• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಬಿಜೆಪಿಗರಿಗೆ ‘ಉತ್ಸವ’, ಜನರಿಗೆ ಸಂಕಷ್ಟವಾದ ಮೋದಿ ಲಸಿಕಾ ಅಭಿಯಾನ!

Shivakumar by Shivakumar
May 30, 2021
in ದೇಶ
0
ಬಿಜೆಪಿಗರಿಗೆ ‘ಉತ್ಸವ’, ಜನರಿಗೆ ಸಂಕಷ್ಟವಾದ ಮೋದಿ ಲಸಿಕಾ ಅಭಿಯಾನ!
Share on WhatsAppShare on FacebookShare on Telegram

ಲಸಿಕೆ ಕೊರತೆಯ ಹಾಹಾಕಾರದ ಹಂತದಿಂದ ದೇಶದ ಟೀಕಾ ಉತ್ಸವ, ಆಡಳಿತ ಪಕ್ಷವೇ ಪ್ರಾಯೋಜಿತ ವ್ಯಾಕ್ಸಿನ್ ಬ್ಲ್ಯಾಕಿಂಗ್ ದಂಧೆಗೆ ಬಂದು ನಿಂತಿದೆ. ಅಷ್ಟರಮಟ್ಟಿಗೆ ಟೀಕಾ ಉತ್ಸವ ಬಿಜೆಪಿ ಮತ್ತು ಅದರ ಸರ್ಕಾರಗಳಿಗೆ ‘ಉತ್ಸವ’ವಾಗಿಯೂ, ಜನಸಾಮಾನ್ಯರ ಪಾಲಿಗೆ ‘ಉಭಯಸಂಕಟ’ವಾಗಿಯೂ ಈಗ ಬದಲಾಗಿದೆ.

ADVERTISEMENT

ಒಂದು ಕಡೆ 60 ಮತ್ತು 45 ವರ್ಷ ಮೇಲ್ಪಟ್ಟ ಆದ್ಯತಾ ಗುಂಪಿನ ಮೊದಲ ಲಸಿಕೆ ಪಡೆದವರಿಗೆ ಸಕಾಲದಲ್ಲಿ ಎರಡನೇ ಲಸಿಕೆ ಕೊಡಲು ಕೂಡ ಲಸಿಕೆ ಇಲ್ಲದೆ ವಯೋವೃದ್ಧರು, ವಿವಿಧ ಅಪಾಯಕಾರಿ ಆರೋಗ್ಯ ಸಮಸ್ಯೆ ಹೊಂದಿರುವವರು ಲಸಿಕಾ ಕೇಂದ್ರಗಳ ಮುಂದೆ ತಾಸುಗಟ್ಟಲೆ ಸರತಿಸಾಲು ನಿಂತು ಬರಿಗೈಲಿಗೆ ವಾಪಸು ಹೋಗುತ್ತಿದ್ದಾರೆ. ಮತ್ತೊಂದು ಕಡೆ ಆರೋಗ್ಯ ಇಲಾಖೆ, ಪೊಲೀಸ್, ಪೌರ ಕಾರ್ಮಿಕರು ಮತ್ತು ನೌಕರರು, ಅಗತ್ಯ ಸೇವಾ ವಲಯದ ಕೆಲಸಗಾರರಿಗೆ ಕೂಡ ಜೀವರಕ್ಷಕ ಲಸಿಕೆ ನೀಡಲು ಕೂಡ ಲಸಿಕೆ ಲಭ್ಯವಿಲ್ಲ.

ಜನವರಿ 16ರಂದು ಭಾರೀ ಪ್ರಚಾರದೊಂದಿಗೆ ಆರಂಭವಾದ ಲಸಿಕೆ ಅಭಿಯಾನದಲ್ಲಿ ಈವರೆಗೆ(ಮೇ 28ರವರೆಗೆ), ಈ ಐದು ತಿಂಗಳಲ್ಲಿ ದೇಶದಲ್ಲಿ ಪೂರ್ಣ ಪ್ರಮಾಣದಲ್ಲಿ ಎರಡೂ ಡೋಸ್ ಲಸಿಕೆ ಪಡೆದವರ ಪ್ರಮಾಣ ಕೇವಲ ನಾಲ್ಕು ಕೋಟಿ 26 ಲಕ್ಷ! ಅಂದರೆ, ಆರಂಭದಲ್ಲಿ ಜಗತ್ತಿನ ‘ವ್ಯಾಕ್ಸಿನ್ ಗುರು’ ಎಂದು ತನ್ನ ಬೆನ್ನು ತಾನೇ ತಟ್ಟಿಕೊಂಡಿದ್ದ ದೇಶದಲ್ಲಿ, ಬರೋಬ್ಬರಿ ಐದು ತಿಂಗಳು ಗತಿಸಿದರೂ, ಒಟ್ಟು ಜನಸಂಖ್ಯೆಯಲ್ಲಿ ಕೇವಲ ಶೇ.3ರಷ್ಟು ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ! ಇದು ವ್ಯಾಕ್ಸಿನ್ ಡಿಪ್ಲೊಮಸಿ(ಲಸಿಕೆ ರಾಜತಾಂತ್ರಿಕತೆ)ಯ ಮಾತುಗಳನ್ನಾಡಿದ, ಕಳೆದ ವರ್ಷದ ಆಗಸ್ಟ್ ಹೊತ್ತಿಗೇ ದೇಶದ ಪ್ರತಿ ನಾಗರಿಕರಿಗೂ ಉಚಿತ ಲಸಿಕೆ ನೀಡುವ ಕುರಿತು ಸಂಪೂರ್ಣ ಕಾರ್ಯಯೋಜನೆ ಸಿದ್ಧಪಡಿಸಲಾಗಿದೆ ಎಂದು ಬಡಾಯಿ ಕೊಚ್ಚಿಕೊಂಡಿದ್ದ ಬಿಜೆಪಿ ಸರ್ಕಾರದ ಲಸಿಕೆ ಅಭಿಯಾನದ ಪ್ರಗತಿ!

ಈ ನಡುವೆ ಕರ್ನಾಟಕದ ಲಸಿಕೆ ಕಾರ್ಯಕ್ರಮದ ಅವ್ಯವಸ್ಥೆಯಂತೂ ಸ್ವತಃ ರಾಜ್ಯ ಹೈಕೋರ್ಟಿನ ಕೆಂಗಣ್ಣಿಗೆ ಗುರಿಯಾಗಿದೆ. ಪದೇ ಪದೇ ನ್ಯಾಯಾಂಗದ ಚಾಟಿ ಬೀಸಿಯೂ ಲಸಿಕೆ ಅವ್ಯವಸ್ಥೆಯನ್ನು ಸರಿಪಡಿಸಿ ಕನಿಷ್ಟ ವ್ಯವಸ್ಥೆಯನ್ನು ಖಾತರಿಪಡಿಸುವುದು ಕೂಡ ರಾಜ್ಯ ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಈ ನಡುವೆ, ಬೆಡ್ ಬ್ಲ್ಯಾಕಿಂಗ್ ದಂಧೆಯ ಹೆಸರು ಹೇಳಿಕೊಂಡು ಪ್ರಚಾರದ ವರಸೆ ತೋರಿ, ಸ್ವತಃ ತಮ್ಮ ಆಪ್ತರ ಆ ಪ್ರಕರಣದಲ್ಲಿ ಆರೋಪಿಗಳಾಗಿರುವುದು ಬಹಿರಂಗವಾಗುತ್ತಲೇ ತೀವ್ರ ಮುಜುಗರಕ್ಕೆ ಈಡಾದ ಬಿಜೆಪಿಯ ಯೂತ್ ಐಕಾನ್, ಸಂಸದ ತೇಜಸ್ವಿ ಸೂರ್ಯ ಚಿಕ್ಕಪ್ಪ ರವಿಸುಬ್ರಹ್ಮಣ್ಯ ಅವರೇ ಇದೀಗ ವ್ಯಾಕ್ಸಿನ್ ಬ್ಲ್ಯಾಕಿಂಗ್ ದಂಧೆಯಲ್ಲಿ ತೊಡಗಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಆರ್ ಟಿಐ ಕಾರ್ಯಕರ್ತ ವೆಂಕಟೇಶ್ ಅವರು ಖಾಸಗಿ ಆಸ್ಪತ್ರೆಯೊಂದರ ಸಿಬ್ಬಂದಿಯೊಂದಿಗೆ ಮಾತನಾಡಿದ ಆಡಿಯೋ ವೈರಲ್ ಆಗಿದ್ದು, ಆ ಆಡಿಯೋದಲ್ಲಿ ಶಾಸಕ ರವಿ ಸುಬ್ರಹ್ಮಣ್ಯ ಸ್ವತಃ ಬಿಬಿಎಂಪಿಯಿಂದ ಉಚಿತ ಲಸಿಕೆ ಪಡೆದು ಅದನ್ನು ಖಾಸಗಿ ಆಸ್ಪತ್ರೆ ಮೂಲಕ ತಲಾ 900 ರೂ.ಗೆ ಮಾರಲಾಗುತ್ತಿದೆ ಎಂಬುದು ಬಹಿರಂಗವಾಗಿದೆ.

ಆ ಆರೋಪಗಳ ಸತ್ಯಾಸತ್ಯತೆ ಏನೇ ಇರಬಹುದು. ಆದರೆ, ಈ ಪ್ರಕರಣ ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಲಸಿಕೆ ದುಬಾರಿ ಬೆಲೆಗೆ ಮಾರಾಟ ದಂಧೆ ಸಾರ್ವಜನಿಕ ಚರ್ಚೆಗೆ ಬಂದಿದೆ. ಒಂದು ಕಡೆ ಜೀವ ಪಣಕ್ಕಿಟ್ಟು ಕರೋನಾ ಕರ್ತವ್ಯ ನಿರ್ವಹಿಸುತ್ತಿರುವ ಕೋವಿಡ್ ವಾರಿಯರ್ಸ್ಗಳಿಗೆ, ಅಪಾಯಕಾರಿ ವಲಯದಲ್ಲಿರುವ ವಯಸ್ಕರು ಮತ್ತು ವಿವಿಧ ಗಂಭೀರ ಕಾಯಿಲೆಪೀಡಿತರ ಜೀವ ಉಳಿಸಲು ಲಸಿಕೆ ಕೊರತೆ, ಹಾಹಾಕಾರ. ಮತ್ತೊಂದು ಕಡೆ ರಾಜ್ಯದಾದ್ಯಂತ ಖಾಸಗೀ ಆಸ್ಪತ್ರೆಗಳಲ್ಲಿ, ಕಾರ್ಪೊರೇಟ್ ಸಂಸ್ಥೆಗಳಲ್ಲಿ ದುಡ್ಡು ಕೊಟ್ಟರೆ ಯಾರಿಗೆ ಬೇಕಾದರೂ ಯಾವಾಗ ಬೇಕಾದರೂ ಲಸಿಕೆ ದೊರೆಯುತ್ತಿದೆ! ಅಂದರೆ; ಸಾರ್ವಜನಿಕರಿಗೆ ಉಚಿತವಾಗಿ ನೀಡಲು ಸರ್ಕಾರಕ್ಕೆ ತಿಂಗಳುಗಟ್ಟಲೆ ಸಿಗದ ಲಸಿಕೆ, ಖಾಸಗೀ ಆಸ್ಪತ್ರೆಗಳಿಗೆ ಮತ್ತು ಕಾರ್ಪೊರೇಟ್ ಸಂಸ್ಥೆಗಳಿಗೆ ಅವರಿಗೆ ಬೇಕಾದಷ್ಟು ಬೇಕಾದಾಗ ಸಿಗುತ್ತಿರುವುದು ಹೇಗೆ? ಎಂಬ ಪ್ರಶ್ನೆ ಎದ್ದಿದೆ. ಅದರಲ್ಲೂ ಆಡಳಿತರೂಢ ಬಿಜೆಪಿ ನಾಯಕರು ಮತ್ತು ಅವರ ಆಪ್ತರು, ಆರ್ ಎಸ್ ಎಸ್ ಮತ್ತು ಅದರ ಪರಿವಾರದ ಮಂದಿಗೆ ಸಂಬಂಧಿಸಿದ ಆಸ್ಪತ್ರೆ, ಕಾರ್ಪೊರೇಟ್ ಕಂಪನಿಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಯಾವ ಅಡೆತಡೆಯೂ ಇಲ್ಲದೆ ಲಸಿಕೆ ನೀಡಿಕೆ ಮುಂದುವರಿದಿರುವಾಗ, ಸರ್ಕಾರಿ ಆಸ್ಪತ್ರೆಗಳಲ್ಲಿ, ಉಚಿತ ಲಸಿಕಾ ಕೇಂದ್ರಗಳಲ್ಲಿ ಮಾತ್ರ ಕನಿಷ್ಟ ಕೋವಿಡ್ ವಾರಿಯರ್ಸ್ ಗೆ ಹಾಕಲೂ ಲಸಿಕೆ ಲಭ್ಯವಿಲ್ಲ ಎಂದರೆ, ಇದನ್ನು ಸರ್ಕಾರ ಮತ್ತು ಆಡಳಿತ ಪಕ್ಷ ಪ್ರಾಯೋಜಿಕ ವ್ಯಾಕ್ಸಿನ್ ಬ್ಲ್ಯಾಕಿಂಗ್ ಎನ್ನದೆ ಇನ್ನೇನು ಹೇಳಲು ಸಾಧ್ಯ?

ಡಬ್ಲ್ಯೂಎಚ್ ಒ ಸೇರಿದಂತೆ ವಿವಿಧ ಜಾಗತಿಕ ಸಂಸ್ಥೆಗಳು ಮತ್ತು ತಜ್ಞರು ಭಾರತದ ಕೋವಿಡ್ ಸಾವು-ನೋವುಗಳಿಗೆ ಕಡಿವಾಣ ಹಾಕಲು ಇರುವ ಏಕೈಕ ಮಾರ್ಗ ಲಸಿಕೆ. ದೇಶದವ18 ವರ್ಷ ಮೇಲ್ಪಟ್ಟವರ ಪೈಕಿ ಕನಿಷ್ಟ ಅರ್ಧದಷ್ಟು ಮಂದಿಗಾದರೂ ಲಸಿಕೆ ಹಾಕದೆ, ಕರೋನಾ ನಿಯಂತ್ರಣ ದುಃಸಾಧ್ಯ ಎಂದು ಹೇಳಿವೆ. ಆದರೆ, ದೇಶದ ಸುಮಾರು 80 ಕೋಟಿ 18 ವರ್ಷ ಮೇಲ್ಪಟ್ಟ ಜನಸಂಖ್ಯೆಗೆ ಲಸಿಕೆ ನೀಡಲು ಅಗತ್ಯ ಲಸಿಕೆ ದಾಸ್ತಾನು ಮಾಡುವ ಮುನ್ನವೇ ಬರೋಬ್ಬರಿ 6 ಕೋಟಿ ಲಸಿಕೆಯನ್ನು ವಿದೇಶಗಳಿಗೆ ಕಳಿಸಿದ ಪ್ರಧಾನಿ ಮೋದಿಯವರು, ತಮ್ಮ ವಿಶ್ವ ನಾಯಕ, ವಿಶ್ವಗುರು ವರ್ಚಸ್ಸು ವೃದ್ಧಿಗೆ ಕೊಟ್ಟ ಆದ್ಯತೆಯನ್ನು ದೇಶದ ಜನರ ಜೀವ ಉಳಿಸಲು ಕೊಡಲಿಲ್ಲ. ಪರಿಣಾಮವಾಗಿ ಈಗ ದೇಶದ ಶೇ.3ರಷ್ಟು ಜನರಿಗೆ ಲಸಿಕೆ ಕೊಡಲು ಬರೋಬ್ಬರಿ ಐದು ತಿಂಗಳ ಸುದೀರ್ಘ ಸಮಯ ಹಿಡಿದಿದೆ. ತಜ್ಞರ ಪ್ರಕಾರ ಕನಿಷ್ಟ 40 ಕೋಟಿ ಮಂದಿಗೆ ಲಸಿಕೆ ನೀಡಲು, ಲಸಿಕೆ ಕಾರ್ಯಕ್ರಮದ ಸದ್ಯದ ವೇಗದ ಲೆಕ್ಕದಲ್ಲಿ ಕನಿಷ್ಟ ಐದಾರು ವರ್ಷಗಳೇ ಬೇಕಾಗಬಹುದು! ಅಲ್ಲಿಯವರೆಗೆ ಕರೋನಾಕ್ಕೆ ಬಲಿಯಾಗುವವರ ದೇಶದ ಜನರ ಸಂಖ್ಯೆಗಿಂತ ಕರೋನಾ ನಿಯಂತ್ರಣದ ಲಾಕ್ ಡೌನ್ ಗಳಿಂದಾಗಿ ಕೆಲಸವಿಲ್ಲದೆ, ದುಡಿಮೆ ಇಲ್ಲದೆ, ಹಸಿವಿನಿಂದ, ಮರ್ಯಾದೆಗೆ ಅಂಜಿ ಜೀವ ಬಿಡುವರ ಸಂಖ್ಯೆಯೇ ಅಧಿಕವಾಗಲಿದೆ.

ಆದರೆ, ಲಸಿಕೆಗಿಂತ ತಮ್ಮ ಐಷಾರಾಮಿ ಅರಮನೆ ಮತ್ತು ಸಂಸತ್ ಭವನದ ನಿರ್ಮಾಣದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವ ಪ್ರಧಾನಿಗಳು, ಸದ್ಯ ಆ ದಿಸೆಯಲ್ಲಿ ಅತ್ಯಂತ ಚುರುಕಾಗಿ ಕೆಲಸ ಮಾಡುತ್ತಿದ್ದಾರೆ. ದೇಶದ ಸರ್ಕಾರ ಮತ್ತು ಪ್ರಧಾನಿ ಮೋದಿಯವರು ದೇಶದ ಜನರ ಜೀವದ ವಿಷಯದಲ್ಲಿ ತಳೆದಿರುವ ಉಪೇಕ್ಷೆ ಮತ್ತು ಲಸಿಕೆ ವಿಷಯದಲ್ಲಿ ತಳೆದಿರುವ ನಿರ್ಲಕ್ಷ್ಯದ ಪರಿಣಾಮವಾಗಿ ಇಂದು ಭಾರತವಷ್ಟೇ ಅಲ್ಲ, ಜಗತ್ತಿನ ಬಹುತೇಕ ಬಡ ರಾಷ್ಟ್ರಗಳು ಕೂಡ ಸಂಕಷ್ಟಕ್ಕೆ ಸಿಲುಕಿವೆ ಎಂದು ಜಾಗತಿಕ ಖ್ಯಾತಿಯ ಮಾಧ್ಯಮ  ‘ಟೈಮ್’ ಹೇಳಿದೆ.

‘ಟೈಮ್ಸ್’ ನಿಯತಕಾಲಿಕದ ವರದಿಯ ಪ್ರಕಾರ, ಭಾರತದ ಲಸಿಕೆ ಅಭಿಯಾನ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದ್ದು, ಕಳೆದ ಏಪ್ರಿಲ್ ನಲ್ಲಿ ದೇಶದಲ್ಲಿ ನೀಡಲಾದ ಲಸಿಕೆಗಳ ಪ್ರಮಾಣಕ್ಕೆ ಹೋಲಿಸಿದರೆ, ಮೇ ನಲ್ಲಿ ಅರ್ಧದಷ್ಟು ಕುಸಿತ ಕಂಡಿದೆ. ಕಳೆದ 2020ರ ಆಗಸ್ಟ್ ಹೊತ್ತಿಗೆ ‘ಭಾರತ ಲಸಿಕೆ ವಿತರಣೆ ಕಾರ್ಯಯೋಜನೆ ಸಂಪೂರ್ಣ ಸಿದ್ಧವಾಗಿದೆ ಎಂದು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿಯವರು, ಆ ಯೋಜನೆಯನ್ನು ಎಷ್ಟು ಯಶಸ್ವಿಯಾಗಿ ಜಾರಿಗೆ ತಂದಿದ್ದಾರೆ ಎಂಬುದಕ್ಕೆ ಲಸಿಕೆ ಅಭಿಯಾನದ ಈ ಅವ್ಯವಸ್ಥೆಯೇ ಸಾಕ್ಷಿ. 2020ರ ಆಗಸ್ಟ್ ನಲ್ಲಿ ಲಸಿಕಾ ಕಾರ್ಯಯೋಜನೆ ಸಿದ್ಧಪಡಿಸಿದ್ದ ಸರ್ಕಾರ, ಲಸಿಕೆಗೆ ಮೊದಲ ಬೇಡಿಕೆ ಸಲ್ಲಿಸಿದ್ದು ಬರೋಬ್ಬರಿ ನಾಲ್ಕು ತಿಂಗಳ ಬಳಿಕ 2021ರ ಜನವರಿಯಲ್ಲಿ! ಅದೂ ಕೂಡ ತೀರಾ ಅತ್ಯಲ್ಪ ಪ್ರಮಾಣದ ಲಸಿಕೆಗೆ ಬೇಡಿಕೆ ಸಲ್ಲಿಸಲಾಗಿತ್ತು. ಲಸಿಕೆಯ ಮೊದಲ ಬ್ಯಾಚ್ ಸರಬರಾಜಾಗುತ್ತಿದ್ದಂತೆ ಜನವರಿ 16ರಂದು ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಹೀಗೆ ತಯಾರಿ ಇಲ್ಲದೆ, ಸೂಕ್ತ ಕಾರ್ಯಯೋಜನೆ ಇಲ್ಲದೆ, ಅಗತ್ಯ ದಾಸ್ತಾನು ಇಲ್ಲದೆ ಆರಂಭಿಸಿದ ತರಾತುರಿಯ ಅಭಿಯಾನದ ಪರಿಣಾಮವಾಗಿ, ಒಂದು ಕಡೆ ಮಾರ್ಚ್- ಏಪ್ರಿಲ್ ಹೊತ್ತಿಗೆ ಕರೋನಾ ಎರಡನೇ ಅಲೆ ದೇಶದಲ್ಲಿ ಭಾರೀ ಸಾವುನೋವಿನ ರುದ್ರನರ್ತನ ನಡೆಸಿರುವಾಗ, ಕೇವಲ ಶೇ.0.5ರಷ್ಟು ಮಂದಿಗೆ ಮಾತ್ರ ಲಸಿಕೆ ನೀಡುವಂತಹ ತೀರಾ ಅಸಹಾಯಕ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ದೇಶದ ಜನತೆ ಜೀವ ಉಳಿಸಿಕೊಳ್ಳಲು ಕಷ್ಟದ ದಿನಗಳ ನಡುವೆಯೂ ಮೂರು ನಾಲ್ಕು ಪಟ್ಟು ಹಣ ತೆತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಬೇಕಾಗಿದೆ.

ಭಾರತದ ಅವಿವೇಕಿ ಲಸಿಕೆ ನೀತಿಯ ಕಾರಣದಿಂದಾಗಿ, ಸೂಕ್ತ ಲಸಿಕೆ ದಾಸ್ತಾನು ಮಾಡಿಕೊಳ್ಳದ ಹೊಣೆಗೇಡಿತನದಿಂದಾಗಿ ದೇಶದ ಜನ ಮಾತ್ರವಲ್ಲ; ಇತರ ದೇಶಗಳ ಜನ ಕೂಡ ಕರೋನಾದ ದವಡೆಗೆ ತುತ್ತಾಗುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಲಸಿಕೆ ಕೊರತೆಯ ಕಾರಣದಿಂದ ಹೇರಿರುವ ಲಸಿಕೆ ರಫ್ತು ನಿರ್ಬಂಧದಿಂದಾಗಿ ಭಾರತದ ಸೀರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಲಸಿಕೆಗಳನ್ನೇ ನಂಬಿಕೊಂಡಿದ್ದ ದೇಶಗಳೂ ಈಗ ಲಸಿಕೆ ಇಲ್ಲದೆ ಆತಂಕಕ್ಕೆ ಸಿಲುಕಿವೆ. ತನ್ನದೇ ಜನರಿಗೆ ಉಚಿತ ಲಸಿಕೆ ನೀಡಲು ಪ್ರಧಾನಿ ಮೋದಿ ಸರ್ಕಾರ ತೋರಿದ ಜನದ್ರೋಹಿ ಜಿಪುಣತನದ ಪ್ರತಿಫಲವಾಗಿ ಈಗ ಭಾರತೀಯರು ಮಾತ್ರವಲ್ಲದೆ, 90 ಕ್ಕೂ ಹೆಚ್ಚು ದೇಶಗಳ ಬಡ ಜನರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ!

ಈ ನಡುವೆ, ಮೊನ್ನೆ ಲಸಿಕೆ ಸರಬರಾಜು ಕುರಿತು ಮಾತುಕತೆಗೆ ಹೋಗಿದ್ದ ವಿದೇಶಾಂಗ ಸಚಿವ ಜೈಶಂಕರ್, “ದೇಶಗಳು ತಮ್ಮ ರಾಷ್ಟ್ರೀಯ ಹಿತಾಸಕ್ತಿಯನ್ನು ಮೀರಿ ಜಾಗತಿಕ ಒಳಿತಿಗಾಗಿ ಕೆಲಸ ಮಾಡಬೇಕು” ಎಂದು ಹೂವರ್ ಇನ್ ಸ್ಟಿಟ್ಯೂಟ್ ನಲ್ಲಿ ಭಾಷಣ ಬಿಗಿದಿದ್ದಾರೆ!.

Previous Post

ಒಂದೂವರೆ ವರ್ಷದಲ್ಲೇ ‘ಕೊರೋನಾ’ ವಿರುದ್ಧ ಗೆಲುವು ಸಾಧ್ಯವಾಗುತ್ತಿದ್ದರೂ 40 ವರ್ಷಗಳಿಂದಲೂ ‘ಏಡ್ಸ್’ ವಿರುದ್ಧದ ಹೋರಾಟದ‍ಲ್ಲಿ ಕೈಸೋಲುತ್ತಿರುವುದೇಕೆ?

Next Post

ಅಲೋಪತಿಯನ್ನು ಗೌರವಿಸಲು ಸಾಧ್ಯವಾಗದಿದ್ದರೆ, ಕನಿಷ್ಠ ಅಪಹಾಸ್ಯ ಮಾಡಬೇಡಿ: ಬಾಬಾ ರಾಮದೇವ್ ಗೆ ಬಹಿರಂಗ ಪತ್ರ

Related Posts

Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
0

ಹಾಸನ ಜಿಲ್ಲೆಯ ಇಂಧನ ಇಲಾಖೆ ಪ್ರಗತಿ ಪರಿಶೀಲನಾ ಸಭೆ ರಾಜ್ಯದಲ್ಲಿ ಮೂರು ಸಾವಿರ ಅಕ್ರಮ ಪಂಪ್ ಸೆಟ್ ಗಳ ಸಕ್ರಮ ಕೃಷಿ ಫೀಡರ್ ಗಳನ್ನು ಸೌರೀಕರಣಗೊಳಿಸಿ ರೈತರ...

Read moreDetails

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

July 3, 2025
Next Post
ಅಲೋಪತಿಯನ್ನು ಗೌರವಿಸಲು ಸಾಧ್ಯವಾಗದಿದ್ದರೆ, ಕನಿಷ್ಠ ಅಪಹಾಸ್ಯ ಮಾಡಬೇಡಿ: ಬಾಬಾ ರಾಮದೇವ್ ಗೆ ಬಹಿರಂಗ ಪತ್ರ

ಅಲೋಪತಿಯನ್ನು ಗೌರವಿಸಲು ಸಾಧ್ಯವಾಗದಿದ್ದರೆ, ಕನಿಷ್ಠ ಅಪಹಾಸ್ಯ ಮಾಡಬೇಡಿ: ಬಾಬಾ ರಾಮದೇವ್ ಗೆ ಬಹಿರಂಗ ಪತ್ರ

Please login to join discussion

Recent News

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada