• Home
  • About Us
  • ಕರ್ನಾಟಕ
Sunday, July 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಬರಿ ಹೊಟ್ಟೆಯಲ್ಲೇ 60 ಕಿಮೀ ನಡೆದ ವಲಸೆ ಕಾರ್ಮಿಕ: ಕೋವಿಡ್ ಕರ್ಫ್ಯೂ ತಂದಿಟ್ಟ ಅವಾಂತರ..!

Any Mind by Any Mind
May 11, 2021
in ಕರ್ನಾಟಕ
0
ಬರಿ ಹೊಟ್ಟೆಯಲ್ಲೇ 60 ಕಿಮೀ ನಡೆದ ವಲಸೆ ಕಾರ್ಮಿಕ: ಕೋವಿಡ್ ಕರ್ಫ್ಯೂ ತಂದಿಟ್ಟ ಅವಾಂತರ..!
Share on WhatsAppShare on FacebookShare on Telegram

ಅವರು, ಕುಟುಂಬ ನಿರ್ವಹಣೆಗೆ ಉದ್ಯೋಗ ಹರಿಸಿ ಮಂಗಳೂರಿಗೆ ಬಂದಿದ್ದರು, ಆದ್ರೆ ಕೋವಿಡ್‌ 2 ನೇ ಮಹಾಮಾರಿ ಆತನನ್ನು ಸಮಸ್ಯೆಗೆ ದೂಡಿತು, ಲಾಕ್‌ಡೌನ್‌ ಎಂಬ ನಿಯಮ ಆತನನ್ನು ಕಕ್ಕಾಬಿಕ್ಕಿಗೊಳಿಸಿತು. ಹೌದು ಮನೆಗೆ ಹೋಗೋಣ ಎಂದ್ರೆ ಬಸ್‌ ಇಲ್ಲ, ಕೈಯಲ್ಲಿ ಕೆಲಸವಿಲ್ಲ, ಹೊಟ್ಟೆಗೆ ಊಟವಿಲ್ಲ, ಮುಂದೆ ಏನ್‌ ಮಾಡೋದು ಅಂತ ಆತನಿಗೆ ದಿಕ್ಕೇ ತೋಚಲಿಲ್ಲ, ದೈರ್ಯದಿಂದ ಒಂದು ನಿರ್ಧಾರಕ್ಕೆ ಬಂದ ಆ ವಲಸೆ ಕಾರ್ಮಿಕ..! ಸುಮಾರು 150 ಕಿ.ಮೀ ದೂರದಲ್ಲಿರುವ ಮನೆಗೆ ನಡೆದು ಕೊಂಡೇ ಹೋಗಲು ನಿರ್ಧರಿಸಿದ, ಇದು ಬೇರೆಯಾವುದೋ ರಾಜ್ಯದಲ್ಲಿ ನಡೆದ ಘಟನೆಯಲ್ಲ, ನಮ್ಮದೇ ರಾಜ್ಯದಲ್ಲೇ ನಡೆದ ಘಟನೆ. ಇಂತಹ ಅದೆಷ್ಟೋ ಘಟನೆಗಳು ನಡೆದಿರ ಬಹುದು, ಬೆಳಕಿಗೆ ಬರೋದು ಕೆಲವೊಂದು ಮಾತ್ರಾ ಅದರಲ್ಲಿ ಈ ಘಟನೆಯೂ ಒಂದು.

ADVERTISEMENT

 ಮಡಿಕೇರಿ ಮೂಲದ ಶಿವ ಎಂಬ ಕೂಲಿ ಕಾರ್ಮಿಕ, ಕೆಲಸ ಹುಡುಕಿ ಮಂಗಳೂರಿಗೆ ಹೋಗಿದ್ದ,     ದುರಾದೃಷ್ಟವಶತ್‌ ಆತನಿಗೆ ಕೆಲಸ ಸಿಕ್ಕಿಲ್ಲ, ಕೈಯಲ್ಲಿ ಒಂದು ರೂಪಾಯಿ ದುಡ್ಡಿಲ್ಲ, ಮುಗ್ಧ ಮನಸಿನ ಈತ ಯಾರ ಸಹಾಯನೋ ಕೇಳಲು ಬಯಸಿಲ್ಲ, ಸುಮಾರು 50 ವರ್ಷದ ಶಿವ 60 ಕಿ.ಮೀ ನಡೆದೇ ಬಿಟ್ಟಿದ್ರೂ, ಇನ್ನೂ 90 ಕಿ.ಮೀ ಬಾಕಿಯಿತ್ತು, ಎರಡು ದಿನ ಊಟವಿಲ್ಲದೆ ಹಸಿವಿನಿಂದ ಬಳಲುತ್ತಿದ್ದ ಅವರು  ರಸ್ತೆ ಮಧ್ಯದಲ್ಲಿ  ಮರದಿಂದ ಬಿದ್ದಿದ್ದ ಮಾವಿನಹಣ್ಣನ್ನು ತಿನ್ನುತ್ತಿದ್ದಾಗ, ಪೊಲೀಸರ ಕಣ್ಣಿಗೆ ಬಿದ್ದು ಬಿಟ್ಟರು.

 ಪುತ್ತೂರು ಗ್ರಾಮೀಣ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ದಯಾನಂದ್ ಮತ್ತು ಹೋಮ್ ಗಾರ್ಡ್ ಕಿರಣ್  ಸಂತ್ಯಾರು ಚೆಕ್‌ಪಾಯಿಂಟ್‌ನಲ್ಲಿ ಕರ್ತವ್ಯ ನಿರತವಾಗಿದ್ದಾಗ  ಶಿವನನ್ನು ಗಮನಿಸಿ ಆತನನ್ನು ವಿಚಾರಿಸಿದಾಗ, ನಡೆದ ಘಟನೆಯನ್ನು ವಿವರಿಸುತ್ತಾರೆ. ನಾನು ಕಳೆದ ಎರಡು ದಿನಗಳಿಂದ ಏನನ್ನೂ ತಿಂದಿಲ್ಲ, ನನ್ನ ಬಳಿ ಹಣವಿಲ್ಲ, ನಾನೀಗ  ಮಡಿಕೇರಿ ಬಳಿಯ ರಾಣಿಪೇಟೆಯಲ್ಲಿರುವ ಮನೆಗೆ ತೆರಳುತ್ತಿದ್ದೇನೆ ಎನ್ನುತ್ತಾರೆ. ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುವ ಶಿವು ಮಂಗಳೂರಿಗೆ ಕೆಲಸ ಅರಸಿ ಬಂದು ಕೇವಲ ಐದೇ ದಿನವಾಗಿತ್ತು. ಕೋವಿಡ್‌ ಕಠಿಣ ನಿರ್ಬಂಧವಿರುವ ಹಿನ್ನಲೆ ಆತನಿಗೆ ಕೆಲಸ ಕೂಡ ಸಿಕ್ಕಿಲ್ಲ, ಆತ ಎರಡು ದಿನದಿಂದ ಉಪವಾಸವಿದ್ದ, ಪಕ್ಷಿಗಳು ಅರ್ಧ ತಿಂದು ಕೆಳಗೆ ಬಿದಿದ್ದ ಹಾಳಾದ ಮಾವಿನ ಹಣ್ಣನ್ನು ತಿನ್ನುತ್ತಿದ್ದರು, ಎಂದು ಹೆಡ್ ಕಾನ್‌ಸ್ಟೆಬಲ್ ದಯಾನಂದ್ ಮಾಹಿತಿ ನೀಡಿದ್ದಾರೆ.

ಸುಮಾರು 60 ಕಿ.ಮೀ ನಡೆದು ಬಂದಿದ್ದ, ಶಿವನನ್ನು ವಾಹನದಲ್ಲಿ ಕಳುಹಿಸಲು ನಿರ್ಧರಿಸಿದ ಹೆಡ್ ಕಾನ್‌ಸ್ಟೆಬಲ್ ದಯಾನಂದ್ ತಂಡ ರಸ್ತೆಯಲ್ಲಿ ಸರಕು ತುಂಬಿದ ವಾಹನ ಒಂದನ್ನು ತಡೆದು, ಚಾಲಕನಿಗೆ ಶಿವುವಿನ ಬಗ್ಗೆ ತಿಳಿಸಿ, ಈತನನ್ನು ಮಡಿಕೇರಿಯಲ್ಲಿ ಇಳಿಸುವಂತೆ ವಿನಂತಿಸಿಕೊಂಡಿದ್ದಾರೆ. ಆತ ಒಪ್ಪಿ ಕರೆದುಕೊಂಡು ಹೋಗಿದ್ದಾನೆ.  ಕೊನೆಗೂ ದೇವರ ದಯೆಯಿಂದ  ಶಿವ ಸೇಫ್‌ ಆಗಿ ಮನೆ ಸೇರಿದ್ದಾನೆ. ಈ ಘಟನೆ ಮೇ 1 ರಂದು ನಡೆದಿದ್ದು, ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಸೋನವಾನೆ ಸೋಮವಾರ ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದಾರೆ. 

ಹೀಗೆ ಅದೆಷ್ಟೋ ಜನ ಕುಟುಂಬ ನಿರ್ವಹಣೆಗೆ  ಕೂಲಿ ಅರಸಿ  ಬೇರೆ ಸ್ಥಳಗಳಿಗೆ ಹೋಗಿದ್ದು, ಈ ಕೋವಿಡ್‌ ಮಹಾಮಾರಿ ಅಂತವರ ಜೀವನವನ್ನೇ ಬಲಿ ತೆಗೆದುಕೊಂಡಿದೆ. ಸರ್ಕಾರ ಜಾರಿಗೆ ತಂದ ಕಠಿಣ ನಿಯಮಗಳನ್ನು ಅನುಸರಿಸುವುದು ಜನಸಾಮಾನ್ಯರ ಜವಬ್ದಾರಿ ಆದ್ರೆ  ಈ ಕೋವಿಡ್‌ ಬಿಕ್ಕಟ್ಟಿನ ಸಮಯದಲ್ಲಿ ನಿಯಮಗಳ ಹಿಂದೆ ಜನ ಹಿತ ಯೋಜನೆಗಳನ್ನು ಜಾರಿಗೆ ತರುವುದು ಸರ್ಕಾರದ ಪ್ರಮುಖ ಜವಬ್ದಾರಿ ಕೂಡ.

ಮೂಲ- ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌

Previous Post

ಕೋಮು ವಿಷಬೀಜದ ಮತ್ತೊಂದು ಹೆಸರು ತೇಜಸ್ವಿ ಸೂರ್ಯ: ಡಿ.ಕೆ. ಶಿವಕುಮಾರ್

Next Post

ದೇಶ ಕರೋನಾದಿಂದ ಬಚಾವ್ ಆಗಬಹುದು. ಆದರೆ ಕಾಂಗ್ರೆಸ್ ಸೋಮಾರಿತನ ರೋಗದಿಂದ ಚೇತರಿಸಿಕೊಳ್ಳುವುದಿಲ್ಲ

Related Posts

ಕನಕನ‌ ಮಕ್ಕಳು ಕೀಳರಿಮೆಯಿಂದ ಹೊರಬರಬೇಕಿದೆ: ಕೆ.ವಿ.ಪ್ರಭಾಕರ್
ಕರ್ನಾಟಕ

ಕನಕನ‌ ಮಕ್ಕಳು ಕೀಳರಿಮೆಯಿಂದ ಹೊರಬರಬೇಕಿದೆ: ಕೆ.ವಿ.ಪ್ರಭಾಕರ್

by ಪ್ರತಿಧ್ವನಿ
July 13, 2025
0

ಕನಕದಾಸರು ಕುಲದ ಅವಮಾನವನ್ನು ಅನುಭವಿಸಿ ಬಳಿಕ ಅಳಿಸಿದರು: ಕೆ.ವಿ.ಪಿ ಕನಕದಾಸರನ್ನು ಭಕ್ತಿಗೆ ಕಟ್ಟಿಹಾಕದೆ-ಅವರ ಬಂಡಾಯವನ್ನೂ ನಾವು ಅರಿಯಬೇಕಿದೆ: ಕೆ.ವಿ.ಪಿ ಪ್ರತಿಭಾ ಪುರಸ್ಕಾರ ಅಂದರೆ ಆತ್ಮವಿಶ್ವಾಸದ ರಕ್ತದಾನವಿದ್ದಂತೆ: ಕೆ.ವಿ.ಪ್ರಭಾಕರ್...

Read moreDetails

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ

July 13, 2025
ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

July 13, 2025

Byrathi Suresh: ಸಿದ್ದರಾಮಯ್ಯನ ಮೇಲಿನ ಹೊಟ್ಟೆ ಉರಿಗೆ ಇಲ್ಲಸಲ್ಲದ ಆರೋಪ ಮಾಡ್ತಾರೆ..!!

July 12, 2025

DK Suresh: ಶಿವಕುಮಾರ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ, ಶಾಸಕರ ಬಲಾಬಲ ಪ್ರದರ್ಶಿಸುವ ವ್ಯಕ್ತಿತ್ವ ಅವರದಲ್ಲ..

July 12, 2025
Next Post
ದೇಶ ಕರೋನಾದಿಂದ ಬಚಾವ್ ಆಗಬಹುದು. ಆದರೆ ಕಾಂಗ್ರೆಸ್ ಸೋಮಾರಿತನ ರೋಗದಿಂದ ಚೇತರಿಸಿಕೊಳ್ಳುವುದಿಲ್ಲ

ದೇಶ ಕರೋನಾದಿಂದ ಬಚಾವ್ ಆಗಬಹುದು. ಆದರೆ ಕಾಂಗ್ರೆಸ್ ಸೋಮಾರಿತನ ರೋಗದಿಂದ ಚೇತರಿಸಿಕೊಳ್ಳುವುದಿಲ್ಲ

Please login to join discussion

Recent News

Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ

by ಪ್ರತಿಧ್ವನಿ
July 13, 2025
ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ
Top Story

ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

by ಪ್ರತಿಧ್ವನಿ
July 13, 2025
Top Story

Byrathi Suresh: ಸಿದ್ದರಾಮಯ್ಯನ ಮೇಲಿನ ಹೊಟ್ಟೆ ಉರಿಗೆ ಇಲ್ಲಸಲ್ಲದ ಆರೋಪ ಮಾಡ್ತಾರೆ..!!

by ಪ್ರತಿಧ್ವನಿ
July 12, 2025
Top Story

DK Suresh: ಶಿವಕುಮಾರ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ, ಶಾಸಕರ ಬಲಾಬಲ ಪ್ರದರ್ಶಿಸುವ ವ್ಯಕ್ತಿತ್ವ ಅವರದಲ್ಲ..

by ಪ್ರತಿಧ್ವನಿ
July 12, 2025
Top Story

CT Ravi: ಕಾಂಗ್ರೇಸ್‌ ಪಕ್ಷದಲ್ಲಿ ಡಿಕೆ ಶಿವಕುಮಾರ್‌ಗೆ ಶಾಸಕರ ಬೆಂಬಲ ಇಲ್ಲ..

by ಪ್ರತಿಧ್ವನಿ
July 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕನಕನ‌ ಮಕ್ಕಳು ಕೀಳರಿಮೆಯಿಂದ ಹೊರಬರಬೇಕಿದೆ: ಕೆ.ವಿ.ಪ್ರಭಾಕರ್

ಕನಕನ‌ ಮಕ್ಕಳು ಕೀಳರಿಮೆಯಿಂದ ಹೊರಬರಬೇಕಿದೆ: ಕೆ.ವಿ.ಪ್ರಭಾಕರ್

July 13, 2025

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ

July 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada