• Home
  • About Us
  • ಕರ್ನಾಟಕ
Saturday, June 28, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಪಿಪಿಇ ಕಿಟ್ ಖರೀದಿಯಲ್ಲಿ ಮತ್ತೊಂದು ಹಗರಣ: ಕೆ ಆರ್‌ ಎಸ್‌ ಗಂಭೀರ ಆರೋಪ

Any Mind by Any Mind
July 31, 2021
in ಕರ್ನಾಟಕ
0
ಪಿಪಿಇ ಕಿಟ್ ಖರೀದಿಯಲ್ಲಿ ಮತ್ತೊಂದು ಹಗರಣ: ಕೆ ಆರ್‌ ಎಸ್‌ ಗಂಭೀರ ಆರೋಪ
Share on WhatsAppShare on FacebookShare on Telegram

ಕೊವಿಡ್-19 ಸಂದರ್ಭದಲ್ಲಿ ರಾಜ್ಯ ಸರ್ಕಾರದ ಅನೇಕ ಇಲಾಖೆಗಳಲ್ಲಿ ಖರೀದಿ ಪ್ರಕ್ರಿಯೆಯಲ್ಲಿ ನಿರಂತರವಾಗಿ ಭ್ರಷ್ಟಾಚಾರ ನಡೆದಿದೆ ಎಂದು ಕೆಆರ್‌ಎಸ್‌ ಪಕ್ಷ ಆರೋಪಿಸಿದೆ.

ADVERTISEMENT

ಕಳೆದ ವರ್ಷ ಮೊದಲನೆಯ ಸಂದರ್ಭದಲ್ಲಿ ಕರ್ನಾಟಕ ಡ್ರಗ್‌ ಲಾಜಿಕ್ಸ್ ಮತ್ತು ವೇರ್ ಹೌಸಿಂಗ್ ಸಂಸ್ಥೆಯು ಪಿಪಿಇ ಕಿಟ್, ಸ್ಯಾನಿಟೈಸರ್, ಔಷಧಿ, ಉಪಕರಣ ಮತ್ತು ಇತರೆ ಪರಿಕರಗಳ ಖರೀದಿಯಲ್ಲಿ ನೂರಾರು ಕೋಟಿ ಹಗರಣ ನಡೆದಿರುವ ಬಗ್ಗೆ ಕೆ. ಆರ್. ಎಸ್ ಪಕ್ಷವು ಬಹಿರಂಗ ಮಾಡಿ ಎಸಿಬಿ ಹಾಗೂ ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮತ್ತು ಕಾಗದಪತ್ರಗಳ ಸಮಿಗೆ ದೂರು ನೀಡಿತ್ತು. ಈ ದೂರಿನ ಆಧಾರದ ಮೇಲೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಂದಿನ ಅಧ್ಯಕ್ಷರಾಗಿದ್ದ ಎಚ್. ಕೆ. ಪಾಟೀಲ್ ನೇತೃತ್ವದ ಸಮಿತಿಯು ವಿಚಾರಣೆ ಕೈಗೆತ್ತಿಕೊಂಡು, ತನ್ನ ವಿಚಾರಣಾ ವರದಿಯನ್ನು ವಿಧಾನಸಭಾಧ್ಯಕ್ಷರಿಗೆ ಸಲ್ಲಿಸಿದೆ ಎಂದು ಕೆಆರ್‌ಎಸ್‌ ಪತ್ರಿಕಾ ಪ್ರಕಟನೆಯಲ್ಲಿ ಹೇಳಿದೆ.

ಕೊವಿಡ್-19 ಸಂಬಂಧಿತ ಬಹುತೇಕ ಖರೀದಿ ಪ್ರಕ್ರಿಯೆಗಳಲ್ಲಿ ಅಕ್ರಮ ಮತ್ತು ಅವ್ಯವಹಾರ ನಡೆದಿರುವುದು ನಿರಂತರವಾಗಿ ಕಂಡುಬಂದಿದೆ. ಇವೆಲ್ಲದರ ಬಗ್ಗೆ ಸರ್ಕಾರ ಯಾವುದೇ ತನಿಖೆ ನಡಸದ ಅಕ್ರಮಗಳಲ್ಲಿ ಭಾಗಿಯಾಗಿರುವವರ ರಕ್ಷಣೆಗೆ ನಿಂತಿದೆ. ಇದರ ಮುಂದುವರಿದ ಭಾಗವೇ, ನಾವು ಇಂದು ಬಹಿರಂಗ ಮಾಡುತ್ತಿರುವ, ಮತ್ತೊಂದು ಖರೀದಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆಯಲು ಕಾರಣವಾಗಿದೆ.

ಇತ್ತೀಚಿಗೆ ಕೋವಿಡ್-19 ಎರಡನೇ ಅತಿ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮ ನಿಯಮಿತ (KSMSCL, ಹಿಂದೆ ಕರ್ನಾಟಕ ಡ್ರಗ್ ಲಾಜಿಸ್ಟಿಕ್ಸ್ ಮತ್ತು ವೇರ್ ಹೌಸಿಂಗ್ ಸೊಸೈಟಿ) ಕೊವಿಡ್ ವಾರಿಯರ್ ಗಳಿಗೆ ಎಂದು 12 ಲಕ್ಷ ಪಿಪಿಇ ಕಿಟ್ ಖರೀದಿಗಾಗಿ ದಿನಾಂಕ 26-4-2021 ರಂದು ದರಪಟ್ಟಿಯನ್ನು (IFQ – Invitation For Quotation) ಆಹ್ವಾನಿಸಿತ್ತು. ‌

ಅನೇಕ ಸರಬರಾಜುದಾರರು ಮತ್ತು ಕಂಪನಿಗಳು ತಮ್ಮ ದರಪಟ್ಟಿಯನ್ನು ಇದಕ್ಕೆ ಪ್ರತಿಯಾಗಿ ಸಲ್ಲಿಸಿದ್ದವು. ಇದರಲ್ಲಿ ಎಚ್ & ಜಡ್ ಅಪಾರೆಲ್ (H&Z ) ಕಂಪನಿ ಒಂದು ಪಿಪಿಇ ಕಿಟ್ ಗೆ 498 ರೂಗಳ ದರಪಟ್ಟಿ ಸಲ್ಲಿಸಿ L1 ಸ್ಥಾನದಲ್ಲಿರುತ್ತಾರೆ ಮತ್ತು ಯುಕ್ಕಾ ಫ್ಯಾಷನ್ 520 ರೂಗಳ ದರ ನೀಡಿ 4ನೇ ಸ್ನಾನದಲ್ಲಿರುತ್ತಾರೆ, ಆದರೆ H&Z ಅಪಾರಲ್ ಸರಬರಾಜು ವೇಳಾಪಟ್ಟಿಯನ್ನು ನೀಡಿರುವುದಿಲ್ಲ. ಆದ್ದರಿಂದ, ನಿಯಮದ ಪ್ರಕಾರ ಅವರನ್ನು ಖರೀದಿ ಪ್ರಕ್ರಿಯೆಯಿಂದ ಹೊರಗಿಡಬೇಕಾಗಿರುತ್ತದೆ. ಮುಂದುವರಿದು, ದಿನಾಂಕ 14-06-2021 ರಂದು KSMSCL ಆನ್ಲೈನ್ ದರ ಸಂಧಾನ ಸಭೆ ಕರೆದು ತಮ್ಮ ದರಗಳನ್ನು ಪುನರ್ ವಿಮರ್ಶಿಸಲು ಕೇಳಿಕೊಳ್ಳುತ್ತಾರೆ.

ತದನಂತರ ದಿನಾಂಕ 21-06-2021 ರಂದು KSMSCL ಎಲ್ಲಾ ಸರಬರಾಜುದಾರರಿಗೆ ಇ-ಮೇಲ್ ಮುಖಾಂತರ ಪಿಪಿಇ ಕಿಟ್‌ಗಳ ದರವನ್ನು 370 ರೂಪಾಯಿಗಳಿಗೆ ನಿಗದಿ ಮಾಡುತ್ತಾರೆ, ಇದಕ್ಕೆ ಪ್ರತಿಯಾಗಿ ನಾಲ್ಕನೇ ಸ್ನಾನದಲ್ಲಿದ್ದ ಯುಕ್ಕಾ ಫ್ಯಾಷನ್ ರವರು 2206-2021ರಂದು 385 (ರೂ 367+ ಜಿಎಸ್ ಟಿ ) ರೂಪಾಯಿಗಳಿಗೆ ಸರಬರಾಜು ಮಾಡುವುದಾಗಿ ಮತ್ತು H&Z ಅಪಾರೆಲ್ ನವರು 400 ರೂಗಳಿಗೆ ಸರಬರಾಜು ಮಾಡುವುದಾಗಿ ಇ-ಮೇಲ್ ಮುಖಾಂತರ ಅದೇ ದಿನ ತಿಳಿಸುತ್ತಾರೆ.

ಅಂತಿಮವಾಗಿ KSMSCL ದಿನಾಂಕ 03-07-2021ರಂದು 4, ಲಕ್ಷ ಪಿಪಿಇ ಕಿಟ್ ಗಳ ಖರೀದಿಗೆ 16 ಕೋಟಿ ರೂಗಳ ಖರೀದಿ ಆದೇಶವನ್ನು ಹೊರಡಿಸುತ್ತಾರೆ. ಈ ಖರೀದಿ ಆದೇಶದ ಮೇಲೆ ಇಲ್ಲಿಯವರೆಗೂ H&Z ಅಪಾರೆಲ್ 2 ಲಕ್ಷ ಪಿಪಿಇ ಕಿಟ್ ಗಳನ್ನು ಸರಬರಾಜು ಮಾಡಿರುತ್ತಾರೆ. ಇವರು ಸರಬರಾಜು ಮಾಡಿರುವ ಪಿಪಿಇ ಕಿಟ್ ಗಳೂ ಕಳಪೆ ಗುಣಮಟ್ಟದ್ದಾಗಿದ್ದು ನಿಗದಿಪಡಿಸಿರುವ ಮಾನದಂಡದಿಂದ ಕೂಡಿರುವುದಿಲ್ಲ.

ಮೊದಲನೇ ಖರೀದಿ ಆದೇಶದಿಂದ ಸರ್ಕಾರಕ್ಕೆ, 60 ಲಕ್ಷ ರೂಪಾಯಿಗಳ ನಷ್ಟ ಉಂಟಾಗಿದ್ದು ಜೊತೆಗೆ ಕಳಪ ಗುಣಮಟ್ಟದ ಪಿಪಿಇ ಕಿಟ್ ಸರಬರಾಜಾಗಿದೆ. ಉಳಿದ 8 ಲಕ್ಷ ಪಿಪಿಇ ಕಿಟ್ ಗಳ ಸರಬರಾಜು ಆದೇಶ ನೀಡಿದರೆ, ಸರ್ಕಾರಕ್ಕೆ ಒಟ್ಟಾರೆ 1 ಕೋಟಿ 80 ಲಕ್ಷ ನಷ್ಟ ಉಂಟಾಗುತ್ತದೆ. ಈ ಅಕ್ರಮದಲ್ಲಿ KSMSCL ಅಧಿಕಾರಿಗಳು ನೇರವಾಗಿ ಭಾಗಿಯಾಗಿದ್ದಾರೆ. ಇಲ್ಲಿ ಗಮನಿಸಬೇಕಾದ ಮಹತ್ತ್ವದ ಅಂಶವೆಂದರೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಂದ ಹಲವಾರು ಮಾಹಿತಿಗಳನ್ನು ಮರೆಮಾಚಿ ಖರೀದಿ ಪ್ರಕ್ರಿಯೆ ನಡೆಸಲಾಗಿದೆ. ಯಾವ ಕಾರಣಕ್ಕಾಗಿ ಯುಕ್ಕಾ ಫಾಶವ್ ರವರನ್ನು ಕೈಬಿಡಲಾಗಿದೆ ಎಂದು ಕಾರಣ ನೀಡದೆ H&Z ಅಪಾರಲ್ ಗೆ ಖರೀದಿ ಆದೇಶ ನೀಡಲಾಗಿದೆ ಎಂದು ತಿಳಿಸಿಲ್ಲ.

KSMSCL ಅಧಿಕಾರಿಗಳು ದುಷ್ಟಕೂಟ ರಚಿಸಿಕೊಂಡು, ಸಂಪೂರ್ಣವಾಗಿ ಕಳಪೆ ಗುಣಮಟ್ಟದ ಪರಿಕರಗಳನ್ನು ಮತ್ತು ಔಷಧಿಗಳನ್ನು ಖರೀದಿ ಮಾಡುತ್ತಿದ್ಯಾರೆ, ಕಳಪೆ ಗುಣಮಟ್ಟದಲ್ಲಿ ಖರೀದಿ ಯಾದ ಉಪಕರಣ ಮತ್ತು ಔಷಧಿಗಳಿಗೆ ಗುಣಮಟ್ಟ ಪರೀಕ್ಷೆಯ ಫಲಿತಾಂಶವನ್ನು ತಿದ್ದಿ ತಮಗೆ ಬೇಕಾದಂತಹ ವರದಿಯನ್ನು ನೀಡುತ್ತಿದ್ದಾರೆ. ಪ್ರಸ್ತುತ ಸರಬರಾಜಾಗಿರುವ ಪಿಪಿಇ ಕಿಟ್‌ಗಳು ಅತ್ಯಂತ ಕಳಪೆಯಾಗಿದ್ದು, ಜಿಲ್ಲಾ ಗುಣಮಟ್ಟ ಪರಿವೀಕ್ಷಕರಿಗೆ ಉತ್ತಮ ಗುಣಮಟ್ಟ ಎಂದು ವರದಿ ನೀಡುವಂತೆ ಒತ್ತಡ ಮತ್ತು ಬೆದರಿಕೆ ಹಾಕಲಾಗುತ್ತಿದೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ಅಂಶವೆಂದರೆ KSMSCL ನಿರಂತರವಾಗಿ ಟೆಂಡರ್ ಪುಕ್ರಿಯೆ ಕೈಬಿಟ್ಟು ಕೇವಲ ದರಪಟ್ಟಿ ಆಧಾರದ ಮೇಲೆ ಖರೀದಿ ನಡೆಸುತ್ತಿರುವುದು. ಅಲ್ಪಾವಧಿ ಟೆಂಡರ್ (Short Term Tender) ಕರೆಯಲು ಅವಕಾಶವಿದ್ದರೂ ಕೂಡ, ದರಪಟ್ಟಿಯ ಆಧಾರದ ಮೇಲೆ ಖರೀದಿ ಮಾಡಲಾಗುತ್ತಿದೆ. ಟೆಂಡರ್ ಕರೆದು ನೇರವಾಗಿ ಉತ್ಪಾದಕರಿಂದ ಖರೀದಿಸುವ ಎಲ್ಲಾ ಅವಕಾಶಗಳಿದ್ರರೂ ಕೂಡ ಮಧ್ಯವರ್ತಿಗಳಿಗೆ ಅವಕಾಶವಾಗುವಂತೆ ಖರೀದಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಖರೀದಿ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ಪಾರದರ್ಶಕತೆಯ ಕೊರತೆ ಇದು ಎಲ್ಲವನ್ನು ಗೌಪ್ಯವಾಗಿ ನಡೆಸಲಾಗುತ್ತಿದೆ. ತುರ್ತಾಗಿ ಅಗತ್ಯ ಎಂದು ದರಪಟ್ಟಿ ಕರೆಯುವ ನಿಗಮವು ಅಂತಿಮವಾಗಿ ಖರೀದಿ ಮಾಡಲು ತಿಂಗಳುಗಟ್ಟಲೆ ಸಮಯ ತೆಗೆದುಕೊಳ್ಳುತ್ತದೆ ಮತ್ತು ಆ ಕಾರಣಕ್ಕಾಗಿ ನೂರಾರು ಕೋಟಿ ಸಾರ್ವಜನಿಕ ಹಣ ನಷ್ಟ ಮಾಡುತ್ತಿದ್ದು, ಜೊತೆಗೆ ಕಳಪೆ ಗುಣಮಟ್ಟದ ಔಷಧಿ ಮತ್ತು ಪರಿಕರಗಳು ಖರೀದಿ ಮಾಡುತ್ತಿದೆ.

ಮೊದಲನೇ ಅಲೆಯ ಸಂದರ್ಭದಲ್ಲಿ ಕೋವಿಚ್-19ನ ಪ್ರಮುಖ ಚಿಕಿತ್ಸಾ ಕೇಂದ್ರು ಆಗಿರುವ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಪಿಪಿಇ ಕಿಟ್ ಗಳ ಗುಣಮಟ್ಟದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಆ ಸಂದರ್ಭದಲ್ಲಿ ದರ ಹೆಚ್ಚಾಗಲು ಮತ್ತು ಗುಣಮಟ್ಟದಲ್ಲಿ ರಾಜಿಯಾಗಲು ತುರ್ತು ಪರಿಸ್ತಿತಿಯ ಕಾರಣ ನೀಡಲಾಗುತ್ತಿತ್ತು. ಇಷ್ಟೆಲ್ಲಾ ನಡದಿದರೂ ಕೂಡ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಸರ್ಕಾರದ ಉನ್ನತ ಹಂತದ ಅಧಿಕಾರಿಗಳು ಮತ್ತು ಮಂತ್ರಿಗಳು ನೇರವಾಗಿ ಭಾಗಿಯಾಗಿದ್ದಾರೆ ಎಂದು ಹೇಳಲು ಯಾವುದೇ ಸಂದೇಹವಿಲ್ಲ.

ಟೆಂಡರ್ ಕರೆಯದೆ ಮತ್ತು ಖರೀದಿ ಆದೇಶವನ್ನು ತನ್ನ ವೆಬ್ ಸೈಟಿನಲ್ಲಿ ಹಾಕದಿರುವುದು, ಮಾಹಿತಿಯನ್ನು ಮುಚ್ಚಿಟ್ಟು ಅಕ್ರಮ ನಡೆಸಲು ಮಾಡಿಕೊಂಡಿರುವ ವ್ಯವಸ್ಥೆಯಾಗಿದೆ. ಎರಡು ತಿಂಗಳುಗಳ ಹಿಂದೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ KSMSCL ಸೇರಿದಂತೆ ಆರೋಗ್ಯ ಇಲಾಖೆಯಲ್ಲಿನ ಕೋವಿಡ್ ಸಂಬಂಧಿತ ಖರೀದಿ ಪ್ರಕ್ರಿಯೆ ಬಗ್ಗೆ ಹತ್ತಾರು ಪ್ರಶ್ನೆಗಳನ್ನೆತ್ತಿದ್ದು, ಆರೋಗ್ಯ ಇಲಾಖೆ ಇದುವರೆಗೂ ಉತ್ತರ ನೀಡದ ಕಾಲಹರಣ ಮಾಡಿ ನುಣುಚಿಕೊಳ್ಳುವ ಕೆಲಸ ಮಾಡುತ್ತಿದೆ.

ಈ ಹಿಂದೆ ನಾವು ನೀಡಿರುವ ದೂರಿನ ಆಧಾರದ ಮೇಲೆ ತನಿಖೆ ನಡೆಸಲು ಮುಂದಾದ ಸಂದರ್ಭದಲ್ಲಿ ವಿಚಾರಣೆಗೆ ತಡೆಯೊಡ್ಡುವ ಉದ್ದೇಶದಿಂದ ಮಾನ್ಯ ವಿಧಾನಸಭಾ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಕೋವಿಡ್ – 19 ಕಾರಣ ನೀಡಿ ಎಲ್ಲಾ ವಿಧಾನಮಂಡಲದ ಸಮಿತಿಗಳು ಯಾವುದೇ ಪರಿಶೀಲನಾ ಭೇಟಿ ನೀಡಬಾರದೆಂದು ಆದೇಶಿಸಿ ತನಿಖೆ ನಡೆಯದಂತೆ ನೋಡಿಕೊಂಡಿದರು. ನಂತರ ಕೊವಿಡ್ ಹಾವಳಿ ಕಡಿಮೆಯಾದರೂ ಕೂಡ ಈ ಆದೇಶವನ್ನು ಅವರು ಹಿಂಪಡೆಯಲಿಲ್ಲ. ನಂತರ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ತನ್ನ ವಿಚಾರಣ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಲು ಅನುಮತಿಗಾಗಿ ಮಾನ್ಯ ವಿಧಾನಸಭಾಧಕರಿಗೆ ಸಲ್ಲಿಸಿ ಹಲವಾರು ತಿಂಗಳುಗಳೇ ಕಳೆದರೂ ಇಲ್ಲಿಯವರೆಗೂ ಆ ವರದಿ ಸದನದಲ್ಲಿ ಮಂಡನೆಯಾಗಿಲ್ಲ, ಯಾಕಾಗಿ ಸದನದಲ್ಲಿ ಮಂಡನೆಯಾಗಿ ಇಲ್ಲ ಎಂದು ಮಾನ್ಯ ವಿಧಾನಸಭಾಧ್ಯಕ್ಷರು ತಿಳಿಸಬೇಕಾಗಿದೆ.

 ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಕೋವಿಚ್ ಸಂದರ್ಭದಲ್ಲಿನ ಖರೀದಿ ಸೇರಿದಂತೆ ಅನೇಕ ಅಕ್ರಮಗಳ ಕಾರಣಕ್ಕಾಗಿಯೇ ಪತನವಾಯಿತು ಎಂಬುದನ್ನು ನಾವು ಗಮನಿಸಬೇಕು. ಯಡಿಯೂರಪ್ಪನವರ ನೇತೃತ್ವದ ಸರ್ಕಾರವು ಎರಡು ವರ್ಷ ಪೂರೈಸಿದ ಸಂದರ್ಭದಲ್ಲಿ ಎಲ್ಲಾ ಪತ್ರಿಕೆಗಳಿಗೆ ಜಾಹೀರಾತು ನೀಡಿ ತಮ್ಮ ಸಾಧನೆಗಳನ್ನು ಹೇಳಿಕೊಂಡಿದ್ದರು. ಆದರೆ ಇದರಲ್ಲಿ ಔಷಧಿ ಖರೀದಿ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಜಾಹೀರಾತು ಯಾಕೆ ನೀಡಿಲ್ಲವೆಂದು ತಿಳಿದಿಲ್ಲ. ಸರ್ಕಾರವು ಎಲ್ಲಾ ಖರೀದಿ ಪ್ರಕ್ರಿಯೆಗಳನ್ನು ಪಾರದರ್ಶಕ ಮಾಡಬೇಕು, ಖರೀದಿ ಆದೇಶಗಳನ್ನು ಆದೇಶ ಹೊರಡಿಸಿದ ತಕ್ಷಣ ವೆಬ್ ಸೈಟಿನಲ್ಲಿ ಪ್ರಕಟಿಸಬೇಕು, ಇಲ್ಲಿಯವರೆಗೆ KSMSCL ನಲ್ಲಿ ನಡೆದಿರುವ ಖರೀದಿಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಮತ್ತು ಹಾಲಿ ಹೈಕೋರ್ಟ್ ನ್ಯಾಯಾಧೀಶರ ಉಸ್ತುವಾರಿಯಲ್ಲಿ ತನಿಖೆ ನಡೆಸಬೇಕು ಎಂದು ಕೆ. ಆರ್. ಎಸ್ ಪಕ್ಷ ಆಗ್ರಹಿಸುತ್ತದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ಹೇಳಿದೆ.

Previous Post

ಬದಲಾಗಿರುವುದು ನಾಯಕತ್ವ, ಪಕ್ಷವಲ್ಲ: ಬೊಮ್ಮಾಯಿಗೆ ಮುಂದಿದೆ ಸವಾಲುಗಳ ಸರಣಿ!

Next Post

ʼಪ್ರಜಾಪ್ರಭುತ್ವ ಮುಂದುವರೆಯುತ್ತದೆʼ: ದೆಹಲಿ ಭೇಟಿ ಯಶಸ್ವಿ ಎಂದ ಮಮತಾ ಬ್ಯಾನರ್ಜಿ

Related Posts

Top Story

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

by ಪ್ರತಿಧ್ವನಿ
June 27, 2025
0

"ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಬೇಕು. ಪ್ರತಿ ವರ್ಷ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಮಾಡಬೇಕು" ಎಂದು...

Read moreDetails

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

June 27, 2025

Rangitharanga: “ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ

June 27, 2025

KJ George: ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಜಾರ್ಜ್‌

June 27, 2025

ರೈತ ಜಮೀನು ಕಿತ್ತು ತಿನ್ನುವ ಸರ್ಕಾರ

June 27, 2025
Next Post
ʼಪ್ರಜಾಪ್ರಭುತ್ವ ಮುಂದುವರೆಯುತ್ತದೆʼ: ದೆಹಲಿ ಭೇಟಿ ಯಶಸ್ವಿ ಎಂದ ಮಮತಾ ಬ್ಯಾನರ್ಜಿ

ʼಪ್ರಜಾಪ್ರಭುತ್ವ ಮುಂದುವರೆಯುತ್ತದೆʼ: ದೆಹಲಿ ಭೇಟಿ ಯಶಸ್ವಿ ಎಂದ ಮಮತಾ ಬ್ಯಾನರ್ಜಿ

Please login to join discussion

Recent News

Top Story

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

by ಪ್ರತಿಧ್ವನಿ
June 27, 2025
Top Story

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

by ಪ್ರತಿಧ್ವನಿ
June 27, 2025
Top Story

Rangitharanga: “ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ

by ಪ್ರತಿಧ್ವನಿ
June 27, 2025
Top Story

KJ George: ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಜಾರ್ಜ್‌

by ಪ್ರತಿಧ್ವನಿ
June 27, 2025
Top Story

ರೈತ ಜಮೀನು ಕಿತ್ತು ತಿನ್ನುವ ಸರ್ಕಾರ

by ಪ್ರತಿಧ್ವನಿ
June 27, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

June 27, 2025

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

June 27, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada