2 ದಿನಗಳ ಹಿಂದೆ 29 ಮಂದಿ ಸಚಿವರಾಗಿ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟವನ್ನು ಸೇರ್ಪಡೆಗೊಂಡಿದ್ದರು. ಈಗ ಎಲ್ಲಾ ಸಚಿವರಿಗೂ ಖಾತೆಗಳನ್ನು ಹಂಚಲಾಗಿದೆ. ಬೊಮ್ಮಾಯಿ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಖಾತೆ? ಪ್ರಭಾವಿ ಖಾತೆಗಳು ಯಾರ ತೆಕ್ಕೆಗೆ? ಎಂಬ ಸಂಪೂರ್ಣ ವಿವರ ಇಲ್ಲಿದೆ.
ಹಿಂದಿನ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ 23 ಮಂದಿ ಬೊಮ್ಮಾಯಿ ಅವರ ಕ್ಯಾಬಿನೆಟ್ನಲ್ಲಿ ಮತ್ತೆ ಮಂತ್ರಿಯಾಗಿದ್ದಾರೆ. 6 ಮಂದಿ ಹೊಸದಾಗಿ ಬೊಮ್ಮಾಯಿ ಅವರ ಸಂಪುಟ ಸೇರಿದ್ದಾರೆ. ಯಾವೆಲ್ಲಾ ಖಾತೆಗಳನ್ನು ಸಿಎಂ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.

ಸಚಿವರಿಗೆ ಖಾತೆ ಹಂಚಿಕೆ
• ಆರ್. ಅಶೋಕ್ – ಬೆಂಗಳೂರು ನಗರಾಭಿವೃದ್ಧಿ
• ಡಾ ಅಶ್ವತ್ಥ ನಾರಾಯಣ – ಐಟಿ ಬಿಟಿ ಉನ್ನತ ಶಿಕ್ಷಣ
• ಡಾ.ಸುಧಾಕರ್ – ಆರೋಗ್ಯ ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ
• ಎಂಟಿಬಿ ನಾಗರಾಜ್ – ಆಹಾರ ಮತ್ತು ನಾಗರೀಕ ಸರಬರಾಜು ಖಾತೆ
• ಗೋವಿಂದ ಕಾರಜೋಳ – ಜಲಸಂಪನ್ಮೂಲ ಖಾತೆ
• ಬಿ.ಸಿ.ನಾಗೇಶ್ – ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ
• ಅರಗ ಜ್ಞಾನೇಂದ್ರ- ಅರಣ್ಯ ಖಾತೆ
• ಶಶಿಕಲಾ ಜೊಲ್ಲೆಗೆ – ಸಾಂಖ್ಯಿಕ ಖಾತೆ
• ಎಸ್.ಟಿ.ಸೋಮಶೇಖರ್- ಸಹಕಾರ
• ಭೈರತಿ ಬಸವರಾಜ್ – ನಗರಾಭಿವೃದ್ದಿ
• ಎಸ್.ಅಂಗಾರ – ಬಂದರು ಮತ್ತು ಮೀನುಗಾರಿಕೆ
• ಕೋಟಾ ಶ್ರೀನಿವಾಸ ಪೂಜಾರಿ – ಹಿಂದುಳಿದ ವರ್ಗ, ಮುಜರಾಯಿ, ಕನ್ನಡ ಸಂಸ್ಕೃತಿ
• ಮುರುಗೇಶ ನಿರಾಣಿ – ಭಾರಿ ಮತ್ತು ಮಧ್ಯಮ ಕೈಗಾರಿಕೆ
• ಉಮೇಶ್ ಕತ್ತಿ – ಲೋಕೋಪಯೋಗಿ ಖಾತೆ
• ಶಿವರಾಮ್ ಹೆಬ್ಬಾರ್ – ಕಾರ್ಮಿಕ
• ಮುನಿರತ್ನ – ಪೌರಾಡಳಿತ ಖಾತೆ
• ಸಿ ಸಿ ಪಾಟೀಲ್- ಗಣಿ ಮತ್ತು ಭೂ ವಿಜ್ಞಾನ ಖಾತೆ
• ಗೋಪಾಲಯ್ಯ – ಅಬಕಾರಿ
• ನಾರಾಯಣಗೌಡ – ರೇಷ್ಮೆ ಖಾತೆ
• ಮಾಧುಸ್ವಾಮಿ – ಕಾನೂನು ಸಂಸದೀಯ, ಸಣ್ಣ ನೀರಾವರಿ
• ಆನಂದಸಿಂಗ್ ಪರಿಸರ – ಜೀವಶಾಸ್ತ್ರ
ಆದರೆ ಇನ್ನೂ ಖಾತೆ ಹಂಚಿಕೆ ವಿವರ ಅಧಿಕೃತವಾಗಿ ಸಿಎಂ ಬೊಮ್ಮಾಯಿ ಘೋಷಣೆ ಮಾಡಿಲ್ಲ. ಗೃಹ ಸೇರಿದಂತೆ ಒಂದೆರಡು ಪ್ರಮುಖ ಖಾತೆಗಳು ಇನ್ನೂ ಹಂಚಿಕೆಯಾಗದೆ ಹಾಗೇ ಇದೆ. ರಾಜ್ಯಪಾಲ ತಾವರ್ಚಂದ್ ಗೆಹ್ಲೋಟ್ ಕೈ ಸೇರಿದ ಬೆನ್ನಲ್ಲೇ ಖಾತೆ ಪಟ್ಟಿ ಅಂತಿಮವಾಗಲಿದೆ. ಈ ಬಗ್ಗೆ ನಾಳೆ ಅಥವಾ ಇಂದೇ ಅಧಿಕೃತವಾಗಿ ಘೊಷಣೆ ಹೊರ ಬೀಳುವ ಸಾಧ್ಯತೆ. ಮೂಲಗಳು ತಿಳಿಸಿರುವ ಈ ಪಟ್ಟಿ ಬಹುತೇಕ ಅಂತಿಮ ಎನ್ನಲಾಗಿದೆ.












