾ ಸಂಖ್ಯೆಗಳಲ್ಲಿ ಭಾರಿ ಕುಸಿತ ಕಂಡಿದ್ದು ದಿನಕ್ಕೆ ಐದು ಲಕ್ಷ ಲಸಿಕೆ ನೀಡುವ ಯೋಜನೆಯನ್ನು ಸರ್ಕಾರ ಮರೆತಂತಿದೆ.

ADVERTISEMENT

ಶುಕ್ರವಾರ ಕರ್ನಾಟಕದಲ್ಲಿ ನಡೆದ ವ್ಯಾಕ್ಸಿನೇಷನ್ ಡ್ರೈವ್ ನಲ್ಲಿ 31 ಲಕ್ಷ (31,43,598) ಜನರಿಗೆ ಲಸಿಕೆಯನ್ನು ನೀಡಲಾಯಿತು. ಅದರ ನಂತರ ದಿನನಿತ್ಯದ ಲಸಿಕೆಗಳಲ್ಲಿ 90 ಪ್ರತಿಶತದಷ್ಟು ಇಳಿಕೆ ಕಂಡುಬಂದಿದೆ. ಮರುದಿನವೇ ಕೇವಲ 1.82 ಲಕ್ಷ (1,82,309) ಡೋಸ್‌ಗಳನ್ನು ನೀಡಲಾಗಿದೆ. ಭಾನುವಾರ ಅತ್ಯಂತ ಕಡಿಮೆ ಪ್ರಮಾಣವನ್ನು ಗಮನಿಸಲಾಗಿದ್ದು ಕೇವಲ 58,509 ಡೋಸ್‌ಗಳನ್ನು ನೀಡಲಾಗಿದೆ. ಲಸಿಕಾ ಮೇಳದ ಸಾಧನೆಗೆ ಹತ್ತಿರವಾಗದಿದ್ದರೂ, ಸೋಮವಾರ 2,55,503 ಡೋಸ್‌ಗಳನ್ನು ನೀಡಿದ್ದು ಕಳೆದ ಮೂರು ದಿನಗಳನ್ನು ತಾಳೆ ಮಾಡಿದರೆ ಸೋಮವಾರದಂದು ಹೆಚ್ಚಳ ಕಂಡುಬಂದಿದೆ. ಇನ್ನು ಮಂಗಳವಾರ, 2,62,709 ಡೋಸ್‌ಗಳನ್ನು ನೀಡಲಾಗಿದೆ.

ರಾಷ್ಟ್ರೀಯ ಆರೋಗ್ಯ ಮಿಷನ್‌ನ ವ್ಯವಸ್ಥಾಪಕ ನಿರ್ದೇಶಕಿ ಡಾ.ಅರುಂಧತಿ ಚಂದ್ರಶೇಖರ್ ಮಾತನಾಡಿ, “ಲಸಿಕೆ ಮೇಳಕ್ಕಾಗಿ ಜಿಲ್ಲೆಗಳಿಗೆ ಕಳುಹಿಸಿದ ಸ್ಟಾಕ್ ಒಂದೇ ದಿನದಲ್ಲಿ ಖಾಲಿಯಾಗಿದೆ. ಮುಂದಿನ ಎರಡು ದಿನಗಳು ವಿರಾಮದ ದಿನಗಳು, ಸೋಮವಾರ ಮತ್ತೊಮ್ಮೆ ಲಸಿಕೆ ಹಾಕುವ ಮೂಲಕ. ನಮ್ಮ ಪ್ರತಿದಿನ 5 ಲಕ್ಷ ಡೋಸ್‌ಗಳನ್ನು ನೀಡುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ.

ಮುಂದುವರೆದು, ರಾಜ್ಯದಿಂದ ಜಿಲ್ಲೆಗಳಿಗೆ ದಾಸ್ತಾನು ತಲುಪಲು ಒಂದರಿಂದ ಒಂದೂವರೆ ದಿನಗಳು ಬೇಕಾಗುತ್ತದೆ ಎಂದು ಡಾ.ಅರುಂಧತಿ ಹೇಳಿದ್ದಾರೆ. ಜಿಲ್ಲಾ ಅಧಿಕಾರಿಗಳೊಂದಿಗೆ ಸೋಮವಾರ ನಡೆದ ಸಭೆಯಲ್ಲಿ, ಲಸಿಕೆ ಆಡಳಿತವನ್ನು ಕಾರ್ಯತಂತ್ರಗೊಳಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸೂಚನೆ ನೀಡಲಾಯಿತು. ಒಂದು ಅಥವಾ ಎರಡು ದಿನಗಳಲ್ಲಿ ಡ್ರೈವ್ ಟ್ರ್ಯಾಕ್‌ಗೆ ಬರಲಿದೆ ಎಂದು ಹೇಳಿದರು.  ಸೆಪ್ಟೆಂಬರ್ 21 ಬುಧವಾರದ ನಂತರದ ಮೇಳಕ್ಕೆ ಇಲಾಖೆಯು ಸಿದ್ಧತೆ ನಡೆಸುತ್ತಿದೆ. ಇದಕ್ಕಾಗಿ, ಅವರು 20 ಲಕ್ಷಕ್ಕಿಂತ ಹೆಚ್ಚಿನ ಡೋಸ್‌ಗಳ ಸ್ಟಾಕ್ ಅನ್ನು ಸ್ವೀಕರಿಸಲಾಗುತ್ತದೆ ಎಂದು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರನ್ನು ಸಂಪರ್ಕಿಸಿದಾಗ ಲಭ್ಯವಿರದಿರುವುದಾಗಿ ದಿ ನ್ಯೂ ಇಂಡಿಯಾ ಎಕ್ಸ್‌ಪ್ರೆಸ್ ವರದಿ ಮಾಡಿದೆ.

COWIN ಡ್ಯಾಶ್‌ಬೋರ್ಡ್ ಪ್ರಕಾರ, ಕರ್ನಾಟಕವು ದೇಶದಲ್ಲಿ ಏಳನೇ ಸ್ಥಾನದಲ್ಲಿದೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರ 5,26,63,920 ಜನರಿಗೆ ಲಸಿಕೆ ನೀಡಲಾಗಿದೆ. ಅದಕ್ಕೂ ಮುಂಚೆ ಉತ್ತರ ಪ್ರದೇಶ, ಮಹಾರಾಷ್ಟ್ರ, ಮಧ್ಯ ಪ್ರದೇಶ, ಗುಜರಾತ್, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳ ಟಾಪ್‌ ಏಳು ಸ್ಥಾನದಲ್ಲಿ ಜಾಗ ಪಡೆದಿದೆ. ರಾಜ್ಯದೊಳಗೆ, ಬಿಬಿಎಂಪಿ, ಬೆಳಗಾವಿ, ಮೈಸೂರು, ದಕ್ಷಿಣ ಕನ್ನಡ ಫಲಾನುಭವಿಗಳಿಗೆ ಅತಿ ಹೆಚ್ಚು ಡೋಸ್‌ಗಳನ್ನು ನೀಡಿದೆ.

Tags: BJPCovid 19covid-19 vaccineDr K SudhakarFree Covid Vaccine PromiseMinister K Sudhakarvaccinationಕೋವಿಡ್-19ನರೇಂದ್ರ ಮೋದಿಬಿಜೆಪಿ
Previous Post

2020 ರಿಂದ ಕರ್ನಾಟಕದಲ್ಲಿ 476 ನಿಷೇಧಿತ ಸ್ಯಾಟಲೈಟ್‌ ಫೋನ್ ಕರೆ: ವಿಧಾನಸಭೆಯಲ್ಲಿ ಚರ್ಚೆ

Next Post

ವರ್ಣಾಶ್ರಮ ವ್ಯವಸ್ಥೆಯ ಪುನರ್ ಸ್ಥಾಪನೆಗೆ ಆರ್‌ಎಸ್‌ಎಸ್ ಪ್ರಯತ್ನಿಸುತ್ತಿದೆ: ಸಿದ್ದರಾಮಯ್ಯ ಕಿಡಿ

Related Posts

ಮೋದಿಯಿಂದ ದೇಶ ದೊಡ್ಡ ದುರಂತ ಸ್ಥಿತಿಗೆ ಬಂದಿದೆ : ಬೆಲೆ ಏರಿಕೆಗೆ ಡಿಕೆ ಶಿವಕುಮಾರ್‌ ವಾಗ್ದಾಳಿ
Top Story

ಮೋದಿಯಿಂದ ದೇಶ ದೊಡ್ಡ ದುರಂತ ಸ್ಥಿತಿಗೆ ಬಂದಿದೆ : ಬೆಲೆ ಏರಿಕೆಗೆ ಡಿಕೆ ಶಿವಕುಮಾರ್‌ ವಾಗ್ದಾಳಿ

by ಪ್ರತಿಧ್ವನಿ
May 15, 2026
0

ಬೆಂಗಳೂರು : ಕುಮಾರಸ್ವಾಮಿಗೆ ನಮ್ಮ ಬಗ್ಗೆ ಟೀಕೆ ಮಾಡಲಿಲ್ಲ ಎಂದರೆ ರಾಜಕೀಯವಾಗಿ ಬದುಕಿರಲು ಆಗುವುದಿಲ್ಲ. ನಾವು ಒಳ್ಳೆಯ ಕೆಲಸ ಮಾಡುತ್ತೇವೆ, ಅವರು ವಿರೋಧ ಮಾಡುತ್ತಾರೆ ಎಂದು ಡಿಸಿಎಂ...

Read moreDetails
ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ

ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ

May 15, 2026
ವಸ್ತ್ರಸಂಹಿತೆ ವಿವಾದಕ್ಕೆ ಹೊಸ ತಿರುವು; ಸರ್ಕಾರದ ಆದೇಶಕ್ಕೆ ಖಾಸಗಿ ಶಾಲೆಗಳ ವಿರೋಧ

ವಸ್ತ್ರಸಂಹಿತೆ ವಿವಾದಕ್ಕೆ ಹೊಸ ತಿರುವು; ಸರ್ಕಾರದ ಆದೇಶಕ್ಕೆ ಖಾಸಗಿ ಶಾಲೆಗಳ ವಿರೋಧ

May 15, 2026
ಹೋಂಗಾರ್ಡ್ಸ್, ರಿಸರ್ವ್ ಪೊಲೀಸರು ವಾಹನ ತಪಾಸಣಾ ಮಾಡಿದ್ರೆ ಕಠಿಣ ಕ್ರಮ : ಮೋಹನ್‌ ಕುಮಾರ್‌ ದಾನಪ್ಪ ಮನವಿಗೆ ಡಿಜಿಪಿ ಸ್ಪಂದನೆ

ಹೋಂಗಾರ್ಡ್ಸ್, ರಿಸರ್ವ್ ಪೊಲೀಸರು ವಾಹನ ತಪಾಸಣಾ ಮಾಡಿದ್ರೆ ಕಠಿಣ ಕ್ರಮ : ಮೋಹನ್‌ ಕುಮಾರ್‌ ದಾನಪ್ಪ ಮನವಿಗೆ ಡಿಜಿಪಿ ಸ್ಪಂದನೆ

May 14, 2026
ವಿದ್ಯುತ್ ಉತ್ಪಾದನೆಯಲ್ಲಿ ಮಹಿಳಾ ಸಿಬ್ಬಂದಿ ಸೇವೆ ಶ್ಲಾಘನೀಯ: ಗೌರವ್ ಗುಪ್ತ

ವಿದ್ಯುತ್ ಉತ್ಪಾದನೆಯಲ್ಲಿ ಮಹಿಳಾ ಸಿಬ್ಬಂದಿ ಸೇವೆ ಶ್ಲಾಘನೀಯ: ಗೌರವ್ ಗುಪ್ತ

May 14, 2026
Next Post
ಮೇಲ್ಜಾತಿಗೆ ಮೀಸಲಾತಿ ಘೋಷಣೆಯಾದ್ದರಿಂದ ಮೀಸಲಾತಿ ಬಗ್ಗೆ RSS ಧೋರಣೆ ಬದಲಾದಂತಿದೆ -ಸಿದ್ದರಾಮಯ್ಯ

ವರ್ಣಾಶ್ರಮ ವ್ಯವಸ್ಥೆಯ ಪುನರ್ ಸ್ಥಾಪನೆಗೆ ಆರ್‌ಎಸ್‌ಎಸ್ ಪ್ರಯತ್ನಿಸುತ್ತಿದೆ: ಸಿದ್ದರಾಮಯ್ಯ ಕಿಡಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada