• Home
  • About Us
  • ಕರ್ನಾಟಕ
Wednesday, December 3, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ರಾಜ್ಯದಲ್ಲಿ 600, ಉ.ಪ್ರ.ದಲ್ಲಿ1621 ಶಿಕ್ಷಕರ ಸಾವು: ಶಿಕ್ಷಕರಿಗೆ ಮಾರಕವಾದ ಉಪ ಚುನಾವಣೆ ಕಾರ್ಯ

ರಾಕೇಶ್‌ ಪೂಂಜಾ by ರಾಕೇಶ್‌ ಪೂಂಜಾ
May 18, 2021
in ಕರ್ನಾಟಕ
0
ರಾಜ್ಯದಲ್ಲಿ 600, ಉ.ಪ್ರ.ದಲ್ಲಿ1621 ಶಿಕ್ಷಕರ ಸಾವು: ಶಿಕ್ಷಕರಿಗೆ ಮಾರಕವಾದ ಉಪ ಚುನಾವಣೆ ಕಾರ್ಯ
Share on WhatsAppShare on FacebookShare on Telegram

ADVERTISEMENT

ಕಳೆದ ವರ್ಷದ ಮಾರ್ಚ್ ನಲ್ಲಿ ಕೋವಿಡ್ 19 ನ ಸಾಂಕ್ರಾಮಿಕ ಅಟ್ಟಹಾಸ ಶುರುವಾದಾಗಿನಿಂದ ವಿದ್ಯಾರ್ಥಿಗಳು ಮತ್ತೆ ಶಾಲೆಯ ಮುಖವನ್ನು ನೋಡಿಲ್ಲ. ದುರಂತವೆಂದರೆ, ಮತ್ತೆ ಶಾಲೆ ಶುರುವಾದರೂ ದೇಶದ ಲಕ್ಷಾಂತರ ವಿದ್ಯಾರ್ಥಿಗಳಿಗೆ ತಮ್ಮ ನೆಚ್ಚಿನ ಶಿಕ್ಷಕರ ಮುಖವನ್ನು ಮತ್ತೊಮ್ಮೆ ನೋಡುವ ಭಾಗ್ಯ ಬರಲಾರದು. ಏಕೆಂದರೆ ದೇಶದ ಸಾವಿರಾರು ಶಿಕ್ಷಕರನ್ನು ಕೊರೋನಾ ಈಗಾಗಲೇ ಬಲಿ ಪಡೆದುಕೊಂಡಿದೆ!

ಸಾಂದರ್ಭಿಕ ಚಿತ್ರ

ದೇಶದಲ್ಲೇ ಅತಿ ಹೆಚ್ಚು ಜನಸಂಖ್ಯೆ ಇರುವ ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದಿದ್ದ ಪಂಚಾಯತಿ ಚುನಾವಣೆಗಳಲ್ಲಿ ಸಿಬ್ಬಂದಿಗಳಾಗಿ ಕಾರ್ಯ ನಿರ್ವಹಿಸಿದ್ದ ಸಾವಿರಾರು ಶಿಕ್ಷಕರ ಪೈಕಿ 1621 ಕ್ಕೂ ಅಧಿಕ ಶಿಕ್ಷಕರ ಪ್ರಾಣವನ್ನು ಕೋವಿಡ್ ಮಹಾಮಾರಿ ಹರಣ ಮಾಡಿದೆ. ಅಷ್ಟೇಕೆ, ಕೋವಿಡ್  ತನ್ನ ಪ್ರತಾಪ ಆರಂಭಿಸಿದ್ದ 2020ರ ಮಾರ್ಚ್ ನಿಂದ ಈವರೆಗೆ ಕರ್ನಾಟಕದಲ್ಲಿ 600 ಕ್ಕೂ ಅಧಿಕ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಮೃತ ಪಟ್ಟಿದ್ದಾರೆ. ಅವರ ಜೀವವನ್ನು ಕೊರೋನಾವೇ ಆಪೋಷಣ ತೆಗೆದುಕೊಂಡಿದೆ.

ಕರ್ನಾಟಕ, ಉತ್ತರ ಪ್ರದೇಶ, ಇನ್ನುಳಿದ ರಾಜ್ಯಗಳನ್ನೂ ಸೇರಿಸಿದರೆ ಕೋವಿಡ್ ನಿಂದ ಸಾವಿಗೀಡಾದ ಶಿಕ್ಷಕರ ಸಂಖ್ಯೆಯು  ಬಹಳ ದೊಡ್ಡದಾಗುವುದರಲ್ಲಿ ಅನುಮಾನವಿಲ್ಲ.

ರಾಜ್ಯದಲ್ಲಿ ಸುಮಾರು 268 ಕ್ಕೂ ಅಧಿಕ ಸರಕಾರಿ ಶಿಕ್ಷಕರು ಇನ್ನಿಲ್ಲ:

ಸಾರ್ವಜನಿಕ ಸೂಚನೆಗಳ ಇಲಾಖೆಯ ಮಾಹಿತಿಯನ್ನು ಪರಿಗಣಿಸುವುದಾದರೆ ಮಾರ್ಚ್ 2020ರಿಂದ ಮೇ 13, 2021ರವರೆಗೆ ಕೊರೋನಾಗೆ ಬಲಿಯಾದ ಶಿಕ್ಷಕರ ಸಂಖ್ಯೆ 268. ಇದರಲ್ಲಿ ಸರಕಾರಿ ಪ್ರಾಥಮಿಕ ಶಾಲೆಗಳ ಶಿಕ್ಷಕರ 183 ಹಾಗೂ ಪ್ರೌಢಶಾಲಾ ಶಿಕ್ಷಕರು 49. ಅದೇ ವೇಳೆ ಅನುದಾನಿತ ಶಾಲೆಗಳಲ್ಲಿನ ಶಿಕ್ಷಕರ ಸಂಖ್ಯೆ ಕ್ರಮವಾಗಿ 13 ಮತ್ತು 19.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ (ಕೆ.ಎಸ್.ಜಿ.ಇ.ಎ) ಅಂಕಿ ಅಂಶದ ಪ್ರಕಾರ ರಾಜ್ಯದಲ್ಲಿ 300 ಕ್ಕೂ ಅಧಿಕ ಸರಕಾರು ನೌಕರರು ಕೋವಿಡ್ ನಿಂದ ಮೃತಪಟ್ಟಿದ್ದು, ಅವರಲ್ಲಿ 250 ಕ್ಕೂ ಅಧಿಕ ಮಂದಿ ಸರಕಾರಿ ಪ್ರಾಥಮಿಕ  ಹಾಗೂ ಪ್ರೌಢ ಶಾಲೆಗಳ ಶಿಕ್ಷಕರಾಗಿದ್ದಾರೆ. ಅದರಲ್ಲೂ ಬೆಂಗಳೂರು ಹಾಗೂ ಕಲಬುರಗಿಯಲ್ಲಿ ಕೊರೋನಾ ವೈರಸ್ ಶಿಕ್ಷಕರ ಮೇಲೆ ಅತಿ ಹೆಚ್ಚು ಮುನಿಸು ತೋರಿದ್ದು, ಈ ಎರಡು ವಿಭಾಗಗಳಲ್ಲೇ 150 ಕ್ಕೂ ಹೆಚ್ಚು ಶಿಕ್ಷಕರು ಮೃತರಾಗಿದ್ದಾರೆ.

ಕರ್ನಾಟಕದ ಸರಕಾರಿ, ಖಾಸಗಿ ಸೇರಿದರೆ 600 ಕ್ಕೂ ಅಧಿಕ ಶಿಕ್ಷಕರು ಬಲಿ:

ರಾಜ್ಯದಲ್ಲಿ 1.70 ಲಕ್ಷ ಸರಕಾರಿ ಶಿಕ್ಷಕರಿದ್ದು, ಅವರ ಪೈಕಿ 262 ಶಿಕ್ಷಕರು ಕೊರೋನಾದಿಂದ ಮೃತಪಟ್ಟಿದ್ದಾರೆ, ಅವರಿಗೆ ತಲಾ 1 ಕೋಟಿ ರೂ. ಪರಿಹಾರ ಕೊಡುವಂತೆ ರಾಜ್ಯ ಸರಕಾರಿ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಆಗ್ರಹಿಸಿದ್ದಾರೆ. ಖಾಸಗಿ ಶಾಲೆಗಳಲ್ಲಿ 3 ಲಕ್ಷಕ್ಕೂ ಅಧಿಕ ಶಿಕ್ಷಕರಿದ್ದು, 422 ಕ್ಕೂ ಹೆಚ್ಚು ಅಧ‍್ಯಾಪಕರು ಕೊರೋನಾದಿಂದಾಗಿ ಸಾವನ್ನಪ್ಪಿದ್ದಾರೆ, ಮೃತರ ಕುಟುಂಬಳಿಗೆ ಪರಿಹಾರ ಕೊಡಿ ಎಂದು ಖಾಸಗಿ ಶಾಲಾ ಒಕ್ಕೂಟ ರುಪ್ಸಾದ ಅಧ‍್ಯಕ್ಷ ಲೋಕೇಶ್ ತಾಳಿಕಟ್ಟೆ ಅವರು ಸರಕಾರಕ್ಕೆ ಒತ್ತಾಯಿಸಿದ್ದಾರೆ.

ಸರಕಾರಿ ಶಿಕ್ಷಕರನ್ನೇ ಪರಿಗಣಿಸುವುದಾದರೆ ಬೆಂಗಳೂರಿನಲ್ಲಿ 81, ಕಲಬುರಗಿಯಲ್ಲಿ 70, ವಿಜಯಪುರ 56, ಬೆಳಗಾವಿಯಲ್ಲಿ 52, ಬೀದರ್ 50, ಮೈಸೂರಿನಲ್ಲಿ 46 ಶಿಕ್ಷಕರು ಕೊರೋನಾದಿಂದಾಗಿ ಸಾವನ್ನಪ್ಪಿದ್ದಾರೆ. ಅನುದಾನಿತ ಶಾಲೆಗಳನ್ನು ಪರಿಗಣಿಸುವುದಾದರೆ, ಕಲಬುರಗಿಯಲ್ಲಿ 25, ಬೆಳಗಾವಿ 6, ಬೆಂಗಳೂರು 5, ಮೈಸೂರಿನಲ್ಲಿ 3 ಮಂದಿ ಮೃತಪಟ್ಟಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಕಳೆದ ಏಪ್ರಿಲ್ ನಿಂದ ಈವರೆಗೆ 15 ಪ್ರಾಥಮಿಕ  ಹಾಗೂ ಪ್ರೌಢ ಶಿಕ್ಷಕರು ಕೊರೋನಾದಿಂದ ಸಾವಿಗೀಡಾಗಿದ್ದಾರೆ.

ಸರಕಾರಿ ಹಾಗೂ ಖಾಸಗಿ ಶಾಲಾ ಶಿಕ್ಷಕರ ಸಂಘಗಳು ನೀಡಿರುವ ಮಾಹಿತಿಯನ್ನು ಪರಿಗಣಿಸಿದರೆ, ಕರ್ನಾಟಕದಲ್ಲಿ ಕೊರೋನಾ ಆರಂಭವಾದಾಗಿನಿಂದ ಈವರೆಗೆ 600 ಕ್ಕೂ ಅಧಿಕ ಶಿಕ್ಷಕರು ಮಹಾಮಾರಿಗೆ ಬಲಿಯಾಗಿದ್ದಾರೆ!

ರಾಜ್ಯದ ಶಿಕ್ಷಕರಿಗೆ ಮಾರಕವಾದ ಉಪಚುನಾವಣೆ:

ಕರೋನಾ ಎರಡನೆಯ ಅಲೆಯ ಸಂದರ್ಭದಲ್ಲಿ ಉಪಚುನಾವಣೆ ನಡೆದ ಬಸವಕಲ್ಯಾಣ, ಮಸ್ಕಿ ವಿಧಾನಸಭೆ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದ ಶಿಕ್ಷಕರ ಮೇಲೆ ಕೊರೋನಾ ಕರಿನೆರಳು ದೊಡ್ಡ ಮಟ್ಟದಲ್ಲಿ ಕಾಣಿಸಿಕೊಂಡಿದೆ. ಅಲ್ಲಿ ಕೊರೋನಾದಿಂದ ಮೃತರಾದ 55 ಕ್ಕೂ ಹೆಚ್ಚು ಶಿಕ್ಷಕರು ಉಪಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು ಎನ್ನುವುದು ಆತಂಕಕಾರಿ. ಬಾಗಲಕೋಟೆ ಜಿಲ್ಲೆಯೊಂದರಲ್ಲೇ ಮೇ 1ರಿಂದ 16 ರವರೆಗೆ 15 ಶಿಕ್ಷಕರು ಕೋವಿಡ್ ನಿಂದ ಮೃತರಾಗಿದ್ದಾರೆ. ಬೆಳಗಾವಿ ಲೋಕಸಭೆ  ಉಪಚುನಾವಣೆಯ ಕಾರ್ಯದಲ್ಲಿ ಪಾಲ್ಗೊಂಡಿದ್ದ 2 ಸಾವಿರಕ್ಕೂ ಅಧಿಕ ಶಿಕ್ಷಕರ ಪೈಕಿ 17 ಮಂದಿ ಕೋವಿಡ್ ನಿಂದ ಕಣ್ಮುಚ್ಚಿದ್ದಾರೆ.

ಸಾಂದರ್ಭಿಕ ಚಿತ್ರ

ಬೆಳಗಾವಿ ಮತ್ತು ಚಿಕ್ಕೋಡಿಗಳಲ್ಲಿ 2 ನೇ ಅಲೆಗೆ 49 ಶಿಕ್ಷಕರು ಸಾವನ್ನಪ್ಪಿರುವುದನ್ನು ಬೆಳಗಾವಿ ಡಿಡಿಪಿಐ ಎ.ಬಿ.ಪುಂಡಲೀಕ ಅವರು ಖಾತ್ರಿಪಡಿಸಿದ್ದಾರೆ. ಇನ್ನೊಂದೆಡೆ ಎರಡನೇ ಅಲೆಯಲ್ಲಿ ಉತ್ತರ ಕರ್ನಾಟಕದ ಭಾಗದಲ್ಲಿ ಅಧಿಕ ಸಂಖ್ಯೆಯ ಶಿಕ್ಷಕರು ಕೊರೋನಾಗೆ ಬಲಿಯಾಗುತ್ತಿರುವುದು ಕೂಡ ಕಳವಳಕಾರಿಯಾಗಿದೆ.

50 ಕ್ಕೂ ಅಧಿಕ ಕಾಲೇಜು ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಮೃತ:

ಸರಕಾರಿ ಕಾಲೇಜುಗಳನ್ನು ಮಾತ್ರ ಪರಿಗಣಿಸುವುದಾದರೆ, ಈವರೆಗೆ 50 ಕ್ಕೂ ಅಧಿಕ ಕಾಲೇಜು ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಕೊರೋನಾಗೆ ಬಲಿಯಾಗಿರುವುದಾಗಿ ಕರ್ನಾಟಕ ಸರಕಾರಿ ಕಾಲೇಜು ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್ ಟಿಎಂ ತಿಳಿಸಿದ್ದರೂ, ತನ್ನ ಬಳಿ ಈ ಬಗ್ಗೆ ಮಾಹಿತಿ ಇಲ್ಲ ಎಂದು ಕಾಲೇಜು ಶಿಕ್ಷಣ ಇಲಾಖೆ ತಿಳಿಸಿದೆ. ಆದರೆ ಖಾಸಗಿ ಕಾಲೇಜುಗಳಲ್ಲಿನ ಮಾಹಿತಿ ಇನ್ನೂ ಸಿಕ್ಕಿಲ್ಲ.

ಉತ್ತರ ಪ್ರದೇಶದ ಶಿಕ್ಷಕರಿಗೆ ಶಾಪವಾದ ಪಂಚಾಯತ್ ಚುನಾವಣೆ:

ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ಪಂಚಾಯತ್ ಚುನಾವಣೆಗಳಲ್ಲಿ ಚುನಾವಣಾ ಸಿಬ್ಬಂದಿಗಳಾಗಿ ಕಾರ್ಯ ನಿರ್ವಹಿಸಿದ್ದ ಶಿಕ್ಷಕರು ಕೋವಿಡ್ ಅಟ್ಟಹಾಸಕ್ಕೆ ನಲುಗಿ ಹೋಗಿದ್ದಾರೆ. ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಂಡ ಶಿಕ್ಷಕರ ಪೈಕಿ ಮೇ 16 ರವರೆಗೆ 1621 ಮಂದಿ ಸಾವನ್ನಪ್ಪಿದ್ದಾರೆ ಎಂದು ಉತ್ತರ ಪ್ರದೇಶ ಪ್ರಾಥಮಿಕ ಶಿಕ್ಷಕರ ಸಂಘದವರು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮೃತರ ಪಟ್ಟಿ ಸಹಿತ ಮಾಹಿತಿ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ

ಮಾತ್ರವಲ್ಲ, ಕೋವಿಡ್ ಗೆ ಬಲಿಯಾದವರ ಶಿಕ್ಷಕರ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ಕೊಡಬೇಕು ಮತ್ತು ಅವರನ್ನು ಅವಲಂಬಿಸಿದವರಿಗೆ ಸರಕಾರಿ ನೌಕರಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಏಪ್ರಿಲ್ 28 ವರೆಗೆ ಇದೇ ಸಂಘದವರು ಬಿಡುಗಡೆ ಮಾಡಿದ್ದ ಕೋವಿಡ್ ನಿಂದಾಗಿ ಮೃತರಾದ ಶಿಕ್ಷಕರು ಹಾಗೂ ಸಹಾಯಕ ಸಿಬ್ಬಂದಿಗಳ ಪಟ್ಟಿಯಲ್ಲಿ 706 ಜನರ ಹೆಸರುಗಳಿದ್ದವು. ಅದಾಗಿ ಇನ್ನೂ 20 ದಿನಗಳಾಗಿಲ್ಲ. ಆದರೆ ಅಷ್ಟರಲ್ಲೇ ಪಟ್ಟಿಯಲ್ಲಿ ಮೃತರ ಸಂಖ್ಯೆಯು ದ್ವಿಗುಣಗೊಂಡಿದೆ. ಅಜಂಗಢ ಜಿಲ್ಲೆಯಲ್ಲಿ ಅತಿ ಹೆಚ್ಚು ಶಿಕ್ಷಕರು (68) ಪ್ರಾಣ ಕಳೆದುಕೊಂಡಿದ್ದು, ಆ ನಂತರದ ಸ್ಥಾನ (50) ಮುಖ್ಯಮಂತ್ರಿಯವರ ತವರು ಜಿಲ್ಲೆ ಗೋರಖ್ ಪುರದ್ದಾಗಿದೆ.

ಭವಿಷ್ಯ ರೂಪಿಸುವ ಶಿಕ್ಷಕರ ದುರಂತ ಸಾವಿನಿಂದ ಮಕ್ಕಳ ಮೇಲೂ ಪರಿಣಾಮ:

ಬೇರೆ ಯಾವುದೇ ವೃತ್ತಿಗಳಿಗಿಂತ ಶಿಕ್ಷಕ ವೃತ್ತಿಯು ಬಹಳ ಭಿನ್ನ. ಮಕ್ಕಳು ಮತ್ತು ಶಿಕ್ಷಕರ ನಡುವಿನ ಭಾವನಾತ್ಮಕ ನಂಟು, ಮಕ್ಕಳು ಮತ್ತು ಪೋಷಕರ ನಡುವಿನಷ್ಟೇ ಬಿಗಿಯಾಗಿಲ್ಲದಿದ್ದರೂ, ಅದನ್ನು ತೀರಾ ನಿರ್ಲಕ್ಷಿಸಲಾಗದು. ಶಾಲೆಯಲ್ಲಿ ಇಡಿ ದಿನವನ್ನು ಕಳೆಯುವ ಮಕ್ಕಳು, ಶಿಕ್ಷಕರ ಜತೆಗೆ ಒಂದು ಭಾವನಾತ್ಮಕ ನಂಟು ಹೊಂದಿರುವುದು ಸತ್ಯ. ಶಿಕ್ಷಕರು ಹೀಗೆ ದುರಂತ ಸಾವಿಗೆ ತುತ್ತಾದ ಸುದ್ದಿ, ಮಕ್ಕಳ ಕಿವಿಗೆ ಬಿದ್ದಾಗ ಅವರಿಗೆ ಆಘಾತವಾಗುವ ಸಾಧ್ಯತೆ ಇರುತ್ತದೆ. ಆಪ್ತರಾಗಿರುವ ಶಿಕ್ಷಕರ ಅಗಲುವಿಕೆ ಮಕ್ಕಳ ಮೇಲೂ ಪರಿಣಾಮ ಬೀರಬಹುದಾದ್ದರಿಂದ ಶಾಲೆಗಳು ಹಾಗೂ ಪೋಷಕರು ಈ ಸೂಕ್ಷ್ಮ ಸನ್ನಿವೇಶಗಳನ್ನು ಬಹಳ ನಾಜೂಕಾಗಿ ನಿರ್ವಹಿಸಬೇಕಾಗುತ್ತದೆ.

ಚುನಾವಣೆ, ಜನಗಣತಿ, ಸಮೀಕ್ಷೆ, ವಿಪತ್ತು ನಿರ್ವಹಣೆ, ಜನ ಜಾಗೃತಿ ಹೀಗೆ ಯಾವುದೇ ಕೆಲಸಗಳು ಎದುರಾಗಲಿ, ಕೇಂದ್ರ ಸರಕಾರಕ್ಕಗಾಗಲಿ, ರಾಜ್ಯ ಸರಕಾರಗಳಿಗಾಗಿ ಮೊದಲು ನೆನಪಾಗುವುದು ದೇಶದ ಶಿಕ್ಷಕ ವೃಂದ. ಮರು ಮಾತಿಲ್ಲದೆ ತಮಗೆ ನೀಡಿದ ಹೆಚ್ಚುವರಿ ಕೆಲಸಗಳನ್ನೂ ಅಚ್ಚುಕಟ್ಟಾಗಿ ಮಾಡಿಕೊಡುವ ಶಿಕ್ಷಕರು ಕೋವಿಡ್ ಗೆ ಬಲಿಯಾಗುತ್ತಿರುವ ಸಂದರ್ಭದಲ್ಲಿ ಸರಕಾರಗಳು ಕೂಡ ಮರು ಮಾತಿಲ್ಲದೆ ಪರಿಹಾರ ಒದಗಿಸಿಕೊಟ್ಟರೆ, ಶಿಕ್ಷಕರ ಮನೋಬಲವು ಹಿಗ್ಗಲಿದೆ.

ಪ್ರತಿ ಜಿಲ್ಲೆಯಲ್ಲೂ  ಶಿಕ್ಷಕರಿಗೆ ಕೋವಿಡ್ ಕೇರ್ ಕೇಂದ್ರ ತೆರೆಯಬೇಕೆನ್ನುವ ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ ಮನವಿಯನ್ನು ಮುಖ್ಯಮಂತ್ರಿಯವರು ಆದ್ಯತೆ ಮೇರೆಗೆ ಪರಿಗಣಿಸಬೇಕಿದೆ. ಕೇಂದ್ರ, ರಾಜ್ಯ ಸರಕಾರಗಳು ಕೆಲಸ, ಕಾರ್ಯಗಳಿಗೆ ಮಾತ್ರ ಸ್ಮರಿಸುವುದಲ್ಲ. ಆಪತ್ತಿನಲ್ಲಿರುವ ಶಿಕ್ಷಕರಿಗೆ ಆರೋಗ್ಯ ಸೇವೆ ಒದಗಿಸಿ ಉಳಿದ ಶಿಕ್ಷಕರ ಪ್ರಾಣ ಉಳಿಸಲು ತಕ್ಷಣವೇ ಸ್ಪಂದಿಸಬೇಕಿದೆ.

Previous Post

ಕೋವಿಡ್ ಚಿಕಿತ್ಸಾ ವಿಧಾನದಿಂದ ಪ್ಲಾಸ್ಮಾ ಥೆರಪಿಯನ್ನು ಕೈಬಿಟ್ಟ ಭಾರತ..!

Next Post

ಇನ್ನೂ ಒಂದು ತಿಂಗಳು‌ ಲಾಕ್ಡೌನ್ ವಿಸ್ತರಣೆ ಮಾಡಬೇಕು –ಹೆಚ್‌ಡಿಕೆ

Related Posts

Daily Horoscope: ಇಂದು ದಿಢೀರ್‌ ಧನ ಲಾಭವಾಗುವ ರಾಶಿಗಳಿವು..!
Top Story

Daily Horoscope: ಇಂದು ದಿಢೀರ್‌ ಧನ ಲಾಭವಾಗುವ ರಾಶಿಗಳಿವು..!

by ಪ್ರತಿಧ್ವನಿ
December 3, 2025
0

ಮೇಷ ರಾಶಿಯ ಇಂದಿನ ಭವಿಷ್ಯ ಮೇಷ ರಾಶಿಯವರು ಇಂದು ಆಸ್ತಿ ವಿಷಯದಲ್ಲಿ ಎಚ್ಚರವಹಿಸುವುದು ಸೂಕ್ತವಾಗಿದೆ. ದಿಢೀರ್‌ ಧನ ಲಾಭದಿಂದ ಆರ್ಥಿಕ ಕೊರತೆ ನೀಗುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ....

Read moreDetails
ಬೆಂಗಳೂರಲ್ಲಿ ಮತ್ತೆ ಹುಸಿ ಬಾಂಬ್ ಬೆದರಿಕೆ ಇ-ಮೇಲ್

ಬೆಂಗಳೂರಲ್ಲಿ ಮತ್ತೆ ಹುಸಿ ಬಾಂಬ್ ಬೆದರಿಕೆ ಇ-ಮೇಲ್

December 2, 2025
ಇಡ್ಲಿ, ನಾಟಿ ಕೋಳಿ ಸೈಡಲ್ಲಿ ಇಡ್ರಪ್ಪ..ಸಿಎಂ, ಡಿಸಿಎಂ ಕಟ್ಟಿರೋ 43 ಲಕ್ಷದ ವಾಚ್ ನೋಡ್ರಪ್ಪ..!

ಇಡ್ಲಿ, ನಾಟಿ ಕೋಳಿ ಸೈಡಲ್ಲಿ ಇಡ್ರಪ್ಪ..ಸಿಎಂ, ಡಿಸಿಎಂ ಕಟ್ಟಿರೋ 43 ಲಕ್ಷದ ವಾಚ್ ನೋಡ್ರಪ್ಪ..!

December 2, 2025
ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ ಜಾರಿಗೆ ಬೇಡಿಕೆಯಿಟ್ಟ BAF

ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ ಜಾರಿಗೆ ಬೇಡಿಕೆಯಿಟ್ಟ BAF

December 2, 2025
ʼರಾಜಕೀಯ ಶಾಶ್ವತ ಅಲ್ಲʼ: ಸಿಎಂ ಸಿದ್ದರಾಮಯ್ಯ ಅಚ್ಚರಿಯ ಹೇಳಿಕೆ

ʼರಾಜಕೀಯ ಶಾಶ್ವತ ಅಲ್ಲʼ: ಸಿಎಂ ಸಿದ್ದರಾಮಯ್ಯ ಅಚ್ಚರಿಯ ಹೇಳಿಕೆ

December 2, 2025
Next Post
ಇನ್ನೂ ಒಂದು ತಿಂಗಳು‌ ಲಾಕ್ಡೌನ್ ವಿಸ್ತರಣೆ ಮಾಡಬೇಕು –ಹೆಚ್‌ಡಿಕೆ

ಇನ್ನೂ ಒಂದು ತಿಂಗಳು‌ ಲಾಕ್ಡೌನ್ ವಿಸ್ತರಣೆ ಮಾಡಬೇಕು –ಹೆಚ್‌ಡಿಕೆ

Please login to join discussion

Recent News

Daily Horoscope: ಇಂದು ದಿಢೀರ್‌ ಧನ ಲಾಭವಾಗುವ ರಾಶಿಗಳಿವು..!
Top Story

Daily Horoscope: ಇಂದು ದಿಢೀರ್‌ ಧನ ಲಾಭವಾಗುವ ರಾಶಿಗಳಿವು..!

by ಪ್ರತಿಧ್ವನಿ
December 3, 2025
ಇಡ್ಲಿ, ನಾಟಿ ಕೋಳಿ ಸೈಡಲ್ಲಿ ಇಡ್ರಪ್ಪ..ಸಿಎಂ, ಡಿಸಿಎಂ ಕಟ್ಟಿರೋ 43 ಲಕ್ಷದ ವಾಚ್ ನೋಡ್ರಪ್ಪ..!
Top Story

ಇಡ್ಲಿ, ನಾಟಿ ಕೋಳಿ ಸೈಡಲ್ಲಿ ಇಡ್ರಪ್ಪ..ಸಿಎಂ, ಡಿಸಿಎಂ ಕಟ್ಟಿರೋ 43 ಲಕ್ಷದ ವಾಚ್ ನೋಡ್ರಪ್ಪ..!

by ಪ್ರತಿಧ್ವನಿ
December 2, 2025
ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ ಜಾರಿಗೆ ಬೇಡಿಕೆಯಿಟ್ಟ BAF
Top Story

ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ ಜಾರಿಗೆ ಬೇಡಿಕೆಯಿಟ್ಟ BAF

by ಪ್ರತಿಧ್ವನಿ
December 2, 2025
ʼರಾಜಕೀಯ ಶಾಶ್ವತ ಅಲ್ಲʼ: ಸಿಎಂ ಸಿದ್ದರಾಮಯ್ಯ ಅಚ್ಚರಿಯ ಹೇಳಿಕೆ
Top Story

ʼರಾಜಕೀಯ ಶಾಶ್ವತ ಅಲ್ಲʼ: ಸಿಎಂ ಸಿದ್ದರಾಮಯ್ಯ ಅಚ್ಚರಿಯ ಹೇಳಿಕೆ

by ಪ್ರತಿಧ್ವನಿ
December 2, 2025
ಪ್ರಯಾಣಿಕರೇ ಗಮನಿಸಿ..! ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ನಿಯಮ ಜಾರಿ
Top Story

ಪ್ರಯಾಣಿಕರೇ ಗಮನಿಸಿ..! ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ನಿಯಮ ಜಾರಿ

by ಪ್ರತಿಧ್ವನಿ
December 2, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Daily Horoscope: ಇಂದು ದಿಢೀರ್‌ ಧನ ಲಾಭವಾಗುವ ರಾಶಿಗಳಿವು..!

Daily Horoscope: ಇಂದು ದಿಢೀರ್‌ ಧನ ಲಾಭವಾಗುವ ರಾಶಿಗಳಿವು..!

December 3, 2025
ಭಾರತಕ್ಕೆ ರಷ್ಯಾಧ್ಯಕ್ಷ: ದೆಹಲಿಯಲ್ಲಿ ಹೈ ಅಲರ್ಟ್

ಭಾರತಕ್ಕೆ ರಷ್ಯಾಧ್ಯಕ್ಷ: ದೆಹಲಿಯಲ್ಲಿ ಹೈ ಅಲರ್ಟ್

December 2, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada